ವಾರ್ತಾ ಮತ್ತು ಪ್ರಸಾರ ಸಚಿವಾಲಯ
“ವೇವ್ಸ್ 2025” ಕಾರ್ಯಕ್ರಮದಲ್ಲಿ ಕೈಗೆಟುಕುವ ಮತ್ತು ಪ್ರವೇಶಿಸಬಹುದಾದ ಎಡ್ಟೆಕ್ ಪರಿಹಾರಗಳನ್ನು ‘ಇನ್ನೋವೇಟ್ 2 ಎಜುಕೇಟ್’ ಸವಾಲುಗಳನ್ನು ಉತ್ತೇಜಿಸುತ್ತದೆ
ಪ್ರಕಟಣಾ ದಿನಾಂಕ:
01 APR 2026 4:41PM by PIB Bengaluru
ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ (ಸಿಐಸಿ) ನ ಮೊದಲ ಆವೃತ್ತಿಯಡಿಯಲ್ಲಿ ‘ಇನ್ನೋವೇಟ್2ಎಜುಕೇಟ್’ ಸವಾಲುಗಳು ಶಿಕ್ಷಣ ಮತ್ತು ತಂತ್ರಜ್ಞಾನವನ್ನು ಸೃಜನಾತ್ಮಕವಾಗಿ ಹೆಣೆದುಕೊಂಡು ನಾವೀನ್ಯತೆಯನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿತ್ತು. ವಿದ್ಯಾರ್ಥಿಗಳು, ಸ್ಟಾರ್ಟ್ಅಪ್ ಗಳು ಮತ್ತು ನಾವೀನ್ಯಕಾರರಿಂದ ಹ್ಯಾಂಡ್ಹೆಲ್ಡ್ ಕಲಿಕಾ ಸಾಧನಗಳ ವಿನ್ಯಾಸ ಮತ್ತು ಅಭಿವೃದ್ಧಿಯ ಮೇಲೆ ಈ ಸವಾಲು ಕೇಂದ್ರೀಕೃತವಾಗಿತ್ತು.
ದೃಷ್ಟಿಹೀನ ಮತ್ತು ನರವೈವಿಧ್ಯ ಮಂದಿಯಂತಹ ವೈವಿಧ್ಯಮಯ ಕಲಿಕೆಯ ಅಗತ್ಯತೆಗಳನ್ನು ಹೊಂದಿರುವ ಮಕ್ಕಳಿಗೆ ಸೇರಿದಂತೆ ನವೀನ ಮತ್ತು ಪ್ರವೇಶಿಸಬಹುದಾದ ಪರಿಹಾರಗಳನ್ನು ವಿನ್ಯಾಸಗೊಳಿಸಲಾಯಿತು. ಈ ಮೂಲಕ ಸವಾಲಿನ ಚೌಕಟ್ಟು ಸ್ಪರ್ಧೆಯಲ್ಲಿ ಭಾಗವಹಿಸುವವರನ್ನು ಪ್ರೋತ್ಸಾಹಿಸಲಾಯಿತು. ಈ ಉಪಕ್ರಮವು ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ವೈವಿಧ್ಯಮಯ ಹಿನ್ನೆಲೆಯ ನಾವೀನ್ಯಕಾರರಿಂದ ಭಾಗವಹಿಸುವಿಕೆಯನ್ನು ಪಡೆಯಿತು. ಸಚಿವಾಲಯದ ಬೆಂಬಲದೊಂದಿಗೆ ಒಂದು ಉದ್ಯಮ ಸಂಘವು ಈ ಸವಾಲನ್ನು ಕಾರ್ಯಗತಗೊಳಿಸಿತು ಮತ್ತು ಶಾಲೆಗಳು, ವಿಶ್ವವಿದ್ಯಾಲಯಗಳು ಇತ್ಯಾದಿಗಳಲ್ಲಿ ಔಟ್ರೀಚ್ ಚಟುವಟಿಕೆಗಳನ್ನು ಕೈಗೊಂಡಿತು. ಇದು ಎಲ್ಲಾ ಪಾಲುದಾರರ ವ್ಯಾಪಕ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವುದಾಗಿತ್ತು.
ಕೇವಲ ₹1,000 ವೆಚ್ಚದ ಮಿತಿಯೊಳಗೆ ಹಾರ್ಡ್ವೇರ್ ಘಟಕಗಳನ್ನು ಬಳಸಿಕೊಂಡು ಹ್ಯಾಂಡ್ಹೆಲ್ಡ್ ಸಾಧನಗಳನ್ನು ವಿನ್ಯಾಸಗೊಳಿಸಲು ಮತ್ತು ಅಭಿವೃದ್ಧಿಪಡಿಸಲು ಸವಾಲಿನ ಮಾರ್ಗಸೂಚಿಗಳು ವೆಚ್ಚದ ಮಾನದಂಡವನ್ನು ಸೂಚಿಸಿದವು. ಶೈಕ್ಷಣಿಕ ತಂತ್ರಜ್ಞಾನ ಪರಿಹಾರಗಳಲ್ಲಿ ಕೈಗೆಟುಕುವಿಕೆ, ಪ್ರವೇಶಸಾಧ್ಯತೆ ಮತ್ತು ಮಿತವ್ಯಯದ ನಾವೀನ್ಯತೆಯನ್ನು ಉತ್ತೇಜಿಸುವ ಗುರಿಯನ್ನು ಇದು ಹೊಂದಿತ್ತು. ಪ್ರಾಥಮಿಕವಾಗಿ ಆಯ್ಕೆಯಾದ ಭಾಗವಹಿಸುವವರೊಂದಿಗೆ ಮಾರ್ಗದರ್ಶನ ಮತ್ತು ಕಾರ್ಯಾಗಾರದ ಅವಧಿಗಳ ನಂತರ, ಪರಿಹಾರಗಳನ್ನು ಮತ್ತಷ್ಟು ಪರಿಷ್ಕರಿಸಲಾಯಿತು ಮತ್ತು ಸುಧಾರಿಸಲಾಯಿತು.
1,800ಕ್ಕೂ ಹೆಚ್ಚು ನೋಂದಣಿಗಳಿಂದ ಒಟ್ಟು 10 ಅಂತಿಮ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಯಿತು. ಅಂತಿಮಪೂರ್ವ ಆಯ್ದಪಟ್ಟಿ (ಶಾರ್ಟ್ಲಿಸ್ಟ್) ಮಾಡಿದ ತಂಡಗಳಿಗೆ ಕ್ರಿಯೇಟೋಸ್ಪಿಯರ್, “ವೇವ್ಸ್ 2025 “ ನಲ್ಲಿ ತಮ್ಮ ಮೂಲಮಾದರಿಗಳನ್ನು ಪ್ರದರ್ಶಿಸಲು ಮತ್ತು ಉದ್ಯಮದ ಪಾಲುದಾರರೊಂದಿಗೆ ತೊಡಗಿಸಿಕೊಳ್ಳಲು ಅವಕಾಶಗಳನ್ನು ನೀಡಲಾಯಿತು.
ಇದರ ಜೊತೆಗೆ, ಅಗ್ರ ಶ್ರೇಣಿಯ ಮೂರು ವಿಜೇತ ತಂಡಗಳಿಗೆ ಅವರ ನಾವೀನ್ಯತೆ ಮತ್ತು ಪ್ರಯತ್ನವನ್ನು ಗುರುತಿಸಿ ₹50,000 ವರೆಗಿನ ಬಹುಮಾನದ ಹಣವನ್ನು ನೀಡಲಾಯಿತು. ಪ್ರದರ್ಶಿಸಲಾದ ವಿನ್ಯಾಸಗಳು ಮತ್ತು ಮೂಲಮಾದರಿಗಳು ಪ್ರವೇಶಸಾಧ್ಯತೆ, ಸಂವಾದಾತ್ಮಕ ಕಲಿಕೆ ಮತ್ತು ತಂತ್ರಜ್ಞಾನ-ಸಕ್ರಿಯಗೊಳಿಸಿದ ಶಿಕ್ಷಣಕ್ಕೆ ವೈವಿಧ್ಯಮಯ ವಿಧಾನಗಳನ್ನು ಪ್ರತಿಬಿಂಬಿಸುತ್ತವೆ.
ಶೃಂಗಸಭೆಯ ನಂತರ, 10 ಅಂತಿಮ ಸ್ಪರ್ಧಿ ತಂಡಗಳಲ್ಲಿ, 4 ತಂಡಗಳು ಸ್ಟಾರ್ಟ್ಅಪ್ ಗಳಾಗಿ ವಿಕಸನಗೊಂಡಿವೆ ಮತ್ತು ಈ ಎರಡು ಸ್ಟಾರ್ಟ್ಅಪ್ ಗಳು “ವೇವೆಕ್ಸ್ ಸ್ಟಾರ್ಟ್ಅಪ್ ಆಕ್ಸಿಲರೇಟರ್ “ಕಾರ್ಯಕ್ರಮದ ಮೂಲಕ ಇನ್ಕ್ಯುಬೇಶನ್ ಅನ್ನು ಅನ್ವೇಷಿಸುತ್ತಿವೆ. “ವೇವ್ಸ್ ಬಜಾರ್ ಔಟ್ರೀಚ್ ಈವೆಂಟ್” ಗಳ ಮೂಲಕ, ವಿಜೇತರಿಗೆ ತಮ್ಮ ಪರಿಹಾರಗಳನ್ನು ಹೆಚ್ಚಿಸಲು ಸಂಭಾವ್ಯ ಹೂಡಿಕೆದಾರರೊಂದಿಗೆ ಸಂವಹನ ನಡೆಸಲು ಅವಕಾಶಗಳನ್ನು ಒದಗಿಸಲಾಗಿದೆ.
ಶ್ರೀ ಬಸವರಾಜ ಬೊಮ್ಮಾಯಿ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರವಾಗಿ ಇಂದು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ರಾಜ್ಯ ಖಾತೆ ಸಚಿವರಾದ ಡಾ. ಎಲ್. ಮುರುಗನ್ ಅವರು ಈ ಮಾಹಿತಿಯನ್ನು ಸಲ್ಲಿಸಿದ್ದಾರೆ.
*****
(ಪ್ರಕಟಣೆ ಐ.ಡಿ.: 2247854)
ವಿಸಿಟರ್ ಕೌಂಟರ್ : 6