ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಬಿಹಾರ ದಿವಸ್ ಸಂದರ್ಭದಲ್ಲಿ ಶುಭಾಶಯ ಕೋರಿದ ಪ್ರಧಾನಮಂತ್ರಿ 

ಪ್ರಕಟಣಾ ದಿನಾಂಕ: 22 MAR 2026 9:09AM by PIB Bengaluru

ಬಿಹಾರ ದಿವಸ್ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಿಹಾರದ ಜನರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿದ್ದಾರೆ.

ಬಿಹಾರವು ಭಾರತೀಯ ಪರಂಪರೆಗೆ ಬಹುಕಾಲದಿಂದ ಭವ್ಯತೆ ಮತ್ತು ದೈವತ್ವವನ್ನು ನೀಡಿದೆ ಎಂದು ಹೇಳಿದ ಪ್ರಧಾನಮಂತ್ರಿ ಅವರು, ರಾಜ್ಯದ ಜನರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು. ರಾಜ್ಯವು ಪ್ರಸ್ತುತ ಪ್ರತಿದಿನ ಪ್ರಗತಿಯ ಹೊಸ ಅಧ್ಯಾಯಗಳನ್ನು ಬರೆಯುವಲ್ಲಿ ತೊಡಗಿಸಿಕೊಂಡಿದೆ ಎಂದು ವಿವರಿಸಿದ ಶ್ರೀ ಮೋದಿ ಅವರು, 'ವಿಕಸಿತ ಭಾರತ'ದ ಜೊತೆಗೆ 'ವಿಕಸಿತ ಬಿಹಾರ'ದ ನಿರ್ಣಯವನ್ನು ಸಾಕಾರಗೊಳಿಸುವಲ್ಲಿ ಬಿಹಾರದ ಶ್ರಮಶೀಲ ಮತ್ತು ಶಕ್ತಿಯುತ ಜನರ ಸಮರ್ಪಣೆ ಮತ್ತು ಸಾಮರ್ಥ್ಯವು ಪ್ರಮುಖ ಪಾತ್ರ ವಹಿಸುತ್ತದೆ ಎಂಬ ವಿಶ್ವಾಸವನ್ನು ಮತ್ತಷ್ಟು ದೃಢಪಡಿಸಿದರು.

ಪ್ರಧಾನಮಂತ್ರಿ ಅವರು ಎಕ್ಸ್ ತಾಣದಲ್ಲಿ ಈ ರೀತಿ ಸಂದೇಶ ಬರೆದಿದ್ದಾರೆ:

"बिहार दिवस के अवसर पर राज्य के अपने सभी परिवारजनों को अनेकानेक शुभकामनाएं। भारतीय विरासत को भव्यता और दिव्यता प्रदान करने वाला हमारा यह प्रदेश आज प्रगति के नित-नए अध्याय गढ़ने में जुटा है। मुझे विश्वास है कि विकसित बिहार के साथ विकसित भारत के संकल्प को साकार करने में यहां के कर्मठ एवं ऊर्जावान लोगों का समर्पण और सामर्थ्य बहुत काम आएगा।"

 

 

*****


(ಪ್ರಕಟಣೆ ಐ.ಡಿ.: 2243526) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Manipuri , Assamese , Gujarati , Telugu