ಗೃಹ ವ್ಯವಹಾರಗಳ ಸಚಿವಾಲಯ
ಛತ್ರಪತಿ ಸಂಭಾಜಿ ಮಹಾರಾಜ್ ಹುತಾತ್ಮರ ದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ
ಛತ್ರಪತಿ ಸಂಭಾಜಿ ಮಹಾರಾಜ್ ಅವರು ಛತ್ರಪತಿ ಶಿವಾಜಿ ಮಹಾರಾಜರಿಂದ ಆನುವಂಶಿಕವಾಗಿ ಪಡೆದ ಸ್ವರಾಜ್ಯ, ಸ್ವಧರ್ಮ ಮತ್ತು ಸ್ವಭಾಷಾದ ಪರಂಪರೆಯನ್ನು ಸಂರಕ್ಷಿಸಲು ತಮ್ಮ ಜೀವನದುದ್ದಕ್ಕೂ ಬದ್ಧರಾಗಿದ್ದರು
ಮೊಘಲ್ ಆಕ್ರಮಣಕಾರರಲ್ಲಿ ಭಯವನ್ನು ಹರಡಿದ ಛತ್ರಪತಿ ಸಂಭಾಜಿ ಮಹಾರಾಜರ ರಾಷ್ಟ್ರವನ್ನು ರಕ್ಷಿಸುವ ಸಂಕಲ್ಪವನ್ನು ತೀವ್ರ ಸಂಕಟಗಳು ಸಹ ಅಲುಗಾಡಿಸಲು ಸಾಧ್ಯವಾಗಲಿಲ್ಲ
ಪ್ರಕಟಣಾ ದಿನಾಂಕ:
11 MAR 2026 12:24PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಛತ್ರಪತಿ ಸಂಭಾಜಿ ಮಹಾರಾಜ್ ಅವರ ಹುತಾತ್ಮ ದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದರು.
ಛತ್ರಪತಿ ಶಿವಾಜಿ ಮಹಾರಾಜರಿಂದ ಆನುವಂಶಿಕವಾಗಿ ಪಡೆದ ಸ್ವರಾಜ್ಯ, ಸ್ವಧರ್ಮ ಮತ್ತು ಸ್ವಭಾಷೆಯ ಪರಂಪರೆಯನ್ನು ಸಂರಕ್ಷಿಸಲು ಛತ್ರಪತಿ ಸಂಭಾಜಿ ಮಹಾರಾಜರು ತಮ್ಮ ಜೀವನದುದ್ದಕ್ಕೂ ಬದ್ಧರಾಗಿದ್ದರು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ತಮ್ಮ ಎಕ್ಸ್ ಪ್ಲಾಟ್ ಫಾರ್ಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಜತೆಗೆ ಮೊಘಲ್ ಆಕ್ರಮಣಕಾರರಲ್ಲಿ ಭಯವನ್ನು ಹರಡಿದ ಛತ್ರಪತಿ ಸಂಭಾಜಿ ಮಹಾರಾಜರ ರಾಷ್ಟ್ರವನ್ನು ರಕ್ಷಿಸುವ ಸಂಕಲ್ಪವನ್ನು ತೀವ್ರ ಯಾತನೆಗಳು ಸಹ ಅಲುಗಾಡಿಸಲು ಸಾಧ್ಯವಾಗಲಿಲ್ಲ.
*****
(ಪ್ರಕಟಣೆ ಐ.ಡಿ.: 2238056)
ವಿಸಿಟರ್ ಕೌಂಟರ್ : 18