ಪ್ರಧಾನ ಮಂತ್ರಿಯವರ ಕಛೇರಿ
ರಾಣಿ ಲಕ್ಷ್ಮಿಬಾಯಿ ಅವರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
प्रविष्टि तिथि:
19 NOV 2025 7:51AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಣಿ ಲಕ್ಷ್ಮಿಬಾಯಿ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಮೊದಲ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಅವರ ಧೈರ್ಯ ಮತ್ತು ಶೌರ್ಯದ ಸಾಹಸ ಗಾಥೆಯು ಭಾರತೀಯರಲ್ಲಿ ಪ್ರೋತ್ಸಾಹ ಮತ್ತು ಉತ್ಸಾಹವನ್ನು ತುಂಬುತ್ತಲೇ ಇದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ. ಕೃತಜ್ಞಪೂರಿತವಾದ ನಮ್ಮ ರಾಷ್ಟ್ರವು ಮಾತೃಭೂಮಿಯ ಗೌರವವನ್ನು ಕಾಪಾಡುವಲ್ಲಿ ಅವರ ತ್ಯಾಗ ಮತ್ತು ಹೋರಾಟವನ್ನು ಎಂದಿಗೂ ಮರೆಯುವುದಿಲ್ಲ ಎಂದು ಅವರು ಹೇಳಿದ್ದಾರೆ.
ಎಕ್ಸ್ ಪೋಸ್ಟ್ ನಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ;
"ಭಾರತ ಮಾತೆಯ ಅಮರ ಯೋಧೆ ರಾಣಿ ಲಕ್ಷ್ಮಿಬಾಯಿ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವಪೂರ್ವಕ ನಮನಗಳು. ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಧೈರ್ಯ ಮತ್ತು ಶೌರ್ಯದ ಕಥೆಯು ನಮ್ಮ ದೇಶವಾಸಿಗಳನ್ನು ಪ್ರೋತ್ಸಾಹ ಮತ್ತು ಉತ್ಸಾಹದಿಂದ ತುಂಬುವಂತೆ ಮಾಡುತ್ತದೆ. ಕೃತಜ್ಞಪೂರಕವಾಗಿ ರಾಷ್ಟ್ರವು ಅವರ ತ್ಯಾಗ ಮತ್ತು ಮಾತೃಭೂಮಿಯ ಸ್ವಾಭಿಮಾನವನ್ನು ರಕ್ಷಿಸಲು ಮಾಡಿದ ಹೋರಾಟವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ."
*****
(रिलीज़ आईडी: 2191528)
आगंतुक पटल : 37
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Telugu
,
Malayalam