ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಉದ್ದೇಶಿಸಿ ಭಾಷಣ ಮಾಡಿದರು
ಈ ಅಭಿಯಾನದ ಅಡಿಯಲ್ಲಿ ನಮ್ಮ ವಿಜ್ಞಾನಿಗಳ ತಂಡವು ಪ್ರಯೋಗಾಲಯದಿಂದ ಭೂಮಿಗೆ ಹೋಗಿ ರೈತರಿಗೆ ಆಧುನಿಕ ಕೃಷಿಯ ಬಗ್ಗೆ ಎಲ್ಲಾ ದತ್ತಾಂಶಗಳೊಂದಿಗೆ ಮಾಹಿತಿಯನ್ನು ಒದಗಿಸುತ್ತದೆ ಮತ್ತು ಋುತುಮಾನ ಪ್ರಾರಂಭವಾಗುವ ಮೊದಲು ರೈತರಿಗೆ ಸಹಾಯ ಮಾಡುತ್ತದೆ: ಪ್ರಧಾನಮಂತ್ರಿ
ಈ ಅಭಿಯಾನವು ಭಾರತೀಯ ಕೃಷಿಯನ್ನು ವಿಕಸಿತ ಭಾರತದ ಮುಖ್ಯ ಆಧಾರವನ್ನಾಗಿ ಮಾಡಲು ಸಂಕಲ್ಪ ಮಾಡುತ್ತದೆ: ಪ್ರಧಾನಮಂತ್ರಿ
ಭಾರತವು ತನ್ನದೇ ಆದ ಅಗತ್ಯಗಳನ್ನು ಪೂರೈಸುವುದು ಮಾತ್ರವಲ್ಲದೆ ಜಾಗತಿಕ ಆಹಾರ ಪೂರೈಕೆದಾರನಾಗಿ ಹೊರಹೊಮ್ಮಬೇಕು: ಪ್ರಧಾನಮಂತ್ರಿ
ವಿಕಸಿತ ಕೃಷಿ ಸಂಕಲ್ಪ ಅಭಿಯಾನವು ಕೃಷಿಯಲ್ಲಿಆಧುನೀಕರಣಕ್ಕೆ ಚಾಲನೆ ನೀಡುವ ರೈತರಿಗೆ ಪ್ರಗತಿಯ ಹೊಸ ಮಾರ್ಗಗಳನ್ನು ತೆರೆಯುತ್ತದೆ: ಪ್ರಧಾನಮಂತ್ರಿ
Posted On:
29 MAY 2025 7:45PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಉದ್ದೇಶಿಸಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ತಮ್ಮ ಹೇಳಿಕೆಗಳನ್ನು ನೀಡಿದ ಅವರು, ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು ಪ್ರಾರಂಭಿಸಿರುವುದು ರೈತರಿಗೆ ಮಹತ್ವದ ಉಪಕ್ರಮವಾಗಿದೆ ಮತ್ತು ಕೃಷಿ ಅಭಿವೃದ್ಧಿಗೆ ಬೆಂಬಲ ನೀಡುವ ವಿಶಿಷ್ಟ ಪ್ರಯತ್ನವಾಗಿದೆ ಎಂದು ಹೇಳಿದರು. ಮಾನ್ಸೂನ್ ಸಮೀಪಿಸುತ್ತಿದ್ದಂತೆ ಮತ್ತು ಮುಂಗಾರು ಋುತುವಿನ ಸಿದ್ಧತೆಗಳು ಪ್ರಾರಂಭವಾಗುತ್ತಿದ್ದಂತೆ, ಮುಂದಿನ 12 ರಿಂದ 15 ದಿನಗಳಲ್ಲಿ, ವಿಜ್ಞಾನಿಗಳು, ತಜ್ಞರು, ಅಧಿಕಾರಿಗಳು ಮತ್ತು ಪ್ರಗತಿಪರ ರೈತರನ್ನು ಒಳಗೊಂಡ 2000 ತಂಡಗಳು 700ಕ್ಕೂ ಜಿಲ್ಲೆಗಳಲ್ಲಿ ಪ್ರಯಾಣಿಸಲಿವೆ ಮತ್ತು ಹಳ್ಳಿಗಳಾದ್ಯಂತ ಲಕ್ಷಾಂತರ ರೈತರನ್ನು ತಲುಪಲಿವೆ ಎಂದು ಪ್ರಧಾನಿ ಒತ್ತಿ ಹೇಳಿದರು. ಭಾರತದ ಕೃಷಿ ಕ್ಷೇತ್ರವನ್ನು ಬಲಪಡಿಸುವ ಅವರ ಸಮರ್ಪಣೆಯನ್ನು ಗುರುತಿಸಿದ ಅವರು, ಈ ತಂಡಗಳಲ್ಲಿ ಭಾಗವಹಿಸುವ ಎಲ್ಲಾರೈತರಿಗೆ ಮತ್ತು ಭಾಗವಹಿಸುವವರಿಗೆ ಶುಭ ಕೋರಿದರು.
ಕೃಷಿಯು ಸಾಂಪ್ರದಾಯಿಕವಾಗಿ ರಾಜ್ಯ ವಿಷಯವಾಗಿದೆ, ಪ್ರತಿ ರಾಜ್ಯವು ನೀತಿಗಳನ್ನು ರೂಪಿಸುತ್ತದೆ ಮತ್ತು ರೈತರ ಕಲ್ಯಾಣಕ್ಕಾಗಿ ಉಪಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ, ಆದಾಗ್ಯೂ ವೇಗವಾಗಿ ಬದಲಾಗುತ್ತಿರುವ ಸಮಯದೊಂದಿಗೆ, ಭಾರತದ ಕೃಷಿ ಕ್ಷೇತ್ರಕ್ಕೂ ಗಮನಾರ್ಹ ಪರಿವರ್ತನೆಯ ಅಗತ್ಯವಿದೆ ಎಂದು ಒತ್ತಿ ಹೇಳಿದರು. ಭಾರತೀಯ ರೈತರು ದಾಖಲೆಯ ಉತ್ಪಾದನೆಯನ್ನು ಸಾಧಿಸಿದ್ದಾರೆ, ಧಾನ್ಯ ನಿಕ್ಷೇಪಗಳನ್ನು ತುಂಬಿದ್ದಾರೆ, ಆದರೆ ಮಾರುಕಟ್ಟೆ ಚಲನಶೀಲತೆ ಮತ್ತು ಗ್ರಾಹಕರ ಆದ್ಯತೆಗಳು ವಿಕಸನಗೊಳ್ಳುತ್ತಿವೆ ಎಂದು ಅವರು ಹೇಳಿದರು. ರಾಜ್ಯಗಳು ಮತ್ತು ರೈತರ ಸಹಯೋಗದೊಂದಿಗೆ ಕೃಷಿ ವ್ಯವಸ್ಥೆಗಳಲ್ಲಿಆಧುನಿಕ ಸುಧಾರಣೆಗಳನ್ನು ತರುವುದು ಕಡ್ಡಾಯವಾಗಿದೆ ಎಂದು ಅವರು ಪ್ರತಿಪಾದಿಸಿದರು. ಈ ಅಭಿಯಾನದ ಅಡಿಯಲ್ಲಿ, ವೈಜ್ಞಾನಿಕ ತಂಡಗಳು ಪ್ರಯೋಗಾಲಯದಿಂದ ಭೂಮಿಗೆ ಪರಿವರ್ತನೆಯಾಗುತ್ತವೆ, ರೈತರಿಗೆ ಸಮಗ್ರ ದತ್ತಾಂಶವನ್ನು ತರುತ್ತವೆ ಮತ್ತು ಸುಧಾರಿತ ಕೃಷಿ ಜ್ಞಾನದೊಂದಿಗೆ ಅವರನ್ನು ಸಜ್ಜುಗೊಳಿಸುತ್ತವೆ ಎಂದು ಶ್ರೀ ನರೇಂದ್ರ ಮೋದಿ ಗಮನಿಸಿದರು. ಮುಂಗಾರು ಋುತು ಪ್ರಾರಂಭವಾಗುವ ಮೊದಲು ರೈತರಿಗೆ ಸಹಾಯ ಮಾಡಲು ಈ ತಂಡಗಳು ಸಿದ್ಧವಾಗಿರುತ್ತವೆ ಎಂದು ಅವರು ಒತ್ತಿ ಹೇಳಿದರು.
ದಶಕಗಳಿಂದ ಭಾರತದ ಕೃಷಿ ವಿಜ್ಞಾನಿಗಳು ಮಾಡಿರುವ ಮಹತ್ವದ ಸಂಶೋಧನಾ ಪ್ರಗತಿಯನ್ನು ಒತ್ತಿಹೇಳುತ್ತಾ, ಕೃಷಿ ಫಲಿತಾಂಶಗಳ ಮೇಲೆ ಅವುಗಳ ಧನಾತ್ಮಕ ಪರಿಣಾಮವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಹೊಸ ತಂತ್ರಗಳನ್ನು ಯಶಸ್ವಿಯಾಗಿ ಪ್ರಯೋಗಿಸಿ, ಪ್ರಭಾವಶಾಲಿ ಇಳುವರಿಯನ್ನು ಸಾಧಿಸಿದ ಪ್ರಗತಿಪರ ರೈತರನ್ನು ಶ್ಲಾಘಿಸಿದರು. ವೈಜ್ಞಾನಿಕ ಸಂಶೋಧನೆ ಮತ್ತು ಯಶಸ್ವಿ ಕೃಷಿ ಪದ್ಧತಿಗಳು ವಿಶಾಲ ಕೃಷಿ ಸಮುದಾಯವನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳುವ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಪ್ರಯತ್ನಗಳು ನಡೆಯುತ್ತಿರುವಾಗ, ಈಗ ಹೊಸ ಶಕ್ತಿಯೊಂದಿಗೆ ಈ ಉಪಕ್ರಮಗಳನ್ನು ವೇಗಗೊಳಿಸುವ ಅವಶ್ಯಕತೆಯಿದೆ ಎಂದರು. ವಿಕಸಿತ ಕೃಷಿ ಸಂಕಲ್ಪ ಅಭಿಯಾನವು ಈ ಜ್ಞಾನದ ಅಂತರವನ್ನು ಕಡಿಮೆ ಮಾಡಲು ಒಂದು ಅಮೂಲ್ಯ ಅವಕಾಶವನ್ನು ಒದಗಿಸುತ್ತದೆ, ಇದು ರೈತರಿಗೆ ಅತ್ಯಾಧುನಿಕ ಕೃಷಿ ಒಳನೋಟಗಳಿಂದ ಪ್ರಯೋಜನ ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ಪ್ರಧಾನಿ ಹೇಳಿದರು.
ವಿಕಸಿತ ಭಾರತಕ್ಕಾಗಿ ಭಾರತದ ಕೃಷಿಯೂ ವಿಕಸನಗೊಳ್ಳಬೇಕು ಎಂದು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ, ಕೃಷಿ ಕ್ಷೇತ್ರವನ್ನು ಪರಿವರ್ತಿಸುವ ಗುರಿಯನ್ನು ಹೊಂದಿರುವ ಕೇಂದ್ರ ಸರ್ಕಾರದ ಹಲವಾರು ಪ್ರಮುಖ ಗಮನದ ಕ್ಷೇತ್ರಗಳನ್ನು ಬಿಂಬಿಸಿದರು. ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಗಳನ್ನು ಖಾತ್ರಿಪಡಿಸುವುದು, ಕೃಷಿ ಆರ್ಥಿಕತೆಯನ್ನು ಬಲಪಡಿಸುವುದು ಮತ್ತು ಬೆಳೆ ಉತ್ಪಾದನೆಯನ್ನು ರಾಷ್ಟ್ರೀಯ ಅಗತ್ಯಗಳೊಂದಿಗೆ ಹೊಂದಿಸುವುದು ಸೇರಿದಂತೆ ನಿರ್ಣಾಯಕ ವಿಷಯಗಳನ್ನು ಅವರು ವಿವರಿಸಿದರು. ಭಾರತವು ತನ್ನದೇ ಆದ ಅಗತ್ಯಗಳನ್ನು ಪೂರೈಸುವುದು ಮಾತ್ರವಲ್ಲದೆ ಜಾಗತಿಕ ಆಹಾರ ಪೂರೈಕೆದಾರನಾಗಿ ಹೊರಹೊಮ್ಮಬೇಕು ಎಂದು ಹೇಳಿದ ಶ್ರೀ ನರೇಂದ್ರ ಮೋದಿ, ಹವಾಮಾನ ಬದಲಾವಣೆಯ ಸವಾಲುಗಳನ್ನು ನಿಭಾಯಿಸುವುದು, ಕನಿಷ್ಠ ನೀರಿನ ಬಳಕೆಯೊಂದಿಗೆ ಧಾನ್ಯ ಉತ್ಪಾದನೆಯನ್ನು ಹೆಚ್ಚಿಸುವುದು, ಹಾನಿಕಾರಕ ರಾಸಾಯನಿಕಗಳಿಂದ ಮಣ್ಣಿನ ಆರೋಗ್ಯವನ್ನು ರಕ್ಷಿಸುವುದು, ಕೃಷಿ ತಂತ್ರಗಳನ್ನು ಆಧುನೀಕರಿಸುವುದು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಕ್ಷೇತ್ರಗಳಿಗೆ ಕೊಂಡೊಯ್ಯುವುದು ಅತ್ಯಗತ್ಯ ಎಂದು ಹೇಳಿದರು. ಕಳೆದ 10-11 ವರ್ಷಗಳಲ್ಲಿ, ಸರ್ಕಾರವು ಈ ಕ್ಷೇತ್ರಗಳಲ್ಲಿವ್ಯಾಪಕ ಪ್ರಯತ್ನಗಳನ್ನು ಕೈಗೊಂಡಿದೆ ಎಂದು ಅವರು ಒತ್ತಿ ಹೇಳಿದರು. ಅಭಿಯಾನದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ರೈತರ ಜಾಗೃತಿಯನ್ನು ಗರಿಷ್ಠಗೊಳಿಸಬೇಕು, ಆಧುನಿಕ ಕೃಷಿ ಪ್ರಗತಿಯ ಬಗ್ಗೆ ಅವರಿಗೆ ಉತ್ತಮ ಮಾಹಿತಿ ಇದೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸಾಂಪ್ರದಾಯಿಕ ಕೃಷಿಯನ್ನು ಮೀರಿ ರೈತರಿಗೆ ಹೆಚ್ಚುವರಿ ಆದಾಯದ ಮೂಲಗಳನ್ನು ಒದಗಿಸುವ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ರೈತರಿಗೆ ಅವಕಾಶಗಳನ್ನು ವಿಸ್ತರಿಸುವ ಗುರಿಯನ್ನು ಹೊಂದಿರುವ ಪ್ರಮುಖ ಉಪಕ್ರಮಗಳನ್ನು ಬಿಂಬಿಸಿದರು. ಕ್ಷೇತ್ರ ಗಡಿಗಳಲ್ಲಿಸೌರ ಫಲಕಗಳನ್ನು ಸ್ಥಾಪಿಸುವುದರಿಂದ ಹೆಚ್ಚುವರಿ ಆದಾಯವನ್ನು ಗಳಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು. ಸಿಹಿ ಕ್ರಾಂತಿಯ ಪರಿಣಾಮವನ್ನು ಉಲ್ಲೇಖಿಸಿದ ಅವರು, ಜೇನು ಸಾಕಾಣಿಕೆಯು ರೈತರಿಗೆ ಪ್ರಯೋಜನಕಾರಿಯಾಗಿದೆ ಮತ್ತು ಹೆಚ್ಚಿನ ಭಾಗವಹಿಸುವವರನ್ನು ಒಳಗೊಳ್ಳಲು ವಿಸ್ತರಿಸಬೇಕು ಎಂದು ಹೇಳಿದರು. ಕೃಷಿ ಅವಶೇಷಗಳನ್ನು ಇಂಧನವಾಗಿ ಪರಿವರ್ತಿಸುವ, ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ‘ಶ್ರೀ ಅನ್ನ’ ಬೆಳೆಯಲು ಸೂಕ್ತ ಪ್ರದೇಶಗಳನ್ನು ಗುರುತಿಸುವ ಮತ್ತು ಕೃಷಿ ಉತ್ಪನ್ನಗಳಲ್ಲಿಮೌಲ್ಯವರ್ಧನೆಯನ್ನು ಹೆಚ್ಚಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು. ಹಾಲು ಕರೆಯದ ಜಾನುವಾರುಗಳು ಸಹ ಈಗ ಗೋಬರ್ಧನ್ ಯೋಜನೆಯ ಮೂಲಕ ಆರ್ಥಿಕತೆಗೆ ಕೊಡುಗೆ ನೀಡುತ್ತಿವೆ, ಇದು ಆದಾಯವನ್ನು ಉತ್ಪಾದಿಸುವ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಪ್ರಧಾನಿ ಗಮನಸೆಳೆದರು. ಗರಿಷ್ಠ ಭಾಗವಹಿಸುವಿಕೆ ಮತ್ತು ಪ್ರಯೋಜನಗಳನ್ನು ಖಚಿತಪಡಿಸಿಕೊಳ್ಳಲು ಈ ಆವಿಷ್ಕಾರಗಳ ಬಗ್ಗೆ ವ್ಯಾಪಕ ರೈತ ಜಾಗೃತಿ ಮೂಡಿಸಲು ಅವರು ಕರೆ ನೀಡಿದರು.
ಭಾರತದ ಕೃಷಿ ಅಭಿವೃದ್ಧಿ ಹೊಂದಿದ ಭಾರತದ ಮೂಲಾಧಾರವಾಗಬೇಕು ಎಂದು ಶ್ರೀ ನರೇಂದ್ರ ಮೋದಿ ಅವರು ಈ ಅಭಿಯಾನದ ಮಹತ್ವವನ್ನು ಒತ್ತಿ ಹೇಳಿದರು. ಭೇಟಿ ನೀಡುವ ವಿಜ್ಞಾನಿಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ, ಪ್ರಶ್ನೆಗಳನ್ನು ಕೇಳಲು ಮತ್ತು ಅಮೂಲ್ಯವಾದ ಒಳನೋಟಗಳನ್ನು ಪಡೆಯಲು ಅವರನ್ನು ಪ್ರೋತ್ಸಾಹಿಸುವಂತೆ ಅವರು ರೈತರನ್ನು ಒತ್ತಾಯಿಸಿದರು. ವಿಜ್ಞಾನಿಗಳು ಮತ್ತು ಅಧಿಕಾರಿಗಳು ತಮ್ಮ ಧ್ಯೇಯದ ಮಹತ್ವವನ್ನು ಗುರುತಿಸುವಂತೆ ಕರೆ ನೀಡಿದ ಶ್ರೀ ನರೇಂದ್ರ ಮೋದಿ, ಅವರ ಬದ್ಧತೆಯು ವಾಡಿಕೆಯ ಸರ್ಕಾರಿ ಕೆಲಸಗಳನ್ನು ಮೀರಿ ಹೋಗಬೇಕು ಮತ್ತು ರಾಷ್ಟ್ರೀಯ ಸೇವಾ ಮನೋಭಾವವನ್ನು ಪ್ರತಿಬಿಂಬಿಸಬೇಕು ಎಂದು ಹೇಳಿದರು. ರೈತರ ಪ್ರಶ್ನೆಗಳನ್ನು ಸಮಗ್ರವಾಗಿ ಪರಿಹರಿಸುವಂತೆ ಮತ್ತು ಅವರ ಅಮೂಲ್ಯ ಸಲಹೆಗಳನ್ನು ದಾಖಲಿಸುವಂತೆ ಅವರು ಒತ್ತಾಯಿಸಿದರು. ವಿಕಸಿತ ಕೃಷಿ ಸಂಕಲ್ಪ ಅಭಿಯಾನವು ಭಾರತದ ರೈತರಿಗೆ ಪ್ರಗತಿಯ ಹೊಸ ಮಾರ್ಗಗಳನ್ನು ತೆರೆಯುತ್ತದೆ, ಕೃಷಿಯಲ್ಲಿಆಧುನೀಕರಣಕ್ಕೆ ಚಾಲನೆ ನೀಡುತ್ತದೆ ಎಂದು ಶ್ರೀ ನರೇಂದ್ರ ಮೋದಿ ಘೋಷಿಸಿದರು ಮತ್ತು ಎಲ್ಲಾ ಪಾಲುದಾರರಿಗೆ ಶುಭಾಶಯಗಳನ್ನು ತಿಳಿಸುವ ಮೂಲಕ ಮುಕ್ತಾಯಗೊಳಿಸಿದರು.
*****
(Release ID: 2132618)
Read this release in:
Odia
,
English
,
Urdu
,
Marathi
,
Hindi
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam