ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ನವೀಕರಿಸಬಹುದಾದ ಇಂಧನದಲ್ಲಿ ದಿಯು ರಾಷ್ಟ್ರೀಯ ಮಾದರಿ: ಕೇಂದ್ರ ಸಚಿವರಾದ ಪ್ರಲ್ಹಾದ್‌ ಜೋಶಿ


ದಿಯುನಲ್ಲಿ ಸೌರ ಪ್ರಗತಿ ಪರಿಶೀಲಿಸಿದ ಕೇಂದ್ರ ಸಚಿವರಾದ ಜೋಶಿ

ಪಿಎಂ-ಸೂರ್ಯ ಘರ್‌ ಯೋಜನೆ ತ್ವರಿತ ಅನುಷ್ಠಾನಕ್ಕೆ ಕೇಂದ್ರ ಸಚಿವರ ಕರೆ

Posted On: 29 MAY 2025 4:05PM by PIB Bengaluru

ನವೀಕರಿಸಬಹುದಾದ ಇಂಧನ ಅಳವಡಿಕೆಯಲ್ಲಿ ದಿಯು ರಾಷ್ಟ್ರೀಯ ಉದಾಹರಣೆಯಾಗಿದೆ, ಅದರ ಸಂಪೂರ್ಣ ಹಗಲಿನ ವಿದ್ಯುತ್‌ ಬೇಡಿಕೆಯನ್ನು ಸೌರ ಶಕ್ತಿಯ ಮೂಲಕ ಪೂರೈಸಲಾಗುತ್ತಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ್‌ ಜೋಶಿ ಹೇಳಿದರು. 11.88 ಮೆಗಾವ್ಯಾಟ್‌ (9 ಮೆಗಾವ್ಯಾಟ್‌ ಗ್ರೌಂಡ್‌-ಮೌಂಟೆಡ್‌ + 2.88 ಮೆಗಾವ್ಯಾಟ್‌ ಮೇಲ್ಚಾವಣಿ) ಸಾಮರ್ಥ್ಯ‌ವನ್ನು ಸಾಧಿಸುವ ಮೂಲಕ ತನ್ನ ಸಂಪೂರ್ಣ ವಿದ್ಯುತ್‌ ಬೇಡಿಕೆಯನ್ನು ಸೌರಶಕ್ತಿಯೊಂದಿಗೆ ಪೂರೈಸಿದ ಭಾರತದ ಮೊದಲ ಜಿಲ್ಲೆಯಾಗಿ ದಿಯುವಿನ ಅಸಾಧಾರಣ ಮೈಲಿಗಲ್ಲನ್ನು ಸಚಿವರು ಅಭಿನಂದಿಸಿದರು. ಸೌರಶಕ್ತಿ ಅಳವಡಿಕೆಯಲ್ಲಿ ಗಮನಾರ್ಹ ಪ್ರಗತಿಯನ್ನು ಪರಿಶೀಲಿಸಲು ಮತ್ತು ಪಿಎಂ-ಸೂರ್ಯ ಘರ್‌: ಮುಫ್ಟಿ ಬಿಜ್ಲಿ ಯೋಜನೆಯ ಅನುಷ್ಠಾನವನ್ನು ನಿರ್ಣಯಿಸಲು ಕೇಂದ್ರ ಸಚಿವರಾದ ಪ್ರಲ್ಹಾದ್‌ ಜೋಶಿ ಇಂದು ದಿಯುಗೆ ಭೇಟಿ ನೀಡಿದರು.

ಸೌರ ವಿದ್ಯುತ್‌ ಉತ್ಪಾದನೆಯ ಸ್ಥಿತಿ, ಅದರ ಪ್ರಸ್ತುತ ಪೂರೈಕೆ ಚೌಕಟ್ಟು ಮತ್ತು ಭವಿಷ್ಯದ ವಿಸ್ತರಣೆಯ ಸಾಧ್ಯತೆಗಳನ್ನು ಪರಿಶೀಲಿಸಲು ಸಚಿವರು ಯುಟಿ (ಕೇಂದ್ರಾಡಳಿತ) ಆಡಳಿತದ ಹಿರಿಯ ಅಧಿಕಾರಿಗಳೊಂದಿಗೆ ದಿಯುನಲ್ಲಿಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ, ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್‌ ಮತ್ತು ದಿಯುವಿನ ಇಂಧನ ಕಾರ್ಯದರ್ಶಿ ಶ್ರೀ ಟಿ. ಅರುಣ್‌ ಅವರು ಅಸ್ತಿತ್ವದಲ್ಲಿರುವ ಸೌರ ವಿದ್ಯುತ್‌ ಸ್ಥಾವರಗಳು, ಅವುಗಳ ಉತ್ಪಾದನಾ ಸಾಮರ್ಥ್ಯ‌ ಮತ್ತು ಗೃಹ ಮಟ್ಟದ ಪ್ರಯೋಜನಗಳ ಬಗ್ಗೆ ವಿವರವಾದ ಪ್ರಸ್ತುತಿಯನ್ನು ನೀಡಿದರು. ಕೇಂದ್ರಾಡಳಿತ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಕುಟುಂಬಗಳು ಈಗ ಸೌರಶಕ್ತಿಯ ಪ್ರಯೋಜನಗಳನ್ನು ಪಡೆಯುತ್ತಿವೆ ಎಂದು ಅವರು ಸಚಿವರಿಗೆ ಮಾಹಿತಿ ನೀಡಿದರು.

ಸಭೆಯಲ್ಲಿ ದಿಯು ಜಿಲ್ಲಾಧಿಕಾರಿ ಡಾ.ವಿವೇಕ್‌ ಕುಮಾರ್‌, ಉಪ  ಜಿಲ್ಲಾಧಿಕಾರಿ ಶ್ರೀ ಶಿವಂ ಮಿಶ್ರಾ, ಕಾರ್ಯನಿರ್ವಾಹಕ ಎಂಜಿನಿರ್ಯ ಶ್ರೀ ಯೋಗೇಶ್‌ ತ್ರಿಪಾಠಿ, ಶ್ರೀ ಪರೇಶ್‌ ಪಟೇಲ್‌ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ನಂತರ, ಸಚಿವರು ಫುಡಾಮ್‌ನಲ್ಲಿರುವ 9 ಮೆಗಾವ್ಯಾಟ್‌ ಸೌರ ಪಾರ್ಕ್‌ ಸೇರಿದಂತೆ ದಿಯುವಿನ ಪ್ರಮುಖ ಸೌರ ಶಕ್ತಿ ಸೌಲಭ್ಯಗಳಿಗೆ ಕ್ಷೇತ್ರ ಭೇಟಿ ನೀಡಿದರು. ಸೌರ  ಪಾರ್ಕ್‌ ದಿಯುನ ಸುಸ್ಥಿರ ಪರಿವರ್ತನೆಯ ಸಂಕೇತವಾಗಿ ನಿಂತಿದೆ ಮತ್ತು ಪ್ರದೇಶದ ಶುದ್ಧ ಇಂಧನ ಅಗತ್ಯಗಳನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಪ್ರಸರಣ ಮತ್ತು ವಿತರಣಾ (ಟಿ ಡಿ) ನಷ್ಟವನ್ನು ಕಡಿಮೆ ಮಾಡಲು ಫುಡಮ್‌ ಸೌರ ಪಾರ್ಕ್‌ ಗಮನಾರ್ಹ ಕೊಡುಗೆ ನೀಡಿದೆ ಮತ್ತು ವಿದ್ಯುತ್‌ ಸುಂಕಗಳ ಪರಿಷ್ಕರಣೆಗೆ ಅನುವು ಮಾಡಿಕೊಟ್ಟಿದೆ, ಇದು ಗ್ರಾಹಕರಿಗೆ ಹೆಚ್ಚು ಕೈಗೆಟುಕುವಂತೆ ಮಾಡಿದೆ ಎಂದು ಸಚಿವರು ಗಮನಿಸಿದರು. ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿ ಶ್ರೀ ಪ್ರಫುಲ್‌ ಪಟೇಲ್‌ ಅವರ ನಾಯಕತ್ವವನ್ನು ಶ್ಲಾಘಿಸಿದ ಅವರು, ಅವರ ಪೂರ್ವಭಾವಿ ವಿಧಾನ ಮತ್ತು ದೃಷ್ಟಿಕೋನವು ಈ ಶುದ್ಧ ಇಂಧನ ಪರಿವರ್ತನೆಯನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.

ದೀರ್ಘಕಾಲೀನ ಪರಿಣಾಮದ ಬಗ್ಗೆ ಮಾತನಾಡಿದ ಸಚಿವರು, ದಿಯುನಲ್ಲಿ ನವೀಕರಿಸಬಹುದಾದ ಇಂಧನ ಮೂಲಸೌಕರ್ಯದಲ್ಲಿ ಕಳೆದ ದಶಕದಲ್ಲಿ ಮಾಡಿದ ಬಂಡವಾಳ ಹೂಡಿಕೆಗಳನ್ನು ಈಗಾಗಲೇ ಸೌರ ವಿದ್ಯುತ್‌ ಪೂರೈಕೆ ಮತ್ತು ಮಾರಾಟದ ಮೂಲಕ ಮರುಪಡೆಯಲಾಗಿದೆ ಎಂದು ಹೇಳಿದರು. ಕೇಂದ್ರಾಡಳಿತ ಪ್ರದೇಶದ ನಿವಾಸಿಗಳಿಗೆ ಅದರ ಪ್ರಯೋಜನಗಳನ್ನು ಗರಿಷ್ಠಗೊಳಿಸಲು ಮತ್ತು ಒಟ್ಟು ಕುಟುಂಬ ಸಂತೃಪ್ತಿಯನ್ನು ಸಾಧಿಸಲು ಪಿಎಂ-ಸೂರ್ಯ ಘರ್‌ ಯೋಜನೆಯನ್ನು ಇನ್ನೂ ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೆ ತರಲು ಅವರು ಕರೆ ನೀಡಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶದ ಪ್ರತಿಯೊಂದು ಭಾಗದಲ್ಲೂ ಶುದ್ಧ ಇಂಧನ ನಿಯೋಜನೆಯನ್ನು ವೇಗಗೊಳಿಸುವ ಭಾರತ ಸರ್ಕಾರದ ಬದ್ಧತೆಯನ್ನು ಈ ಭೇಟಿ ಪುನರುಚ್ಚರಿಸಿತು.

 

 

*****


(Release ID: 2132411)