ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಸಾಂಕ್ರಾಮಿಕ ರೋಗದ ಸವಾಲುಗಳಿಂದ ಐ ಎಫ್ ಎಫ್ ಐ ಸ್ಪಾಟ್ಲೈಟ್ ವರೆಗೆ: ಮನೋಜ್ ಬಾಜಪೇಯಿ ಮತ್ತು ಅವರ ತಂಡವು ಡಿಸ್ಪ್ಯಾಚ್ ಸಿನಿಮಾದ ಸಂಪೂರ್ಣ ಪ್ರಯಾಣವನ್ನು ವಿವರಿಸಿತು
ನಾನು ನನ್ನ ಕಾರಿನ ಕಿಟಕಿಗೆ ಕಪ್ಪು ಬಣ್ಣ ಹಾಕಿದರೆ, ನಾನು ಜನರನ್ನು ಹೇಗೆ ನೋಡಲಾಗುತ್ತದೆ ಮತ್ತು ಅವರ ಜೀವನದ ವಿವಿಧ ಅಂಶಗಳನ್ನು ಹೇಗೆ ವೀಕ್ಷಿಸಲಾಗುತ್ತದೆ?: ಮನೋಜ್ ಬಾಜಪೇಯಿ
ಇದು ಸ್ವತಂತ್ರ ಸಿನಿಮಾಗೆ ಮಾರ್ಗದರ್ಶನ ನೀಡುವ ಸಮಯ; ಇಲ್ಲದಿದ್ದರೆ ಸಿನಿಮಾ ವ್ಯಾಪಾರವಾಗುತ್ತದೆ: ಮನೋಜ್ ಬಾಜಪೇಯಿ
ರಂಗಭೂಮಿಯು ನಟರ ಮಾಧ್ಯಮ, ಆದರೆ ಚಲನಚಿತ್ರವು ಮೂಲತಃ ನಿರ್ದೇಶಕರ ಮಾಧ್ಯಮ: ಮನೋಜ್ ಬಾಜಪೇಯಿ
ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಹೆಸರಾಂತ ನಟ ಮನೋಜ್ ಬಾಜಪೇಯಿ ಅವರು 55ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್ ಎಫ್ ಐ) ಉಪಸ್ಥಿತರಿದ್ದರು. ಅಲ್ಲಿ ಅವರ ಬಹುನಿರೀಕ್ಷಿತ ಚಿತ್ರ ಡಿಸ್ಪ್ಯಾಚ್ ಅನ್ನು 'ವಿಶೇಷ ಪ್ರಸ್ತುತಿಗಳು' ಅಡಿಯಲ್ಲಿ ಪ್ರದರ್ಶಿಸಲಾಗುತ್ತಿದೆ. ಐ ಎಫ್ ಎಫ್ ಐ 2024ರ ಹಿನ್ನೆಲೆಯಲ್ಲಿ ಪ್ರೆಸ್ ಇನ್ಫರ್ಮೇಶನ್ ಬ್ಯೂರೋ (ಪಿಐಬಿ) ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ, ಮನೋಜ್ ಬಾಜಪೇಯಿ, ನಿರ್ದೇಶಕ ಕಣ್ಣು ಬೆಹ್ಲ್, ಇಶಾನಿ ಬ್ಯಾನರ್ಜಿ ಮತ್ತು ನಟಿ ಶಹಾನಾ ಗೋಸ್ವಾಮಿ ಸೇರಿದಂತೆ ಚಿತ್ರದ ಪಾತ್ರವರ್ಗ ಮತ್ತು ಸಿಬ್ಬಂದಿಯು ಮಾಧ್ಯಮಗಳೊಂದಿಗೆ ಸಂವಾದ ನಡೆಸಿದರು. ಪತ್ರಿಕೋದ್ಯಮದ ಕರಾಳ ಮುಖವನ್ನು ಎತ್ತಿಹಿಡಿಯುವ ಈ ಕಥೆಯಲ್ಲಿ ಚಿತ್ರದ ನಿರ್ಮಾಣ, ಸವಾಲುಗಳು ಮತ್ತು ಕುತೂಹಲಕಾರಿ ಕಥೆಯ ಮೇಲೆ ಬೆಳಕು ಚೆಲ್ಲಿದರು.

ಮನೋಜ್ ಬಾಜಪೇಯಿ ಅವರು ಡಿಸ್ಪ್ಯಾಚ್ ಚಿತ್ರದ ತಯಾರಿಕೆಯ ಸಮಯದಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು. ಅವರು ಚಲನಚಿತ್ರ ನಿರ್ಮಾಣದಲ್ಲಿ ನವೀನ ವಿಧಾನಕ್ಕಾಗಿ ನಿರ್ದೇಶಕ ಕನ್ನು ಬಹ್ಲ್ ಅವರನ್ನು ಶ್ಲಾಘಿಸಿದರು ಮತ್ತು ಅವರನ್ನು ಅತ್ಯಂತ ರೋಮಾಂಚಕಾರಿ ಸಮಕಾಲೀನ ಚಲನಚಿತ್ರ ನಿರ್ದೇಶಕರಲ್ಲಿ ಒಬ್ಬರು ಎಂದು ಬಣ್ಣಿಸಿದರು.
"ಸಾಂಕ್ರಾಮಿಕ ಸಮಯದಲ್ಲಿ ನಾವು ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದೆವು, ಅದೇ ಒಂದು ದೊಡ್ಡ ಸವಾಲಾಗಿತ್ತು. ನಾವು ಕೊರೋನಾ ಡೆಲ್ಟಾ ಅಲೆಯ ಸಮಯದಲ್ಲಿ ಮುಂಬೈನಲ್ಲಿ ಚಿತ್ರೀಕರಣ ಮಾಡುತ್ತಿದ್ದೆವು ಮತ್ತು ಈ ಸಮಯದಲ್ಲಿ ತಂಡದ ಅನೇಕ ಜನರು ಕೊರೋನಾ ಸೋಂಕಿಗೆ ಒಳಗಾಗಿದ್ದೆವು. ಆದರೆ ಅದರ ನಂತರ ನಾವು ಅಪಾರ ಅಡೆತಡೆಗಳನ್ನು ನಿವಾರಿಸಿಕೊಂಡು ಚಿತ್ರೀಕರಣ ಮುಂದುವರಿಸಲು ಮರಳಿದೆವು” ಎಂದು ಬಾಜಪೇಯಿ ಹೇಳಿಡರು. "ಇಶಾನಿ ಮತ್ತು ಕಣ್ಣು ಬರೆದಿರುವ ಚಿತ್ರಕಥೆಯು ನಂಬಲಾಗದಷ್ಟು ನೈಜವಾಗಿದೆ ಮತ್ತು ಆಕರ್ಷಕವಾಗಿದೆ. ಇದು ಒಬ್ಬ ಪತ್ರಕರ್ತನ ಕಥೆಯಾಗಿದ್ದು, ಅವನ ಮಹತ್ವಾಕಾಂಕ್ಷೆ ಮತ್ತು ವೃತ್ತಿಪರತೆ ಅವನ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ ” ಎಂದು ಅವರು ಹೇಳಿದರು.
ಪಾತ್ರಗಳ ಆಳವನ್ನು ಅರ್ಥಮಾಡಿಕೊಳ್ಳಲು ಅಗತ್ಯವಾದ ಕಾರ್ಯಾಗಾರಗಳ ಸಮಗ್ರ ಪ್ರಕ್ರಿಯೆಯನ್ನು ಹೈಲೈಟ್ ಮಾಡುವ ಮೂಲಕ ಚಿತ್ರದ ಸ್ಕ್ರಿಪ್ಟ್ ನ ಪ್ರಭಾವವನ್ನು ಬಾಜಪೇಯಿ ಪ್ರತಿಬಿಂಬಿಸಿದರು. ಪತ್ರಕರ್ತನ ಪಾತ್ರಕ್ಕಾಗಿ ತೀವ್ರ ತಯಾರಿಯು ತನ್ನನ್ನು ಮಾನಸಿಕವಾಗಿ ಹೇಗೆ ಪ್ರಭಾವಿಸಿತು, ನಟನಾಗಿ ಬೆಳೆಯಲು ಸಹಾಯ ಮಾಡಿತು ಎಂದು ಅವರು ವಿವರಿಸಿದರು.

“ಇಶಾನಿ ಮತ್ತು ಕಣ್ಣು ಅವರ ಸ್ಕ್ರಿಪ್ಟ್ ತುಂಬಾ ವಿವರವಾಗಿದೆ ಮತ್ತು ವಾಸ್ತವವನ್ನು ಆಧರಿಸಿದೆ. ಇದು ಎಲ್ಲಾ ನಟರಿಗೆ ಮಾನಸಿಕವಾಗಿ ಸವಾಲಾಗಿತ್ತು, ಆದರೆ ಕೊನೆಯಲ್ಲಿ, ಇದು ಎಲ್ಲ ಪ್ರಯತ್ನಗಳಿಗೂ ಯೋಗ್ಯವಾಗಿತ್ತು” ಎಂದು ಬಾಜಪೇಯಿ ಹೇಳಿದರು. ಪತ್ರಿಕಾಗೋಷ್ಠಿಯನ್ನು ಶ್ರೀ ಧರ್ಮೇಂದ್ರ ತಿವಾರಿಯವರು ನಿರ್ವಹಿಸಿದರು.
ಚಿತ್ರದ ಬಗ್ಗೆ
ಗ್ಯಾಂಗ್ ವಾರ್ ಗಳಿಗೆ ಸಂಬಂಧಿಸಿದಂತೆ ಆಳವಾಗಿ ಬೇರೂರಿರುವ ಭ್ರಷ್ಟಾಚಾರವನ್ನು ಬಹಿರಂಗಪಡಿಸುವ ತನಿಖೆಯೊಂದಿಗೆ ಹಿಡಿತ ಸಾಧಿಸುವ ಅಪರಾಧ ಸಂಪಾದಕ ಜಾಯ್ ನ ಕಥೆಯನ್ನು ಡಿಸ್ಪ್ಯಾಚ್ ಹೇಳುತ್ತದೆ. ಅವನ ವೃತ್ತಿಪರ ಪ್ರಕ್ಷುಬ್ಧತೆಯ ಜೊತೆಗೆ, ಜಾಯ್ ತನ್ನ ಮದುವೆಯ ಸ್ಥಗಿತ ಮತ್ತು ತನ್ನ ಹತ್ತಿರವಿರುವವರಿಂದ ದ್ರೋಹವನ್ನು ಎದುರಿಸುತ್ತಾನೆ, ಇದು ಅಂತಿಮವಾಗಿ ದುರಂತ ಪರಿಣಾಮಗಳಿಗೆ ಕಾರಣವಾಗುತ್ತದೆ. ಚಲನಚಿತ್ರವು ಮಹತ್ವಾಕಾಂಕ್ಷೆ, ದುರಾಸೆ ಮತ್ತು ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಮೇಲೆ ಅದರ ಪ್ರಭಾವದ ನಡುವಿನ ಪರಸ್ಪರ ಕ್ರಿಯೆಯನ್ನು ಚಿತ್ರಿಸುತ್ತದೆ. ಚಿತ್ರವು ಡಿಸೆಂಬರ್ 13, 2024 ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ.
ಸಂವಾದ ಅಧಿವೇಶನ
ಪತ್ರಿಕಾಗೋಷ್ಠಿಯ ಜೊತೆಗೆ, ಮನೋಜ್ ಬಾಜಪೇಯಿ ಅವರು ಐ ಎಫ್ ಎಫ್ ಐ ಸಮಯದಲ್ಲಿ ಸಂವಾದಾತ್ಮಕ ಅಧಿವೇಶನದಲ್ಲಿ ಭಾಗವಹಿಸಿದರು. ಈ ಅಧಿವೇಶನವು ಭಾರತದ ಅತ್ಯಂತ ಗೌರವಾನ್ವಿತ ನಟರೊಬ್ಬರ ಮನಸ್ಸಿನ ಅಪರೂಪದ ನೋಟವನ್ನು ಒದಗಿಸಿತು.

“ನಾನು ನನ್ನ ಕಾರಿನ ಕಿಟಕಿಗೆ ಕಪ್ಪು ಬಣ್ಣ ಹಾಕಿದರೆ, ನಾನು ಜನರನ್ನು, ಅವರ ದುಃಖ ಮತ್ತು ಸಂತೋಷವನ್ನು ಹೇಗೆ ನೋಡಬಲ್ಲೆ ಮತ್ತು ಅವರ ಜೀವನವನ್ನು ಹೇಗೆ ನೋಡಬಲ್ಲೆ. ಒಬ್ಬ ನಟನಾಗಿ ನಾನು ಜನರೊಂದಿಗೆ ಬೆರೆಯಲು ಮತ್ತು ಜನರನ್ನು ಗಮನಿಸಲು ಮತ್ತು ಅವರೊಂದಿಗೆ ಸಂಪರ್ಕದಲ್ಲಿರಲು ಬಯಸುತ್ತೇನೆ. ನೀವು ಜನರಿಂದ ದೂರವಿದ್ದರೆ, ನೀವು ಎಂದಿಗೂ ಉತ್ತಮ ಪಾತ್ರವನ್ನು ನಿರ್ವಹಿಸಲು ಸಾಧ್ಯವಿಲ್ಲ” ಮನೋಜ್ ಬಾಜಪೇಯಿ ಹೇಳಿದರು. 55 ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಆಕರ್ಷಣೀಯ ಸಂವಾದ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಇನ್ನೊಬ್ಬ ವ್ಯಕ್ತಿಯ ಪಾತ್ರವನ್ನು ನಿರ್ವಹಿಸುವುದು ವಿಶ್ವದ ಅತ್ಯಂತ ಕಷ್ಟಕರವಾದ ಕೆಲಸ ಎಂದು ಬಾಜಪೇಯಿ ಹೇಳಿದರು.

ಬಹು ಪ್ರಶಸ್ತಿ ವಿಜೇತ ನಟ ಬಾಜಪೇಯಿ ಅವರು ನಟನೆಯಲ್ಲಿ ತಮ್ಮ ವಿಧಾನದ ಒಳನೋಟಗಳನ್ನು ಬಹಿರಂಗಪಡಿಸಿದರು. ನಟನಾಗಿ ತನ್ನ ಪಾತ್ರವು ಪ್ರೇಕ್ಷಕರನ್ನು ರಂಜಿಸುವುದು ಅಥವಾ ಮೆಚ್ಚಿಸುವುದು ಮಾತ್ರವಲ್ಲ, ಆದರೆ ವಾಸ್ತವವಾಗಿ ಅವರನ್ನು ಪ್ರತಿನಿಧಿಸುವುದು ಎಂದು ಒತ್ತಿ ಹೇಳಿದರು. "ಒಬ್ಬ ನಟನ ಅಭಿನಯವು ಜನರನ್ನು ಆಕರ್ಷಿಷಿಸುವ ಅಥವಾ ಮನರಂಜಿಸುವಂತದ್ದಲ್ಲ, ಆದರೆ ಜನರನ್ನು ಪ್ರತಿನಿಧಿಸಬೇಕು ಮತ್ತು ಅವರನ್ನು ಆಳವಾಗಿ ಸ್ಪರ್ಶಿಸಬೇಕು" ಎಂದು ಅವರು ಹೇಳಿದರು. ಕಲೆಯ ಬಗೆಗಿನ ತಮ್ಮ ಉತ್ಸಾಹದ ಬಗ್ಗೆ ಅವರು ಭಾವುಕರಾಗಿ ಮಾತನಾಡಿದರು, ನಟನೆ ಎಂಬುದು ಎಂದಿಗೂ ಮುಗಿಯದ ಪ್ರಕ್ರಿಯೆಯಾಗಿದ್ದು ಅದು ತಮ್ಮನ್ನು ಆಕರ್ಷಿಸುತ್ತದೆ ಮತ್ತು ಪ್ರೇರಿಪಿಸುತ್ತದೆ ಎಂದು ಅವರು ಹೇಳಿದರು.
ರಂಗಭೂಮಿ ಮತ್ತು ಚಲನಚಿತ್ರದ ನಡುವಿನ ವ್ಯತ್ಯಾಸವನ್ನು ಕುರಿತು ಚರ್ಚಿಸಿದ ಅವರು, ರಂಗಭೂಮಿಯು ನಟನ ಮಾಧ್ಯಮವಾಗಿದ್ದರೆ, ಚಲನಚಿತ್ರವು ಮೂಲಭೂತವಾಗಿ ನಿರ್ದೇಶಕರ ಮಾಧ್ಯಮವಾಗಿದೆ ಎಂದು ಒತ್ತಿ ಹೇಳಿದರು. "ಸಿನಿಮಾದಲ್ಲಿ ಅನೇಕ ಅಂಶಗಳು ಮತ್ತು ಆಯಾಮಗಳು ಅಂತಿಮವಾಗಿ ಕಥೆಯನ್ನು ರೂಪಿಸುತ್ತವೆ ಮತ್ತು ಇದು ಸಹಯೋಗದ ಪ್ರಕ್ರಿಯೆಯಾಗಿದೆ" ಎಂದು ಅವರು ಹೇಳಿದರು.

ತಮ್ಮ ಬಹುಮುಖ ಪ್ರತಿಭೆಗೆ ಹೆಸರುವಾಸಿಯಾಗಿರುವ ಮನೋಜ್ ಬಾಜಪೇಯಿ, ಯಾವುದೇ ನಿರ್ದಿಷ್ಟ ರೀತಿಯ ಸಿನಿಮಾ ಅಥವಾ ಪಾತ್ರಕ್ಕೆ ಸೀಮಿತವಾಗಿರಲು ನಿರಾಕರಿಸುವ ಮೂಲಕ ವೈವಿಧ್ಯಮಯ ಪಾತ್ರಗಳು ಮತ್ತು ಪ್ರಕಾರಗಳನ್ನು ಅನ್ವೇಷಿಸುವುದನ್ನು ಮುಂದುವರಿಸುವ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು. "ನಾನು ನನ್ನನ್ನು ಮುಖ್ಯವಾಹಿನಿಯ ಸಿನಿಮಾ ಅಥವಾ ಯಾವುದೇ ನಿರ್ದಿಷ್ಟ ಪ್ರಕಾರಕ್ಕೆ ಸೀಮಿತಗೊಳಿಸಲು ಬಯಸುವುದಿಲ್ಲ. ನಾನು ಯಾವಾಗಲೂ ಪ್ರತಿ ಹೊಸ ಯೋಜನೆಯೊಂದಿಗೆ ನನ್ನ ಪಾತ್ರಗಳನ್ನು ಅನ್ವೇಷಿಸಲು ಪ್ರಯತ್ನಿಸುತ್ತೇನೆ. ನನ್ನ ಗಮನವು ಯಾವಾಗಲೂ ಹೊಸದನ್ನು ನೀಡುವ ಪಾತ್ರಗಳನ್ನು ಮಾಡುವ ಕಡೆ ಇರುತ್ತದೆ" ಎಂದು ಅವರು ಹೇಳಿದರು.
ಸಮಾಜ ಮತ್ತು ಚಿತ್ರರಂಗದ ಪ್ರಸ್ತುತ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಸಮಾಜ ಮತ್ತು ಉದ್ಯಮವು ಅನಿಶ್ಚಿತತೆ, ಸಂಘರ್ಷ ಮತ್ತು ಗೊಂದಲದಿಂದ ತುಂಬಿರುವ ಕಷ್ಟದ ಸಮಯ ಇದಾಗಿದೆ. ಸ್ವತಂತ್ರ ಸಿನಿಮಾ ಎಂಬುದು ಸಿನಿಮಾ ಕಲೆಗೆ ನಿಷ್ಠವಾಗಿರುವ ಏಕೈಕ ಪ್ರಕಾರವಾಗಿದೆ ಎಂದು ಹೇಲಿದರು. “ಭಾರತೀಯ ಚಿತ್ರರಂಗದ ಬೆಳವಣಿಗೆಯನ್ನು ಖಾತ್ರಿಪಡಿಸುವ ಸ್ವತಂತ್ರ ಸಿನಿಮಾಕ್ಕೆ ಮಾರ್ಗದರ್ಶನ ನೀಡುವ ಸಮಯ ಇದು. ಅದಿಲ್ಲದೇ ಹೋದರೆ ಸಿನಿಮಾ ವ್ಯಾಪಾರವಾಗುತ್ತದೆ.” ಎಂದು ಅವರು ಪ್ರತಿಪಾದಿಸಿದರು.
ನಟನೆಯ ಕಲೆ ಮತ್ತು ಭಾರತೀಯ ಸಿನಿಮಾದ ಭವಿಷ್ಯದ ಕುರಿತಾದ ಪ್ರತಿಬಿಂಬಗಳಿಂದ ಸಮೃದ್ಧವಾಗಿದ್ದ ಸಂವಾದವು ಮನೋಜ್ ಬಾಜಪೇಯಿ ಅವರ ಕಲೆಗೆ ಬದ್ಧತೆ ಮತ್ತು ಸಮಾಜವನ್ನು ಪ್ರತಿಬಿಂಬಿಸುವ ಮತ್ತು ರೂಪಿಸುವ ಕಥೆ ಹೇಳುವ ಶಕ್ತಿಯಲ್ಲಿ ಅವರ ನಂಬಿಕೆಗೆ ಸಾಕ್ಷಿಯಾಗಿದೆ. ಖ್ಯಾತ ಚಲನಚಿತ್ರ ವಿಮರ್ಶಕ ಸುಧೀರ್ ಶ್ರೀನಿವಾಸನ್ ಅವರು ಈ ಅಧಿವೇಶನವನ್ನು ನಿರ್ವಹಿಸಿದರು.
*****
(Release ID: 2076436)