ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav
iffi banner

ನಮ್ಮ ಅಸಾಧಾರಣ ನಾಯಕ ವೀರ್ ಸಾವರ್ಕರ್ ಅವರ ನೈಜ ಕಥೆಯನ್ನು ಹೇಳಲು ನಾನು ಅದನ್ನು ತೆಗೆದುಕೊಂಡಿದ್ದೇನೆ": ರಣದೀಪ್ ಹೂಡಾ


'ಸ್ವಾತಂತ್ರ್ಯ ವೀರ್ ಸಾವರ್ಕರ್' ಚಿತ್ರದ ನಟರು ಮತ್ತು ಇತರ ತಂತ್ರಜ್ಞರು 55ನೇ ಐ ಎಫ್ ಎಫ್ ಐ ನಲ್ಲಿ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದರು

ಭಾರತೀಯ ಪನೋರಮಾ ವಿಭಾಗದ ಉದ್ಘಾಟನಾ ಚಿತ್ರವಾಗಿ ಪ್ರದರ್ಶಿಸಲ್ಪಟ್ಟ 'ಸ್ವಾತಂತ್ರ್ಯ ವೀರ್ ಸಾವರ್ಕರ್' ಎಂಬ ಜೀವನಾಧಾರಿತ ನಾಟಕೀಯ ಚಲನಚಿತ್ರದ ತಂಡವು 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ಮಾಧ್ಯಮಗಳೊಂದಿಗೆ ಸಂವಾದ ನಡೆಸಿತು. ಈ ಕಾರ್ಯಕ್ರಮವು ಚಲನಚಿತ್ರದ ಸೃಜನಶೀಲ ಪಯಣ ಮತ್ತು ಅದರ ಐತಿಹಾಸಿಕ ಮಹತ್ವದ ಬಗ್ಗೆ ಚಿಂತಿಸಲು ಒಂದು ವೇದಿಕೆಯನ್ನು ಒದಗಿಸಿತು.

ವಿನಾಯಕ ದಾಮೋದರ ಸಾವರ್ಕರ್ ಅವರ ಮುಖ್ಯ ಪಾತ್ರವನ್ನು ನಿರ್ವಹಿಸಿ ಚಲನಚಿತ್ರವನ್ನು ನಿರ್ದೇಶಿಸಿರುವ ನಟ ರಣದೀಪ್ ಹೂಡಾ, ಚಿತ್ರ ನಿರ್ಮಾಣದಲ್ಲಿ ಎದುರಾದ ಸವಾಲುಗಳನ್ನು ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ವೀರ್ ಸಾವರ್ಕರ್ ಎದುರಿಸಿದ ಹೋರಾಟಗಳಿಗೆ ಹೋಲಿಸಿದರು. ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ನಮ್ಮ ನಾಯಕ ವೀರ್ ಸಾವರ್ಕರ್ ಅವರ ನೈಜ ಕಥೆಯನ್ನು ಸಾರ್ವಜನಿಕ ಚರ್ಚೆಗೆ ತರುವ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳಬೇಕಾಯಿತು ಎಂದು ಹೇಳಿದರು."ಸಾವರ್ಕರ್ ಯಾವಾಗಲೂ ಭಾರತ ಸೈನಿಕ ದೃಷ್ಟಿಯಿಂದ ಬಲಿಷ್ಠವಾಗಿರಬೇಕೆಂದು ಬಯಸುತ್ತಿದ್ದರು. ಇಂದು, ಜಗತ್ತಿನಲ್ಲಿ ನಮ್ಮ ಸ್ಥಾನಮಾನ ಗಮನಾರ್ಹವಾಗಿ ಉತ್ತಮಗೊಂಡಿದೆ. ಈ ಚಲನಚಿತ್ರವು ನಮ್ಮ ಸಶಸ್ತ್ರ ಹೋರಾಟದ ಮತ್ತೊಂದು ಮುಖವನ್ನು ಬೆಳಕಿಗೆ ತರುತ್ತದೆ, ಸ್ವಾತಂತ್ರ್ಯಕ್ಕಾಗಿ ಆಯುಧ ಹಿಡಿಯಲು ಕ್ರಾಂತಿಕಾರಿಗಳಿಗೆ ಹೇಗೆ ಸ್ಫೂರ್ತಿ ನೀಡಿತು ಎಂಬುದನ್ನು ತೋರಿಸುತ್ತದೆ" ಎಂದು ಅವರು ಹೇಳಿದರು.

ಚಿತ್ರದಲ್ಲಿ ಭಿಕಾಜಿ ಕಾಮಾ ಪಾತ್ರವನ್ನು ನಿರ್ವಹಿಸುತ್ತಿರುವ ನಟಿ ಅಂಜಲಿ ಹೂಡಾ, ಈ ಚಿತ್ರದಲ್ಲಿ ತಮ್ಮ ಪಾತ್ರವು ಸಾವರ್ಕರ್ ಅವರ ವೈಯಕ್ತಿಕ ಜೀವನದ ಬಗ್ಗೆ ತಮ್ಮ ತಿಳುವಳಿಕೆಯನ್ನು ಹೇಗೆ ಹೆಚ್ಚಿಸಿದೆ ಎಂಬುದನ್ನು ಹೇಳಿದರು. 'ಈ ಚಿತ್ರ ನನ್ನ ಕಣ್ಣು ತೆರೆಸಿದೆ. ನಮ್ಮ ಮರೆತುಹೋದ ನಾಯಕರ ಮೇಲೆ ಬೆಳಕು ಚೆಲ್ಲಲು ಭವಿಷ್ಯದಲ್ಲಿ ಇಂತಹ ಇನ್ನಷ್ಟು ಚಲನಚಿತ್ರಗಳು ತಯಾರಾಗುತ್ತವೆ ಎಂದು ನಾನು ಭಾವಿಸುತ್ತೇನೆ "ಎಂದು ಅವರು ಹೇಳಿದರು.

ಜೈ ಪಟೇಲ್, ಮೃಣಾಲ್ ದತ್ ಮತ್ತು ಅಮಿತ್ ಸಿಯಾಲ್ ಕೂಡ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು ಮತ್ತು ಭಾರತೀಯ ಚಿತ್ರರಂಗದಲ್ಲಿ ಅಂತಹ ಚಲನಚಿತ್ರಗಳ ಮಹತ್ವವನ್ನು ಎತ್ತಿ ತೋರಿಸಿದರು.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಅನಾಮಧೇಯರಾಗಿದ್ದ ಅಸಂಖ್ಯಾತ ವೀರರಲ್ಲಿ ಒಬ್ಬರಾದ ವೀರ ಸಾವರ್ಕರ್ ಅವರ ಕಥೆಯನ್ನು ಈ ಚಿತ್ರ ಬಿಚ್ಚಿಡುತ್ತದೆ. ಮಾತೃಭೂಮಿಯ ಮೇಲೆ ಅಪರಿಮಿತ ಭಕ್ತಿ ಹೊಂದಿದ್ದ ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಎದುರಿಸಿದ ತೀವ್ರ ಪರಿಣಾಮಗಳನ್ನು ಮನಮುಟ್ಟುವಂತೆ ತೋರಿಸುತ್ತದೆ.


ಚಿತ್ರದ ಸಾರಾಂಶ: ಸ್ವಾತಂತ್ರ್ಯ ವೀರ ಸಾವರ್ಕರ್

ಈ ಚಲನಚಿತ್ರವು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಕ್ರಾಂತಿಕಾರಿ ಚಿಂತಕ ಮತ್ತು ಕವಿ ವಿನಾಯಕ ದಾಮೋದರ ಸಾವರ್ಕರ್ ಅವರ ಜೀವನ ಚರಿತ್ರೆಯನ್ನು ಅನಾವರಣಗೊಳಿಸುತ್ತದೆ. ಸಶಸ್ತ್ರ ಪ್ರತಿರೋಧದ ಬಲಿಷ್ಠ ಪ್ರತಿಪಾದಕರಾಗಿ ಅವರ ಪರಿವರ್ತನೆ, ವೈಚಾರಿಕ ಹೋರಾಟಗಳು ಮತ್ತು ಸೆಲ್ಯುಲಾರ್ ಜೈಲಿನಲ್ಲಿ ಕಳೆದ ವರ್ಷಗಳನ್ನು ಇದು ಅನ್ವೇಷಿಸುತ್ತದೆ. ವೈಯಕ್ತಿಕ ತ್ಯಾಗಗಳು ಮತ್ತು ತಂತ್ರಾತ್ಮಕ ನಾಯಕತ್ವದ ಮೂಲಕ, ಸಾವರ್ಕರ್ ಅವರು ಬಹುಮುಖಿ ವ್ಯಕ್ತಿತ್ವವಾಗಿ ಮೂಡಿಬರುತ್ತಾರೆ, ಅವರ ಬಲಿಷ್ಠ ಮತ್ತು ಸ್ವಾವಲಂಬಿ ಭಾರತದ ದೃಷ್ಟಿಕೋನವು ಇಂದಿಗೂ ಪ್ರತಿಧ್ವನಿಸುತ್ತಿದೆ.

ಪಾತ್ರವರ್ಗ ಮತ್ತು ಸಿಬ್ಬಂದಿ

ನಿರ್ದೇಶಕ: ರಣದೀಪ್ ಹೂಡಾ

ನಿರ್ಮಾಪಕರು: ಆನಂದ್ ಪಂಡಿತ್, ಸ್ಯಾಮ್ ಖಾನ್, ಸಂದೀಪ್ ಸಿಂಗ್, ಯೋಗೇಶ್ ರಾಹರ್

ಚಿತ್ರಕಥೆ: ರಣದೀಪ್ ಹೂಡಾ


ಪಾತ್ರವರ್ಗ:

  • ರಣದೀಪ್ ಹೂಡಾ
  • ಅಂಕಿತ ಲೋಖಂಡೆ
  • ಅಮಿತ್ ಸಿಯಾಲ್
  • ಮೃಣಾಲ್ ದತ್
  • ಜೈ ಪಟೇಲ್
  • ಅಂಜಲಿ ಹೂಡಾ

 

 

*****

iffi reel

(Release ID: 2076408)