ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಉತ್ತರಪ್ರದೇಶಕ್ಕೆ 2024 ರ ಸೆಪ್ಟೆಂಬರ್ 25 ರಂದು ಉಪರಾಷ್ಟ್ರಪತಿ ಭೇಟಿ


ಗೌತಮ ಬುದ್ಧ ನಗರದಲ್ಲಿ ಎರಡನೇ ಉತ್ತರ ಪ್ರದೇಶ ಅಂತಾರಾಷ್ಟ್ರೀಯ ವ್ಯಾಪಾರ ಪ್ರದರ್ಶನದಲ್ಲಿ ಮುಖ್ಯ ಅತಿಥಿಯಾಗಿ ಉಪರಾಷ್ಟ್ರಪತಿ ಭಾಗಿ

ಉತ್ತರಪ್ರದೇಶದ ಗೌತಮ ಬುದ್ಧ ನಗರಕ್ಕೆ 2024 ರ ಸೆಪ್ಟೆಂಬರ್ 25 ರಂದು ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಭೇಟಿ

Posted On: 23 SEP 2024 6:34PM by PIB Bengaluru

ಉತ್ತರಪ್ರದೇಶದ ಗೌತಮ ಬುದ್ಧ ನಗರಕ್ಕೆ 2024 ರ ಸೆಪ್ಟೆಂಬರ್ 25 ರಂದು ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಭೇಟಿ ನೀಡಲಿದ್ದಾರೆ. ಭೇಟಿ ವೇಳೆ ಉಪರಾಷ್ಟ್ರಪತಿಗಳು ಉತ್ತರ ಪ್ರದೇಶ ಅಂತಾರಾಷ್ಟ್ರೀಯ ವ್ಯಾಪಾರ ಪ್ರದರ್ಶನ (ಯುಪಿಐಟಿಎಸ್) 2024 ರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಪ್ರಮುಖ ಭಾಷಣ ಮಾಡಲಿದ್ದಾರೆ. 

ಯುಪಿಐಟಿಎಸ್ ನ ಈ ಎರಡನೇ ಆವೃತ್ತಿಯು 2024 ರ ಸೆಪ್ಟೆಂಬರ್ 25 ರಿಂದ 29 ರವರೆಗೆ ನಡೆಯಲಿದೆ. ಈ ಕಾರ್ಯಕ್ರಮವು ಉತ್ತರಪ್ರದೇಶದ ವ್ಯಾಪಾರ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸಲಿದೆ ಮತ್ತು ಪ್ರಮುಖ ಪಾಲದಾರ ರಾಷ್ಟ್ರ ವಿಯೆಟ್ನಾಂ ಎಂಬ ಬಗ್ಗೆಯೂ ತಿಳಿಸಲಿದೆ. ಯುಪಿಐಟಿಎಸ್ ನ ಮೊದಲ ಆವೃತ್ತಿಯನ್ನು ಭಾರತದ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು ಉದ್ಘಾಟಿಸಿದ್ದರು.

 

*****
 



(Release ID: 2058178) Visitor Counter : 22