ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav g20-india-2023

ಓಣಂ ಮುನ್ನಾ ದಿನ ಭಾರತದ ರಾಷ್ಟ್ರಪತಿಗಳ  ಶುಭಾಶಯ

Posted On: 14 SEP 2024 6:38PM by PIB Bengaluru

ಭಾರತದ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು ಓಣಂ ಮುನ್ನಾ ದಿನದಂದು ತಮ್ಮ ಸಂದೇಶದಲ್ಲಿ :

“ಈ ಓಣಂ ಶುಭ ಸಂದರ್ಭದಲ್ಲಿ ಎಲ್ಲಾ ನಾಗರಿಕರಿಗೆ ವಿಶೇಷವಾಗಿ ಭಾರತದಲ್ಲಿ ಮತ್ತು ವಿದೇಶಗಳಲ್ಲಿ ವಾಸಿಸುತ್ತಿರುವ ಕೇರಳದ ಸಹೋದರ ಸಹೋದರಿಯರಿಗೆ ನನ್ನ ಆತ್ಮೀಯ ಶುಭಾಶಯಗಳು ಮತ್ತು ಶುಭ ಹಾರೈಕೆಗಳು.

ಬೆಳೆಗಳ ಕೊಯ್ಲು ಸಂಭ್ರಮಿಸಲು ಈ ಹಬ್ಬವನ್ನು ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಕೇರಳದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಸಂಪ್ರದಾಯಗಳ ಆಚರಣೆಗೆ ಇದು ವಿಶೇಷ ಅವಕಾಶವಾಗಿದೆ. ನಮ್ಮ ದೇಶಕ್ಕೆ ಆಹಾರ ನೀಡಲು ಅವಿರತರವಾಗಿ ಶ್ರಮಿಸುವ ರೈತರಿಗೆ ಈ ಸಂದರ್ಭದಲ್ಲಿ ನಾವು ನಮ್ಮ ಮನಃಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಸಮೃದ್ಧಿಯ ದ್ಯೋತಕವಾದ ಈ ಹಬ್ಬವು ಸಾಮಾಜಿಕ ಸಾಮರಸ್ಯವನ್ನು ಪ್ರೋತ್ಸಾಹಿಸಲು ನಮ್ಮನ್ನು ಹುರಿದುಂಬಿಸುತ್ತದೆ. 

ದೇಶದ ಶಾಂತಿ ಮತ್ತು ಐಕ್ಯತೆಯು ಸದೃಢಗೊಳ್ಳುವುದು ಮುಂದುವರಿಯಲಿ ಮತ್ತು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ನಾವು ಒಟ್ಟಾಗಿ ಕಾರ್ಯ ನಿರ್ವಹಿಸುತ್ತೇವೆ.”

ರಾಷ್ಟ್ರಪತಿಗಳ ಸಂದೇಶ ನೋಡಲು ಇಲ್ಲಿ ಕ್ಲಿಕ್‌ ಮಾಡಿ:

Please click here to see the President's message - 

 

*****

 



(Release ID: 2055161) Visitor Counter : 19