ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಜಿನೀವಾದಲ್ಲಿ ನಡೆಯಲಿರುವ 77 ನೇ ವಿಶ್ವ ಆರೋಗ್ಯ ಅಸೆಂಬ್ಲಿಯಲ್ಲಿ ಭಾರತವು ನಾರ್ವೆ, ಯುನಿಸೆಫ್, ಯುಎನ್ಎಫ್ಪಿಎ ಮತ್ತು ಪಿಎಂಎನ್ಸಿಎಚ್ ಸಹಯೋಗದೊಂದಿಗೆ ಮಹಿಳೆಯರು, ಮಕ್ಕಳು ಮತ್ತು ಹದಿಹರೆಯದವರ ಆರೋಗ್ಯ ಕುರಿತ ನೇಪಥ್ಯದ ಕಾರ್ಯಕ್ರಮ ಆಯೋಜನೆ
ಮಹಿಳೆಯರು, ಮಕ್ಕಳು ಮತ್ತು ಹದಿಹರೆಯದವರ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಪೂರ್ವಭಾವಿ ಕ್ರಮಗಳನ್ನು ಜಾರಿಗೆ ತರುವ ಭಾರತದ ಬದ್ಧತೆಯನ್ನು ಕೇಂದ್ರ ಆರೋಗ್ಯ ಕಾರ್ಯದರ್ಶಿ ವಿವರಿಸಿದರು
ಹದಿಹರೆಯದ ಪ್ರೇಕ್ಷ ಕರ ಗುಂಪಿಗೆ ತಿಳಿಸಲು ಸರಿಯಾದ ಸಂವಹನ ತಂತ್ರಗಳನ್ನು ಬಳಸುವ ಅಗತ್ಯವನ್ನು ಒತ್ತಿ ಹೇಳಲಾಯಿತು
Posted On:
30 MAY 2024 3:50PM by PIB Bengaluru
ಪ್ರಸ್ತುತ ನಡೆಯುತ್ತಿರುವ 77ನೇ ವಿಶ್ವ ಆರೋಗ್ಯ ಅಸೆಂಬ್ಲಿ(ಅಧಿವೇಶನ)ಯಲ್ಲಿ, ಭಾರತವು ನಾರ್ವೆ, ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್), ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (ಯುಎನ್ಎಫ್ಪಿಎ) ಮತ್ತು ತಾಯಿ, ನವಜಾತ ಮತ್ತು ಮಕ್ಕಳ ಆರೋಗ್ಯಕ್ಕಾಗಿ ಸಹಭಾಗಿತ್ವ (ಪಿಎಂಎನ್ಸಿಎಚ್) ಸಹಯೋಗದೊಂದಿಗೆ ಮಹಿಳೆಯರು, ಮಕ್ಕಳು ಮತ್ತು ಹದಿಹರೆಯದವರ ಅಥವಾ ಯುವಕರ ಆರೋಗ್ಯದ ಬಗ್ಗೆ ನೇಪಥದ ಕಾರ್ಯಕ್ರಮವನ್ನು ಆಯೋಜಿಸಿತು. ಉದಯೋನ್ಮುಖ ಪುರಾವೆಗಳು ಮತ್ತು ಆವಿಷ್ಕಾರಗಳನ್ನು ಹಂಚಿಕೊಳ್ಳುವುದು, ತಾಯಿ, ನವಜಾತ ಶಿಶು, ಮಗು ಮತ್ತು ಹದಿಹರೆಯದವರ ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ಹೂಡಿಕೆಯ ಪ್ರಮುಖ ಅವಕಾಶಗಳ ಬಗ್ಗೆ ಸಂವಾದವನ್ನು ಬೆಳೆಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಇದು ವಿವಿಧ ಜನಸಂಖ್ಯಾ ಗುಂಪುಗಳ ಅಗತ್ಯಗಳಿಗೆ ಆದ್ಯತೆ ನೀಡುವಾಗ, ನೀತಿ ಹೊಂದಾಣಿಕೆಗಳು ಮತ್ತು ವೈವಿಧ್ಯಮಯ ಮಧ್ಯಸ್ಥಗಾರರು ಮತ್ತು ಕ್ಷೇತ್ರಗಳಲ್ಲಿಅವುಗಳ ಪರಿಣಾಮಗಳನ್ನು ಪ್ರಚೋದಿಸುವ ನಿರಂತರ ಮತ್ತು ವರ್ಧಿತ ಹೂಡಿಕೆಯನ್ನು ಪ್ರತಿಪಾದಿಸುವ ಗುರಿಯನ್ನು ಹೊಂದಿತ್ತು.


ಈ ಕಾರ್ಯಕ್ರಮದ ಗಮನವು ಹದಿಹರೆಯದವರ ಆರೋಗ್ಯದ ಮೇಲೆ ಇತ್ತು ಮತ್ತು ವಿವಿಧ ಭಾಷಣಕಾರರು ಈ ವಿಷಯದ ಬಗ್ಗೆ ಹೆಚ್ಚು ಹೂಡಿಕೆ ಮಾಡುವ ಅಗತ್ಯತೆ ಸೇರಿದಂತೆ ಯುವಕರ ಆರೋಗ್ಯದ ವಿವಿಧ ಅಂಶಗಳ ಬಗ್ಗೆ ಮಾತನಾಡಿದರು. ಕೇಂದ್ರ ಆರೋಗ್ಯ ಕಾರ್ಯದರ್ಶಿ ಮತ್ತು ಭಾರತೀಯ ನಿಯೋಗದ ಮುಖ್ಯಸ್ಥರಾದ ಶ್ರೀ ಅಪೂರ್ವ ಚಂದ್ರ ಅವರು ಈ ವಿಷಯದ ಬಗ್ಗೆ ಆಗಿರುವ ಪ್ರಗತಿ ಮತ್ತು ಈ ನಿಟ್ಟಿನಲ್ಲಿ ಕೈಗೊಂಡ ಉಪಕ್ರಮಗಳ ಬಗ್ಗೆ ಒತ್ತಿ ಹೇಳಿದರು.

ಮಹಿಳೆಯರು, ಮಕ್ಕಳು ಮತ್ತು ಹದಿಹರೆಯದವರ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಪೂರ್ವಭಾವಿ ಕ್ರಮಗಳನ್ನು ಜಾರಿಗೆ ತರುವ ಭಾರತದ ಬದ್ಧತೆಯನ್ನು ಅವರು ವಿವರಿಸಿದರು. ಭಾರತದ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ (ಆರ್ಸಿಎಚ್) -1, ಆರ್ಸಿಎಚ್ -2 ಉಪಕ್ರಮಗಳು ಮತ್ತು ಹದಿಹರೆಯದವರ ಆರೋಗ್ಯಕ್ಕೆ ಒತ್ತು ನೀಡಿದ ರಾಷ್ಟ್ರೀಯ ಕಿಶೋರ್ ಸ್ವಾಸ್ಥ್ಯ ಕಾರ್ಯಕ್ರಮವನ್ನು ಅವರು ಬಿಂಬಿಸಿದರು. ಟೆಲಿಮಾನಸ್ ಅನ್ನು ಹೊರತರುವುದು ಭಾರತ ಕೈಗೊಂಡ ಪ್ರಮುಖ ಉಪಕ್ರಮವೆಂದು ಉಲ್ಲೇಖಿಸಲಾಗಿದೆ.
ಹದಿಹರೆಯದ ಪ್ರೇಕ್ಷಕರ ಗುಂಪಿಗೆ ತಿಳಿಸಲು ಸರಿಯಾದ ಸಂವಹನ ತಂತ್ರಗಳನ್ನು ಬಳಸುವ ಅಗತ್ಯವನ್ನು ಭಾರತ ಒತ್ತಿಹೇಳಿತು. ಯಾವುದೇ ಕಾರ್ಯಕ್ರಮದ ಯೋಜನೆ ಮತ್ತು ಅನುಷ್ಠಾನಕ್ಕೆ ಯುವ ಗುಂಪಿನ ಪ್ರತಿನಿಧಿಯ ಪಾಲ್ಗೊಳ್ಳುವಿಕೆಯನ್ನು ಪ್ರಮುಖ ಪಾಲುದಾರರಾಗಿ ಚರ್ಚಿಸಲಾಯಿತು.

ಶ್ರೀಮತಿ ಹೆಕಾಲಿ ಝಿಮೋಮಿ, ಹೆಚ್ಚುವರಿ ಕಾರ್ಯದರ್ಶಿ, ಕೇಂದ್ರ ಆರೋಗ್ಯ ಸಚಿವಾಲಯ; ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ (ಎನ್ ಎಚ್ ಎಂ) ಶ್ರೀಮತಿ ಆರಾಧನಾ ಪಟ್ನಾಯಕ್ ಮತ್ತು ಕೇಂದ್ರ ಆರೋಗ್ಯ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿಉಪಸ್ಥಿತರಿದ್ದರು.
*****
(Release ID: 2022515)