ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ಡಿಪಿ ವರ್ಲ್ಡ್ ಅಧ್ಯಕ್ಷ ಮತ್ತು ಸಿಇಒ ಗೌರವಾನ್ವಿತ ಸುಲ್ತಾನ್ ಅಹ್ಮದ್ ಬಿನ್ ಸುಲಾಯೆಮ್ ಅವರು ಎನ್ ಎಸ್‌ ಡಿ ಸಿ ಇಂಟರ್ನ್ಯಾಷನಲ್ ಮತ್ತು We One, ಡಿಪಿ ವರ್ಲ್ಡ್ ನಡುವಿನ ಒಪ್ಪಂದದ ಸಹಿಗೆ ಸಾಕ್ಷಿಯಾದರು


ಜಾಗತಿಕ ಪ್ರತಿಭೆಗಳ ಚಲನಶೀಲತೆ, ಕೌಶಲ್ಯ ಮತ್ತು ಭಾರತೀಯ ಯುವಜನರನ್ನು ಸಂಬಂಧಿತ ಸಾಗರೋತ್ತರ ಉದ್ಯೋಗಾವಕಾಶಗಳೊಂದಿಗೆ ಸಂಪರ್ಕಿಸುವ ಹೆಚ್ಚಿನ ಮಾರ್ಗಗಳನ್ನು ಸೃಷ್ಟಿಸಲು ಒಪ್ಪಂದ - ಶ್ರೀ ಧರ್ಮೇಂದ್ರ ಪ್ರಧಾನ್

ಒಪ್ಪಂದವು ಭಾರತೀಯ ಯುವಜನರಿಗೆ ಸಾಗರೋತ್ತರ ಉದ್ಯೋಗದಲ್ಲಿ ಉನ್ನತ ಕೌಶಲ್ಯ ಮತ್ತು ನೆರವಿನ ಗುರಿಯನ್ನು ಹೊಂದಿದೆ

ಉತ್ತಮ ಆಡಳಿತಕ್ಕಾಗಿ ಮತ್ತು ಭಾರತೀಯ ಸಮುದಾಯದ ಅನುಕೂಲಕ್ಕಾಗಿ ದುಬೈನಲ್ಲಿ ಸಿ ಬಿ ಎಸ್‌ ಇ ಇಂಡಿಯಾ ಪ್ರಾದೇಶಿಕ ಕಚೇರಿಯನ್ನು ತೆರೆಯುವುದಾಗಿ ಶ್ರೀ ಧರ್ಮೇಂದ್ರ ಪ್ರಧಾನ್ ಘೋಷಿಸಿದರು

Posted On: 03 NOV 2023 4:56PM by PIB Bengaluru

ಕೇಂದ್ರ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ದುಬೈನಲ್ಲಿ ಡಿಪಿ ವರ್ಲ್ಡ್‌ ಸಮೂಹಗಳ ಅಧ್ಯಕ್ಷ ಮತ್ತು ಸಿಇಒ ಗೌರವಾನ್ವಿತ ಸುಲ್ತಾನ್ ಅಹ್ಮದ್ ಬಿನ್ ಸುಲಾಯೆಮ್ ಅವರನ್ನು ಭೇಟಿ ಮಾಡಿದರು. ಅಲ್ಲಿ ಅವರು ನುರಿತ ಮಾನವಶಕ್ತಿಯ ದೀರ್ಘಾವಧಿಯ ನೇಮಕಾತಿಗಾಗಿ ಎನ್‌ ಎಸ್‌ ಡಿ ಸಿ ಇಂಟರ್‌ನ್ಯಾಶನಲ್ ಮತ್ತು ಡಿಪಿ ವರ್ಲ್ಡ್‌ ಅಂಗಸಂಸ್ಥೆಯಾದ We One ನಡುವೆ ಒಪ್ಪಂದದ ಸಹಿಗೆ ಸಾಕ್ಷಿಯಾದರು. ಅವರು ಸಹಯೋಗದ ಅವಕಾಶಗಳ ಬಗ್ಗೆಯೂ ಚರ್ಚಿಸಿದರು.

https://static.pib.gov.in/WriteReadData/userfiles/image/image001W15T.jpg

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಪ್ರಧಾನ್, ಈ ಒಪ್ಪಂದವು ಜಾಗತಿಕ ಪ್ರತಿಭೆಗಳ ಚಲನಶೀಲತೆ, ಕೌಶಲ್ಯ ಮತ್ತು ಭಾರತೀಯ ಯುವಕರನ್ನು ಸಂಬಂಧಿತ ಸಾಗರೋತ್ತರ ಉದ್ಯೋಗಾವಕಾಶಗಳಿಗೆ ಸಂಪರ್ಕಿಸಲು ಹೆಚ್ಚಿನ ಮಾರ್ಗಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದರು. ಭಾರತವು ವ್ಯಾಪಕ ಶ್ರೇಣಿಯ ಪ್ರತಿಭೆಗಳ ಭಂಡಾರವಾಗಿದೆ ಎಂದು ಅವರು ಹೇಳಿದರು. ಶ್ರೀ ಪ್ರಧಾನ್ ಅವರು ಭಾರತದ ಯುವಜನರ ಆಕಾಂಕ್ಷೆಗಳನ್ನು ಪೂರೈಸುವ ಬದ್ಧತೆಯನ್ನು ಪುನರುಚ್ಚರಿಸಿದರು ಮತ್ತು ಭಾರತಕ್ಕೆ ಮಾತ್ರವಲ್ಲದೆ ಜಾಗತಿಕ ಆರ್ಥಿಕತೆಗಳಿಗೆ ಆರ್ಥಿಕ ಸಮೃದ್ಧಿಯನ್ನು ಹೆಚ್ಚಿಸಲು ಅವರನ್ನು ಸಿದ್ಧಪಡಿಸುವುದಾಗಿ ತಿಳಿಸಿದರು. ಯುಎಇನಲ್ಲಿ ಭಾರತದ ರಾಯಭಾರಿ ಶ್ರೀ ಸಂಜಯ್ ಸುಧೀರ್ ಮತ್ತು ದುಬೈನಲ್ಲಿ ಭಾರತದ ಕಾನ್ಸುಲ್ ಜನರಲ್ ಶ್ರೀ ಸತೀಶ್ ಕುಮಾರ್ ಶಿವನ್, ಎನ್ ಎಸ್‌ ಡಿ ಸಿ ಸಿಇಒ, ಶ್ರೀ ವೇದ್ ಮಣಿ ತಿವಾರಿ ಮತ್ತಿತರ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಎನ್‌ ಎಸ್‌ ಡಿ ಸಿ ಇಂಟರ್‌ನ್ಯಾಶನಲ್, ಜಾಗತಿಕ ಕೌಶಲ ಪರಿಹಾರಗಳನ್ನು ಒದಗಿಸುಸುತ್ತದೆ ಮತ್ತು ಡಿಪಿ ವರ್ಲ್ಡ್‌ ಭಾಗವಾಗಿರುವ ವಿ ಒನ್ ಸ್ಮಾರ್ಟ್ ಎಂಡ್-ಟು-ಎಂಡ್ ಲಾಜಿಸ್ಟಿಕ್ಸ್ ಪರಿಹಾರಗಳನ್ನು ಒದಗಿಸುವಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಮುಂಚೂಣಿ ಕಾರ್ಯಪಡೆಯ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗಾವಕಾಶಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿರುವ ಒಪ್ಪಂದಕ್ಕೆ ಈ ಎರಡೂ ಸಂಸ್ಥೆಗಳು ಇಂದು ಸಹಿ ಮಾಡಿದವು.

https://static.pib.gov.in/WriteReadData/userfiles/image/image002ZY2E.jpg

ಕೌಶಲಕ್ಕಾಗಿ ಜಾಗತಿಕ ಶ್ರೇಷ್ಠತಾ ಕೇಂದ್ರವಾಗಿ ವಾರಾಣಸಿಯಲ್ಲಿ ಸ್ಕಿಲ್ ಇಂಡಿಯಾ ಅಂತಾರಾಷ್ಟ್ರೀಯ ಕೇಂದ್ರವನ್ನು ಸ್ಥಾಪಿಸಲು ಎನ್‌ ಎಸ್‌ ಡಿ ಸಿ ಇಂಟರ್‌ನ್ಯಾಶನಲ್ ಮತ್ತು ಹಿಂದೂಸ್ತಾನ್ ಪೋರ್ಟ್ಸ್ (ಡಿಪಿ ವರ್ಲ್ಡ್ ಕಂಪನಿ) ನಡುವೆ ಮೇ 2022 ರಲ್ಲಿ ಸಹಿ ಮಾಡಲಾದ ತಿಳುವಳಿಕೆ ಒಪ್ಪಂದದ ಮುಂದುವರಿಕೆಯಾಗಿ ಇಂದಿನ ಒಪ್ಪಂದ ಸಹಿ ಕಾರ್ಯಕ್ರಮ ನಡೆಯಿತು. ಇದಕ್ಕೆ ಅನುಗುಣವಾಗಿ, ವಾರಾಣಸಿಯಲ್ಲಿ ಸ್ಕಿಲ್ ಇಂಡಿಯಾ ಅಂತಾರಾಷ್ಟ್ರೀಯ ಕೇಂದ್ರವನ್ನು ಸ್ಥಾಪಿಸಲು ಎನ್‌ ಎಸ್‌ ಡಿ ಸಿ ಯೊಂದಿಗೆ ಡಿಪಿ ವರ್ಲ್ಡ್ ಸಹಕರಿಸಿದೆ, ಇದು ಕೌಶಲ್ಯ ತರಬೇತಿ, ಸಮಾಲೋಚನೆ, ಸಜ್ಜುಗೊಳಿಸುವಿಕೆ, ನಿರ್ಗಮನ ಪೂರ್ವ ತಿಳುವಳಿಕೆ, ವಿದೇಶಿ ಭಾಷಾ ತರಬೇತಿ, ಉದ್ಯೋಗ, ವಲಸೆ ಮತ್ತು ಉದ್ಯೋಗ ನಂತರದ ಬೆಂಬಲದಂತಹ ಸೇವೆಗಳನ್ನು ಮುಂಚೂಣಿಯ ಉದ್ಯೋಗಿಗಳಿಗೆ ಒದಗಿಸುತ್ತದೆ.

https://static.pib.gov.in/WriteReadData/userfiles/image/image003FDQO.jpg

ಶ್ರೀ ಪ್ರಧಾನ್ ಅವರು ಇಂದು ವಿ ಎಫ್‌ ಎಸ್ ಗ್ಲೋಬಲ್ ಮತ್ತು ಟ್ರಾನ್ಸ್‌ವರ್ಲ್ಡ್ ತಂಡಗಳೊಂದಿಗೆ ಸಹ ಫಲಪ್ರದ ಸಭೆ ನಡೆಸಿದರು. ಭಾರತದ ಯುವಜನರನ್ನು ಸಾಗರೋತ್ತರ ಅವಕಾಶಗಳೊಂದಿಗೆ ಸಂಪರ್ಕಿಸಲು, ಭಾರತದಲ್ಲಿ ತರಬೇತಿ ಮೂಲಸೌಕರ್ಯವನ್ನು ಬಲಪಡಿಸಲು ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ಸಾಮರ್ಥ್ಯಗಳನ್ನು ಬೆಳೆಸಲು ಸಹಯೋಗದಲ್ಲಿ ಒಟ್ಟಾಗಿ ಕೆಲಸ ಮಾಡುವ ಒಳನೋಟದ ಬಗ್ಗೆ ನಡೆದ ಚರ್ಚೆಗಳನ್ನು ಅವರು ಶ್ಲಾಘಿಸಿದರು. ಕೌಶಲ್ಯ, ಅಪ್ರೆಂಟಿಸ್‌ ಶಿಪ್ ಮತ್ತು ಉದ್ಯೋಗಕ್ಕಾಗಿ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದು ಮತ್ತು ನಮ್ಮ ಯುವಕರನ್ನು ಭವಿಷ್ಯಕ್ಕೆ ಸಿದ್ಧಗೊಳಿಸುವುದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸರ್ಕಾರದ ಆದ್ಯತೆಯಾಗಿದೆ ಎಂದು ಅವರು ಹೇಳಿದರು. ಭವಿಷ್ಯವನ್ನು ಭದ್ರಪಡಿಸುವಲ್ಲಿ, ಯುವಕರನ್ನು ಸಬಲೀಕರಣಗೊಳಿಸುವಲ್ಲಿ ಮತ್ತು ಕೌಶಲ್ಯದ ಚಿತ್ರಣವನ್ನು ಹೆಚ್ಚು ರೋಮಾಂಚಕವಾಗಿಸುವಲ್ಲಿ ಭಾರತದ ಸಕ್ರಿಯ ಪಾಲುದಾರರಾಗಲು ವಿ ಎಫ್‌ ಎಸ್ ಗ್ಲೋಬಲ್ ಮತ್ತು ಟ್ರಾನ್ಸ್‌ವರ್ಲ್ಡ್ ಸಮೂಹಗಳ ಉತ್ಸುಕತೆಗಾಗಿ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಚಿವರು, ನಿನ್ನೆ, ಯುಎಇಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ 105 ಸಿ ಬಿ ಎಸ್‌ ಇ –ಮಾನ್ಯತೆ ಪಡೆದ ಶಾಲೆಗಳ ಪ್ರಾಂಶುಪಾಲರೊಂದಿಗೆ ಸಂವಾದ ನಡೆಸಿದರು. ಈ ಎಲ್ಲಾ ಶಾಲೆಗಳು ಎನ್‌ ಇ ಪಿ 2020ರ ದೃಷ್ಟಿಕೋನಕ್ಕೆ ಹೊಂದಿಕೊಂಡಿವೆ ಮತ್ತು ಅದನ್ನು ವಾಸ್ತವದಲ್ಲಿ ಕಾರ್ಯಗತಗೊಳಿಸುತ್ತಿವೆ ಎಂದು ತಿಳಿದು ಸಂತೋಷಪಟ್ಟರು. ವಿದೇಶದಲ್ಲಿರುವ ಭಾರತೀಯ ಶಾಲೆಗಳು ನಮ್ಮ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಅಗತ್ಯಗಳನ್ನು ಪೂರೈಸಲು ಜಾಗತಿಕ ಉತ್ತಮ ಅಭ್ಯಾಸಗಳನ್ನು ಸಂಯೋಜಿಸುವ ವಿಧಾನಗಳ ಕುರಿತು ಶ್ರೀ ಪ್ರಧಾನ್ ಉತ್ತಮ ಒಳನೋಟಗಳನ್ನು ನೀಡಿದರು.

ಜಿಸಿಸಿಯಲ್ಲಿ ಸಿ ಬಿ ಎಸ್‌ ಇ-ಮಾನ್ಯತೆ ಪಡೆದ ಭಾರತೀಯ ಶಾಲೆಗಳಲ್ಲಿ ಓದುತ್ತಿರುವ 5-ಲಕ್ಷ ಭಾರತೀಯ ವಿದ್ಯಾರ್ಥಿಗಳ ಪೈಕಿ 2.50 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಯುಎಇಯಲ್ಲಿದ್ದಾರೆ ಎಂದು ಅವರು ಹೇಳಿದರು. ಈ ಶಾಲೆಗಳ ದೀರ್ಘಾವಧಿಯ ಬೇಡಿಕೆಯ ಹಿನ್ನೆಲೆಯಲ್ಲಿ, ಸಿ ಬಿ ಎಸ್ ಇ ಇಂಡಿಯಾವು ಉತ್ತಮ ಆಡಳಿತಕ್ಕಾಗಿ ಮತ್ತು ಭಾರತೀಯ ವಲಸಿಗರ ಅನುಕೂಲಕ್ಕಾಗಿ ದುಬೈನಲ್ಲಿ ಪ್ರಾದೇಶಿಕ ಕಚೇರಿಯನ್ನು ತೆರೆಯಲು ನಿರ್ಧರಿಸಿದೆ ಎಂದು ಅವರು ತಿಳಿಸಿದರು.

ಶೈಕ್ಷಣಿಕ ಸಮುದಾಯ ಮತ್ತು ನಮ್ಮ ವಿದೇಶಗಳಲ್ಲಿರುವ ಭಾರತೀಯ ಸಮುದಾಯ ನಮ್ಮ ಸಂಸ್ಕೃತಿ, ಮೌಲ್ಯಗಳು ಮತ್ತು ಜ್ಞಾನ ವ್ಯವಸ್ಥೆಗಳ ಶಾಶ್ವತ ರಾಯಭಾರಿಗಳು ಎಂದು ಶ್ರೀ ಪ್ರಧಾನ್ ಹೇಳಿದರು. ಮುಂದಿನ ದಿನಗಳಲ್ಲಿ ಶಿಕ್ಷಣವು ಸ್ನೇಹದ ಪ್ರಮುಖ ಸ್ತಂಭವಾಗಲಿದೆ ಮತ್ತು ಯುಎಇಯಲ್ಲಿನ ಸಿ ಬಿ ಎಸ್‌ ಇ-ಮಾನ್ಯತೆ ಪಡೆದ ಶಾಲೆಗಳು ನಮ್ಮ ವಿಶ್ವಾಸಾರ್ಹ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವರು ಇ ಎಫ್‌ ಎಸ್ ಫೆಸಿಲಿಟೀಸ್ ಸರ್ವಿಸಸ್ ಗ್ರೂಪ್, ಗ್ರೂಪ್ ಸಿಇಒ ಮತ್ತು ಸಹ-ಸಂಸ್ಥಾಪಕ ಶ್ರೀ ತಾರಿಕ್ ಚೌಹಾಣ್ ಅವರೊಂದಿಗೂ ಸಭೆ ನಡೆಸಿದರು. ಕೌಶಲ್ಯ ಪೂರಕ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಭಾರತೀಯ ಉದ್ಯೋಗಿಗಳ ಅಂತಾರಾಷ್ಟ್ರೀಯ ಚಲನಶೀಲತೆಯನ್ನು ಸುಗಮಗೊಳಿಸುವಲ್ಲಿ ಭಾರತವನ್ನು ಭಾಗಿಯನ್ನಾಗಿ ಮಾಡುವ ಶ್ರೀ ತಾರಿಕ್ ಚೌಹಾಣ್ ಅವರ ಯೋಜನೆಗಳ ಬಗ್ಗೆ ತಿಳಿದು ಸಚಿವರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಭಾರತದ ಕೌಶಲ್ಯ ಪೂರಕ ವ್ಯವಸ್ಥೆಯನ್ನು ಹೆಚ್ಚು ಮಹತ್ವಾಕಾಂಕ್ಷೆಯ ಜೊತೆಗೆ ಕೌಶಲ್ಯ, ಉನ್ನತ ಕೌಶಲ್ಯಗೊಳಿಸಲು ಮತ್ತು ಭಾರತದ ಪ್ರತಿಭಾನ್ವಿತ ಯುವಕರನ್ನು ಸಬಲೀಕರಣಗೊಳಿಸಲು ಇ ಎಫ್‌ ಎಸ್ ಗ್ರೂಪ್ ಸಾಂಸ್ಥಿಕ ತೊಡಗಿಸಿಕೊಳ್ಳುವಿಕೆಯನ್ನು ತೀವ್ರಗೊಳಿಸಲು ಬದ್ಧವಾಗಿದೆ ಎಂಬ ಬಗ್ಗೆ ಸಚಿವರು ಸಂತಸ ವ್ಯಕ್ತಪಡಿಸಿದರು.

ಜಿಸಿಸಿ ರಾಷ್ಟ್ರಗಳ ಮೇಲೆ ನಿರ್ದಿಷ್ಟವಾಗಿ ಗಮನಹರಿಸುವ ಮೂಲಕ ಭಾರತದ ಕಾರ್ಮಿಕಪಡೆಯ ಅಂತಾರಾಷ್ಟ್ರೀಯ ಚಲನಶೀಲತೆಯನ್ನು ಸುಲಭಗೊಳಿಸಲು ಇ ಎಫ್‌ ಎಸ್ ಸೌಲಭ್ಯಗಳ ಸೇವೆಗಳ ಗುಂಪು ಮತ್ತು ಎನ್‌ ಎಸ್‌ ಡಿ ಸಿ ನಡುವಿನ ತಿಳಿವಳಿಕೆ ಒಪ್ಪಂದದ ಸಹಿಗೂ ಶ್ರೀ ಪ್ರಧಾನ್ ಸಾಕ್ಷಿಯಾದರು.

https://static.pib.gov.in/WriteReadData/userfiles/image/image004RX78.jpg

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಪ್ರಧಾನ್, ಈ ತಿಳಿವಳಿಕೆ ಒಪ್ಪಂದವು ಪಠ್ಯಕ್ರಮದ ಅಭಿವೃದ್ಧಿಯ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವಿಕೆಯನ್ನು ಗಾಢವಾಗಿಸಲು ಮತ್ತು ಜಾಗತಿಕ ಅವಕಾಶಗಳಿಗೆ, ವಿಶೇಷವಾಗಿ ಜಿಸಿಸಿ ದೇಶಗಳಲ್ಲಿ ಜಂಟಿ ಕೌಶಲ್ಯ ಕಾರ್ಯಕ್ರಮಗಳು ಮತ್ತು ಸಹ-ಬ್ರಾಂಡೆಡ್ ಕೌಶಲ್ಯ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಲು ಉದ್ಯಮ-ಸಿದ್ಧ ಕೌಶಲ್ಯಗಳೊಂದಿಗೆ ಕೌಶಲ್ಯವನ್ನು ಹೆಚ್ಚಿಸಲು ಮತ್ತು ಭವಿಷ್ಯವನ್ನು ರೂಪಿಸಲು ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.

****

 



(Release ID: 1974604) Visitor Counter : 98