ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಧ್ಯಪ್ರದೇಶದ ಚಿತ್ರಕೂಟದ ಶ್ರೀ ಸದ್ಗುರು ಸೇವಾ ಸಂಘ ಟ್ರಸ್ಟ್ ನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ


ರಘುಬೀರ್ ಮಂದಿರದಲ್ಲಿ ಪೂಜೆ ಮತ್ತು ದರ್ಶನ ಪಡೆದರು

ಜಾನಕಿಕುಂಡ್ ಚಿಕಿತ್ಸಾಲಯದ ಹೊಸ ಘಟಕ ಉದ್ಘಾಟನೆ

प्रविष्टि तिथि: 27 OCT 2023 7:57PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ಚಿತ್ರಕೂಟದ ಶ್ರೀ ಸದ್ಗುರು ಸೇವಾ ಸಂಘ ಟ್ರಸ್ಟ್ ನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಶ್ರೀ ನರೇಂದ್ರ ಮೋದಿ ಅವರು ರಘುಬೀರ್ ಮಂದಿರದಲ್ಲಿ ಪೂಜೆ ಹಾಗೂ ದರ್ಶನ ಮಾಡಿದರು ಮತ್ತು ಪೂಜಾ ರಾಂಚೋಡ್ ದಾಸ್ ಜಿ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಅವರು ಶ್ರೀ ರಾಮ್ ಸಂಸ್ಕೃತ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದರು. ಬಳಿಕ ಗುರುಕುಲದ ಚಟುವಟಿಕೆಗಳನ್ನು ಪ್ರದರ್ಶಿಸುವ ಗ್ಯಾಲರಿಯ ನಡಿಗೆ ನಡೆಸಿದರು. ನಂತರ ಅವರು ಸದ್ಗುರು ನೇತ್ರ ಚಿಕಿತ್ಸಾಲಯದ ಕಡೆಗೆ ಸಾಗಿದರು. ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ವಸ್ತುಪ್ರದರ್ಶನದ ದರ್ಶನ ಪಡೆದರು. ಬಳಿಕ ಸದ್ಗುರು ಮೆಡಿಸಿಟಿಯ ಮಾದರಿಯ ದರ್ಶನವನ್ನೂ ಮಾಡಿದರು.

ಇದಲ್ಲದೆ, ಅವರು ಜಾನಕಿಕುಂಡ್ ಚಿಕಿತ್ಸಾಲಯದ ಕಡೆಗೆ ತೆರಳಿ, ಅದರ ಹೊಸ ವಿಭಾಗವನ್ನು ಉದ್ಘಾಟಿಸಿದರು. ನಂತರ ಅವರು ದಿವಂಗತ ಶ್ರೀ ಅರವಿಂದ್ ಭಾಯಿ ಮಫತ್ ಲಾಲ್ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.

ಪ್ರಧಾನಮಂತ್ರಿಯವರೊಂದಿಗೆ ಮಧ್ಯಪ್ರದೇಶದ ರಾಜ್ಯಪಾಲ ಶ್ರೀ ಮಂಗುಭಾಯಿ ಪಟೇಲ್ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಇದ್ದರು

*****


(रिलीज़ आईडी: 1972943) आगंतुक पटल : 154
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Assamese , Punjabi , Gujarati , Odia , Tamil , Telugu , Malayalam