ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ಈ ವಾರಾಂತ್ಯದಲ್ಲಿ ಯುವಕರು ಸ್ವಚ್ಛತಾ ಕಾರ್ಯ ಆಯ್ಕೆ ಮಾಡಿಕೊಂಡಿದ್ದಾರೆ!


​​​​​​​ಭಾರತದ ಸ್ವಚ್ಛತಾ ತಂಡದ 2 ನೇ ಆವೃತ್ತಿಗೆ 4000+ ನಗರ ತಂಡಗಳ ಸೇರ್ಪಡೆ

Posted On: 19 SEP 2023 10:49AM by PIB Bengaluru

ಇಂಡಿಯನ್ ಸ್ವಚ್ಛತಾ ಲೀಗ್ (ಐ.ಎಸ್.ಎಲ್.) 2 ನೇ ಆವೃತ್ತಿಯಲ್ಲಿ 4000+ ನಗರ ತಂಡಗಳು ಭಾಗವಹಿಸುವುದರೊಂದಿಗೆ ಸ್ವಚ್ಛ ಭಾರತ್ ಮಿಷನ್-ಅರ್ಬನ್ ಹೊಸ ಆಯಾಮವನ್ನು ಪಡೆಯಿತು. ಐ.ಎಸ್.ಎಲ್. ಒಂದು ಅನನ್ಯ ಯುವ-ನೇತೃತ್ವದ, ಸ್ವಚ್ಛತೆ ಸಂಬಂಧಿತ ಚಟುವಟಿಕೆಗಳಲ್ಲಿ ಯುವಜನರ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸಲು ಅಂತರ್-ನಗರ ಉಪಕ್ರಮವಾಗಿದೆ. ಐ.ಎಸ್.ಎಲ್. ಭಾಗವಾಗಿ, ನಗರ ತಂಡಗಳು ಸ್ವಚ್ಛತಾ ಚಾಂಪಿಯನ್‌ ಗಳಾಗಿ ಉತ್ಸಾಹದಿಂದ ಬೀಚ್‌ ಗಳು, ಪ್ರವಾಸಿ ತಾಣಗಳು ಮತ್ತು ಬೆಟ್ಟಗಳನ್ನು ಸ್ವಚ್ಛಗೊಳಿಸುತ್ತಿವೆ. ಸ್ವಚ್ಛ ಭಾರತ್ ಮಿಷನ್-ಅರ್ಬನ್ (ಎಸ್.ಬಿ.ಎಂ.-ಯು) ಅಡಿಯಲ್ಲಿ 2022 ರಲ್ಲಿ ಐ.ಎಸ್.ಎಲ್. ನ ಉದ್ಘಾಟನಾ ಆವೃತ್ತಿಯು ಒಂದು ದೊಡ್ಡ ಯಶಸ್ಸನ್ನು ಕಂಡಿತು, ಅರ್ಧ ಲಕ್ಷ ಸ್ವಯಂಸೇವಕರು ನಗರಗಳನ್ನು ಕಸ ಮುಕ್ತಗೊಳಿಸಲು ಈ ಯುವಪಡೆಗಳನ್ನು ಸೇರಿಕೊಂಡರು.

ಮಹಾತ್ಮ ಗಾಂಧಿಯವರ ಜಯಂತಿಯಂದು ಸ್ವಚ್ಛ ಭಾರತ್ ದಿವಸ್ (ಎಸ್.ಬಿ.ಡಿ) ಎಂದು ಆಚರಿಸಲಾಗುತ್ತದೆ. ಸ್ವಚ್ಛತಾ ಪಖ್ವಾಡಾ - ಸ್ವಚ್ಛತಾ ಹಿ ಸೇವಾ 2023 ಅನ್ನು ಸೆಪ್ಟೆಂಬರ್ 15, 2023 ಮತ್ತು ಅಕ್ಟೋಬರ್ 2,2023 ರ ನಡುವೆ ಆಯೋಜಿಸಲಾಗಿದೆ. ಐ.ಎಸ್.ಎಲ್., ಸಫಾಯಿಮಿತ್ರ ಸುರಕ್ಷಾ ಶಿವರ್ ಮತ್ತು ಸ್ವಚ್ಛತಾ ದಿವಸ್ ಸ್ವಚ್ಛತಾ ಪಖ್ವಾಡದ ಅಡಿಯಲ್ಲಿ ಅಭಿಯಾನಗಳನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗುವುದು.

ಐ.ಎಸ್.ಎಲ್. 2.0 ಗಾಗಿ ನಗರಗಳು ಆಸಕ್ತಿದಾಯಕ ನಗರ ತಂಡಗಳನ್ನು ಆಯ್ಕೆ ಮಾಡಿಕೊಂಡಿವೆ. ಪ್ರಸಿದ್ಧ ಷಟ್ಲರ್ ಶ್ರೀಮತಿ ಪಿವಿ ಸಿಂಧು, ಪ್ಲೋಗ್‌ಮ್ಯಾನ್ ಶ‍್ರೀ ರಿಪುದಮನ್ ಬೆವ್ಲಿ, ಪೆಡ್ಲರ್ ಸ್ವಸ್ತಿಕಾ ಗೋಶ್, ರಾಮ್‌ವೀರ್ ತನ್ವರ್ ಡಿಫೆಂಡಿಂಗ್ ಚಾಂಪಿಯನ್‌ ಗಳಾದ ಚಂಡೀಗಢ ಚಾಲೆಂಜರ್ಸ್, ಹುಣಸೂರ್ ಹೀರೋಸ್, ವಿಕ್ತಮಸಿಂಗಪುರಂ, ದಾಂಡೇಲಿ ಸ್ವಚ್ಛತಾ ವಾರಿಯರ್ಸ್, ಕುಷ್ಟಗಿ ಚಾಂಪಿಯನ್ಸ್, ಅರಸೀಕೆರೆ ಆರ್ಮಿ ಮೊದಲ ತಂಡಗಳು ಐ.ಎಸ್.ಎಲ್. 2.0 ನಲ್ಲಿ ನೋಂದಾಯಿಸಿಕೊಂಡಿವೆ.

ನಗರಗಳು ಪರಿಣಾಮಕಾರಿ ಶುಚಿತ್ವ ಚಟುವಟಿಕೆಗಳನ್ನು ನಡೆಸಿತು ಮತ್ತು ಸುಂದರವಾದ ಭಿತ್ತಿಚಿತ್ರಗಳನ್ನು ಸ್ಥಾಪಿಸಿದವು, ಐ.ಎಸ್.ಎಲ್. 2.0 ಮತ್ತು ಸ್ವಚ್ಛತಾಕ್ಕಾಗಿ ಜನ ಆಂದೋಲನದ ಥೀಮ್‌ನ ಆಧಾರದ ಮೇಲೆ ವಿವಿಧ ರೀತಿಯ ರಚನೆಗಳನ್ನು ರಚಿಸುವ ಮಾನವ ಸರಪಳಿಗಳನ್ನು ರಚಿಸಿದವು. ಭೋಪಾಲ್‌ನಲ್ಲಿ, ಒಂದು ಕಾಲದಲ್ಲಿ ಕಸದ ತೊಟ್ಟಿಯಾಗಿದ್ದ ಸ್ಥಳದಲ್ಲಿ ಯೋಗ ದಿನವನ್ನು ಆಚರಿಸಲಾಯಿತು. ನಾಗರಿಕ ಪ್ರತಿನಿಧಿಗಳು, ಎನ್‌ಸಿಸಿ ಕೆಡೆಟ್‌ಗಳು, ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ಇತರರು ಪರಿವರ್ತಿತ ಮತ್ತು ಸ್ವಚ್ಛ ಪರಿಸರದಲ್ಲಿ ಯೋಗ ದಿನಾಚರಣೆಯನ್ನು ಸ್ಮರಿಸಲು ಒಗ್ಗೂಡಿದರು.
ಭಾರತದ ಬೃಹತ್ ನಕ್ಷೆಯನ್ನು ನಿರ್ಮಿಸಲು ಕರ್ನಾಟಕದ ದೇವಣಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 4,000 ಮಕ್ಕಳು ಭಾಗವಹಿಸಿದ್ದರು, ಹಾಲಿ ಚಾಂಪಿಯನ್ ತಂಡ ಚಂಡೀಗಢ ಚಾಲೆಂಜರ್ಸ್ 10,000 ಜನರಿಗೆ ಆಹಾರಕ್ಕಾಗಿ ಎಸ್‌.ಯು.ಪಿ. ಉಚಿತ ಮಹಾಲಂಗರ್ ಆಹಾರವನ್ನು ಆಯೋಜಿಸಿತ್ತು, ಆದರೆ ಅಲೆಪ್ಪಿಯಲ್ಲಿ ಸರೋವರಗಳ ಸ್ವಚ್ಛತೆಗಾಗಿ 'ಸೇವ್ ದಿ ಲೇಕ್' ಎಂಬ ನೀರಿನ ಮೆರವಣಿಗೆಯನ್ನು ಆಯೋಜಿಸಲಾಗಿದೆ.

 

https://static.pib.gov.in/WriteReadData/userfiles/image/image003DQA5.jpg

https://static.pib.gov.in/WriteReadData/userfiles/image/image004FM37.jpg

https://static.pib.gov.in/WriteReadData/userfiles/image/image0056P3X.jpg

ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಈ ಕಾರ್ಯಕ್ರಮದಲ್ಲಿ ಉತ್ಸಾಹದಲ್ಲಿ ಸೇರಿಕೊಂಡರು ಮತ್ತು ಸ್ವಚ್ಛತಾಗಾಗಿ ಈ ಜನಆಂದೋಲನದ ಜೊತೆ ಸೇರಲು ನಾಗರಿಕರನ್ನು ಪ್ರೋತ್ಸಾಹಿಸಿದರು. ಉತ್ತರಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಅವರು ಸ್ವಚ್ಛತಾ ಹಿ ಸೇವಾ ಅಡಿಯಲ್ಲಿ 5 ಸಫಾಯಿ ಮಿತ್ರರನ್ನು ಸನ್ಮಾನಿಸಿದರು ಮತ್ತು ಐ.ಎಸ್.ಎಲ್. 2.0 ಟಿ-ಶರ್ಟ್‌ಗಳು ಮತ್ತು ಕ್ಯಾಪ್‌ಗಳನ್ನು ಸಹ ವಿತರಿಸಿದರು. ಮಣಿಪುರದ ಮುಖ್ಯಮಂತ್ರಿ ಶ್ರೀ ಎನ್. ಬಿರೇನ್ ಸಿಂಗ್ ಅವರು ಮಣಿಪುರದಲ್ಲಿ ಸ್ವಚ್ಛತಾ ಹಿ ಸೇವಾ ಅಭಿಯಾನವನ್ನು ಉದ್ಘಾಟಿಸಿದರು ಮತ್ತು ಪ್ರತಿಯೊಬ್ಬ ನಾಗರಿಕರು ಸ್ವಚ್ಛ ಭಾರತಕ್ಕೆ ಕೊಡುಗೆ ನೀಡುವಂತೆ ಕೇಳಿಕೊಂಡರು. ಉತ್ತರಾಖಂಡ ಮುಖ್ಯಮಂತ್ರಿ ಶ್ರೀ ಪುಷ್ಕರ್ ಸಿಂಗ್ ಧಾಮಿ ಅವರು 10, 5 ಮತ್ತು 2 ಕಿಲೋಮೀಟರ್‌ ಗಳ ದೂರದ ಓಟವನ್ನು ಒಳಗೊಂಡಿರುವ 'ಸ್ವಚ್ಛತಾ ಲೀಗ್ ಮ್ಯಾರಥಾನ್'ನಲ್ಲಿ ಹಸಿರು ಬಾವುಟವನ್ನು ಹಾರಿಸುವ ಮೂಲಕ ಇಂಡಿಯನ್ ಸ್ವಚ್ಛತಾ ಲೀಗ್‌ ಗೆ ಚಾಲನೆ ನೀಡಿದರು.

 

*****



(Release ID: 1958771) Visitor Counter : 99