ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

‘ಮನದ ಮಾತು’  ಪ್ರಧಾನಿ ಶ್ರೀ ನರೇಂದ್ರ ಮೋದಿಯವರು  ದಿನಾಂಕ 18.06.2023 ರಂದು ಮಾಡಿದ ‘ಮನ್ ಕಿ ಬಾತ್’ – 102 ನೇ ಸಂಚಿಕೆಯ ಕನ್ನಡ ಅವತರಣಿಕೆ

Posted On: 18 JUN 2023 12:03PM by PIB Bengaluru

ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ, 'ಮನದ ಮಾತಿ’ಗೆ  ಮತ್ತೊಮ್ಮೆ ನಿಮ್ಮೆಲ್ಲರಿಗೂ  ಸ್ವಾಗತ. ಸಾಮಾನ್ಯವಾಗಿ, 'ಮನದ ಮಾತು' ಪ್ರತಿ ತಿಂಗಳ ಕೊನೆಯ ಭಾನುವಾರದಂದು ಪ್ರಸಾರವಾಗುತ್ತದೆ, ಆದರೆ, ಈ ಬಾರಿ ಅದು ಒಂದು ವಾರ ಮುಂಚಿತವಾಗಿ ಪ್ರಸಾರವಾಗುತ್ತಿದೆ. ನಾನು ಮುಂದಿನ ವಾರ ಅಮೆರಿಕಾದಲ್ಲಿ ಇರುತ್ತೇನೆ ಮತ್ತು ಅಲ್ಲಿ ಬಹಳ ವ್ಯಸ್ತವಾಗಿರುತ್ತೇನೆ ಎಂಬುದು ನಿಮಗೆಲ್ಲ ಗೊತ್ತು, ಹಾಗಾಗಿ ನಾನು ತೆರಳುವ ಮೊದಲು ನಿಮ್ಮೊಂದಿಗೆ ಮಾತನಾಡಬೇಕೆಂದು ಯೋಚಿಸಿದೆ. ಇದಕ್ಕಿಂತ ಉತ್ತಮವಾದದ್ದು ಇನ್ನೇನಿದೆ? ನಿಮ್ಮೆಲ್ಲರ ಆಶೀರ್ವಾದ, ನಿಮ್ಮ ಸ್ಫೂರ್ತಿ, ನನ್ನ ಶಕ್ತಿಯನ್ನು ಹೆಚ್ಚಿಸುತ್ತದೆ.

ಸ್ನೇಹಿತರೇ, ಪ್ರಧಾನಿಯ ರೂಪದಲ್ಲಿ ನಾನು ಒಳ್ಳೆಯ ಕೆಲಸ ಮಾಡಿದ್ದೇನೆ, ಎಂಥ ದೊಡ್ಡ ಕೆಲಸ ಮಾಡಿದ್ದೇನೆ ಎಂದು ಹಲವರು ಹೇಳುತ್ತಾರೆ. 'ಮನದ ಮಾತಿನ' ಅನೇಕ ಕೇಳುಗರು ತಮ್ಮ ಪತ್ರಗಳಲ್ಲಿ ತುಂಬಾ ಹೊಗಳುತ್ತಾರೆ. ಕೆಲವರು ಈ ಕೆಲಸ ಮಾಡಿದ್ದೇನೆ ಎಂದು ಹೇಳಿದರೆ, ಇನ್ನು  ಕೆಲವರು ಆ ಕೆಲಸ ಮಾಡಿರುವುದಾಗಿ, ಇಂಥ ಒಳ್ಳೆಯ ಕಾರ್ಯ ಮಾಡಿದೆ ಎಂದು ಕೆಲವರು ಕೊಂಡಾಡಿದರೆ, ಇದನ್ನು ಅತ್ಯುತ್ತಮವಾಗಿ ಮಾಡಿದರು ಎನ್ನುತ್ತಾರೆ, ಆದರೆ, ನಾನು ಭಾರತದ ಸಾಮಾನ್ಯ ಮನುಷ್ಯನ ಪ್ರಯತ್ನಗಳು, ಕಠಿಣ ಪರಿಶ್ರಮ ಮತ್ತು ಅವರ ಇಚ್ಛಾಶಕ್ತಿಯನ್ನು ಕಂಡಾಗ, ಭಾವುಕನಾಗುತ್ತೇನೆ. ದು ದೊಡ್ಡ ಗುರಿಯೇ ಆಗಿರಲಿ, ಕಠಿಣ ಸವಾಲಾಗಿರಲಿ, ಭಾರತದ ಜನರ ಸಾಮೂಹಿಕ ಬಲ, ಸಾಮೂಹಿಕ ಶಕ್ತಿ, ಪ್ರತಿ ಸವಾಲಿಗೆ ಪರಿಹಾರವನ್ನು ನೀಡುತ್ತದೆ. ಎರಡು-ಮೂರು ದಿನಗಳ ಹಿಂದೆ, ದೇಶದ ಪಶ್ಚಿಮ ತೀರ ಭಾಗದಲ್ಲಿ ಎಷ್ಟು ದೊಡ್ಡ ಚಂಡಮಾರುತ ಅಪ್ಪಳಿಸಿತು ಎಂಬುದನ್ನು ನಾವು ನೋಡಿದ್ದೇವೆ. ಬಿರುಸಾದ ಗಾಳಿ, ಭಾರೀ ಮಳೆ. ಬಿಪಾರ್ಜೋಯ್ ಚಂಡಮಾರುತ ಕಛ್ನಲ್ಲಿ ಸಾಕಷ್ಟು ವಿನಾಶವನ್ನು ಉಂಟುಮಾಡಿತು, ಆದರೆ ಕಛ್ ಜನತೆ ಇಂತಹ ಅಪಾಯಕಾರಿ ಚಂಡಮಾರುತವನ್ನು ಧೈರ್ಯ ಮತ್ತು ಸನ್ನದ್ಧತೆ ಮೂಲಕ ಎದುರಿಸಿದ್ದು ಅಭೂತಪೂರ್ವವಾಗಿತ್ತು. ಎರಡು ದಿನಗಳ ನಂತರ, ಛ್ ಜನರು ತಮ್ಮ ಹೊಸ ವರ್ಷ ಆಶಾಢಿ ಬೀಜ್ ಆಚರಿಸಲಿದ್ದಾರೆ. ಕಾಕತಾಳೀಯವಾಗಿಛ್ ನಲ್ಲಿ ಆಶಾಢಿ ಬೀಜ್ ಅನ್ನು ಮಳೆಯ ಆರಂಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ನಾನು ತುಂಬಾ ವರ್ಷಗಳಿಂದ ಕಛ್‌ಗೆ ಭೇಟಿ  ನೀಡುತ್ತಿದ್ದೇನೆ, ಅಲ್ಲಿನ ಜನರ ಸೇವೆ ಮಾಡುವ ಸೌಭಾಗ್ಯವೂ ನನಗೆ ಲಭಿಸಿದೆ ಮತ್ತು ಇದಕ್ಕಾಗಿ ಕಛ್‌ ಜನತೆಯ ಸ್ಥೈರ್ಯ ಮತ್ತು ಜೀವನೋತ್ಸಾಹದ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ಎರಡು ದಶಕಗಳ ಹಿಂದೆ ಸಂಭವಿಸಿದ ಭೀಕರ ಭೂಕಂಪದ ನಂತರ ಕಛ್ ಎಂದಿಗೂ ಚೇತರಿಸಿಕೊಳ್ಳುವುದಿಲ್ಲ ಎಂದು ಹೇಳಲಾಗುತ್ತಿದ್ದ, ಅದೇ ಜಿಲ್ಲೆ ಇಂದು ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಗಳಲ್ಲಿ ಒಂದಾಗಿದೆ. ಬಿಪರ್‌ಜೋಯ್ ಚಂಡಮಾರುತದಿಂದ ಉಂಟಾದ ವಿನಾಶದಿಂದಲೂ ಛ್ ಜನತೆ ಬಹಳ ವೇಗವಾಗಿ ಹೊರಬರಲಿದ್ದಾರೆ ಎಂದು ನನಗೆ ವಿಶ್ವಾಸವಿದೆ.

ಸ್ನೇಹಿತರೇ, ನೈಸರ್ಗಿಕ ವಿಕೋಪಗಳ ಮೇಲೆ ಯಾರದ್ದೇ ನಿಯಂತ್ರಣ ಇರುವುದಿಲ್ಲ, ಆದರೆ, ಭಾರತವು ಕಳೆದ ಕೆಲ ವರ್ಷಗಳಲ್ಲಿ ಅಭಿವೃದ್ಧಿಪಡಿಸಿದ ವಿಪತ್ತು ನಿರ್ವಹಣೆಯ ಶಕ್ತಿಯು ಇಂದು ಒಂದು ಉದಾಹರಣೆಯಾಗಿ ಹೊರಹೊಮ್ಮುತ್ತಿದೆ. ನೈಸರ್ಗಿಕ ವಿಪತ್ತುಗಳನ್ನು ಎದುರಿಸಲು ಇರುವ ಉತ್ತಮ ಮಾರ್ಗವೆಂದರೆ - ಪ್ರಕೃತಿಯ ಸಂರಕ್ಷಣೆ. ಮಳೆಗಾಲದ ಇಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ನಮ್ಮ ಜವಾಬ್ದಾರಿ ತ್ತಷ್ಟು ಹೆಚ್ಚುತ್ತದೆ. ಅದಕ್ಕಾಗಿಯೇ ಇಂದು ದೇಶವು 'ಕ್ಯಾಚ್ ದಿ ರೈನ್' ನಂತಹ ಅಭಿಯಾನಗಳ ಮೂಲಕ ಸಾಮೂಹಿಕ ಪ್ರಯತ್ನಗಳನ್ನು ಮಾಡುತ್ತಿದೆ. ಕಳೆದ ತಿಂಗಳು 'ಮನದ ಮಾತಿನಲ್ಲಿ ನಾವು ನೀರಿನ ಸಂರಕ್ಷಣೆಗೆ ಸಂಬಂಧಿಸಿದ ಸ್ಟಾರ್ಟ್‌ಅಪ್‌ಗಳ ಬಗ್ಗೆ ಚರ್ಚಿಸಿದ್ದೇವೆ. ಈ ಬಾರಿಯೂ ನನಗೆ ಪತ್ರ ಬರೆದು ನೀರಿನ ಪ್ರತಿ ಹನಿನ್ನೂ ಉಳಿಸಲು ಶತಪ್ರಯತ್ನ ಡುತ್ತಿರುವ ಇಂತಹ ಅನೇಕರ ಬಗ್ಗೆ ಹೇಳಿದ್ದಾರೆ. ಅಂತಹ ಸ್ನೇಹಿತರಲ್ಲಿ ಒಬ್ಬರು ಉತ್ತರಪ್ರದೇಶದ ಬಾಂದಾ ಜಿಲ್ಲೆಯ ತುಳಸಿರಾಮ್ ಯಾದವ್. ತುಳಸಿರಾಮ್ ಯಾದವ್ ಅವರು ಲುಕತರಾ ಗ್ರಾಮ ಪಂಚಾಯಿತಿಯ ಮುಖ್ಯಸ್ಥರು. ಬಾಂದಾ ಮತ್ತು ಬುಂದೇಲ್‌ಖಂಡ್ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಎಷ್ಟಿದೆ ಎಂದು  ನಿಮಗೆ ಗೊತ್ತು. ಈ ಸವಾಲನ್ನು ಮೆಟ್ಟಿ ನಿಲ್ಲಲು ತುಳಸಿರಾಮ್ ಅವರು ಗ್ರಾಮಸ್ಥರ ಜೊತೆಗೂಡಿ  40ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿದ್ದಾರೆ. ತುಳಸಿರಾಮ್ ಅವರು – ಗದ್ದೆಯ ನೀರು ಗದ್ದೆಗೆ, ಹಳ್ಳಿನೀರು ಹಳ್ಳಿಗೆ ಎಂಬುದನ್ನು ತಮ್ಮ ಅಭಿಯಾನದ ಧ್ಯೇಯವಾಕ್ಯವನ್ನಾಗಿ ಮಾಡಿಕೊಂಡಿದ್ದಾರೆ. ಇಂದು ಅವರ ಶ್ರಮದ ಫಲವೇ ಅವರ ಗ್ರಾಮದಲ್ಲಿ ಅಂತರ್ಜಲ ಮಟ್ಟ ಸುಧಾರಿಸುತ್ತಿದೆ. ಅದೇ ರೀತಿ ಉತ್ತರಪ್ರದೇಶ ಜನತೆ ಒಟ್ಟಾಗಿ ಹಾಪು ಜಿಲ್ಲೆಯ ಬತ್ತಿಹೋದ ನದಿಯನ್ನು ಪುನರುಜ್ಜೀವನಗೊಳಿಸಿದ್ದಾರೆ. ಬಹಳ ಹಿಂದೆ ನೀಮ್ ಹೆಸರಿನ ನದಿ ಇತ್ತು. ಸಮಯ ಸರಿದಂತೆ ಅದು ಕಣ್ಮರೆಯಾಗಿತ್ತು, ಆದರೆ ಅವಳು ಯಾವಾಗಲೂ ಸ್ಥಳೀಯ ನೆನಪುಗಳಲ್ಲಿ  ಮತ್ತು ಜಾನಪದದಲ್ಲಿ ಆ ನದಿಯನ್ನು ನೆನಪಿಸಿಕೊಳ್ಳಲಾಗುತ್ತಿತ್ತು. ಅಂತಿಮವಾಗಿ, ಜನರು ತಮ್ಮ ಈ ನೈಸರ್ಗಿಕ ಸಂಪತ್ತನ್ನು ಪುನರುಜ್ಜೀವನಗೊಳಿಸಲು ನಿರ್ಧರಿಸಿದರು. ಜನರ ಸಾಂಘಿಕ ಪ್ರಯತ್ನದಿಂದ ಈಗ ‘ನೀಮ್ ನದಿಮತ್ತೆ ಜೀವ ತುಂಬಿ ಹರಿಯಲಾರಂಭಿಸಿದೆ. ನದಿಯ ಉಗಮ ಸ್ಥಾನವನ್ನು ಅಮೃತ ಸರೋವರ ಎಂಬ ಹೆಸರಿನಿಂದ ಅಭಿವೃದ್ಧಿಪಡಿಸಲಾಗುತ್ತಿದೆ.

ಸ್ನೇಹಿತರೇ, ಈ ನದಿಗಳು, ಕಾಲುವೆಗಳು, ಸರೋವರಗಳು ನೀರಿನ ಮೂಲಗಳು ಮಾತ್ರವಲ್ಲ, ಜೀವನದ ಬಣ್ಣಗಳು ಮತ್ತು ಭಾವನೆಗಳು ಸಹ ಅವುಗಳೊಂದಿಗೆ ಮಿಳಿತವಾಗಿವೆ.

ಕೆಲ ದಿನಗಳ ಹಿಂದಷ್ಟೇ ಮಹಾರಾಷ್ಟ್ರದಲ್ಲಿ ಇಂತಹದ್ದೇ ದೃಶ್ಯ ನೋಡುವ ಅವಕಾಶ ಲಭಿಸಿತ್ತು. ಈ ಪ್ರದೇಶವು ಬಹುತೇಕ ಬರಗಾಲದಿಂದಾವೃತವಾಗಿರುತ್ತದೆ. ಐದು ದಶಕಗಳಿಂದ ನಿರೀಕ್ಷೆ ನಂತರ ನೀಲವಂಡೆ ಅಣೆಕಟ್ಟಿನ ಕಾಲುವೆ ಕಾಮಗಾರಿ ಇಲ್ಲಿ ಈಗ ಪೂರ್ಣಗೊಳ್ಳುತ್ತಿದೆ. ಕೆಲ ದಿನಗಳ ಹಿಂದೆ ಪರೀಕ್ಷೆಗೆಂದು ಕಾಲುವೆಗೆ ನೀರು ಹರಿಸಲಾಗಿತ್ತು. ಈ ವೇಳೆ ತೆಗೆದಂತಹ ಚಿತ್ರಗಳು ನಿಜಕ್ಕೂ ಭಾವುಕರನ್ನಾಗಿಸುವಂಥವು. ಹೋಳಿ ಹಬ್ಬ-ದೀಪಾವಳಿ ಹಬ್ಬದಂತೆ ಗ್ರಾಮದ ಜನರು ಕುಣಿದು ಕುಪ್ಪಳಿಸಿದರು.

ಸ್ನೇಹಿತರೇ, ನಿರ್ವಹಣೆಯ ವಿಷಯದ ಬಗ್ಗೆ ಮಾತನಾಡುತ್ತಿರುವಾಗ, ಇಂದು ನಾನು ಛತ್ರಪತಿ ಶಿವಾಜಿ ಮಹಾರಾಜರನ್ನು ನೆನಪಿಸಿಕೊಳ್ಳಬಯಸುತ್ತೇನೆ. ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯದ ಜೊತೆಗೆ ಅವರ ಆಡಳಿತ ಮತ್ತು ಅವರ ನಿರ್ವಹಣಾ ಕೌಶಲ್ಯದಿಂದ ಕಲಿಯುವಂಥದ್ದು ಬಹಳಷ್ಟಿದೆ. ವಿಶೇಷವಾಗಿ ಹೇಳುವುದಾದರೆ, ಛತ್ರಪತಿ ಶಿವಾಜಿ ಮಹಾರಾಜರು ಜಲ ನಿರ್ವಹಣೆ ಮತ್ತು ನೌಕಾಪಡೆಗೆ ಸಂಬಂಧಿಸಿದಂತೆ ಮಾಡಿದ ಕಾರ್ಯಗಳು, ಇನ್ನೂ ಭಾರತೀಯ ಇತಿಹಾಸದ ಹೆಮ್ಮೆಯನ್ನು ವೃದ್ಧಿಸುತ್ತಿವೆ. ಅವರು ನಿರ್ಮಿಸಿದ ಜಲಾವೃತ ಕೋಟೆಗಳು ಸಮುದ್ರದ ಮಧ್ಯದಲ್ಲಿ ಶತಮಾನಗಳ ನಂತರವೂ ಹೆಮ್ಮೆಯಿಂದ ತಲೆಎತ್ತಿ ನಿಂತಿವೆ. ಈ ತಿಂಗಳ ಆರಂಭದಲ್ಲಿಯೇ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ 350 ವರ್ಷಗಳು ಪೂರ್ಣಗೊಂಡಿವೆ. ಈ ಸಂದರ್ಭವನ್ನು ದೊಡ್ಡ ಹಬ್ಬವನ್ನಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರದ ರಾಯಗಡ ಕೋಟೆಯಲ್ಲಿ ಅದಕ್ಕೆ ಸಂಬಂಧಿಸಿದ ಅದ್ಧೂರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಹಲವು ವರ್ಷಗಳ ಹಿಂದೆ 2014 ರಲ್ಲಿ, ರಾಯಗಢಕ್ಕೆ ತೆರಳುವ ಮತ್ತು ಆ ಪುಣ್ಯಭೂಮಿಗೆ ನಮನ ಸಲ್ಲಿಸುವ ಸೌಭಾಗ್ಯ ನನಗೆ ಲಭಿಸಿತ್ತು ಎಂಬುದು ನನಗೆ ನೆನಪಿದೆ. ಈ ಸಂದರ್ಭದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ನಿರ್ವಹಣಾ ಕೌಶಲ್ಯವನ್ನು ತಿಳಿದುಕೊಳ್ಳುವುದು, ರಿಂದ ಕಲಿಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇದರಿಂದ ನಮ್ಮಲ್ಲಿ ನಮ್ಮ ಪರಂಪರೆಯ ಬಗ್ಗೆ ಹೆಮ್ಮೆಯ ಭಾವನೆ ಮೂಡುತ್ತದೆ ಮತ್ತು ಭವಿಷ್ಯಕ್ಕಾಗಿ ನಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಇದು ಪ್ರೇರಣೆಯೂ ದೊರೆಯುತ್ತದೆ.

    ನನ್ನ ಪ್ರೀತಿಯ ದೇಶವಾಸಿಗಳೇ, ರಾಮಸೇತು ನಿರ್ಮಾಣಕ್ಕೆ ಸಹಾಯ ಮಾಡಲು ಮುಂದೆ ಬಂದ ರಾಮಾಯಣದ ಪುಟ್ಟ ಅಳಿಲಿನ ಬಗ್ಗೆ ನೀವು ಕೇಳಿರಬೇಕು. ನಾನು ಹೇಳುವುದರ ತಾತ್ಪರ್ಯವೇನೆಂದರೆ ಉದ್ದೇಶ ಸ್ಪಷ್ಟವಾಗಿದ್ದಾ, ಪ್ರಯತ್ನದಲ್ಲಿ ಪ್ರಾಮಾಣಿಕತೆ ಇದ್ದರೆ ಯಾವ ಗುರಿಯೂ ಕಷ್ಟವಾಗುವುದಿಲ್ಲ. ಭಾರತವೂ ಇಂದು ಈ ಉದಾತ್ತ ಉದ್ದೇಶದೊಂದಿಗೆ ಬಹು ದೊಡ್ಡ ಸವಾಲನ್ನು ಎದುರಿಸುತ್ತಿದೆ ಅದೇನೆಂದರೆ - ಟಿ.ಬಿ, ಇದನ್ನು ಕ್ಷಯರೋಗ ಎಂದೂ ಕರೆಯುತ್ತಾರೆ.

2025 ರ ವೇಳೆಗೆ ಭಾರತವನ್ನು ಟಿ.ಬಿ. ಮುಕ್ತ ರಾಷ್ಟ್ರವನ್ನಾಗಿಸುವ  ಸಂಕಲ್ಪಗೈಯ್ಯಲಾಗಿದೆ, ಈ  ಗುರಿ ಖಂಡಿತ ಬಹಳ ದೊಡ್ಡದು. ಟಿ.ಬಿ.ಯ ವಿಷಯ ತಿಳಿದ ನಂತರ ಕುಟುಂಬಸ್ಥರೇ ದೂರ ಹೋಗುತ್ತಿದ್ದ ಒಂದು ಕಾಲವಿತ್ತು, ಇಂದಿನ ಕಾಲಘಟ್ಟದಲ್ಲಿ ಟಿ.ಬಿ. ರೋಗಿಗಳನ್ನು ಕುಟುಂಬದ ಸದಸ್ಯರನ್ನಾಗಿ ಮಾಡಿಕೊಳ್ಳುವ ಮೂಲಕ ಅವರಿಗೆ ಸಹಾಯ ಮಾಡಲಾಗುತ್ತಿದೆ. ಈ ಕ್ಷಯವನ್ನು ಮೂಲದಿಂದ ತೊಡೆದುಹಾಕಲು ನಿಕ್ಷಯ್ ಸ್ನೇಹಿತರು ಮುಂದಾಗಿದ್ದಾರೆ. ದೇಶದಲ್ಲಿ ಹೆಚ್ಚಿನ ಸಂಖ್ಯೆಯ ವಿವಿಧ ಸಾಮಾಜಿಕ ಸಂಸ್ಥೆಗಳು ನಿಕ್ಷಯ ಮಿತ್ರರಾಗಿದ್ದಾರೆ. ಹಳ್ಳಿಗಳಲ್ಲಿ ಪಂಚಾಯ್ತಿಗಳಲ್ಲಿ  ಸಾವಿರಾರು ಜನರು ಮುಂದೆ ಬಂದು ಟಿ.ಬಿ. ರೋಗಿಗಳನ್ನು ದತ್ತು ಪಡೆದಿದ್ದಾರೆ ಹಾಗೂ ಟಿಬಿ ರೋಗಿಗಳಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಈ ಸಾರ್ವಜನಿಕ ಭಾಗವಹಿಸುವಿಕೆ ಈ ಅಭಿಯಾನದ ದೊಡ್ಡ ಶಕ್ತಿಯಾಗಿದೆ. ಈ ಭಾಗವಹಿಸುವಿಕೆಯಿಂದಾಗಿ ಇಂದು ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಟಿಬಿ ರೋಗಿಗಳನ್ನು ದತ್ತು ತೆಗೆದುಕೊಳ್ಳಲಾಗಿದೆ. ಸುಮಾರು 85 ಸಾವಿರ ನಿಕ್ಷಯ್ ಸ್ನೇಹಿತರು ಪುಣ್ಯದ ಕೆಲಸವನ್ನು ಸಹ ಮಾಡಿದ್ದಾರೆ. ನಾಡಿನ ಅನೇಕ ಸರಪಂಚ್‌ ರು, ಗ್ರಾಮದ ಮುಖಂಡರೂ ಸಹ ಮ್ಮ ಗ್ರಾಮಗಳಿಂದ ಟಿ.ಬಿ. ನಿರ್ಮೂಲನೆ ಮಾಡಿಯೇ ತೀರುತ್ತೇವೆ ಎಂಬ ಪಣ ತೊಟ್ಟಿದ್ದಾರೆ ಎಂಬುದು ನನಗೆ ಬಹಳ ಸಂತೋಷವೆನಿಸಿದೆ.

ನೈನಿತಾಲ್‌ನ ಹಳ್ಳಿಯೊಂದರ ನಿಕ್ಷಯ್ ಸ್ನೇಹಿತ ಶ್ರೀ ದಿಕರ್ ಸಿಂಗ್ ಮೇವಾರಿ ಅವರು ಆರು ಟಿಬಿ ರೋಗಿಗಳನ್ನು ದತ್ತು ಪಡೆದಿದ್ದಾರೆ. ಅದೇ ರೀತಿ, ಕಿನ್ನೌರ್‌ನ ಗ್ರಾಮ ಪಂಚಾಯತ್‌ನ ಮುಖ್ಯಸ್ಥರಾದ ಪ್ರಮುಖ ನಿಕ್ಷಯ್ ಮಿತ್ರ ಶ್ರೀ ಜ್ಞಾನ್ ಸಿಂಗ್, ಮ್ಮ ಬ್ಲಾಕ್‌ನಲ್ಲಿ ಟಿಬಿ ರೋಗಿಗಳಿಗೆ ಅಗತ್ಯವಿರುವ ಎಲ್ಲ ಸಹಾಯವನ್ನು ಒದಗಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಭಾರತವನ್ನು ಟಿ.ಬಿ ಮುಕ್ತಗೊಳಿಸುವ ಅಭಿಯಾನದಲ್ಲಿ ನಮ್ಮ ಮಕ್ಕಳು ಮತ್ತು ಯುವ ಸ್ನೇಹಿತರು ಕೂಡ ಹಿಂದೆ ಬಿದ್ದಿಲ್ಲ. ಹಿಮಾಚಲ ಪ್ರದೇಶದ ನಾ7 ವರ್ಷದ ಹೆಣ್ಣು ಮಗಳು ನಳಿನಿ ಸಿಂಗ್ ಅದ್ಭುತ ಕೆಲಸವನ್ನು ನೋಡಿ. ಅವಳು ತನ್ನ ಪಾಕೆಟ್ ಮನಿಯಿಂದ ಟಿ.ಬಿ. ರೋಗಿಗಳಿಗೆ ಸಹಾಯ ಮಾಡುತ್ತಿದ್ದಾಳೆ. ಮಕ್ಕಳು ಹುಂಡಿಯನ್ನು ಎಷ್ಟು ಇಷ್ಟಪಡುತ್ತಾರೆ ಎಂಬುದು ನಿಮಗೆ ತಿಳಿದಿದೆ, ಆದರೆ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ 13 ವರ್ಷದ ಮೀನಾಕ್ಷಿ ಮತ್ತು ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್‌ನ 11 ವರ್ಷದ ಬಶ್ವರ್ ಮುಖರ್ಜಿ ಇಬ್ಬರು ಬೇರೆಯೇ ರೀತಿಯ ಮಕ್ಕಳು. ಈ ಇಬ್ಬರೂ ಮಕ್ಕಳು ತಮ್ಮ ಹುಂಡಿಯ ಹಣವನ್ನು ಟಿ.ಬಿ. ಮುಕ್ತ ಭಾರತದ ಅಭಿಯಾನದಲ್ಲಿ ತೊಡಗಿಸಿದ್ದಾರೆ. ಈ ಎಲ್ಲಾ ಉದಾಹರಣೆಗಳು ಭಾವನಾತ್ಮಕವಾಗಿರುವುದ ಜೊತೆಗೆ, ತುಂಬಾ ಸ್ಪೂರ್ತಿದಾಯಕವಾಗಿವೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಉದಾತ್ತವಾಗಿ ಯೋಚಿಸುತ್ತಿರುವ ಈ ಎಲ್ಲ ಮಕ್ಕಳನ್ನು ನಾನು ಹೃತ್ಪೂರ್ವಕವಾಗಿ ಪ್ರಶಂಸಿಸುತ್ತೇನೆ.

  ನನ್ನ ಪ್ರಿಯ ದೇಶವಾಸಿಗಳೇ, ಹೊಸ ವಿಚಾರಗಳನ್ನು ಸ್ವಾಗತಿಸಲು ಸದಾ ಸಿದ್ಧರಿರುವುದು ಭಾರತೀಯರಾದ ನಮ್ಮ ಸ್ವಭಾವ. ನಾವು ನಮ್ಮ ವಸ್ತುಗಳನ್ನು ಪ್ರೀತಿಸುತ್ತೇವೆ ಮತ್ತು ಹೊಸ ವಿಷಯಗಳನ್ನು ಅಳವಡಿಸಿಕೊಳ್ಳುತ್ತೇವೆ. ಇದಕ್ಕೊಂದು ಉದಾಹರಣೆ ಎಂದರೆ - ಜಪಾನ್‌ನ ಮಿಯಾವಾಕಿ ತಂತ್ರಜ್ಞಾನ, ಯಾವುದೇ ಸ್ಥಳಮಣ್ಣು ಫಲವತ್ತಾಗಿಲ್ಲದಿದ್ದರೆ, ಆ ಪ್ರದೇಶವನ್ನು ಮತ್ತೆ ಫಲವತ್ತಾಗಿಸಲು ಮಿಯಾವಾಕಿ ತಂತ್ರಜ್ಞಾನವು  ಉತ್ತಮ ಮಾರ್ಗವಾಗಿದೆ. ಮಿಯಾವಾಕಿ ಅರಣ್ಯಗಳು ವೇಗವಾಗಿ ಹರಡುತ್ತವೆ ಮತ್ತು ಎರಡು ಮೂರು ದಶಕಗಳಲ್ಲಿ ಜೀವವೈವಿಧ್ಯದ ಕೇಂದ್ರವಾಗುತ್ತವೆ. ಈಗ ಇದು ಭಾರತದ ವಿವಿಧ ಭಾಗಗಳಲ್ಲಿ ಬಹಳ ವೇಗವಾಗಿ ಹರಡುತ್ತಿದೆ. ಕೇರಳದ ಶಿಕ್ಷಕ ಶ್ರೀ ರಾಫಿ ರಾಮನಾಥ್ ಅವರು ಈ ತಂತ್ರಜ್ಞಾನದಿಂದ ಒಂದು ಪ್ರದೇಶದ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಿದ್ದಾರೆ. ವಾಸ್ತವವಾಗಿ, ರಾಮನಾಥ್ ಅವರು ತಮ್ಮ ವಿದ್ಯಾರ್ಥಿಗಳಿಗೆ ಪ್ರಕೃತಿ ಮತ್ತು ಪರಿಸರದ ಬಗ್ಗೆ ವಿಸ್ತ್ರತವಾಗಿ ವಿವರಿಸಲು ಬಯಸಿದ್ದರು. ಇದಕ್ಕಾಗಿ ಅವರು ಗಿಡಮೂಲಿಕೆ ಉದ್ಯಾನವನ್ನೇ ಸಿದ್ಧಡಿಸಿದರು. ಅವರ ಉದ್ಯಾನ ಈಗ ಜೀವವೈವಿಧ್ಯ ವಲಯವಾಗಿ ಮಾರ್ಪಟ್ಟಿದೆ. ಅವರ ಈ ಯಶಸ್ಸು ಅವರನ್ನು ಇನ್ನಷ್ಟು ಪ್ರೇರೇಪಿಸಿತು. ಇದಾದ ನಂತರ ರಾಫೀಜಿಯವರು ಮಿಯಾವಾಕಿಯ ತಂತ್ರಜ್ಞಾನದಿಂದ ಮಿನಿ ಅರಣ್ಯವನ್ನು ಮಾಡಿ ಅದಕ್ಕೆ ವಿದ್ಯಾವನಂಎಂದು ಹೆಸರಿಟ್ಟರು. ಒಬ್ಬ ಶಿಕ್ಷಕರು ಮಾತ್ರವೇ ಇಂತಹ ಸುಂದರವಾದ ಹೆಸರನ್ನು ಇಡಬಹುದು - 'ವಿದ್ಯಾವನಂ'. ರಾಮನಾಥಜಿಯವರ ಈ ವಿದ್ಯಾವನಂನಲ್ಲಿ 115 ವಿಧದ 450ಕ್ಕೂ ಹೆಚ್ಚು ಮರಗಳನ್ನು ಚಿಕ್ಕ ಜಾಗದಲ್ಲಿ ನೆಟ್ಟಿದ್ದಾರೆ. ಅವರ ವಿದ್ಯಾರ್ಥಿಗಳು ಸಹ ಅವರ ನಿರ್ವಹಣೆಗೆ ಸಹಾಯ ಮಾಡುತ್ತಾರೆ. ಸಮೀಪದ ಶಾಲಾ ಮಕ್ಕಳು, ಸಾಮಾನ್ಯ ನಾಗರಿಕರು - ಈ ಸುಂದರ ಸ್ಥಳವನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಬರುತ್ತಾರೆ. ಮಿಯಾವಾಕಿ ಅರಣ್ಯವನ್ನು ಯಾವುದೇ ಪ್ರದೇಶದಲ್ಲಿ ಹಾಗೂ ನಗರಗಳಲ್ಲಿಯೂ ಸಹ ಸುಲಭವಾಗಿ ಬೆಳೆಸಬಹುದು. ಕೆಲ ಸಮಯದ ಹಿಂದೆ ಗುಜರಾತಿನ ಕೆವಾಡಿಯ, ಏಕ್ತಾ ನಗರದಲ್ಲಿ ಮಿಯಾವಾಕಿ ಅರಣ್ಯವನ್ನು ಉದ್ಘಾಟಿಸಿದ್ದೆ. ಕಚ್ ನಲ್ಲೂ 2001ರ ಭೂಕಂಪದಲ್ಲಿ ಮಡಿದವರ ನೆನಪಿಗಾಗಿ ಮಿಯಾವಾಕಿ ಶೈಲಿಯಲ್ಲಿ ಸ್ಮಾರಕ ವನವನ್ನು ನಿರ್ಮಿಸಲಾಗಿದೆ. ಕಚ್‌ನಂತಹ ಸ್ಥಳದಲ್ಲಿ ಇದರ ಯಶಸ್ಸು, ಅತ್ಯಂತ ಕಠಿಣವಾದ ನೈಸರ್ಗಿಕ ಪರಿಸರದಲ್ಲಿಯೂ ಈ ತಂತ್ರಜ್ಞಾನವು ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ತೋರಿಸುತ್ತದೆ. ಅದೇ ರೀತಿ ಅಂಬಾಜಿ ಮತ್ತು ಪಾವಗಡದಲ್ಲೂ ಮಿಯಾವಾಕಿ ಪದ್ಧತಿಯಲ್ಲಿ ಸಸಿಗಳನ್ನು ನೆಡಲಾಗಿದೆ. ಲಕ್ನೋದ ಅಲಿಗಂಜ್‌ನಲ್ಲಿಯೂ ಮಿಯಾವಾಕಿ ಉದ್ಯಾನವನ್ನು ಸಿದ್ಧಪಡಿಸಲಾಗುತ್ತಿದೆ ಎಂದು ನನಗೆ ತಿಳಿದು ಬಂದಿದೆ. ಕಳೆದ ನಾಲ್ಕು ವರ್ಷಗಳಲ್ಲಿ, ಮುಂಬೈ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂತಹ 60 ಕ್ಕೂ ಹೆಚ್ಚು ಅರಣ್ಯಗಳಲ್ಲಿ  ಕೆಲಸ ಮಾಡಲಾಗಿದೆ. ಈಗ ಈ ತಂತ್ರಜ್ಞಾನವು ಪ್ರಪಂಚದಾದ್ಯಂತ ಮೆಚ್ಚುಗೆ ಗಳಿಸುತ್ತಿದೆ. ಸಿಂಗಾಪುರ, ಪ್ಯಾರಿಸ್, ಆಸ್ಟ್ರೇಲಿಯಾ, ಮಲೇಷಿಯಾ ಮುಂತಾದ ಹಲವು ದೇಶಗಳಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಮಿಯಾವಾಕಿಯ ವಿಧಾನದ ಬಗ್ಗೆ ಕಲಿಯಲು ಪ್ರಯತ್ನಿಸುವಂತೆ ನಾನು ದೇಶವಾಸಿಗಳಿಗೆ, ವಿಶೇಷವಾಗಿ ನಗರವಾಸಿಗಳಲ್ಲಿ ಮನವಿ ಮಾಡುತ್ತೇನೆ. ಮೂಲಕ, ನಿಮ್ಮ ಭೂಮಿ ಮತ್ತು ಪ್ರಕೃತಿಯನ್ನು ಹಸಿರಾಗಿಸಲು ಮತ್ತು ಸ್ವಚ್ಛವಾಗಿಸಲು ನೀವು ಅಮೂಲ್ಯವಾದ ಕೊಡುಗೆಯನ್ನು ನೀಡಬಹುದಾಗಿದೆ.

ನನ್ನ ಪ್ರಿಯ ದೇಶವಾಸಿಗಳೇ, ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕೆಲವೊಮ್ಮೆ ಹೆಚ್ಚುತ್ತಿರುವ ಪ್ರವಾಸೋದ್ಯಮದಿಂದಾಗಿ, ಇನ್ನು ಕೆಲವೊಮ್ಮೆ G-20 ರ ಅದ್ಭುತ ಆಯೋಜನೆಯಿಂದಾಗಿ. ಕಾಶ್ಮೀರದ ನಾದ್ರುದೇಶದ ಹೊರಗೂ ಹೇಗೆ ಇಷ್ಟವಾಗುತ್ತಿದೆ ಎಂದು ಕೆಲ ಸಮಯದ ಹಿಂದೆ ಮನದ ಮಾತಿನಲ್ಲಿ ನಾನು ಹೇಳಿದ್ದೆ. ಇದೀಗ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಜನರು ಅದ್ಭುತವಾದ ಕೆಲಸವನ್ನು ಮಾಡಿದ್ದಾರೆ. ಬಾರಾಮುಲ್ಲಾದಲ್ಲಿ ಹಿಂದಿನಿಂದಲೂ ಬೇಸಾಯ ಮಾಡಲಾಗುತ್ತಿದ್ದರೂ, ಇಲ್ಲಿ ಹಾಲಿನ ಕೊರತೆಯಿತ್ತು. ಬಾರಾಮುಲ್ಲಾದ ಜನರು ಈ ಸವಾಲನ್ನು ಒಂದು ಅವಕಾಶವಾಗಿ ತೆಗೆದುಕೊಂಡರು. ಹೆಚ್ಚಿನ ಸಂಖ್ಯೆಯ ಜನರು ಇಲ್ಲಿ ಹೈನುಗಾರಿಕೆಯನ್ನು ಪ್ರಾರಂಭಿಸಿದರು. ಇಲ್ಲಿನ ತಾಯಂದಿರು ಈ ಕಾರ್ಯದಲ್ಲಿ ಅಗ್ರಸ್ಥಾನದ್ಲಲಿದ್ದಾರೆ. ಉದಾಹರಣೆಗೆ ಸೋದರಿ ಇಶ್ರತ್ ನಬಿ.  ಇಶ್ರತ್  ಒಬ್ಬ ಪದವೀಧರರಾಗಿದ್ದು ಮಿರ್ ಸಿಸ್ಟರ್ಸ್ ಡೈರಿ ಫಾರ್ಮ್ ಆರಂಭಿಸಿದ್ದಾರೆ. ಇವರ ಡೇರಿ ಫಾರಂನಿಂದ ಪ್ರತಿದಿನ ಸುಮಾರು 150 ಲೀಟರ್ ಹಾಲು ಮಾರಾಟವಾಗುತ್ತಿದೆ. ಇಂತಹ ಮತ್ತೊಬ್ಬ ಸ್ನೇಹಿತ ಸೋಪೋರ್‌ನ ವಸಿಂ ಅನಾಯತ್. ವಸಿಂ ಎರಡು ಡಜನ್‌ಗಿಂತಲೂ ಹೆಚ್ಚು ರಾಸುಗಳನ್ನು ಹೊಂದಿದ್ದಾರೆ ಮತ್ತು ಪ್ರತಿದಿನ ಇನ್ನೂರು ಲೀಟರ್‌ಗಿಂತಲೂ ಹೆಚ್ಚು ಹಾಲನ್ನು ಮಾರಾಟ ಮಾಡುತ್ತಾರೆ. ಮತ್ತೊಬ್ಬ ಯುವಕ ಅಬಿದ್ ಹುಸೇನ್ ಕೂಡ ಹೈನುಗಾರಿಕೆ ಮಾಡುತ್ತಿದ್ದಾರೆ. ಅವರ ಕೆಲಸವೂ ಸಾಕಷ್ಟು ಪ್ರಗತಿಯಲ್ಲಿದೆ. ಇಂಥವರ ಪರಿಶ್ರಮದಿಂದ ಬಾರಾಮುಲ್ಲಾದಲ್ಲಿ ನಿತ್ಯ 5.5 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇಡೀ ಬಾರಾಮುಲ್ಲಾ ಹೊಸ ಶ್ವೇತ ಕ್ರಾಂತಿಗೆ ನಾಂದಿ ಹಾಡುತ್ತಿದೆ. ಕಳೆದ ಎರಡೂವರೆಯಿಂದ 3  ವರ್ಷಗಳಲ್ಲಿ ಇಲ್ಲಿ 500ಕ್ಕೂ ಹೆಚ್ಚು ಡೈರಿ ಘಟಕಗಳು ಆರಂಭಗೊಂಡಿವೆ. ಬಾರಾಮುಲ್ಲಾದ ಡೈರಿ ಉದ್ಯಮವು ನಮ್ಮ ದೇಶದ ಪ್ರತಿಯೊಂದು ಭಾಗವು ಸಾಧ್ಯತೆಗಳಿಂದ ತುಂಬಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಯಾವುದೇ ಪ್ರದೇಶದ ಜನರ ಸಾಮೂಹಿಕ ಇಚ್ಛಾಶಕ್ತಿ ಯಾವುದೇ ಗುರಿಯನ್ನು ಸಾಧಿಸಿ ತೋರಿಸಬಲ್ಲುದು.

ನನ್ನ ಪ್ರೀತಿಯ ದೇಶವಾಸಿಗಳೇ, ಈ ತಿಂಗಳು ಭಾರತಕ್ಕೆ ಕ್ರೀಡಾ ಪ್ರಪಂಚದಿಂದ ಅನೇಕ ಸಂತೋಷಕರ ಸುದ್ದಿಗಳು ಬಂದಿವೆ. ಭಾರತ ತಂಡವು ಮೊದಲಬಾರಿಗೆ ಮಹಿಳಾ ಜ್ಯೂನಿಯರ್ ಏಷ್ಯಾ ಕಪ್ ಗೆದ್ದು ಭಾರತದ ತ್ರಿವರ್ಣ ಧ್ವಜದ ಗೌರವ ಹೆಚ್ಚಿಸಿದೆ. ಇದೇ ತಿಂಗಳು ನಮ್ಮ ಪುರುಷರ ಹಾಕಿ ತಂಡ ಕೂಡಾ ಜ್ಯೂನಿಯರ್ ಹಾಕಿ ಕಪ್ ತನ್ನದಾಗಿಸಿಕೊಂಡಿದೆ. ಇದರೊಂದಿಗೆ ನಮ್ಮ ಈ ಪಂದ್ಯಾವಳಿಯ ಇತಿಹಾಸದಲ್ಲಿ ಅತಿ ಹೆಚ್ಚು ಗೆಲುವು ದಾಖಲಿಸಿದ ತಂಡ ಎಂಬ ಹೆಗ್ಗಳಿಕೆಗೆ ಕೂಡಾ ನಾವು ಪಾತ್ರರಾಗಿದ್ದೇವೆ. ಜ್ಯೂನಿಯರ್ ಶೂಟಿಂಗ್ ವಿಶ್ವ ಕಪ್ ನಲ್ಲಿ ಕೂಡಾ ನಮ್ಮ ಜ್ಯೂನಿಯರ್ ತಂಡ ಅದ್ಭುತಗಳನ್ನು ಮಾಡಿ ತೊರಿಸಿದೆ. ಭಾರತೀಯ ತಂಡವು ಈ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಈ ಪಂದ್ಯಾವಳಿಯಲ್ಲಿ ಒಟ್ಟು ಚಿನ್ನದ ಪದಕಗಳಲ್ಲಿ ಶೇಕಡಾ 20 ರಷ್ಟು ಪದಕಗಳು ಭಾರತಕ್ಕೆ ಸಂದಿವೆ. ಇದೇ ಜೂನ್ ತಿಂಗಳಿನಲ್ಲಿ ಇಪ್ಪತ್ತು ವರ್ಷದೊಳಗಿನವರ ಏಷ್ಯನ್ ಅಥ್ಲೆಟಿಕ್ಸ್ ಪಂದ್ಯಾವಳಿ ಕೂಡಾ ನಡೆಯಿತು. ಇದರಲ್ಲಿ ಭಾರತ ಪದಕ ಪಟ್ಟಿಯಲ್ಲಿ 45 ದೇಶಗಳ ಪೈಕಿ ಮೂರು ಸ್ಥಾನಗಳಲ್ಲಿ ಒಂದಾಗಿದೆ.  

ಸ್ನೇಹಿತರೇ, ನಮಗೆ ಅಂತಾರಾಷ್ಟ್ರೀಯ ಕ್ರೀಡಾಕೂಟಗಳ ಬಗ್ಗೆ ತಿಳಿದು ಬರುತ್ತಿತ್ತಾದರೂ, ಅದರಲ್ಲಿ ಸಾಮಾನ್ಯವಾಗಿ ಭಾರತದ ಹೆಸರಿನ ಪ್ರಸ್ತಾವನೆ ಇರುತ್ತಿರಲಿಲ್ಲ. ಇಂದು ನಾನು ಕೇವಲ ಹಿಂದಿನ ಕೆಲವು ವಾರಗಳ ಯಶಸ್ಸಿನ ಬಗ್ಗೆ ಮಾತ್ರಾ ಹೇಳುತ್ತಿದ್ದೇನೆ, ಆದರೂ ಇದರ ಪಟ್ಟಿ ಇಷ್ಟು ದೊಡ್ಡದಾಗಿದೆ. ಇದು ನಮ್ಮ ಯುವಸಮುದಾಯದ ನಿಜವಾದ ಸಾಮರ್ಥ್ಯವಾಗಿದೆ. ಇಂತಹ ಅನೇಕ ಕ್ರೀಡೆಗಳು ಮತ್ತು ಪಂದ್ಯಾವಳಿಗಳು ಇವೆ, ಇಂದು ಈ ಸ್ಪರ್ಧೆಗಳಲ್ಲಿ ಭಾರತ ಮೊದಲಬಾರಿಗೆ ತನ್ನ ಅಸ್ತಿತ್ವವನ್ನು ದಾಖಲಿಸುತ್ತಿದೆ. ಲಾಂಗ್ ಜಂಪ್ ನಲ್ಲಿ ಶ್ರೀಶಂಕರ್ ಮುರಳಿ ಅವರು ಪ್ಯಾರಿಸ್ ಡೈಮಂಡ್ ಲೀಗ್ ನಂತಹ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ದೇಶಕ್ಕೆ ಕಂಚಿನ ಪದಕ ತಂದುಕೊಟ್ಟರು. ಇದು ಈ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಪದಕವಾಗಿದೆ. ಕಿರ್ಗಿಸ್ತಾನದಲ್ಲೂ ಹದಿನೇಳು ವರ್ಷದೊಳಗಿನವರ ಮಹಿಳಾ ಕುಸ್ತಿ ತಂಡವು ಯಶಸ್ಸು ಸಾಧಿಸಿದೆ. ನಾನು ದೇಶದ ಈ ಎಲ್ಲಾ ಕ್ರೀಡಾಪಟುಗಳಿಗೆ, ಅವರ ತಾಯಿತಂದೆಯರಿಗೆ ಮತ್ತು ಕೋಚ್ ಗಳಿಗೆ ಈ ಪ್ರಯತ್ನಗಳಿಗಾಗಿ ಅಭಿನಂದಿಸುತ್ತಿದ್ದೇನೆ.

ಸ್ನೇಹಿತರೇ, ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ದೇಶದ ಈ ಯಶಸ್ಸಿನ ಹಿಂದೆ ರಾಷ್ಟ್ರ ಮಟ್ಟದ ನಮ್ಮ ಕ್ರೀಡಾಪಟುಗಳ ಕಠಿಣ ಶ್ರಮ ಅಡಗಿರುತ್ತದೆ. ಇಂದು ದೇಶದ ಬೇರೆ ಬೇರೆ ರಾಜ್ಗಳಲ್ಲಿ ಒಂದು ಹೊಸ ಉತ್ಸಾಹದೊಂದಿಗೆ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ. ಇದರಿಂದ ಕ್ರೀಡಾಪಟುಗಳಿಗೆ ಆಟವಾಡುವ, ಗೆಲ್ಲುವ ಮತ್ತು ಸೋಲಿನಿಂದ ಕಲಿಯುವ ಅವಕಾಶ ದೊರೆಯುತ್ತದೆ.  ಈ ನಡುವೆ ಉತ್ತರ ಪ್ರದೇಶದಲ್ಲಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಆಯೋಜಿಸಲಾಗಿತ್ತು. ಇದರಲ್ಲಿ ಯುವಜನತೆ  ಅತ್ಯಂತ ಉತ್ಸಾಹ ಮತ್ತು ಹುರುಪಿನಿಂದ ಪಾಲ್ಗೊಂಡಿದ್ದು ಕಂಡುಬಂದಿತು. ಈ ಕ್ರೀಡೆಗಳಲ್ಲಿ ನಮ್ಮ ಯುವಜನತೆ ಹನ್ನೊಂದು ದಾಖಲೆಗಳನ್ನು ಮುರಿದರು. ಈ ಕ್ರೀಡಾಕೂಟದಲ್ಲಿ ಪಂಜಾಬ್ ವಿಶ್ವವಿದ್ಯಾಲಯ, ಅಮೃತ್ ಸರ್ ನ ಗುರು ನಾನಕ್ ದೇವ್ ವಿಶ್ವ ವಿದ್ಯಾಲಯ ಮತ್ತು ಕರ್ನಾಟಕದ ಜೈನ್ ವಿಶ್ವವಿದ್ಯಾಲಯಗಳು ಪದಕ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಇದ್ದವು.

ಸ್ನೇಹಿತರೇ, ಈ ಪಂದ್ಯವಾಳಿಗಳ ಪ್ರಮುಖ ಅಂಶವೆಂದರೆ, ಇವುಗಳ ಕಾರಣದಿಂದ ಅನೇಕ ಯುವ ಕ್ರೀಡಾಪಟುಗಳ ಅನೇಕ ಸ್ಫೂರ್ತಿದಾಯಕ ಕತೆಗಳು ಬೆಳಕಿಗೆ ಬರುತ್ತವೆ. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ನಲ್ಲಿ ರೋಯಿಂಗ್ ಸ್ಪರ್ಧೆಯಲ್ಲಿ ಅಸ್ಸಾಂನ ಕಾಟನ್ ವಿಶ್ವವಿದ್ಯಾಲಯ ಅನ್ಯತಮ್ ರಾಜ್ ಕುಮಾರ್ ಇಂತಹ ಪಂದ್ಯಾವಳಿಯಲ್ಲಿ ಪಾಲ್ಗೊಂಡ ಮೊದಲ ವಿಶೇಷ ಚೇತನ ಕ್ರೀಡಾಪಡು ಎನಿಸಿದರು. ಬರ್ಕತುಲ್ಲಾ ವಿಶ್ವವಿದ್ಯಾಲಯದ ನಿಧಿ ಪರ್ವೈಯಾ ಅವರು ಮೊಣಕಾಲಿನ ಗಂಭೀರ ಗಾಯದ ನಡುವೆಯೂ ಶಾಟ್ ಪುಟ್ ನಲ್ಲಿ ಚಿನ್ನದ ಪದಕ ಗಳಿಸುವುದರಲ್ಲಿ ಯಶಸ್ವಿಯಾದರು. ಕಣಕಾಲಿನಲ್ಲಾದ ಗಾಯದಿಂದಾಗಿ ಕಳೆದ ವರ್ಷ ಬೆಂಗಳೂರಿನಲ್ಲಿ ನಿರಾಶೆ ಹೊಂದಿದ್ದ ಸಾವಿತ್ರೀಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದ ಶುಭಂ ಭಂಡಾರೆ  ಅವರು ಈ ಬಾರಿ Steeple chase ನಲ್ಲಿ ಸ್ವರ್ಣ ಪದಕ ವಿಜೇತರಾದರು. ಬರ್ದ್ವಾನ್ ವಿಶ್ವವಿದ್ಯಾಲಯದ ಸರಸ್ವತಿ ಕುಂದೂ ಅವರು ತಮ್ಮ ಕಬಡ್ಡಿ ತಂಡದ ನಾಯಕಿಯಾಗಿದ್ದಾರೆ. ಅವರು ಅನೇಕ ಕಷ್ಟಗಳನ್ನು ದಾಟಿ ಈ ಹಂತ ತಲುಪಿದ್ದಾರೆ. ಅತ್ಯುತ್ತಮ ಪ್ರದರ್ಶನ ನೀಡುವ ಅನೇಕ ಕ್ರೀಡಾಪಟುಗಳಿಗೆ ಟಾಪ್ಸ್ ಸ್ಕೀಮ್ ನಿಂದ ಕೂಡಾ ಸಾಕಷ್ಟು ಸಹಾಯ ದೊರೆಯುತ್ತಿದೆ. ನಮ್ಮ ಕ್ರೀಡಾಪಟುಗಳು ಎಷ್ಟು ಆಡುತ್ತಾರೋ ಅಷ್ಟೇ ಅರಳುತ್ತಾರೆ.

ನನ್ನ ಪ್ರೀತಿಯ ದೇಶವಾಸಿಗಳೇ, ಜೂನ್ ತಿಂಗಳ 21 ಇನ್ನೇನು ಬಂದೇ ಬಿಟ್ಟಿತು. ಈ ಬಾರಿ ಕೂಡಾ ವಿಶ್ವದ ಮೂಲೆ ಮೂಲೆಗಳಲ್ಲಿ ಜನರು ಅಂತಾರಾಷ್ಟ್ರೀಯ ಯೋಗ ದಿನಕ್ಕಾಗಿ ಉತ್ಸಾಹದಿಂದ ಎದುರು ನೋಡುತ್ತಿದ್ದಾರೆ. ಈ ವರ್ಷದ ಯೋಗ ದಿನದ ಘೋಷವಾಕ್ಯಯೋಗ ಫಾರ್ ವಸುಧೈವ ಕುಟುಂಬಕಂ – ಅಂದರೆ ಒಂದು ವಿಶ್ವ ಒಂದು ಕುಟುಂಬ ಎಂಬ ರೂಪದಲ್ಲಿ ಎಲ್ಲರ ಯೋಗಕ್ಷೇಮಕ್ಕಾಗಿ ಯೋಗ ಎಂಬುದಾಗಿದೆ. ಎಲ್ಲರನ್ನೂ ಒಂದುಗೂಡಿಸುವ ಮತ್ತು ಎಲ್ಲರೊಂದಿಗೆ ಮುನ್ನಡೆಯುವ ಯೋಗದ ಭಾವನೆಯನ್ನು ಇದು ವ್ಯಕ್ತಪಡಿಸುತ್ತದೆ. ಪ್ರತಿ ಬಾರಿಯಂತೆಯೇ ಈ ಬಾರಿ ಕೂಡಾ ದೇಶದ ಮೂಲೆ ಮೂಲೆಗಳಲ್ಲಿ, ಯೋಗ ಸಂಬಂಧಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಸ್ನೇಹಿತರೇ, ಈ ಬಾರಿ ನನಗೆ ನ್ಯೂ ಯಾರ್ಕ್ ನ ವಿಶ್ವ ಸಂಸ್ಥೆಯ ಮುಖ್ಯ ಕಾರ್ಯಾಲಯದಲ್ಲಿ ನಡೆಯುವ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ದೊರೆಯಲಿದೆ.  ಸಾಮಾಜಿಕ ಜಾಲತಾಣಗಳಲ್ಲಿಯೂ ಯೋಗ ದಿನಕ್ಕೆ ಸಂಬಂಧಿಸಿದಂತೆ ಅಪಾರ ಉತ್ಸಾಹ ಕಂಡುಬರುತ್ತಿದೆ.

    ಸ್ನೇಹಿತರೇ, ನೀವೆಲ್ಲರೂ ನಿಮ್ಮ ಜೀವನದಲ್ಲಿ ಯೋಗವನ್ನು ಖಂಡಿತವಾಗಿಯೂ ಅಳವಡಿಸಿಕೊಳ್ಳಿ, ಇದನ್ನು ನಿಮ್ಮ ದೈನಂದಿನ ಚಟುವಟಿಕೆಗಳ ಒಂದು ಭಾಗವನ್ನಾಗಿ ಮಾಡಿಕೊಳ್ಳಿ ಎನ್ನುವುದು ನಿಮ್ಮಲ್ಲಿ ನನ್ನ ಮನವಿ.  ಒಂದುವೇಳೆ ನೀವು ಇನ್ನೂ ಯೋಗಾಭ್ಯಾಸದಲ್ಲಿ ತೊಡಗಿಕೊಳ್ಳದೇ ಇದ್ದಲ್ಲಿ, ಮುಂಬರುವ ಇದೇ 21 ರಂದು ಈ ಸಂಕಲ್ಪಕ್ಕಾಗಿ ಅತ್ಯುತ್ತಮ ಅವಕಾಶವಿದೆ. ಯೋಗದಲ್ಲಂತೂ ಹೆಚ್ಚಿನ ಸಿದ್ಧತೆಗಳು ಅಗತ್ಯವಿರುವುದಿಲ್ಲ. ನೀವು ಯೋಗವನ್ನು ಜೀವನದಲ್ಲಿ ಅಳವಡಿಸಿಕೊಂಡಿರಾದರೆ ಎಷ್ಟು ದೊಡ್ಡ ಬದಲಾವಣೆಯಾಗುತ್ತದೆ ಎಂದು ನೀವೇ ನೋಡಬಹುದು.

    ನನ್ನ ಪ್ರೀತಿ ದೇಶವಾಸಿಗಳೇ,  ನಾಡಿದ್ದು ಅಂದರೆ ಜೂನ್ 20 ರಂದು ಐತಿಹಾಸಿಕ ರಥಯಾತ್ರೆಯ ದಿನವಾಗಿದೆ. ಇಡಿ ವಿಶ್ವದಲ್ಲಿ ಈ ರಥಯಾತ್ರೆಗೆ ಒಂದು ವಿಶೇಷ ಮಾನ್ಯತೆಯಿದೆ. ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಅತ್ಯಂತ ಸಂಭ್ರಮ ಸಡಗರದಿಂದ ಭಗವಾನ್ ಜಗನ್ನಾಥನ ರಥಯಾತ್ರೆ ಹೊರಡುತ್ತದೆ. ಒಡಿಶಾದ ಪುರಿಯಲ್ಲಿ ನಡೆಯಲಿರುವ ರಥಯಾತ್ರೆಯಂತೂ ಅತ್ಯಂತ ಅದ್ಭುತವಾಗಿರುತ್ತದೆ. ನಾನು ಗುಜರಾತ್ ನಲ್ಲಿದ್ದಾಗ, ಅಹಮದಾಬಾದ್ ನಲ್ಲಿ ನಡೆಯುವ ವಿಶಾಲ ರಥಯಾತ್ರೆಯಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯುತ್ತಿತ್ತು.  ಈ ರಥಯಾತ್ರೆಗಳಲ್ಲಿ ದೇಶಾದ್ಯಂತ, ಪ್ರತಿಯೊಂದು ಸಮಾಜ, ಪ್ರತಿಯೊಂದು ವರ್ಗದ ಜನರು ಸೇರುವ ರೀತಿ ನಿಜಕ್ಕೂ ಅತ್ಯಂತ ಅನುಕರಣೀಯವಾಗಿರುತ್ತದೆ. ಈ ಶ್ರದ್ಧೆಯೊಂದಿಗೆ ಏಕ್ ಭಾರತ್ ಶ್ರೇಷ್ಠ್ ಭಾರತ್ ನ ಪ್ರತಿಬಿಂಬವೂ ಇರುತ್ತದೆ. ಈ ಪಾವನ ಪುಣ್ಯದ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನನ್ನ ಅನೇಕಾನೇಕ ಶುಭ ಹಾರೈಕೆಗಳು. ಭಗವಾನ್ ಜಗನ್ನಾಥ ದೇಶವಾಸಿಗಳೆಲ್ಲರಿಗೂ ಉತ್ತಮ ಆರೋಗ್ಯ, ಸುಖ, ಸಮೃದ್ಧಿ ದೊರೆಯುವಂತೆ ಆಶೀರ್ವದಿಸಲಿ ಎನ್ನುವುದು ನನ್ನ ಹಾರೈಕೆ.

    ಸ್ನೇಹಿತರೇ, ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ಹಬ್ಬಗಳ ಬಗ್ಗೆ ಮಾತನಾಡುವಾಗ, ದೇಶದ ರಾಜಭವನಗಳಲ್ಲಿ ನಡೆಯುವ ಆಸಕ್ತಿದಾಯಕ ಕಾರ್ಯಕ್ರಮಗಳ ಬಗ್ಗೆ ಕೂಡಾ ನಾನು ಉಲ್ಲೇಖಿಸುತ್ತೇನೆ. ಈಗ ದೇಶದಲ್ಲಿ ರಾಜಭವನಗಳು ಸಾಮಾಜಿಕ ಮತ್ತು ಅಭಿವೃದ್ಧಿ ಕಾರ್ಯಗಳೊಂದಿಗೆ ಗುರುತಿಸಿಕೊಳ್ಳಲಾಗುತ್ತಿದೆ. ಇಂದು ನಮ್ಮ ರಾಜಭವನ, ಕ್ಷಯರೋಗ ಮುಕ್ತ ಭಾರತ ಅಭಿಯಾನದ, ಸಹಜ ಕೃಷಿ ಸಂಬಂಧಿತ ಅಭಿಯಾನದ ರೂವಾರಿಯಾಗುತ್ತಿದೆ. ಈ ಹಿಂದೆ ಗುಜರಾತ್, ಗೋವಾ, ತೆಲಂಗಾಣಾ, ಮಹಾರಾಷ್ಟ್ರ, ಸಿಕ್ಕಿಂ ಯಾವುದೇ ರಾಜ್ಯವಿರಲಿ, ತಮ್ಮ ತಮ್ಮ ಸಂಸ್ಥಾಪನಾ ದಿನದಂದು ಬೇರೆ ಬೇರೆ ರಾಜಭವನಗಳು ಉತ್ಸಾಹದಿಂದ ಆಚರಿಸಿರುವುದು  ಒಂದು ಉದಾಹರಣೆಯಾಗಿದೆ. ಏಕ್ ಭಾರತ್ ಶ್ರೇಷ್ಠ್ ಭಾರತ್ ನ ಚೈತನ್ಯವನ್ನು ಸಶಕ್ತಗೊಳಿಸುವ ಒಂದು ಅದ್ಭುತ ಮೆಟ್ಟಿಲಾಗಿದೆ.

    ಸ್ನೇಹಿತರೇ, ಭಾರತ ಪ್ರಜಾಪ್ರಭುತ್ವದ ತಾಯಿ, Mother of Democracy. ನಾವು ಪ್ರಜಾಪ್ರಭುತ್ವದ ಆದರ್ಶಗಳನ್ನು ಸರ್ವಶ್ರೇಷ್ಠವೆಂದು ಭಾವಿಸುತ್ತೇವೆ. ನಮ್ಮ ಸಂವಿಧಾನವನ್ನು ಸರ್ವಶ್ರೇಷ್ಠವೆಂದು ಭಾವಿಸುತ್ತೇವೆ. ಆದ್ದರಿಂದಲೇ ನಾವು ಜೂನ್ 25 ನೇ ತಾರೀಖನ್ನು ಎಂದಿಗೂ ಮರೆಯಲಾಗುವುದಿಲ್ಲ. ಇಂದೇ ದಿನದಂದು ನಮ್ಮ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಲಾಗಿತ್ತು. ಇದು ಭಾರತದ ಇತಿಹಾಸದಲ್ಲಿ ಒಂದು ಕರಾಳ ಕಾಲ. ಲಕ್ಷಾಂತರ ಜನರು ತುರ್ತುಪರಿಸ್ಥಿತಿಯನ್ನು ಪೂರ್ಣ ಸಾಮರ್ಥ್ಯದಿಂದ ಎದುರಿಸಿದರು. ಪ್ರಜಾಪ್ರಭುತ್ವದ ಬೆಂಬಲಿಗರನ್ನು ಎಷ್ಟೊಂದು ನೋವು, ಹಿಂಸೆಗೆ ಒಳಪಡಿಸಲಾಯಿತೆಂದರೆ, ಅದನ್ನು ನೆನೆದರೆ ಇಂದಿಗೂ ಮನಸ್ಸು ನಡುಗುತ್ತದೆ. ಈ ದೌರ್ಜನ್ಯಗಳ ಬಗ್ಗೆ, ಪೊಲೀಸರು ಮತ್ತು ಆಡಳಿತ ನೀಡದ ಶಿಕ್ಷೆಗಳ ಬಗ್ಗೆ ಅನೇಕ ಪುಸ್ತಕಗಳನ್ನು ಬರೆಯಲಾಗಿದೆ.  ಸಂಘರ್ಷ್ ಮೇ ಗುಜರಾತ್ ಹೆಸರಿನ ಒಂದು ಪುಸ್ತಕ ಬರೆಯುವ ಒಂದು ಅವಕಾಶ ನನಗೂ ದೊರೆತಿತ್ತು. ಕೆಲವು ದಿನಗಳ ಹಿಂದಷ್ಟೇ ತುರ್ತು ಪರಿಸ್ಥಿತಿಯ ಬಗ್ಗೆ ಬರೆದ ಮತ್ತೊಂದು ಪುಸ್ತಕ ನನಗೆ ದೊರೆಯಿತು ಅದರ ಹೆಸರು Torture of Political Prisoners in India. ತುರ್ತುಪರಿಸ್ಥಿತಿಯಲ್ಲಿ ಸಮಯದಲ್ಲಿ ಪ್ರಕಟವಾದ ಈ ಪುಸ್ತಕದಲ್ಲಿ ಅಂದಿನ ಸರ್ಕಾರ ಪ್ರಭಾಪ್ರಭುತ್ವದ ರಕ್ಷಕರೊಂದಿಗೆ ಎಷ್ಟು ಕ್ರೂರವಾಗಿ ನಡೆದುಕೊಂಡಿತ್ತು ಎಂಬುದನ್ನು ವಿವರಿಸಲಾಗಿದೆ. ಈ ಪುಸ್ತಕದಲ್ಲಿ ಹಲವಾರು case studies ಇವೆ, ಬಹಳಷ್ಟು ಚಿತ್ರಗಳೂ ಇವೆ. ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಮಯದಲ್ಲಿ, ದೇಶದ ಸ್ವಾತಂತ್ರ್ಯವನ್ನು ಅಪಾಯಕ್ಕೆ ದೂಡುವ ಇಂತಹ ಅಪರಾಧಗಳನ್ನು ನಾವು ಖಂಡಿತವಾಗಿಯೂ ಅವಲೋಕನ ಮಾಡಬೇಕೆಂದು ನಾನು ಹೇಳುತ್ತೇನೆ. ಇದರಿಂದ ಇಂದಿನ ಯುವ ಪೀಳಿಗೆಗೆ ಪ್ರಜಾಪ್ರಭುತ್ವದ ಅರ್ಥ ಮತ್ತು ಮಹತ್ವವನ್ನು ಅರ್ಥ ಮಾಡಿಕೊಳ್ಳಲು ಇನ್ನೂ ಸುಲಭವಾಗುತ್ತದೆ.

 

ನನ್ನ ಪ್ರೀತಿಯ ದೇಶವಾಸಿಗಳೇ, ಮನ್ ಕಿ ಬಾತ್ , ಮನದ ಮಾತು ಎನ್ನುವುದು ಬಣ್ಣ ಬಣ್ಣದ ಮುತ್ತಿನ ಮಣಿಗಳಿಂದ ಪೋಣಿಸಿದ ಒಂದು ಸುಂದರ ಹಾರವಾಗಿದೆ. ಇದರಲ್ಲಿರುವ ಪ್ರತಿಯೊಂದು ಮುತ್ತಿನ ಮಣಿಯೂ ತನ್ನದೇ ಆದ ರೀತಿಯಲ್ಲಿ ವಿಶೇಷವಾಗಿದೆ ಮತ್ತು ಅಮೂಲ್ಯವಾಗಿದೆ. ಈ ಕಾರ್ಯಕ್ರಮದ ಪ್ರತಿಯೊಂದು ಆವೃತ್ತಿಯೂ ಅತ್ಯಂತ ಜೀವಂತಿಕೆಯಿಂದ ಕೂಡಿದೆ. ಸಾಮೂಹಿಕತೆಯ ಭಾವನೆಯೊಂದಿಗೆ ಸಮಾಜದೆಡೆಗೆ ನಮ್ಮ  ಕರ್ತವ್ಯ ಮತ್ತು ಸೇವೆ ಭಾವನೆಯನ್ನು ಇದು ನಮ್ಮಲ್ಲಿ ಉಂಟು ಮಾಡುತ್ತದೆ. ನಾವು ಹೆಚ್ಚಾಗಿ ಕೇಳಿರದ, ಓದಿರದ ವಿಷಯಗಳ ಬಗ್ಗೆ ಇಲ್ಲಿ ಮುಕ್ತವಾಗಿ ಚರ್ಚಿಸಲಾಗುತ್ತದೆ. ಮನ್ ಕಿ ಬಾತ್ ನಲ್ಲಿ ಯಾವುದಾದರೊಂದು ವಿಷಯ ಪ್ರಸ್ತಾಪವಾದ ನಂತರ, ಅನೇಕ ದೇಶವಾಸಿಗಳಲ್ಲಿ ಹೊಸದೊಂದು ಪ್ರೇರಣೆ ದೊರೆತಿರುವುದನ್ನು ನಾವು ಆಗಾಗ್ಗೆ ನೋಡುತ್ತಿದ್ದೇವೆ. ಇತ್ತೀಚೆಗಷ್ಟೇ, ನನಗೆ ದೇಶದ ಪ್ರಸಿದ್ಧ ಶಾಸ್ತ್ರೀಯ ನೃತ್ಯಪಟು ಆನಂದಾ ಶಂಕರ್ ಜಯಂತ್ ಅವರಿಂದ ಒಂದು ಪತ್ರ ಬಂದಿದೆ. ನಾವು ಕತೆ ಹೇಳುವ ಕುರಿತಂತೆ ಮಾತನಾಡಿದ್ದ ಸಂಚಿಕೆಯ ಕುರಿತು ತಮ್ಮ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.  ಆ ಕಾರ್ಯಕ್ರಮದಲ್ಲಿ ನಾವು ಈ ರಂಗದಲ್ಲಿ ತೊಡಗಿಸಿಕೊಂಡಿರುವಂತಹ ಜನರ ಪ್ರತಿಭೆಯನ್ನು ಗುರುತಿಸಿದ್ದೆವು. ಮನದ ಮಾತಿನಆ ಕಾರ್ಯಕ್ರಮದಿಂದ ಪ್ರೇರಣೆ ಪಡೆದ ಆನಂದಾ ಶಂಕರ್ ಜಯಂತ್ ಅವರು ಕುಟ್ಟಿ ಕಹಾನಿ ಸಿದ್ಧ ಪಡಿಸಿದ್ದಾರೆ.  ಇದು ಮಕ್ಕಳಿಗಾಗಿ ಬೇರೆ ಬೇರೆ ಭಾಷೆಗಳ ಕತೆಗಳ ಅತ್ಯುತ್ತಮ ಸಂಗ್ರಹವಾಗಿದೆ. ಇದು ನಮ್ಮ ಮಕ್ಕಳ ಸಂಸ್ಕೃತಿಯ ಬಾಂಧವ್ಯವನ್ನು ಮತ್ತಷ್ಟು ಬಲಿಷ್ಠ ಮತ್ತು ಆಳವಾಗಿಸುವ ಕಾರಣದಿಂದ ಈ ಪ್ರಯತ್ನ ಬಹಳ ಉತ್ತಮವಾಗಿದೆ. ಇವರು ಈ ಕತೆಗಳ ಕೆಲವು ಆಸಕ್ತಿದಾಯ ವಿಡಿಯೋಗಳನ್ನು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.  ನಾನು ಆನಂದಾ ಶಂಕರ್ ಜಯಂತ್ ಅವರ ಈ ಪ್ರಯತ್ನ ಕುರಿತು ವಿಶೇಷವಾಗಿ ಮಾತನಾಡಿರುವುದು ಏಕೆಂದರೆ, ಯಾವ ರೀತಿ ದೇಶವಾಸಿಗಳ ಉತ್ತಮ ಕೆಲಸಗಳು ಉಳಿದವರಿಗೆ ಯಾವರೀತಿ ಪ್ರೇರಣೆಯಾಗುತ್ತದೆ ಎಂದು ನೋಡಿ ನನಗೆ ಬಹಳ ಆನಂದವಾಯಿತು. ಇದರಿಂದ ಅವರು ತಮ್ಮ ಕೌಶಲ್ಯದಿಂದ ದೇಶ ಮತ್ತು ಸಮಾಜಕ್ಕೆ ಏನನ್ನಾದರೂ ಒಳಿತನ್ನು ಮಾಡುವ ಪ್ರಯತ್ನ ಮಾಡುತ್ತಾರೆ. ಇದೇ ತಾನೇ ದೇಶದ ಪ್ರಗತಿಯಲ್ಲಿ ಹೊಸ ಶಕ್ತಿ ತುಂಬುತ್ತಿರುವ ನಮ್ಮ ಭಾರತೀಯರ ಸಾಮೂಹಿಕ ಸಾಮರ್ಥ್ಯ. 

ನನ್ನ ಪ್ರೀತಿಯ ದೇಶವಾಸಿಗಳೇ, ಈ ಬಾರಿಯ ಮನ್ ಕಿ ಬಾತ್ ಅನ್ನು ಇಲ್ಲಿಗೆ ನಿಲ್ಲಿಸುತ್ತಿದ್ದೇನೆ. ಮುಂದಿನ ಬಾರಿ, ಹೊಸ ವಿಷಯಗಳೊಂದಿಗೆ ನಿಮ್ಮನ್ನು ಮತ್ತೆ ಭೇಟಿಯಾಗುತ್ತೇನೆ. ಮಳೆಗಾಲದ ಸಮಯವಾದ್ದರಿಂದ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸಮತೋಲಿತ ಆಹಾರ ಸೇವಿಸಿ ಮತ್ತು ಆರೋಗ್ಯದಿಂದಿರಿ. ಅಂದಹಾಗೆ ಖಂಡಿತವಾಗಿಯೂ ಯೋಗ ಮಾಡಿ. ಅನೇಕ ಶಾಲೆಗಳಲ್ಲಿ ಈಗ ಬೇಸಿಗೆ ರಜ ಮುಗಿಯುತ್ತಾ ಬಂದಿದೆ. ಶಾಲೆಯಲ್ಲಿ ನೀಡಿರುವ ಹೋಂವರ್ಕ್ ಅನ್ನು ಕೊನೆಯ ದಿನದವರೆಗೆ ಬಾಕಿ ಉಳಿಸಿಕೊಳ್ಳಬೇಡಿ, ಕೆಲಸ ಮುಗಿಸಿ ಮತ್ತು ನಿಶ್ಚಿಂತರಾಗಿರಿ ಎಂದು ನಾನು ವಿದ್ಯಾರ್ಥಿಗಳಿಗೆ ಹೇಳುತ್ತೇನೆ. ಅನೇಕಾನೇಕ ಧನ್ಯವಾದ.

 

*****

 



(Release ID: 1933282) Visitor Counter : 191