ಪ್ರಧಾನ ಮಂತ್ರಿಯವರ ಕಛೇರಿ

ಲಕ್ಷದ್ವೀಪದಲ್ಲಿ “ಪೌಷ್ಟಿಕ ಉದ್ಯಾನ ಯೋಜನೆ” ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಮಂತ್ರಿ

Posted On: 10 JUN 2023 8:15PM by PIB Bengaluru

ಲಕ್ಷದ್ವೀಪದಲ್ಲಿ “ಪೌಷ್ಟಿಕ ಉದ್ಯಾನ ಯೋಜನೆ”ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲಕ್ಷದ್ವೀಪದ ಜನ ಹೊಸ ವಿಷಯಗಳನ್ನು ಕಲಿಯಲು ಮತ್ತು ಅಳವಡಿಸಿಕೊಳ್ಳಲು ಎಷ್ಟೊಂದು ಕಾತುರರಾಗಿದ್ದಾರೆ ಎಂಬುದನ್ನು ಈ ಉಪಕ್ರಮ ನಿರೂಪಿಸಿದೆ ಎಂದು ‍ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.  

ಸ್ವಾವಲಂಬಿ ಭಾರತ ನಿರ್ಮಾಣ ಮಾಡುವ ದ್ಯೇಯದೊಂದಿಗೆ ಈ ಯೋಜನೆಯನ್ನು ಜಾರಿ ಮಾಡಿದ್ದು, ಇದರ ಪರಿಣಾಮ 1000 ರೈತರಿಗೆ ತರಕಾರಿ ಬೀಜಗಳನ್ನು ಒದಗಿಸಲಾಗಿದೆ.  

ಇದಲ್ಲದೇ ʼಮನೆಯ ಹಿತ್ತಲ ಕೋಳಿʼ ಯೋಜನೆಯಡಿ 600 ರೂಪಾಯಿಗೂ ಕಡಿಮೆ ಆದಾಯ ಹೊಂದಿರುವ ಲಕ್ಷದ್ವೀಪದ 7000 ಮಹಿಳೆಯರಿಗೆ ಕೋಳಿ ತಳಿಗಳನ್ನು ವಿತರಿಸಲಾಗಿದೆ.

ಈ ಕುರಿತು ಲಕ್ಷದ್ವೀಪದ ರಾಜ್ಯಪಾಲರು ಮಾಡಿರುವ ಟ್ವೀಟ್‌ ಗೆ ಪ್ರಧಾನಮಂತ್ರಿಯವರು ಪ್ರತಿಕ್ರಿಯೆ ನೀಡಿದ್ದಾರೆ.

 

***



(Release ID: 1931648) Visitor Counter : 129