ಪ್ರಧಾನ ಮಂತ್ರಿಯವರ ಕಛೇರಿ
ಲಕ್ಷದ್ವೀಪದಲ್ಲಿ “ಪೌಷ್ಟಿಕ ಉದ್ಯಾನ ಯೋಜನೆ” ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಮಂತ್ರಿ
Posted On:
10 JUN 2023 8:15PM by PIB Bengaluru
ಲಕ್ಷದ್ವೀಪದಲ್ಲಿ “ಪೌಷ್ಟಿಕ ಉದ್ಯಾನ ಯೋಜನೆ”ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲಕ್ಷದ್ವೀಪದ ಜನ ಹೊಸ ವಿಷಯಗಳನ್ನು ಕಲಿಯಲು ಮತ್ತು ಅಳವಡಿಸಿಕೊಳ್ಳಲು ಎಷ್ಟೊಂದು ಕಾತುರರಾಗಿದ್ದಾರೆ ಎಂಬುದನ್ನು ಈ ಉಪಕ್ರಮ ನಿರೂಪಿಸಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.
ಸ್ವಾವಲಂಬಿ ಭಾರತ ನಿರ್ಮಾಣ ಮಾಡುವ ದ್ಯೇಯದೊಂದಿಗೆ ಈ ಯೋಜನೆಯನ್ನು ಜಾರಿ ಮಾಡಿದ್ದು, ಇದರ ಪರಿಣಾಮ 1000 ರೈತರಿಗೆ ತರಕಾರಿ ಬೀಜಗಳನ್ನು ಒದಗಿಸಲಾಗಿದೆ.
ಇದಲ್ಲದೇ ʼಮನೆಯ ಹಿತ್ತಲ ಕೋಳಿʼ ಯೋಜನೆಯಡಿ 600 ರೂಪಾಯಿಗೂ ಕಡಿಮೆ ಆದಾಯ ಹೊಂದಿರುವ ಲಕ್ಷದ್ವೀಪದ 7000 ಮಹಿಳೆಯರಿಗೆ ಕೋಳಿ ತಳಿಗಳನ್ನು ವಿತರಿಸಲಾಗಿದೆ.
ಈ ಕುರಿತು ಲಕ್ಷದ್ವೀಪದ ರಾಜ್ಯಪಾಲರು ಮಾಡಿರುವ ಟ್ವೀಟ್ ಗೆ ಪ್ರಧಾನಮಂತ್ರಿಯವರು ಪ್ರತಿಕ್ರಿಯೆ ನೀಡಿದ್ದಾರೆ.
***
(Release ID: 1931648)
Visitor Counter : 129
Read this release in:
English
,
Urdu
,
Hindi
,
Marathi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam