ಕೃಷಿ ಸಚಿವಾಲಯ

ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿ ಸಹಕಾರಕ್ಕಾಗಿ ಭಾರತ ಮತ್ತು ಚಿಲಿ ನಡುವೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲು ಸಚಿವ ಸಂಪುಟ ಅನುಮೋದನೆ

Posted On: 15 FEB 2023 3:53PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು, ಕೃಷಿ ಮತ್ತು ಸಂಬಂಧಿತ ವಲಯಗಳ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತ ಮತ್ತು ಚಿಲಿ ಸರ್ಕಾರದ ನಡುವೆ ತಿಳುವಳಿಕೆ ಒಪ್ಪಂದಕ್ಕೆ(ಎಂಒಯು) ಸಹಿ ಹಾಕಲು ಅನುಮೋದನೆ ನೀಡಿದೆ.

ತಿಳುವಳಿಕೆ ಒಪ್ಪಂದವು ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಸಹಕಾರವನ್ನು ಒದಗಿಸುತ್ತದೆ. ಆಧುನಿಕ ಕೃಷಿಯ ಅಭಿವೃದ್ಧಿಗಾಗಿ ಕೃಷಿ ನೀತಿಗಳು, ಸಾವಯವ ಉತ್ಪನ್ನಗಳ ದ್ವಿಪಕ್ಷೀಯ ವ್ಯಾಪಾರಕ್ಕೆ ಅನುಕೂಲವಾಗುವಂತೆ ಸಾವಯವ ಕೃಷಿ, ಹಾಗೆಯೇ ಎರಡೂ ದೇಶಗಳಲ್ಲಿ ಸಾವಯವ ಉತ್ಪಾದನೆಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿರುವ ನೀತಿಗಳ ವಿನಿಮಯವನ್ನು ಉತ್ತೇಜಿಸುವುದು, ಪಾಲುದಾರಿಕೆಯನ್ನು ಅನ್ವೇಷಿಸಲು ವಿಜ್ಞಾನ ಮತ್ತು ನಾವೀನ್ಯತೆಗಳನ್ನು ಕಲ್ಪಿಸುವ ಸಹಕಾರದ ಮುಖ್ಯ ಕ್ಷೇತ್ರಗಳಾಗಿವೆ. ಭಾರತೀಯ ಸಂಸ್ಥೆಗಳು ಮತ್ತು ಚಿಲಿಯ ಸಂಸ್ಥೆಗಳು ಕೃಷಿ ವಲಯದಲ್ಲಿ ನಾವೀನ್ಯತೆಯನ್ನು ಉತ್ತೇಜಿಸುವುದು ಮತ್ತು ಸಾಮಾನ್ಯ ಸವಾಲುಗಳನ್ನು ಎದುರಿಸಲು ಸಹಕರಿಸುವುದು.

ಒಪ್ಪಂದದ ಅಡಿಯಲ್ಲಿ, ಚಿಲಿ-ಇಂಡಿಯಾ ಕೃಷಿ ಕಾರ್ಯ ಗುಂಪನ್ನು ರಚಿಸಲಾಗುವುದು, ಇದು ಈ ಎಂಒಯು ಅನುಷ್ಠಾನದ ಮೇಲ್ವಿಚಾರಣೆ, ಪರಿಶೀಲನೆ ಮತ್ತು ಮೌಲ್ಯಮಾಪನ ಮತ್ತು ಕಾಲಕಾಲಕ್ಕೆ ಸಂವಹನ ಮತ್ತು ಸಮನ್ವಯವನ್ನು ಸ್ಥಾಪಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ.

 ಚಿಲಿ ಮತ್ತು ಭಾರತದಲ್ಲಿ ಪರ್ಯಾಯವಾಗಿ ವರ್ಷಕ್ಕೊಮ್ಮೆ ಕೃಷಿ ಕಾರ್ಯ ಗುಂಪಿನ ಸಭೆಗಳು ನಡೆಯುತ್ತವೆ. ತಿಳಿವಳಿಕೆ ಒಪ್ಪಂದವು ಅದರ ಸಹಿಯ ಮೇಲೆ ಜಾರಿಗೆ ಬರುತ್ತದೆ ಮತ್ತು ಜಾರಿಗೆ ಬಂದ  ದಿನಾಂಕದಿಂದ ಐದು ವರ್ಷಗಳ ಅವಧಿಗೆ ಜಾರಿಯಲ್ಲಿರುತ್ತದೆ ಮತ್ತು ನಂತರ ಅದನ್ನು ಸ್ವಯಂಚಾಲಿತವಾಗಿ 5 ವರ್ಷಗಳ ಅವಧಿಗೆ ನವೀಕರಿಸಲಾಗುತ್ತದೆ.


*****



(Release ID: 1899559) Visitor Counter : 119