ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
ಸುಸ್ಥಿರ ಮತ್ತು ನಾವೀನ್ಯ- ಪ್ರೇರಿತ ನಗರಾಭಿವೃದ್ಧಿಯ ಧನಾತ್ಮಕ ಪರಿಣಾಮಗಳ ಪ್ರದರ್ಶನ
2022ರ ಅಕ್ಟೋಬರ್ 3ರಿಂದ ಅಕ್ಟೋಬರ್ 6ರವರೆಗೆ ‘ನಾಳೆಯ ನಗರಗಳು’ – ಛಾಯಾಚಿತ್ರ ಪ್ರದರ್ಶನದ ಆಯೋಜನೆ
Posted On:
03 OCT 2022 4:56PM by PIB Bengaluru
ಸಿ.ಐ.ಟಿ.ಐ.ಐ.ಎಸ್. ಕಾರ್ಯಕ್ರಮದ ಅಡಿಯಲ್ಲಿ ನಗರ ವ್ಯವಹಾರಗಳ ಕುರಿತ ರಾಷ್ಟ್ರೀಯ ಸಂಸ್ಥೆ (ಎನ್.ಐ.ಯು.ಎ.) ಭಾರತದಲ್ಲಿ ಸುಸ್ಥಿರ ಮತ್ತು ನಾವೀನ್ಯ- ಪ್ರೇರಿತ ನಗರಾಭಿವೃದ್ಧಿಯ ಸಕಾರಾತ್ಮಕ ಪರಿಣಾಮಗಳನ್ನು ಬಿಂಬಿಸುವ ಉದ್ದೇಶದಿಂದ ಜನಸಾಮಾನ್ಯನ ಕ್ಯಾಮರಾ ಕಣ್ಣಲ್ಲಿ "ನಾಳೆಯ ನಗರಗಳು" ಎಂಬ ಶೀರ್ಷಿಕೆಯ ಛಾಯಾಚಿತ್ರ ಪ್ರದರ್ಶನವನ್ನು ಆಯೋಜಿಸಿದ್ದು, ಈ ಪ್ರದರ್ಶನವು "ನಾಳೆಯ ನಗರಗಳು" ಛಾಯಾಗ್ರಹಣ ಸ್ಪರ್ಧೆಯ ನಿರ್ಣಾಯಕ ಹಂತವಾಗಿದೆ. ಇದನ್ನು ಸಿ.ಐ.ಟಿ.ಐ.ಐ.ಎಸ್. ಯೋಜನೆಗಳು ಇರುವ 12 ಸ್ಮಾರ್ಟ್ ನಗರಗಳಲ್ಲಿ ನಡೆಸಲಾಯಿತು.
ಸಿ.ಐ.ಟಿ.ಐ.ಐ.ಎಸ್. (ನಗರಗಳ ಹೂಡಿಕೆಯಿಂದ ನಾವೀನ್ಯ, ಏಕೀಕರಣ ಮತ್ತು ಸುಸ್ಥಿರತೆ) ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (ಎಂ.ಓ.ಎಚ್.ಯು.ಎ.), ಫ್ರೆಂಚ್ ಅಭಿವೃದ್ಧಿ ಸಂಸ್ಥೆ (ಎ.ಎಫ್.ಡಿ.), ಐರೋಪ್ಯ ಒಕ್ಕೂಟ (ಇ.ಯು.), ಮತ್ತು ನಗರ ವ್ಯವಹಾರಗಳ ರಾಷ್ಟ್ರೀಯ ಸಂಸ್ಥೆ (ಎನ್.ಐ.ಯು.ಎ) ಯ ಜಂಟಿ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವು ಭಾರತದಾದ್ಯಂತ 12 ನಗರಗಳಿಗೆ ನೆರವಾಗುತ್ತಿದೆ - ಸ್ಪರ್ಧಾತ್ಮಕ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗಿದೆ - ನಾವೀನ್ಯ ಮತ್ತು ಸುಸ್ಥಿರ ನಗರ ಮೂಲಸೌಕರ್ಯ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಕಾರ್ಯಗತಗೊಳಿಸಲು. ಅಗರ್ತಲ, ಅಮರಾವತಿ, ಅಮೃತಸರ, ಭುವನೇಶ್ವರ, ಚೆನ್ನೈ, ಡೆಹ್ರಾಡೂನ್, ಹುಬ್ಬಳ್ಳಿ-ಧಾರವಾಡ, ಕೊಚ್ಚಿ, ಪುದುಚೇರಿ, ಸೂರತ್, ಉಜ್ಜಯಿನಿ ಮತ್ತು ವಿಶಾಖಪಟ್ಟಣಂ ಈ ನಗರಗಳಿಂದ ಸ್ಪರ್ಧೆಗೆ ಪ್ರವೇಶಗಳನ್ನು ಆಹ್ವಾನಿಸಲಾಗಿತ್ತು.
"ನಾಳೆಯ ನಗರಗಳು" ಸ್ಪರ್ಧೆಯಲ್ಲಿ ಭಾಗವಹಿಸಿದವರು ಸಿ.ಐ.ಟಿ.ಐ.ಐ.ಎಸ್.ನ ಕೇಂದ್ರೀಕೃತ ಪ್ರದೇಶಗಳಿಗೆ ಅನುಗುಣವಾದ ವಿಷಯಗಳ ಆಧಾರದ ಮೇಲೆ ಅಂದರೆ, ಸುಸ್ಥಿರ ಚಲನಶೀಲತೆ, ಸಾರ್ವಜನಿಕ ಮುಕ್ತ ಸ್ಥಳಗಳು, ಇ-ಆಡಳಿತ ಮತ್ತು ಐ.ಸಿ.ಟಿ., ಹಾಗೂ ಸಾಮಾಜಿಕ ಮತ್ತು ಸಾಂಸ್ಥಿಕ ಆವಿಷ್ಕಾರಗಳು ಕಡಿಮೆ- ಆದಾಯ ವಸತಿ ಪ್ರದೇಶಗಳನ್ನು ವ್ಯಾಖ್ಯಾನಿಸಲು ಛಾಯಾಚಿತ್ರಗಳನ್ನು ತೆಗೆಯಬೇಕಾಗಿತ್ತು. 400ಕ್ಕೂ ಹೆಚ್ಚು ಪ್ರವೇಶಗಳು ಇದಕ್ಕೆ ಬಂದಿದ್ದವು. ಖ್ಯಾತ ಛಾಯಾಗ್ರಾಹಕರಾದ ಶ್ರೀ ರಘು ರೈ, ಶ್ರೀಮತಿ ಕೇತಕಿ ಶೇಠ್ ಮತ್ತು ಶ್ರೀ ಸೌನಕ್ ಬ್ಯಾನರ್ಜಿ ಅವರನ್ನು ಒಳಗೊಂಡ ತೀರ್ಪುಗಾರರ ತಂಡವು ವಿಜೇತರನ್ನು ಆಯ್ಕೆ ಮಾಡಿದೆ.
ಅಕ್ಟೋಬರ್ 3 ರಂದು ಪ್ರದರ್ಶನದ ಉದ್ಘಾಟನೆ ಸಮಾರಂಭದಲ್ಲಿ ಭಾರತ ಮತ್ತು ಭೂತಾನ್ ರಾಷ್ಟ್ರಗಳ ಐರೋಪ್ಯ ಒಕ್ಕೂಟದ ರಾಯಭಾರಿ ಘನತೆವೆತ್ತ ಶ್ರೀ ಉಗೊ ಅಸ್ಟುಟೊ, ಭಾರತದಲ್ಲಿನ ಫ್ರೆಂಚ್ ರಾಯಭಾರ ಕಚೇರಿಯ ಉಪ ಮುಖ್ಯಸ್ಥರಾದ ಶ್ರೀ ಡೇಮಿಯನ್ ಸೈಯದ್, ಭಾರತದಲ್ಲಿ ಎ.ಎಫ್.ಡಿ.ಯ ರಾಷ್ಟ್ರ ನಿರ್ದೇಶಕ ಶ್ರೀ ಬ್ರೂನೋ ಬೋಸ್ಲೆ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಮತ್ತು ಅಭಿಯಾನದ ನಿರ್ದೇಶಕ (ಸ್ಮಾರ್ಟ್ ನಗರಗಳ ಅಭಿಯಾನ) ಶ್ರೀ ಕುನಾಲ್ ಕುಮಾರ್, ಎನ್.ಐ.ಯು.ಎ.ನಿರ್ದೇಶಕ ಶ್ರೀ ಹಿತೇಶ್ ವೈದ್ಯ, ಮತ್ತು ಹೆಸರಾಂತ ಛಾಯಾಗ್ರಾಹಕ ಮತ್ತು ಸ್ಪರ್ಧೆಯ ತೀರ್ಪುಗಾರ ಮಂಡಳಿ ಅಧ್ಯಕ್ಷ ಶ್ರೀ ರಘು ರೈ ಉಪಸ್ಥಿತರಿದ್ದರು. ಸ್ಪರ್ಧೆಯ ವಿಜೇತರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು, ನಂತರ ವಸ್ತುಪ್ರದರ್ಶನದ ವೀಕ್ಷಣೆಯೂ ಇರಲಿದೆ.
ವಿಜೇತ ಛಾಯಾಚಿತ್ರಗಳು ಮತ್ತು ಇತರ ಅತ್ಯುತ್ತಮ ಪ್ರವೇಶಗಳ ಸಂಯೋಜಿತ ಆಯ್ಕೆಗಳನ್ನು 3ನೇ ಅಕ್ಟೋಬರ್ನಿಂದ 6ನೇ ಅಕ್ಟೋಬರ್, 2022 ರವರೆಗೆ ನವದೆಹಲಿಯ ಇಂಡಿಯನ್ ಹ್ಯಾಬಿಟಾಟ್ ಸೆಂಟರ್ ನಲ್ಲಿ ಪ್ರದರ್ಶಿಸಲಾಗಿದೆ.
***
(Release ID: 1865124)