ಪ್ರಧಾನ ಮಂತ್ರಿಯವರ ಕಛೇರಿ

ಗುಜರಾತ್‌ ಮೊರ್ಬಿಯಲ್ಲಿ108 ಅಡಿ ಹನುಮಾನ್‌ ಜಿ ಪ್ರತಿಮೆಯನ್ನು ಅನಾವರಣಗೊಳಿಸುವ ಸಂದರ್ಭದಲ್ಲಿ ಪ್ರಧಾನಮಂತ್ರಿಯ ಭಾಷಣದ ಕನ್ನಡ ಅವತರಣಿಕೆ

Posted On: 16 APR 2022 2:46PM by PIB Bengaluru

ನಮಸ್ಕಾರ!

 
ಮಹಾಮಂಡಲೇಶ್ವರ ಕನಕೇಶ್ವರಿ ದೇವಿ ಜೀ ಮತ್ತು ರಾಮ ಕಥಾ ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ಗಣ್ಯರು, ಗುಜರಾತ್‌ನ ಈ ಯಾತ್ರಾ ಕೇಂದ್ರದಲ್ಲಿ ಉಪಸ್ಥಿತರಿರುವ ಎಲ್ಲಾ ಸಂತರು ಮತ್ತು ಋುಷಿಗಳು, ಎಚ್‌ಸಿ ನಂದಾ ಟ್ರಸ್ಟ್‌ನ ಸದಸ್ಯರು, ಇತರ ವಿದ್ವಾಂಸರು ಮತ್ತು ಭಕ್ತರು, ಮಹಿಳೆಯರು ಮತ್ತು ಸಜ್ಜನರೇ! ಹನುಮ ಜಯಂತಿಯ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಮತ್ತು ಸಮಸ್ತ ದೇಶವಾಸಿಗಳಿಗೂ ನನ್ನ ಶುಭಾಶಯಗಳು! ಈ ಶುಭ ಸಂದರ್ಭದಲ್ಲಿ ಇಂದು ಮೊರ್ಬಿಯಲ್ಲಿ ಈ ಭವ್ಯವಾದ ಹನುಮಾನ್‌ ಮೂರ್ತಿಯನ್ನು ಅನಾವರಣಗೊಳಿಸಲಾಗಿದೆ. ದೇಶ ಮತ್ತು ಪ್ರಪಂಚದಾದ್ಯಂತದ ಹನುಮಾನ್‌ ಜಿ ಮತ್ತು ರಾಮ್‌ ಜಿ ಭಕ್ತರು ಈ ಘಟನೆಯನ್ನು ಆನಂದಿಸುತ್ತಿದ್ದಾರೆ. ನಿಮ್ಮೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು!

ಸ್ನೇಹಿತರೇ,
ರಾಮಚರಿತಮಾನಸದಲ್ಲಿಹೀಗೆ ಹೇಳಲಾಗಿದೆ - ಬಿನು ಹರಿಕೃಪಾ ಮಿಲಹಿಂ ನಹೀಂ ಸಂತ,

ಅಂದರೆ ದೇವರ ಕೃಪೆಯಿಲ್ಲದೆ ಸಾಧು ಸಂತರ ದರ್ಶನ ದುರ್ಲಭ. ಅದೃಷ್ಟವಶಾತ್‌ ಕಳೆದ ಕೆಲವು ದಿನಗಳಲ್ಲಿ, ಮಾ ಅಂಬಾಜಿ, ಉಮಿಯಾ ಮಾತಾ ಧಾಮ್‌ ಮತ್ತು ಮಾ ಅನ್ನಪೂರ್ಣ ಧಾಮ್‌ ಅವರ ಆಶೀರ್ವಾದವನ್ನು ಪಡೆಯುವ ಅವಕಾಶ ನನಗೆ ಸಿಕ್ಕಿದೆ. ಮತ್ತು ಇಂದು ನಾನು ಸಂತರ ಸಭೆಯ ಭಾಗವಾಗಲು ಮತ್ತು ಮೋರ್ಬಿಯ ಹನುಮಂಜಿಗೆ ಸಂಬಂಧಿಸಿದ ಈ ಕಾರ್ಯಕ್ರಮದೊಂದಿಗೆ ಸಂಬಂಧ ಹೊಂದಲು ಅವಕಾಶವನ್ನು ಪಡೆದುಕೊಂಡಿದ್ದೇನೆ.

ಸಹೋದರ ಸಹೋದರಿಯರೇ,

ದೇಶದ 4 ವಿವಿಧ ಭಾಗಗಳಲ್ಲಿಇಂತಹ 108 ಅಡಿ ಎತ್ತರದ ಹನುಮಾನ್‌ ಜೀ ಪ್ರತಿಮೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ನನಗೆ ತಿಳಿಸಲಾಗಿದೆ. ಶಿಮ್ಲಾದಲ್ಲಿ ಇಂತಹ ಭವ್ಯವಾದ ಪ್ರತಿಮೆಯನ್ನು ಹಲವಾರು ವರ್ಷಗಳಿಂದ ನೋಡುತ್ತಿದ್ದೇವೆ. ಇಂದು, ಈ ಎರಡನೇ ಪ್ರತಿಮೆಯನ್ನು ಮೊರ್ಬಿಯಲ್ಲಿ ಅನಾವರಣಗೊಳಿಸಲಾಗಿದೆ. ದಕ್ಷಿಣದ ರಾಮೇಶ್ವರಂ ಮತ್ತು ಪಶ್ಚಿಮ ಬಂಗಾಳದಲ್ಲಿ ಮತ್ತೆರಡು ಪ್ರತಿಮೆಗಳನ್ನು ಸ್ಥಾಪಿಸುವ ಕೆಲಸ ನಡೆಯುತ್ತಿದೆ ಎಂದು ನನಗೆ ತಿಳಿಸಲಾಗಿದೆ.

ಸ್ನೇಹಿತರೇ,
ಇದು ಹನುಮಾನ್‌ ಜೀ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ನಿರ್ಣಯ ಮಾತ್ರವಲ್ಲ, ‘ಏಕ ಭಾರತ ಶ್ರೇಷ್ಠ ಭಾರತ’ದ ಸಂಕಲ್ಪದ ಭಾಗವೂ ಆಗಿದೆ. ಹನುಮಾನ್‌ ಜಿ ಎಲ್ಲರನ್ನು ಭಕ್ತಿ ಮತ್ತು ಸೇವೆಯೊಂದಿಗೆ ಬೆಸೆಯುತ್ತಾನೆ. ಪ್ರತಿಯೊಬ್ಬರೂ ಹನುಮಾನ್‌ ಜಿಯಿಂದ ಸ್ಫೂರ್ತಿ ಪಡೆಯುತ್ತಾರೆ. ಹನುಮಾನ್‌ ಜೀ ಎಲ್ಲಾ ವನವಾಸಿಗಳಿಗೆ ಸಮಾನ ಹಕ್ಕು ಮತ್ತು ಗೌರವವನ್ನು ನೀಡಿದ ಶಕ್ತಿ ಮತ್ತು ಶಕ್ತಿಯ ದ್ಯೋತಕ. ಅದಕ್ಕಾಗಿಯೇ ಹನುಮಾನ್‌ ಜಿಗೂ  ‘ಏಕ್‌ ಭಾರತ್‌, ಶ್ರೇಷ್ಠ ಭಾರತ’ ಕ್ಕೂ ಪ್ರಮುಖ ಸಂಬಂಧವಿದೆ.
ಸಹೋದರ ಸಹೋದರಿಯರೇ,
ಅದೇ ರೀತಿ ದೇಶದ ವಿವಿಧ ಭಾಗಗಳಲ್ಲಿ ರಾಮ್‌ ಕಥಾ ಕೂಡ ಆಗಾಗ ಆಯೋಜಿಸಲಾಗುತ್ತಿದೆ. ಭಾಷೆ ಅಥವಾ ಆಡುಭಾಷೆ ಯಾವುದೇ ಆಗಿರಲಿ. ಆದರೆ ರಾಮಕಥೆಯ ಚೈತನ್ಯವು ಎಲ್ಲರನ್ನೂ ಒಂದುಗೂಡಿಸುತ್ತದೆ ಮತ್ತು ಒಬ್ಬರನ್ನು ದೇವರ ಭಕ್ತಿಯೊಂದಿಗೆ ಸಂಪರ್ಕಿಸುತ್ತದೆ. ಇದು ಭಾರತೀಯ ನಂಬಿಕೆಗಳು, ಆಧ್ಯಾತ್ಮಿಕತೆ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಶಕ್ತಿ. ಇದು ವಿವಿಧ ವಿಭಾಗಗಳು ಮತ್ತು ವರ್ಗಗಳನ್ನು ಒಂದುಗೂಡಿಸಿತು ಮತ್ತು ವಸಾಹತುಶಾಹಿಯ ಕಷ್ಟದ ಸಮಯದಲ್ಲಿಯೂ ಸಹ ಸ್ವಾತಂತ್ರ್ಯದ ರಾಷ್ಟ್ರೀಯ ಸಂಕಲ್ಪದ ಕಡೆಗೆ ಸಂಘಟಿತ ಪ್ರಯತ್ನಗಳನ್ನು ಬಲಪಡಿಸಿತು. ಸಾವಿರಾರು ವರ್ಷಗಳಿಂದ ಬದಲಾಗುತ್ತಿರುವ ಪರಿಸ್ಥಿತಿಗಳ ಹೊರತಾಗಿಯೂ, ನಮ್ಮ ನಾಗರಿಕತೆ ಮತ್ತು ಸಂಸ್ಕೃತಿಯು ಭಾರತವನ್ನು ಬಲಿಷ್ಠವಾಗಿ ಮತ್ತು ದೃಢವಾಗಿ ಇರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.

ಸಹೋದರ ಸಹೋದರಿಯರೇ,

ನಮ್ಮ ಭಕ್ತಿ ಮತ್ತು ನಮ್ಮ ಸಂಸ್ಕೃತಿಯ ಹರಿವು ಸಾಮರಸ್ಯ, ಸಮಚಿತ್ತತೆ ಮತ್ತು ಒಳಗೊಳ್ಳುವಿಕೆಯಿಂದ ಕೂಡಿದೆ. ಆದುದರಿಂದಲೇ ಕೆಡುಕಿನ ಮೇಲೆ ಒಳ್ಳೆಯದನ್ನು ಸ್ಥಾಪಿಸುವ ಭಗವಾನ್‌ ರಾಮನು ಸಮರ್ಥನಾಗಿದ್ದರೂ, ತಾನಾಗಿಯೇ ಎಲ್ಲವನ್ನೂ ಮಾಡುವ ಸಾಮರ್ಥ್ಯ‌ವನ್ನು ಹೊಂದಿದ್ದರೂ, ಎಲ್ಲರನ್ನು ಒಂದುಗೂಡಿಸಲು ಮತ್ತು ಸಮಾಜದ ಪ್ರತಿಯೊಂದು ವರ್ಗದ ಜನರನ್ನು ಸಂಪರ್ಕಿಸಲು ನಿರ್ಧರಿಸಿದನು. ಅವರ ಸಹಾಯವನ್ನು ಕೋರುವ ಮೂಲಕ ಮತ್ತು ಎಲ್ಲರನ್ನು ಮತ್ತು ಎಲ್ಲಾ ಗಾತ್ರದ ಜೀವಿಗಳನ್ನು ಒಳಗೊಳ್ಳುವ ಮೂಲಕ ಅವರು ಈ ಕಾರ್ಯವನ್ನು ಸಾಧಿಸಿದರು. ಮತ್ತು ಇದು ನಿಖರವಾಗಿ ‘ಸಬ್ ಕಾ ಸಾಥ್ ಸಬ್ ಕಾ ಪ್ರಯಾಸ್‌’ ಆಗಿದೆ. ‘ಸಬ್ ಕಾ ಸಾಥ್ ಸಬ್ ಕಾ ಪ್ರಯಾಸ್‌’ ನ ಅತ್ಯುತ್ತಮ ಉದಾಹರಣೆಯೆಂದರೆ ಭಗವಾನ್‌ ರಾಮನ ಜೀವನ ಮತ್ತು ಹನುಮಾನ್‌ ಜಿ ಅದಕ್ಕೆ ಬಹಳ ಮುಖ್ಯವಾದ ಕೊಂಡಿಯಾಗಿದ್ದಾನೆ. ಸಬ್ ಕಾ ಪ್ರಯಾಸ್‌ನ ಈ ಮನೋಭಾವದಿಂದ ನಾವು ‘ಆಜಾದಿ ಕಾ ಅಮೃತಕಲ್‌’ ಅನ್ನು ಬೆಳಗಿಸುವುದಲ್ಲದೆ, ರಾಷ್ಟ್ರೀಯ ಸಂಕಲ್ಪಗಳ ಸಾಧನೆಯಲ್ಲಿ ತೊಡಗಬೇಕಾಗಿದೆ.
ಮತ್ತು ಇಂದು ಮೋರ್ಬಿಯಲ್ಲಿರುವ ಕೇಶವಾನಂದ ಬಾಪೂಜಿಯವರ ಜಮೀನಿನಲ್ಲಿ ನಿಮ್ಮೆಲ್ಲರೊಂದಿಗೆ ಸಂವಾದ ನಡೆಸುವ ಅವಕಾಶ ನನಗೆ ಸಿಕ್ಕಿದೆ. ಸೌರಾಷ್ಟ್ರದಲ್ಲಿರುವ ನಾವು ಸೌರಾಷ್ಟ್ರದ ಈ ಭೂಮಿ ಸಂತರ ಮತ್ತು ಔದಾರ್ಯದ ನಾಡು ಎಂದು ದಿನಕ್ಕೆ ಸುಮಾರು 25 ಬಾರಿ ಕೇಳಿರಬೇಕು. ಕಥಿಯವಾಡ, ಗುಜರಾತ್‌ ಮತ್ತು ಇಡೀ ಭಾರತ ತನ್ನದೇ ಆದ ಗುರುತನ್ನು ಹೊಂದಿದೆ. ನನಗೆ ಖೋಖ್ರಾ ಹನುಮಾನ್‌ ಧಾಮ್‌ ನನ್ನ ಮನೆ ಇದ್ದಂತೆ. ಅದರೊಂದಿಗಿನ ನನ್ನ ಸಂಬಂಧವು ನನ್ನ ಹೃದಯಕ್ಕೆ ಮತ್ತು ಕರ್ತವ್ಯಕ್ಕೆ ತುಂಬಾ ಹತ್ತಿರವಾಗಿದೆ. ಸೂಧಿರ್ತಿಯ ಸಂಬಂಧವೂ ಇದೆ. ವರ್ಷಗಳ ಹಿಂದೆ ನಾನು ಮೋರ್ಬಿಗೆ ಭೇಟಿ ನೀಡಿದಾಗಲೆಲ್ಲ ಈ ಸ್ಥಳದ ಸುತ್ತಮುತ್ತ ಘಟನೆಗಳು ನಡೆಯುತ್ತಿದ್ದವು. ಸಂಜೆ ನಾನು ಪೂಜ್ಯ ಬಾಪು ಅವರೊಂದಿಗೆ 5-15 ನಿಮಿಷಗಳನ್ನು ಕಳೆಯಲು ಮತ್ತು ಅವರ ಕೈಯಿಂದ ಸ್ವಲ್ಪ ಪ್ರಸಾದವನ್ನು ತೆಗೆದುಕೊಳ್ಳಲು ಹನುಮಾನ್‌ ಧಾಮಕ್ಕೆ ಭೇಟಿ ನೀಡುತ್ತಿದ್ದೆ. ಮಚ್ಚು ಅಣೆಕಟ್ಟು ಅಪಘಾತದ ನಂತರ, ಈ ಹನುಮಾನ್‌ ಧಾಮವು ವಿವಿಧ ಚಟುವಟಿಕೆಗಳ ಕೇಂದ್ರವಾಗಿ ಉಳಿಯಿತು ಮತ್ತು ಅದರಿಂದಾಗಿ ನಾನು ಸ್ವಾಭಾವಿಕವಾಗಿ ಬಾಪು ಅವರೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಂಡೆ. ಆ ದಿನಗಳಲ್ಲಿ ಜನರು ಸೇವಾ ಮನೋಭಾವದಿಂದ ಮುಂದೆ ಬರುತ್ತಿದ್ದಾಗ, ಈ ಎಲ್ಲಾ ಸ್ಥಳಗಳು ಮೋರ್ಬಿಯ ಪ್ರತಿ ಮನೆಗೆ ಸಹಾಯವನ್ನು ಕಳುಹಿಸುವ ಕೇಂದ್ರವಾಗಿ ಮಾರ್ಪಟ್ಟಿವೆ. ಒಬ್ಬ ಸಾಮಾನ್ಯ ಸ್ವಯಂಸೇವಕನಾಗಿದ್ದ ನನಗೆ ನಿಮ್ಮೊಂದಿಗೆ ದೀರ್ಘಕಾಲ ಇರಲು ಮತ್ತು ಆ ಬಿಕ್ಕಟ್ಟಿನಲ್ಲಿ ನಿಮಗಾಗಿ ಏನು ಮಾಡಲಾಗುತ್ತಿದೆ ಎಂಬುದರಲ್ಲಿ ಭಾಗಿಯಾಗಲು ನನಗೆ ಅವಕಾಶವಿದೆ. ಮತ್ತು ಆ ಸಮಯದಲ್ಲಿ, ಪೂಜ್ಯ ಬಾಪು ಅವರೊಂದಿಗೆ ಮಾತನಾಡುವಾಗ, ಅವರು ಮೋರ್ಬಿಯನ್ನು ಅದ್ಧೂರಿಯಾಗಿ ಮಾಡಲು ನಮ್ಮನ್ನು ಪರೀಕ್ಷಿಸುವುದು ದೇವರ ಯೋಜನೆಯಾಗಿದೆ ಎಂದು ಹೇಳಿದರು. ಮತ್ತು ಈಗ ನಾವು ನಿಲ್ಲಿಸಲು ಸಾಧ್ಯವಿಲ್ಲ. ಎಲ್ಲರೂ ತೊಡಗಿಸಿಕೊಳ್ಳಬೇಕು. ಬಾಪು ಕಡಿಮೆ ಪದಗಳ ವ್ಯಕ್ತಿಯಾಗಿದ್ದರು. ಆದರೆ ಅವರು ಆಧ್ಯಾತ್ಮಿಕ ದೃಷ್ಟಿಕೋನದಿಂದ ಸರಳ ಭಾಷೆಯಲ್ಲಿ ತಮ್ಮ ಹೃದಯದಿಂದ ಮಾತನಾಡಬಲ್ಲರು. ಆ ನಂತರವೂ ಅವರನ್ನು ಹಲವಾರು ಬಾರಿ ಭೇಟಿಯಾಗುವ ಸೌಭಾಗ್ಯ ನನ್ನದಾಯಿತು. ಅಂತಹ ಪರಿಸ್ಥಿತಿಯಲ್ಲಿಹೇಗೆ ಕೆಲಸ ಮಾಡಬೇಕು ಎಂಬಂತಹ ಮೋರ್ಬಿ ಅಪಘಾತದಿಂದ ನಾನು ಕಲಿತ ಪಾಠಗಳು ಮತ್ತು ಎಲ್ಲಾ ಅನುಭವಗಳು ಕಚ್‌-ಭುಜ್‌ ಭೂಕಂಪದ ಸಮಯದಲ್ಲಿ ಉಪಯುಕ್ತವಾಗಿವೆ ಎಂದು ನಾನು ಹೇಳುತ್ತೇನೆ. ಅದಕ್ಕಾಗಿಯೇ ನಾನು ಈ ಪುಣ್ಯಭೂಮಿಗೆ ಅತ್ಯಂತ ಋುಣಿಯಾಗಿದ್ದೇನೆ. ಏಕೆಂದರೆ ನನಗೆ ಸೇವೆ ಮಾಡಲು ಅವಕಾಶ ಸಿಕ್ಕಾಗಲೆಲ್ಲಾ ಮೋರ್ಬಿಯ ಜನರು ಯಾವಾಗಲೂ ಅದೇ ಸೇವಾ ಮನೋಭಾವದಿಂದ ಕೆಲಸ ಮಾಡಲು ನನ್ನನ್ನು ಪ್ರೇರೇಪಿಸುತ್ತಾರೆ. ಮತ್ತು ಭೂಕಂಪದ ನಂತರ ಕಚ್‌ನ ಸೌಂದರ್ಯವು ಹೆಚ್ಚಿದಂತೆಯೇ, ಮೋರ್ಬಿ ಕೂಡ ಯಾವುದೇ ವಿಪತ್ತನ್ನು ಅವಕಾಶವನ್ನಾಗಿ ಪರಿವರ್ತಿಸುವ ಗುಜರಾತಿಗಳ ಶಕ್ತಿಯನ್ನು ತೋರಿಸಿದ್ದಾರೆ. ಇಂದು ಪಿಂಗಾಣಿ ಉತ್ಪಾದನೆ, ಟೈಲ್‌ ಮಾಡುವ ಕೆಲಸ, ಗಡಿಯಾರ ತಯಾರಿಕೆಯನ್ನು ನೋಡುವುದು; ಮೊರ್ಬಿ ಕೂಡ ಕೈಗಾರಿಕಾ ಚಟುವಟಿಕೆಯ ಕೇಂದ್ರವಾಗಿದೆ. ಮೊದಲು ಮಚ್ಚು ಅಣೆಕಟ್ಟಿನ ಸುತ್ತ ಇಟ್ಟಿಗೆ ಗೂಡು ಬಿಟ್ಟರೆ ಬೇರೇನೂ ಕಾಣುತ್ತಿರಲಿಲ್ಲ. ಹಿಂದೆ ದೊಡ್ಡ ಚಿಮಣಿಗಳು ಮತ್ತು ಇಟ್ಟಿಗೆ ಗೂಡುಗಳು ಇದ್ದವು. ಆದರೆ ಇಂದು ಮೋರ್ಬಿ ಬಹಳ ಹೆಮ್ಮೆಯಿಂದ ನಿಂತಿದೆ. ಮೊದಲು ನಾನು ಹೇಳುತ್ತಿದ್ದೆ- ಒಂದು ಕಡೆ ಮೊರ್ಬಿ, ಇನ್ನೊಂದು ಕಡೆ ರಾಜ್‌ಕೋಟ್‌ ಮತ್ತು ಮೂರನೆಯದು ಜಾಮ್‌ನಗರ. ಜಾಮ್‌ನಗರದ ಹಿತ್ತಾಳೆ ಉದ್ಯಮ, ರಾಜ್‌ಕೋಟ್‌ನ ಎಂಜಿನಿಯರಿಂಗ್‌ ಉದ್ಯಮ ಮತ್ತು ವಾಚ್‌ ಉದ್ಯಮ ಅಥವಾ ಮೊರ್ಬಿಯ ಸೆರಾಮಿಕ್ಸ್‌ ತ್ರಿಕೋನವನ್ನು ರೂಪಿಸುತ್ತವೆ. ರೂಪುಗೊಂಡ ತ್ರಿಕೋನವು ಒಂದು ರೀತಿಯಲ್ಲಿ ಇಲ್ಲಿ ಹೊಸ ಮಿನಿ ಜಪಾನ್‌ಗೆ ಜನ್ಮ ನೀಡಿದೆ. ಮತ್ತು ಸೌರಾಷ್ಟ್ರದಲ್ಲಿ ಇದೇ ರೀತಿಯ ತ್ರಿಕೋನವನ್ನು ಕಾಣಬಹುದು; ಮತ್ತು ಕಚ್‌ ಕೂಡ ಭಾಗವಹಿಸಿದೆ. ಮೋರ್ಬಿಯಲ್ಲಿ ಮೂಲಸೌಕರ್ಯವು ಅಭಿವೃದ್ಧಿ ಹೊಂದಿದ ರೀತಿಯಲ್ಲಿ, ಅದು ಈಗ ಎಲ್ಲದಕ್ಕೂ ಸಂಪರ್ಕ ಹೊಂದಿದೆ. ಈ ಅರ್ಥದಲ್ಲಿ, ಮೊರ್ಬಿ, ಜಾಮ್‌ನಗರ, ರಾಜ್‌ಕೋಟ್‌ ಮತ್ತು ಕಚ್‌ಗಳು ಸಣ್ಣ ಪ್ರಮಾಣದ ಕೈಗಾರಿಕೆಗಳೊಂದಿಗೆ ಪ್ರಗತಿ ಹೊಂದುತ್ತಿರುವ ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಪ್ರಬಲ ಕೇಂದ್ರಗಳಾಗಿ ಹೊರಹೊಮ್ಮಿವೆ. ಮತ್ತು ಶೀಘ್ರದಲ್ಲೇ ಮೊರ್ಬಿ ದೊಡ್ಡ ನಗರವಾಗಿ ಹೊರಹೊಮ್ಮಲು ಪ್ರಾರಂಭಿಸಿತು ಮತ್ತು ತನ್ನದೇ ಆದ ಛಾಪನ್ನು ಮೂಡಿಸಿದೆ. ಇಂದು ಮೊರ್ಬಿಯ ಉತ್ಪನ್ನಗಳು ಪ್ರಪಂಚದ ಅನೇಕ ದೇಶಗಳನ್ನು ತಲುಪುತ್ತಿವೆ. ಇದರಿಂದಾಗಿ ಮೊರ್ಬಿ ಈಗ ಸಂಪೂರ್ಣವಾಗಿ ವಿಭಿನ್ನವಾದ ಚಿತ್ರಣವನ್ನು ನೀಡುತ್ತಿದೆ. ಈ ಹಿಂದೆ ಈ ನೆಲದ ಸಂತರು, ಮಹಂತರು, ಮಹಾನ್‌ ಚೇತನಗಳು ತಪಸ್ಸು ಮಾಡಿ ನಮಗೆ ದಿಕ್ಕು ತೋರಿಸಿದ್ದುದರ ಫಲ. ಗುಜರಾತ್‌ನಲ್ಲಿ, ಆಧ್ಯಾತ್ಮಿಕತೆಗೆ ಸಂಬಂಧಿಸಿದ ಕೆಲಸಗಳು ನಡೆಯುತ್ತಲೇ ಇರುತ್ತವೆ ಮತ್ತು ದತ್ತಿ ಕಾರ್ಯವನ್ನು ಇಷ್ಟಪಡುವ ಜನರ ಕೊರತೆಯಿಲ್ಲ. ಶುಭ ಅಥವಾ ಕಲ್ಯಾಣಕ್ಕೆ ಸಂಬಂಧಿಸಿದ ಕೆಲಸಗಳು ಇದ್ದಾಗ ಜನರು ಸಾಲುಗಟ್ಟಿ ನಿಲ್ಲುತ್ತಾರೆ ಮತ್ತು ಒಂದು ರೀತಿಯಲ್ಲಿ ಸ್ಪರ್ಧೆ ಇದೆ.  ಅಂತೆಯೇ ಇಂದು ಕಥಿಯವಾಡ ತೀರ್ಥಯಾತ್ರೆಯ ಕೇಂದ್ರವಾಗಿದೆ.
ಪ್ರತಿ ತಿಂಗಳು ಸಾವಿರಾರು ಜನ ಸೇರದ ಜಿಲ್ಲೆ ಇಲ್ಲ. ಅದು ತೀರ್ಥಯಾತ್ರೆಯಾಗಲಿ ಅಥವಾ ಪ್ರವಾಸೋದ್ಯಮವಾಗಲಿ, ಕಥಿಯವಾಡವು ಅದರಲ್ಲಿ ಹೊಸ ಶಕ್ತಿಯನ್ನು ಬೆಳೆಸಿಕೊಂಡಿದೆ. ಕಡಲತೀರವೂ ಘರ್ಜಿಸಲಾರಂಭಿಸಿದೆ. ನಿನ್ನೆ, ಈಶಾನ್ಯ ರಾಜ್ಯಗಳಾದ ಸಿಕ್ಕಿಂ, ತ್ರಿಪುರಾ ಮತ್ತು ಮಣಿಪುರದ ಸಹೋದರರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಅವರೆಲ್ಲರೂ ಕೆಲವು ದಿನಗಳ ಹಿಂದೆ ಗುಜರಾತ್‌ಗೆ ಬಂದಿದ್ದರು ಮತ್ತು ಭಗವಾನ್‌ ಕೃಷ್ಣ ಮತ್ತು ರುಕ್ಮಿಣಿಯರ ಪವಿತ್ರ ಸಂಯೋಗದ ಆಚರಣೆಯ ಭಾಗವಾಗಿದ್ದರು. ಅವರೆಲ್ಲರೂ ಮದುವೆಯಲ್ಲಿ ರುಕ್ಮಿಣಿಯ ಕಡೆಯಿಂದ ಬಂದಿದ್ದರು. ಮತ್ತು ಇದು ಸ್ವತಃ ಅತ್ಯಂತ ಶಕ್ತಿಶಾಲಿ ಘಟನೆಯಾಗಿದೆ. ಶ್ರೀ ಕೃಷ್ಣನ ವಿವಾಹವಾದದ
ಮಾಧವಪುರ ಜಾತ್ರೆಗೆ ಇಡೀ ಈಶಾನ್ಯವೇ ನೆರೆದಿತ್ತು. ಅವರು ಪೂರ್ವ ಮತ್ತು ಪಶ್ಚಿಮಗಳ ಅದ್ಭುತ ಏಕತೆಯ ಉದಾಹರಣೆಯನ್ನು ನೀಡಿದರು. ಮತ್ತು ಇಲ್ಲಿಗೆ ಬಂದಿದ್ದ ಈಶಾನ್ಯದ ಜನರು ತಮ್ಮ ಕರಕುಶಲ ವಸ್ತುಗಳ ಬಂಪರ್‌ ಮಾರಾಟವನ್ನು ಹೊಂದಿದ್ದರು. ಇದು ಈಶಾನ್ಯಕ್ಕೆ ದೊಡ್ಡ ಆದಾಯದ ಹರಿವನ್ನು ಸೃಷ್ಟಿಸಿತು. ಮತ್ತು ಈಗ ಈ ಮಾಧವಪುರ ಜಾತ್ರೆಯು ಗುಜರಾತ್‌ಗಿಂತ ಪೂರ್ವ ಭಾರತದಲ್ಲಿ ಹೆಚ್ಚು ಪ್ರಸಿದ್ಧವಾಗಿದೆ ಎಂದು ನಾನು ಭಾವಿಸುತ್ತೇನೆ. ಹೀಗಾಗಿ ಆರ್ಥಿಕ ಚಟುವಟಿಕೆ ಹೆಚ್ಚುತ್ತದೆ. ರಾನ್‌ ಆಫ್‌ ಕಚ್‌ನಲ್ಲಿ ನಡೆಯುವ ರನ್‌ ಉತ್ಸವದಲ್ಲಿ ಪಾಲ್ಗೊಳ್ಳಲು ಜನರು ಮೋರ್ಬಿ ಮೂಲಕ ಹೋಗಬೇಕು. ಅಂದರೆ, ಮೋರ್ಬಿ ಕೂಡ ಹಬ್ಬದ ಪ್ರಯೋಜನಗಳನ್ನು ಪಡೆಯುತ್ತದೆ. ಮೋರ್ಬಿಯ ಹೆದ್ದಾರಿಯ ಸುತ್ತಲೂ ಹಲವಾರು ಹೋಟೆಲ್‌ಗಳನ್ನು ನಿರ್ಮಿಸಲಾಗಿದೆ. ಕಚ್‌ಗೆ ಭೇಟಿ ನೀಡುವ ಜನರಿಂದ ಮೋರ್ಬಿ ಪ್ರಯೋಜನವನ್ನು ಪಡೆಯುತ್ತದೆ. ಮತ್ತು ಅಭಿವೃದ್ಧಿಯು ತಳಮಟ್ಟಗಳಲ್ಲಿ ನಡೆದಾಗ ಅದು ದೀರ್ಘಾವಧಿಯ ಸಂತೋಷವನ್ನು ತರುತ್ತದೆ. ಇದು ದೀರ್ಘಕಾಲದವರೆಗೆ ವ್ಯವಸ್ಥೆಯ ಭಾಗವಾಗುತ್ತದೆ. ಈಗ ನಾವು ಗಿರ್ನಾರ್‌ನಲ್ಲಿ ರೋಪ್‌-ವೇ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದೇವೆ. ಗಿರ್ನಾರ್‌ಗೆ ಹೋಗಲು ಬಯಸಿದ ಆದರೆ, ಕಷ್ಟಕರವಾದ ಕ್ಲೈಂಬಿಂಗ್‌ನಿಂದ ಹಾಗೆ ಮಾಡಲು ಸಾಧ್ಯವಾಗದ ವೃದ್ಧರು ರೋಪ್‌ ವೇ ಸೌಲಭ್ಯದಿಂದಾಗಿ ಆ ಸ್ಥಳಕ್ಕೆ ಸುಲಭವಾಗಿ ಭೇಟಿ ನೀಡುತ್ತಾರೆ. ಮಕ್ಕಳು ತಮ್ಮ 80-90 ವರ್ಷ ವಯಸ್ಸಿನ ತಾಯಿ ಮತ್ತು ತಂದೆಯನ್ನು ಈಗ ಕರೆತರುತ್ತಾರೆ ಮತ್ತು ವೃದ್ಧರು ಸುಲಭವಾಗಿ ಆಶೀರ್ವಾದ ಪಡೆಯಬಹುದು. ಇದಲ್ಲದೆ, ಇತರ ಅವಕಾಶಗಳನ್ನೂ ಕಲ್ಪಿಸಲಾಗಿದೆ. 
ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತವೆ; ಮತ್ತು ಭಾರತದ ಶಕ್ತಿ ಏನೆಂದರೆ  ನಾವು ಯಾವುದೇ ಸಾಲವನ್ನು ತೆಗೆದುಕೊಳ್ಳದೆಯೇ ಭಾರತದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬಹುದು. ನಾವು ಅದನ್ನು ಸರಿಯಾದ ರೀತಿಯಲ್ಲಿ ಪ್ರಚಾರ ಮಾಡಬಹುದು. ಆದರೆ ಎಲ್ಲದಕ್ಕೂ ಮೊದಲ ಷರತ್ತು - ಎಲ್ಲಾ ಯಾತ್ರಾ ಕೇಂದ್ರಗಳಲ್ಲಿ ಸ್ವಚ್ಛತೆ, ಸ್ವಚ್ಛತೆ ರೂಢಿಸಿಕೊಳ್ಳಲು ಜನರಿಗೆ ತಿಳಿಹೇಳಬೇಕು. ಇಲ್ಲವಾದರೆ, ದೇವಸ್ಥಾನಗಳಲ್ಲಿ ವಿತರಿಸುವ ಪ್ರಸಾದವು ಆಗಾಗ್ಗೆ ಸ್ವಚ್ಛತೆಯ ವಿಷಯದಲ್ಲಿ ತೊಂದರೆಗಳನ್ನು ಉಂಟುಮಾಡುತ್ತದೆ ಎಂದು ನಮಗೆ ತಿಳಿದಿದೆ. ದೇವಸ್ಥಾನಗಳಲ್ಲಿಪ್ಲಾಸ್ಟಿಕ್‌ ಪೊಟ್ಟಣಗಳಲ್ಲೂ ಪ್ರಸಾದ ಸಿಗುವುದನ್ನು ನೋಡಿದ್ದೇನೆ. ಆದರೆ, ಪ್ಲಾಸ್ಟಿಕ್‌ ಬಳಸಬೇಡಿ ಎಂದು ಹೇಳಿದ ನಂತರ ದೇವಸ್ಥಾನಗಳಲ್ಲಿ ಪ್ರಸಾದಕ್ಕೆ ಪ್ಲಾಸ್ಟಿಕ್‌ ಪ್ಯಾಕೆಟ್‌ ಬಳಸುವುದನ್ನು ನಿಲ್ಲಿಸಲಾಗಿದೆ. ಅಂದರೆ, ದೇವಾಲಯಗಳು ಮತ್ತು ಸಂತರ ಭಾಗವಹಿಸುವಿಕೆಯಿಂದ ಸಮಾಜವು ಬದಲಾಗುತ್ತದೆ. ನಾವು ಪಟ್ಟು ಬಿಡದೆ  ಕೆಲಸ ಮಾಡಬೇಕು ಮತ್ತು ಅದಕ್ಕೆ ತಕ್ಕಂತೆ ಸೇವೆ ಸಲ್ಲಿಸಬೇಕು ಹಾಗೆಯೇ ಸುಧಾರಣೆಗಳನ್ನೂ ತರುತ್ತಲೇ ಇರಬೇಕು. ಅದರಿಂದ ಏನನ್ನಾದರೂ ಕಲಿಯುವುದು, ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮತ್ತು ನಮ್ಮ ಜೀವನದಲ್ಲಿ ಹೆಚ್ಚಿನದನ್ನು ಪಡೆಯುವುದು ನಮ್ಮ ಕರ್ತವ್ಯ. ನಾವು ‘ಆಜಾದಿ ಕಾ ಅಮೃತ್‌ ಮಹೋತ್ಸವ’ ವನ್ನು ಆಚರಿಸುತ್ತಿದ್ದೇವೆ. ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹಾಪುರುಷರು ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ ಅದಕ್ಕೂ ಮುನ್ನ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. 1857 ರ ಮೊದಲು, ಸ್ವಾತಂತ್ರ್ಯದ ಸಂಪೂರ್ಣ ಹಿನ್ನೆಲೆಯನ್ನು ಸಿದ್ಧಪಡಿಸಲಾಯಿತು ಮತ್ತು ಈ ದೇಶದ ಸಂತರು, ಮಹಂತರು, ಋುಷಿಗಳು, ಭಕ್ತರು, ಆಚಾರ್ಯರು ಆಧ್ಯಾತ್ಮಿಕ ಪ್ರಜ್ಞೆಯ ವಾತಾವರಣವನ್ನು ಅಭಿವೃದ್ಧಿಪಡಿಸಿದರು. ಭಕ್ತಿಯುಗವು ಭಾರತದ ಪ್ರಜ್ಞೆಯನ್ನು ಹೊತ್ತಿಸಿತ್ತು. ಅದ್ದರಿಂದ ಸ್ವಾತಂತ್ರ್ಯ ಚಳವಳಿಗೆ ಹೊಸ ಉತ್ತೇಜನ ಸಿಕ್ಕಿತು.
ಸಾಂಸ್ಕೃತಿಕ ಪರಂಪರೆ, ಜನಕಲ್ಯಾಣಕ್ಕಾಗಿ ದುಡಿದ ಸಂತರು ಇಲ್ಲಿ ಸದಾ ಬಹುಮುಖ್ಯ ಪಾತ್ರ ವಹಿಸಿದ್ದಾರೆ. ಆದ್ದರಿಂದ ಹನುಮಾನ್‌ ಜಿಯನ್ನು ಸ್ಮರಿಸುವುದು ಸೇವೆ-ಭಕ್ತಿಗೆ ಸಮಾನವಾಗಿದೆ. ಹನುಮಂತಯ್ಯನವರು ಅದನ್ನೇ ಕಲಿಸಿದ್ದಾರೆ. ಹನುಮಾನ್ ಜಿಯವರ ಭಕ್ತಿ ಸೇವೆಯ ರೂಪದಲ್ಲಿತ್ತು. ಹನುಮಂತಯ್ಯನವರ ಭಕ್ತಿ ಶರಣರ ರೂಪದಲ್ಲಿತ್ತು. ಹನುಮಂತಯ್ಯನವರು ಎಂದಿಗೂ ಭಕ್ತಿಯನ್ನು ಕೇವಲ ಆಚರಣೆಯಾಗಿ ತೋರಿಸಲಿಲ್ಲ. ಹನುಮಾನ್ ಜಿಯವರು ತಮ್ಮ ಕೆಲಸ, ಧೈರ್ಯ ಮತ್ತು ಶಕ್ತಿಯಿಂದ ತಮ್ಮ ಸೇವಾ ಮನೋಭಾವದ ಎತ್ತರವನ್ನು ಹೆಚ್ಚಿಸುತ್ತಲೇ ಇದ್ದರು. ಮತ್ತು ಇಂದು ನಾವು ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿರುವಾಗ, ಸಮಾಜವನ್ನು ದೃಢವಾದ ರೀತಿಯಲ್ಲಿ ಒಗ್ಗೂಡಿಸಲು ನಮ್ಮಲ್ಲಿ ಬಲವಾದ ಸೇವಾ ಮನೋಭಾವವನ್ನು ಬೆಳೆಸಲು ನಾವು ಶ್ರಮಿಸಬೇಕು. ಈ ರಾಷ್ಟ್ರವನ್ನು ಹೆಚ್ಚು ಹೆಚ್ಚು ಶಕ್ತಿಯುತವಾಗಿಸಲು ನಾವು ಶ್ರಮಿಸಬೇಕು. ಹಾಗೆಯೇ ಇಷ್ಟಕ್ಕೇ ಇಂದು ಭಾರತವು ಸಂತೃಪ್ತವಾಗಬಾರದು. ನಾವು ನಿದ್ರಿಸುತ್ತಿರಲಿ ಅಥವಾ ಎಚ್ಚರವಾಗಿರಲಿ, ನಾವು ಮುಂದೆ ಸಾಗುತ್ತಿರಬೇಕು. ಇಂದು ಜಗತ್ತು ಸ್ವಾವಲಂಬಿಯಾಗುವುದರ ಮಹತ್ವವನ್ನು ಅರ್ಥಮಾಡಿಕೊಂಡಿದೆ. ಅಲ್ಲದೆ, ಸ್ಥಳೀಯರಿಗೆ ಧ್ವನಿ’ ಎಂಬ ಘೋಷಣೆಯನ್ನೂ ನಾವು ಎತ್ತುತ್ತಲೇ ಇರಬೇಕು. ನಮ್ಮ ದೇಶದಲ್ಲಿ ಮಾಡಿದ, ನಮ್ಮ ಜನರು ತಯಾರಿಸಿದ, ನಮ್ಮದೇ ಶ್ರಮದಿಂದ ತಯಾರಿಸಿದ ವಸ್ತುಗಳನ್ನು ಮಾತ್ರ ಬಳಸಬೇಕು. ಇಂತಹ ಸನ್ನಿವೇಶ ನಿರ್ಮಾಣವಾದರೆ ಎಷ್ಟು ಮಂದಿಗೆ ಉದ್ಯೋಗ ಸಿಗಲಿದೆ ಎಂದು ಊಹಿಸಿಕೊಳ್ಳಿ. ನಾವು ವಿದೇಶಿ ಉತ್ಪನ್ನಗಳನ್ನು ಖರೀದಿಸಲು ಬಯಸಬಹುದು ಆದರೆ ಇವೆರಡರ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಇದು ಭಾರತದ ಜನರಿಂದ, ಭಾರತೀಯ ಬಂಡವಾಳದೊಂದಿಗೆ, ಭಾರತೀಯ ಬೆವರು ಮತ್ತು ಭಾರತೀಯ ಮಣ್ಣಿನ ಪರಿಮಳದಿಂದ ಹೊರಹೊಮ್ಮಿದರೆ, ನಾವು ಅನುಭವಿಸುವ ಹೆಮ್ಮೆ ಮತ್ತು ಸಂತೋಷವು ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ. ಎಲ್ಲೇ ಹೋದರೂ ‘ಭಾರತದಲ್ಲಿತಯಾರಿಸಿದ’ ಉತ್ಪನ್ನಗಳನ್ನು ಖರೀದಿಸಲು ಜನರನ್ನು ಮನವೊಲಿಸಲು ನಾನು ಸಂತರು ಮತ್ತು
ಋುಷಿಗಳನ್ನು ಒತ್ತಾಯಿಸುತ್ತೇನೆ. ಹಾಗೆ ಮಾಡಿದರೆ ಭಾರತದೊಳಗೆ ಜೀವನೋಪಾಯಕ್ಕೆ ಮತ್ತು ಆರ್ಥಿಕತೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇಲ್ಲದ ದಿನ ಬರುತ್ತದೆ. ನಾವು ಹನುಮಂತಯ್ಯನವರನ್ನು  ಹರಸುತ್ತೇವೆ ಆದರೆ ಹನುಮಾನ್ ಜಿಯವರು ಏನು ಹೇಳಿದರು? ಅವರ ಮಾತುಗಳು ನಮಗೆ ಸ್ಫೂರ್ತಿ ನೀಡಬಲ್ಲವು. ಹನುಮಂಜಿಯವರು ಯಾವಾಗಲೂ ಹೇಳುತ್ತಾರೆ- ‘‘ಸೋ ಸಬ ತಬ ಪ್ರತಾಪ ರಘುರೈ, ನಾಥ್‌ ನ ಕಛೂ ಮೋರಿ ಪ್ರಭುತಾಯಿ’’,


ಅಂದರೆ, ಅವನು ಯಾವಾಗಲೂ ತನ್ನ ಪ್ರತಿಯೊಂದು ಯಶಸ್ಸಿನ ಶ್ರೇಯಸ್ಸನ್ನು ತನಗೆ ಬದಲಾಗಿ ಭಗವಾನ್‌ ರಾಮನಿಗೆ ನೀಡುತ್ತಾನೆ. ಪ್ರತಿಯೊಂದು ಕಾರ್ಯವೂ ಶ್ರೀರಾಮನ ಕೃಪೆಯಿಂದ ನಡೆಯುತ್ತದೆ ಎಂದು ಹೇಳುತ್ತಿದ್ದರು. ಇಂದಿಗೂ, ಭಾರತ ಎಲ್ಲಿಗೆ ತಲುಪಿದೆಯೋ ಮತ್ತು ಎಲ್ಲೆಲ್ಲಿತನ್ನ ನಿರ್ಣಯಗಳೊಂದಿಗೆ ತಲುಪಲು ಬಯಸುತ್ತದೆಯೋ ಅಲ್ಲಿ; ಅದನ್ನು ಸಾಧಿಸಲು ಒಂದೇ ಒಂದು ಮಾರ್ಗವಿದೆ - ‘ಭಾರತದ ನಾಗರಿಕರಿಂದ’. ಮತ್ತು ಅಲ್ಲಿಯೇ ಶಕ್ತಿ ಇರುತ್ತದೆ. ನನ್ನ ಪಾಲಿಗೆ 130 ಕೋಟಿ ದೇಶವಾಸಿಗಳು ಶ್ರೀರಾಮನ ದ್ಯೋತಕ. ಅವರ ನಿರ್ಣಯಗಳೊಂದಿಗೆ ದೇಶ ಮುನ್ನಡೆಯುತ್ತಿದೆ. ಅವರ ಆಶೀರ್ವಾದದಿಂದ ದೇಶ ಪ್ರಗತಿಯಲ್ಲಿದೆ. ಆ ಭಾವನೆಯೊಂದಿಗೆ ಮುನ್ನಡೆಯೋಣ. ಈ ಉತ್ಸಾಹದಿಂದ ನಾನು ಮತ್ತೊಮ್ಮೆ ಈ ಶುಭ ಸಂದರ್ಭದಲ್ಲಿನಿಮಗೆ ಶುಭ ಹಾರೈಸುತ್ತೇನೆ. ನಾನು ಹನುಮಾನ್‌ ಜೀ ಅವರ ಪಾದಗಳಿಗೆ ನಮಸ್ಕರಿಸುತ್ತೇನೆ.

ತುಂಬಾ ಧನ್ಯವಾದಗಳು!

 

ಹಕ್ಕು ನಿರಾಕರಣೆ: ಇದು ಪ್ರಧಾನಿಯವರ ಭಾಷಣದ ಅನುವಾದವಾಗಿದೆ. ಮೂಲ ಭಾಷಣವು ಹಿಂದಿ ಮತ್ತು ಗುಜರಾತಿ ಭಾಷೆಗಳಲ್ಲಿದೆ.

***



(Release ID: 1818201) Visitor Counter : 189