ಪ್ರಧಾನ ಮಂತ್ರಿಯವರ ಕಛೇರಿ

ಮಣಿಪುರದ ರಾಣಿ ಗೈಡಿನ್ಲಿಯು ರೈಲು ನಿಲ್ದಾಣ ತಲುಪಿದ ಮೊದಲ ಸರಕು ಸಾಗಣೆ ರೈಲು: ಪ್ರಧಾನಮಂತ್ರಿ ಶ್ಲಾಘನೆ

Posted On: 29 JAN 2022 6:11PM by PIB Bengaluru

ಮಣಿಪುರದ ತೆಮಂಗ್ಲಾಂಗ್ ಜಿಲ್ಲೆಯ ರಾಣಿ ಗೈಡಿನ್ಲಿಯು ರೈಲು ನಿಲ್ದಾಣಕ್ಕೆ ಮೊದಲ ಸರಕು ಸಾಗಣೆ ರೈಲು ತಲುಪಿದ್ದು, ಇದನ್ನು ಪ್ರಧಾನಮಂತ್ರಿ ಶ‍್ರೀ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಮಣಿಪುರದ ಸಂಪರ್ಕ ಜಾಲವನ್ನು ಹೆಚ್ಚಿಸಲಾಗುವುದು ಹಾಗೂ ವಾಣಿಜ್ಯ ಚಟುವಟಿಕೆಯನ್ನು ವೃದ್ಧಿಸಲಾಗುವುದು ಎಂದು ಹೇಳಿದ್ದಾರೆ.

ಈಶಾನ್ಯ ವಲಯದ [ಡಿ.ಒ.ಎನ್.ಇ.ಆರ್] ಅಭಿವೃದ್ಧಿ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಮಂತ್ರಿ ಅವರು.  

“ ಈಶಾನ್ಯ ವಲಯದಲ್ಲಿ ಪರಿವರ್ತನೆ ಮುಂದುವರಿಯುತ್ತದೆ.

ಮಣಿಪುರದಲ್ಲಿ ಸಂಪರ್ಕ ಹೆಚ್ಚಿಸಲಾಗುವುದು ಮತ್ತು ವಾಣಿಜ್ಯ ಚಟುವಟಿಕೆಗೆ ಪುಷ್ಟಿ ನೀಡಲಾಗುವುದು. ರಾಜ್ಯದ ಅದ್ಭುತ ಉತ್ಪನ್ನಗಳು ರಾಷ್ಟ್ರದಾದ್ಯಂತ ಸಂಚರಿಸಲಿವೆ.” ಎಂದು ಹೇಳಿದ್ದಾರೆ.

***



(Release ID: 1793534) Visitor Counter : 161