ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಎನ್.ಸಿ.ಡಿ.ಸಿಯ 112 ನೇ ವಾರ್ಷಿಕೋತ್ಸವದಂದು ಎ.ಎಂ.ಆರ್ ನ ವೋಲ್ ಜಿನೋಮೆ ಸಿಕ್ವೇನ್ಸಿಂಗ್ ನ್ಯಾಷನಲ್ ರೆಫರೆನ್ಸ್ ಪ್ರಯೋಗಾಲಯ ಮತ್ತು ಹೊಸ ಬಿ.ಎಸ್.ಎಲ್ 3 ಪ್ರಯೋಗಾಲಯವನ್ನು ಡಿಜಿಟಲ್ ಮಾಧ್ಯಮದ ಮೂಲಕ ಉದ್ಘಾಟಿಸಿದ ಕೇಂದ್ರ ಆರೋಗ್ಯ ಸಚಿವರು


ಎನ್.ಸಿ.ಡಿ.ಸಿ ಅವಿಷ್ಕಾರಗಳನ್ನು ಮುಂದುವರಿಸಬೇಕು, ತನ್ನ ಕೆಲಸದಿಂದ ಭಾರತ ಮಾತ್ರವಲ್ಲದೇ ಇಡೀ ಜಗತ್ತಿಗೆ ಲಾಭ – ಶ್ರೀ ಮನ್ಸುಖ್ ಮಾಂಡವಿಯಾ

ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಕಾಯಿಲೆಗಳ ಐಇಸಿ ಪರಿಕರಗಳು;  ವಾಯು ಮಾಲೀನ್ಯ ಹಾಗೂ ಶಾಖದ ಬಗ್ಗೆ ರಾಷ್ಟ್ರೀಯ ಆರೋಗ್ಯ ಹೊಂದಾಣಿಕೆಯ ಯೋಜನೆಗಳ ಅನಾವರಣ

Posted On: 30 JUL 2021 12:21PM by PIB Bengaluru

ರೋಗ ನಿಯಂತ್ರಣ ಕುರಿತ ರಾಷ್ಟ್ರೀಯ ಕೇಂದ್ರ [ಎನ್.ಸಿ.ಡಿ.ಸಿ] 112 ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ [ಎಚ್.ಎಫ್.ಡಬ್ಲ್ಯೂ] ಸಹಾಯಕ ಸಚಿವರಾದ ಡಾ. ಭಾರತಿ ಪವಾರ್ ಅವರೊಂದಿಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀ ಮನ್ಸುಖ್ ಮಾಂಡವೀಯ  ಇಂದು ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಕೇಂದ್ರ ಆರೋಗ್ಯ ಸಚಿವರು ಸೂಕ್ಷ್ಮಜೀವಿ ಪ್ರತಿರೋಧಕ್ಕಾಗಿ ಸಂಪೂರ್ಣ ಜಿನೋಮ್ ಸಿಕ್ವೇನ್ಸಿಂಗ್ ನ್ಯಾಷನಲ್ ರೆಫರೆನ್ಸ್ ಪ್ರಯೋಗಾಲಯ [.ಎಂ.ಆರ್] ಮತ್ತು ಸ್ನಾತಕೋತ್ತರ ವಸತಿ ನಿಲಯ, ಅತಿಥಿ ಗೃಹ ಮತ್ತು ಬಿ.ಎಸ್.ಎಲ್ 3 ಪ್ರಯೋಗಾಲಯವನ್ನು ಉದ್ಘಾಟಿಸಿದರುಎಲ್-3 ಪ್ರಯೋಗಾಲಯ ಸಂಕಿರ್ಣ ಐದು ಮಹಡಿಗಳನ್ನು ಹೊಂದಿದೆ ಮತ್ತು 22 ಜೈವಿಕ ಸುರಕ್ಷತಾ ಹಂತ [ಬಿ.ಎಸ್.ಎಲ್] - 2 ಪ್ರಯೋಗಾಲಯಗಳನ್ನು ಒಳಗೊಂಡಿದೆ.

https://static.pib.gov.in/WriteReadData/userfiles/image/image001AA7R.jpg

ಎನ್.ಸಿ.ಡಿ.ಸಿ ಕೊಡುಗೆಯನ್ನು ಸ್ಮರಿಸಿದ ಶ್ರೀ ಮನ್ಸುಖ್ ಮಾಂಡವೀಯ, ಕೋವಿಡ್ ಸಾಂಕ್ರಾಮಿಕದ ವಿರುದ್ಧ ಇತರ ರಾಷ್ಟ್ರಗಳಿಂತ ಭಾರತ ಅತ್ಯುತ್ತಮ ಸಾಮರ್ಥ್ಯ ತೋರಿದೆ ಎಂದು ಹೇಳಿದರು. 112 ವರ್ಷಗಳ ಇತಿಹಾಸದ ತನ್ನ ಪರಂಪರೆಯಲ್ಲಿ ಎನ್.ಸಿ.ಡಿ.ಸಿ ಸಾಧನೆಗಳ ಜತೆಗೆ ಹೊಸ ಆಯಾಮವನ್ನು ಸೃಷ್ಟಿ ಮಾಡಿಕೊಂಡಿದೆ. ಎನ್.ಸಿ.ಡಿ.ಸಿಯನ್ನು ನಾವು ಬೆಂಬಲಿಸುತ್ತಿದ್ದು, ಹೆಚ್ಚಿನ ಅವಿಷ್ಕಾರದಿಂದ ಭಾರತವಷ್ಟೇ ಅಲ್ಲ ಇಡೀ ಜಗತ್ತಿಗೆ ಇದರಿಂದ ಅನುಕೂಲವಾಗಲಿದೆ. ಎನ್.ಸಿ.ಡಿ.ಸಿಯ ವಿಜ್ಞಾನಿಗಳು, ವೈದ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ಮುಂಬರುವ ವರ್ಷಗಳಲ್ಲಿ ಸಾಧಿಸಲು ಬಯಸುವ ಗುರಿಗಳನ್ನು ಒಟ್ಟಿಗೆ ಪಟ್ಟಿ ಮಾಡಬೇಕು ಎಂದು ಕೇಂದ್ರ ಆರೋಗ್ಯ ಒತ್ತಿ ಹೇಳಿದರು

ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ರೋಗಗಳು ಇತ್ತೀಚಿನ ಕೋವಿಡ್19 ಸಾಂಕ್ರಾಮಿಕದ ಬಗ್ಗೆ ಹೆಚ್ಚು ಜಾಗರೂಕತೆ ಮತ್ತು ಜಾಗೃತರಾಗುವ ಅಗತ್ಯವನ್ನು ಎತ್ತಿ ತೋರಿಸಿದೆ. ಇದಕ್ಕೆ ಅನುಗುಣವಾಗಿ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವಲಯದಲ್ಲಿ ಎನ್.ಸಿ..ಡಿ.ಸಿಯ ವಿಭಾಗದ ಕಾರ್ಯಕ್ರಮಪ್ರಾಣಿಗಳಿಂದ ಹರಡುವ ರೋಗಗಳ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಏಕ ಕಾರ್ಯಕ್ರಮದಡಿ ಐಇಸಿ ಪರಿಕರಗಳನ್ನು [ಮುದ್ರಣ, ಆಡಿಯೋ ಮತ್ತು ವಿಡಿಯೋ] ಸಿದ್ಧಪಡಿಸಲಾಗಿದೆ. ನಿರ್ದಿಷ್ಟವಾಗಿ ಭಾರತದಲ್ಲಿ ರೇಬಿಸ್, ಸ್ಕ್ರಬ್ ಟೈಪುಸ್, ಬ್ರುಸೆಲ್ಲೊಸಿಸ್, ಆಂಥ್ರಾಕ್ಸ್, ಸಿ.ಸಿ.ಎಚ್.ಎಫ್, ನಿಫಾ, ಕ್ಯಾಸನುರ್ ಫಾರೆಸ್ಟ್ ಡಿಸೀಸ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಪ್ರಚಾರ ಸಾಮಗ್ರಿಗಳನ್ನು ಕೇಂದ್ರ ಆರೋಗ್ಯ ಸಚಿವರು ತಮ್ಮ ಸಹಾಯಕ ಸಚಿವರ [ಎಚ್.ಎಫ್.ಡಬ್ಲ್ಯೂ] ಜತೆ ಬಿಡುಗಡೆ ಮಾಡಿದರು.  

https://static.pib.gov.in/WriteReadData/userfiles/image/image002VU0F.jpg

ಕೇಂದ್ರ ಆರೋಗ್ಯ ಸಚಿವರು ಇನ್ಫೋಗ್ರಾಫಿಕ್ಸ್ ಜತೆಗೆ ವಾಯುಮಾಲಿನ್ಯದ ರಾಷ್ಟ್ರೀಯ ಆರೋಗ್ಯ ಹೊಂದಾಣಿಕೆ ಯೋಜನೆ ಮತ್ತು ಶಾಖದ ಬಗ್ಗೆ ರಾಷ್ಟ್ರೀಯ ಆರೋಗ್ಯ ಹೊಂದಾಣಿಕೆಯ ಯೋಜನೆಗಳನ್ನು ಆರಂಭಿಸಿದರು. “ ಮಾನವ ಆರೋಗ್ಯ ಮತ್ತು ಹವಾಮಾನ ಬದಲಾವಣೆ ಕುರಿತ ರಾಷ್ಟ್ರೀಯ ಕಾರ್ಯಕ್ರಮ ಮೊದಲ ಸುದ್ದಿ ಪತ್ರವನ್ನು ಬಿಡುಗಡೆ ಮಾಡಿದ್ದು, ಕೇಂದ್ರ ಪರಿಸರ ಮತ್ತು ಔದ್ಯೋಗಿಕ ಆರೋಗ್ಯ, ಹವಾಮಾನ ಬದಲಾವಣೆ ಹಾಗೂ ಆರೋಗ್ಯ ವಿಭಾಗದಿಂದ ಇದನ್ನು ಎನ್.ಸಿ.ಡಿ.ಸಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಡಾ. ಭಾರತಿ ಪ್ರವೀಣ್ ಪವಾರ್, ಎಂ..ಎಸ್ [ಎಚ್.ಎಫ್,ಡಬ್ಲ್ಯೂ] ಮಾತನಾಡಿ, ಪ್ರಯೋಗಾಲಯಗಳು ಮತ್ತು ಸಾಂಕ್ರಾಮಿಕ ರೋಗ ಶಾಸ್ತ್ರ, ಸಾರ್ವಜನಿಕ ಆರೋಗ್ಯ ಸಾಮರ್ಥ್ಯ ನಿರ್ಮಾಣ, ಕೀಟ ಶಾಸ್ತ್ರ ಇತ್ಯಾದಿ ವಲಯಗಳಲ್ಲಿ ಎನ್.ಸಿ.ಡಿ.ಸಿ ಹಲವು ಸೇವೆಗಳನ್ನು ನೀಡುತ್ತಿದೆ. ಸೂಕ್ಷ್ಮ ಜೀವಿ ಪ್ರತಿರೋಧವನ್ನು ನಿಯಂತ್ರಿಸುವಲ್ಲಿ [.ಎಂ.ಆರ್] ಎನ್.ಸಿ.ಡಿ.ಸಿ ತನ್ನ ಮಹತ್ವದ ಪಾತ್ರ ನಿರ್ವಹಿಸುತ್ತಿದೆ ಮತ್ತು ದೇಶದಲ್ಲಿ ಕಾರ್ಯಕ್ರಮಗಳ ಧಾರಣಾ ಸಾಮರ್ಥ್ಯ ಶ್ಲಾಘನೀಯ. “ ರೋಗದ ಮೇಲ್ವಿಚಾರಣೆ, ಆರೋಗ್ಯ ಸ್ಥಿತಿಗತಿ ಬಗ್ಗೆ ಕಣ್ಗಾವಲು, ಸಾರ್ವಜನಿಕರಿಗೆ ಶಿಕ್ಷಣ, ಸಾರ್ವಜನಿಕ ಆರೋಗ್ಯ ಯೋಜನೆಗಳಿಗೆ ಸೂಕ್ತ ಪುರಾವೆಗಳನ್ನು ಒದಗಿಸುವ ಮತ್ತು ಸಾರ್ವಜನಿಕ ಆರೋಗ್ಯ ವಲಯದ ನಿಯಂತ್ರಣದಲ್ಲಿ ಎನ್.ಸಿ.ಡಿ.ಸಿ ಹೆಚ್ಚಿನ ಅಧಿಕಾರದೊಂದಿಗೆ ಕೇಂದ್ರಬಿಂದುವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು

ಜೀವನ ಶೈಲಿಯಿಂದ ಬರುವ ರೋಗಗಳನ್ನು ದೂರವಿಡಲು ಮತ್ತು ಜಾಗೃತಿ ಮೂಡಿಸಲು ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅಗತ್ಯ ಎಂದು ಡಾ. ಪವಾರ್ ಒತ್ತಿ ಹೇಳಿದರು.

ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷನ್, ಆರೋಗ್ಯ ಸೇವೆಗಳ ಮಹಾ ನಿರ್ದೇಶಕ ಡಾ. ಸುನಿಲ್ ಕುಮಾರ್, ಹೆಚ್ಚುವರಿ ಕಾರ್ಯದರ್ಶಿ ಶ್ರೀಮತಿ ಆರ್ತಿ ಅಹುಜಾ, ಜಂಟಿ ಕಾರ್ಯದರ್ಶಿ ಶ್ರೀ ಲವ್ ಅಗರ್ವಾಲ್, ಎನ್.ಸಿ.ಡಿ.ಸಿ. ನಿರ್ದೇಶಕರಾದ ಡಾ. ಸುಜೀತ್ ಸಿಂಗ್, ಡಾ. ರೊಡೆರಿಕೊ ಎಚ್. ಆಫ್ರಿನ್, ಭಾರತದಲ್ಲಿನ ಡಬ್ಲ್ಯೂ.ಎಚ್. ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

***



(Release ID: 1740747) Visitor Counter : 230