ಪ್ರಧಾನ ಮಂತ್ರಿಯವರ ಕಛೇರಿ

ಮೌಲಾನಾ ವಹಿದುದ್ದೀನ್ ಖಾನ್ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

Posted On: 22 APR 2021 8:38AM by PIB Bengaluru

ಪ್ರಧಾನಮಂತ್ರಿ ಶ್ರಿ ನರೇಂದ್ರ ಮೋದಿಯವರು ಮೌಲಾನಾ ವಹಿದುದ್ದೀನ್ ಖಾನ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.

ಶ್ರೀ ನರೇಂದ್ರ ಮೋದಿಯವರು ತಮ್ಮ ಟ್ವೀಟ್ ನಲ್ಲಿ " ಮೌಲಾನಾ ವಹಿದುದ್ದೀನ್ ನಿಧನದಿಂದ ದುಃಖವಾಗಿದೆ. ಆಧ್ಯಾತ್ಮ ಮತ್ತು ವೇದಾಂತದ ವಿಷಯಗಳ ಬಗ್ಗೆ ಆಳವಾದ ಒಳನೋಟವನ್ನು ಹೊಂದಿದ್ದಕ್ಕಾಗಿ ಅವರನ್ನು ಸ್ಮರಿಸಲಾಗುವುದು. ಅವರು ಸಮುದಾಯದ ಸೇವೆ ಮತ್ತು ಸಾಮಾಜಿಕ ಸಬಲೀಕರಣದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದರು. ಅವರ ಕುಟುಂಬಕ್ಕೆ ಮತ್ತು ಅಸಂಖ್ಯಾತ ಹಿತೈಷಿಗಳಿಗೆ  ಸಂತಾಪಗಳು. ಚಿರ ಶಾಂತಿ ದೊರಕಲಿ" ಎಂದು ಹೇಳಿದ್ದಾರೆ.‌

***



(Release ID: 1713488) Visitor Counter : 194