ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಡಾ. ಹರ್ಷವರ್ಧನ್ ಅವರು ತಮಿಳುನಾಡು, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಕೋವಿಡ್-19 ನಿರ್ವಹಣೆಗೆ ತೆಗೆದುಕೊಂಡ ಸಿದ್ಧತೆ ಮತ್ತು ನಿಯಂತ್ರಣ ಕ್ರಮಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪರಿಶೀಲಿಸಿದರು
Posted On:
08 MAY 2020 6:13PM by PIB Bengaluru
ಡಾ. ಹರ್ಷವರ್ಧನ್ ಅವರು ತಮಿಳುನಾಡು, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಕೋವಿಡ್-19 ನಿರ್ವಹಣೆಗೆ ತೆಗೆದುಕೊಂಡ ಸಿದ್ಧತೆ ಮತ್ತು ನಿಯಂತ್ರಣ ಕ್ರಮಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪರಿಶೀಲಿಸಿದರು
ಉತ್ತರ ಪ್ರದೇಶ, ಬಿಹಾರ, ದೆಹಲಿ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾದಂತಹ ರಾಜ್ಯಗಳೊಂದಿಗೆ ಕೇಂದ್ರೀಕೃತ ಸಭೆಗಳ ಮುಂದುವರಿಕೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ರವರು ಇಂದು ಉನ್ನತ ಮಟ್ಟದ ಸಭೆ ನಡೆಸಿದರು. ತಮಿಳುನಾಡಿನ ಆರೋಗ್ಯ ಸಚಿವ ಶ್ರೀ ಸಿ.ವಿಜಯಬಾಸ್ಕರ್, ತೆಲಂಗಾಣದ ಆರೋಗ್ಯ ಸಚಿವ ಶ್ರೀ ಎಟೆಲಾ ರಾಜೇಂದ್ರ ಮತ್ತು ಕರ್ನಾಟಕದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರೊಂದಿಗೆ ಕುಟುಂಬ ಕಲ್ಯಾಣ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಸಭೆ ಕೇಂದ್ರ ಮತ್ತು ರಾಜ್ಯದ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮೂರು ರಾಜ್ಯಗಳಲ್ಲಿ ಪರಿಸ್ಥಿತಿ, ಕೈಗೊಳ್ಳುತ್ತಿರುವ ಕ್ರಮಗಳು ಮತ್ತು ಕೋವಿಡ್-19 ನಿರ್ವಹಣೆಗೆ ಸಿದ್ಧತೆ ಪರಿಶೀಲಿಸಲು ಸಭೆ ನಡೆಸಿದರು.
ಪ್ರಾರಂಭದಲ್ಲಿ, ಡಾ. ಹರ್ಷವರ್ಧನ್ ಅವರು ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಎದುರಿಸುವಲ್ಲಿ ಎಲ್ಲಾ ರಾಜ್ಯಗಳ ಸಮರ್ಪಣಾಭಾವವನ್ನು ಶ್ಲಾಘಿಸಿದರು. ದೇಶದ ಪ್ರಸ್ತುತ ಪರಿಸ್ಥಿತಿ ಮತ್ತು ಕೋವಿಡ್-19 ಅನ್ನು ಎದುರಿಸಲು ಕೇಂದ್ರವು ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ರಾಜ್ಯಗಳಿಗೆ ಮಾಹಿತಿ ನೀಡಿದರು. ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೋವಿಡ್-19 ಕ್ಕಾಗಿ ಹೆಚ್ಚು ಪರಿಣಾಮಕಾರಿಯಾದ ನಿಯಂತ್ರಣ ಯೋಜನೆಗಳು, ಕಣ್ಗಾವಲು, ಸಂಪರ್ಕ ಪತ್ತೆ ಮತ್ತು ಸ್ಕ್ರೀನಿಂಗ್ ಅನ್ನು ಕಾರ್ಯಗತಗೊಳಿಸಲು ಸಂಬಂಧಪಟ್ಟ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಮತ್ತು ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.
ಡಾ. ಹರ್ಷವರ್ಧನ್ ರವರು, “ಕೋವಿಡ್-19 ಅನ್ನು ಎದುರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಮತ್ತು ಕೇಂದ್ರ ಮತ್ತು ರಾಜ್ಯಗಳ ಒಟ್ಟಾದ ಪ್ರಯತ್ನದಿಂದಾಗಿ, ಸಮರ್ಪಕವಾಗಿ ಹೆಚ್ಚಾಗುತ್ತಿರುವ ಮೀಸಲಾದ ಕೋವಿಡ್ ಆಸ್ಪತ್ರೆಗಳು, ಪ್ರತ್ಯೇಕತೆ ವಿಭಾಗ ಮತ್ತು ಐಸಿಯು ಹಾಸಿಗೆಗಳು ಮತ್ತು ಸಂಪರ್ಕತಡೆಯನ್ನು ಗುರುತಿಸಿರುವುದರಿಂದ ಮತ್ತು ಅಭಿವೃದ್ಧಿಪಡಿಸಲಾಗಿರುವುದರಿಂದ, ನಾವು ಕೋವಿಡ್-19ರಿಂದಾಗಿ ಮುಂದೆ ಎದುರಾಗುವ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿರುವೆವು ”. ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತ್ತು ಕೇಂದ್ರಗಳಿಗೆ ಸಾಕಷ್ಟು ಸಂಖ್ಯೆಯ ಮುಖಗವಸುಗಳು ಮತ್ತು ವೈಯಕ್ತಿಕ ರಕ್ಷಣಾ ಸಾಧನಗಳು, ವೆಂಟಿಲೇಟರ್ ಇತ್ಯಾದಿಗಳನ್ನು ಒದಗಿಸುವ ಮೂಲಕ ಕೇಂದ್ರವು ಸಹಕರಿಸುತ್ತಿದೆ ಎಂದು ಅವರು ಹೇಳಿದರು.
ರಾಜ್ಯಗಳಲ್ಲಿನ ಕೋವಿಡ್-19 ಪ್ರಕರಣಗಳ ಸ್ಥಿತಿ ಮತ್ತು ರಾಜ್ಯಗಳಲ್ಲಿನ ಅದರ ನಿರ್ವಹಣೆಯ ಕುರಿತು ಸಂಕ್ಷಿಪ್ತ ಪ್ರಸ್ತುತಿಯ ನಂತರ, ಡಾ. ಹರ್ಷ್ ವರ್ಧನ್, " ಸಾವಿನ ಪ್ರಮಾಣವನ್ನು ಕಡಿಮೆಯಲ್ಲಿಯೇ ಇರಿಸಲು ರಾಜ್ಯಗಳು ಹೆಚ್ಚು ಪರಿಣಾಮಕಾರಿಯಾದ ಕಣ್ಗಾವಲು, ಸಂಪರ್ಕ ಪತ್ತೆಹಚ್ಚುವಿಕೆ ಮತ್ತು ಆರಂಭಿಕ ರೋಗನಿರ್ಣಯದತ್ತ ಗಮನ ಹರಿಸಬೇಕಾಗಿದೆ" ಎಂದು ಹೇಳಿದರು. ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಸಹಯೋಗದೊಂದಿಗೆ ಐಡಿಎಸ್ ಟಿ ನೆಟ್ವರ್ಕ್ ಮೂಲಕ ಬಾಧಿತವಲ್ಲದ ಮತ್ತು ಕಳೆದ 14 ದಿನಗಳಿಂದ ಹೆಚ್ಚಿನ ಪ್ರಕರಣಗಳನ್ನು ವರದಿ ಮಾಡದ ಬಾಧಿತ ಜಿಲ್ಲೆಗಳಲ್ಲಿ ತೀವ್ರ ಉಸಿರಾಟದ ಸೋಂಕುಗಳ (ಎಸ್ಎಆರ್ ಐ) / ಶೀತಜ್ವರ ಮಾದರಿಯ ಅನಾರೋಗ್ಯ (ಐಎಲ್ಐ) ದ ಕಣ್ಗಾವಲನ್ನು ತೀವ್ರಗೊಳಿಸಬೇಕು. ಅಂತಹ ಕ್ರಮಗಳು ಆರಂಭಿಕ ಹಂತದಲ್ಲಿ ಯಾವುದೇ ಸಂಭವನೀಯ ಗುಪ್ತ ಸೋಂಕಿನ ಉಪಸ್ಥಿತಿಯನ್ನು ಗುರುತಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ಅದರ ಸಮಯೋಚಿತ ನಿಯಂತ್ರಣಕ್ಕೆ ಸಹಾಯವಾಗುತ್ತದೆ” ಎಂದು ಅವರು ಹೇಳಿದರು.
ಡಾ. ಹರ್ಷವರ್ಧನ್ ರವರು, "ಆರೋಗ್ಯ ಕಾರ್ಯಕರ್ತರಿಗೆ ಸೋಂಕಿನ ಸಾಧ್ಯತೆಗಳನ್ನು ತಪ್ಪಿಸಲು ಮತ್ತು ಕಡಿಮೆ ಮಾಡಲು ಎಲ್ಲಾ ಆರೋಗ್ಯ ಸಂರಕ್ಷಣಾ ವ್ಯವಸ್ಥೆಗಳಲ್ಲಿ ಸೋಂಕು, ತಡೆಗಟ್ಟುವಿಕೆ ಮತ್ತು ನಿಯಂತ್ರಣ (ಐಪಿಸಿ) ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದನ್ನು ರಾಜ್ಯಗಳು ಖಚಿತಪಡಿಸಿಕೊಳ್ಳಬೇಕು ಎಂದು ಒತ್ತಿ ಹೇಳಿದರು . ತಳಮಟ್ದದ ಕ್ಷೇತ್ರದವರೆಗೆ ಎಲ್ಲಾ ಕೇಂದ್ರ ಮಾರ್ಗಸೂಚಿಗಳು ಮತ್ತು ಸಲಹೆಗಳನ್ನು ಶ್ರದ್ಧೆಯಿಂದ ಜಾರಿಗೊಳಿಸುವಂತೆ ರಾಜ್ಯಗಳಿಗೆ ಸೂಚಿಸಲಾಯಿತು ಆರೋಗ್ಯ ಕಾರ್ಯಕರ್ತರಿಗೆ ತಗಲುವ ಸೋಂಕಿನ ಸಾಧ್ಯತೆಗಳನ್ನು ತಪ್ಪಿಸಲು ಮತ್ತು ಕಡಿಮೆ ಮಾಡಲು ರಾಜ್ಯಗಳು ಎಲ್ಲಾ ಆರೋಗ್ಯ ವ್ಯವಸ್ಥೆಗಳಲ್ಲಿ ಸೋಂಕು, ತಡೆಗಟ್ಟುವಿಕೆ ಮತ್ತು ನಿಯಂತ್ರಣ (ಐಪಿಸಿ) ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು. ಕ್ಷೇತ್ರ ಮಟ್ಟದವರೆಗೆ ಎಲ್ಲಾ ಕೇಂದ್ರ ಮಾರ್ಗಸೂಚಿಗಳು ಮತ್ತು ಸಲಹೆಗಳನ್ನು ಶ್ರದ್ಧೆಯಿಂದ ಜಾರಿಗೊಳಿಸುವಂತೆ ರಾಜ್ಯಗಳಿಗೆ ಸೂಚಿಸಲಾಯಿತು. ಜಿಲ್ಲಾ ಮಟ್ಟದಲ್ಲಿ ಸಂಚಾರಿ ಪರೀಕ್ಷಾ ಪ್ರಯೋಗಾಲಯಗಳ ನಿಯೋಜನೆ ಮತ್ತು 2 ತಿಂಗಳು ಮುಂಚಿತವಾಗಿ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೆ ಔಷಧಿಗಳ ವಿತರಣೆ, ನಿಯಂತ್ರಣ ವಲಯಗಳಲ್ಲಿ, ಕೊಳೆಗೇರಿ ಪ್ರದೇಶಗಳಲ್ಲಿ ಬ್ಲೀಚಿಂಗ್ ಪೌಡರ್ ಅನ್ನು ಮನೆಗೆ ತಲುಪಿಸುವುದು ಮುಂತಾದ ಕೆಲವು ಅತ್ಯುತ್ತಮ ಕಾರ್ಯಶೈಲಿಗಳ ಬಗ್ಗೆ ರಾಜ್ಯಗಳು ಮಾಹಿತಿ ನೀಡಿವೆ. ಒಪಿಡಿಗೆ ಪರ್ಯಾಯವಾಗಿ ಟೆಲಿ-ಮೆಡಿಸಿನ್ ಬಳಕೆ. ಅಗತ್ಯ ಸೇವೆಗಳ ವಿತರಣೆಗಾಗಿ ಸಮುದಾಯ ಸ್ವಯಂಸೇವಕರನ್ನು ಗುರುತಿಸುವುದು, ದೈನಂದಿನ ವಸ್ತುಗಳು ಮತ್ತು ವರ್ತನೆ ಬದಲಾವಣೆಯ ಸಂವಹನ (ಬಿಸಿಸಿ) ಚಟುವಟಿಕೆಗಳ ಬಗ್ಗೆ ಜಾಗೃತಿ ಮೂಡಿಸುವುದು, ಗರ್ಭಿಣಿ ಮಹಿಳೆಯರ ಎಎನ್ಸಿಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಂಚಾರಿ ಘಟಕಗಳು, ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ಬಳಲುತ್ತಿರುವ ವೃದ್ಧ ರೋಗಿಗಳ ತಪಾಸಣೆ ಮತ್ತು ಚಿಕಿತ್ಸೆ ಮುಂತಾದ ಕಾರ್ಯಕ್ರಮಗಳ ಬಗ್ಗೆ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು , ಆಯುಕ್ತರು ಮತ್ತು ಇತರ ಅಧಿಕಾರಿಗಳು ಹಂಚಿಕೊಂಡಿರುವ ಉತ್ತಮ ಕಾರ್ಯಶೈಲಿಯನ್ನು ಕೇಂದ್ರ ಆರೋಗ್ಯ ಸಚಿವರು ಶ್ಲಾಘಿಸಿದರು.
ಡಾ. ಹರ್ಷವರ್ಧನ್ ಅವರು ರಾಜ್ಯ ಸರ್ಕಾರಗಳು ಮಾಡಿದ ಕಾರ್ಯಗಳನ್ನು ಮತ್ತು ರಾಷ್ಟ್ರದ ಹಿತದೃಷ್ಟಿಯಿಂದ ಕರ್ತವ್ಯದ ಕರೆಯನ್ನು ಮೀರಿ ಕೆಲಸ ಮಾಡುತ್ತಿರುವ ಮುಂಚೂಣಿ ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಪೊಲೀಸ್ ಮತ್ತು ಅರೆಸೈನಿಕ ಸಿಬ್ಬಂದಿಗಳು ತೋರಿಸಿದ ಕ್ರಮವನ್ನು ಶ್ಲಾಘಿಸಿದರು. ತಡೆಗಟ್ಟುವ ಔಷಧಿಗಳು ಮತ್ತು ರೋಗನಿರೋಧಕ ವರ್ಧಕಗಳನ್ನು ಅಗತ್ಯವಿರುವಂತೆ ಪರೀಕ್ಷೆಯೊಂದಿಗೆ ಒದಗಿಸುವಂತೆ ಅವರು ರಾಜ್ಯಗಳಿಗೆ ತಿಳಿಸಿದರು.
ರೋಗನಿರೋಧಕ ಕಾರ್ಯಕ್ರಮಗಳು, ಟಿಬಿ ಪ್ರಕರಣ ಪತ್ತೆ ಮತ್ತು ಚಿಕಿತ್ಸೆ, ಡಯಾಲಿಸಿಸ್ ರೋಗಿಗಳಿಗೆ ರಕ್ತ ವರ್ಗಾವಣೆ, ಕ್ಯಾನ್ಸರ್ ರೋಗಿಗಳ ಚಿಕಿತ್ಸೆ, ಗರ್ಭಿಣಿ ಮಹಿಳೆಯರ ಎಎನ್ಸಿ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಕೋವಿಡ್ ಅಲ್ಲದ ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸುವುದರ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ರಾಜ್ಯಗಳಿಗೆ ಮತ್ತೆ ತಿಳಿಸಲಾಯಿತು. ಆಯುಷ್ಮಾನ್ ಭಾರತ್-ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಮೂರು ರೀತಿಯ ಕ್ಯಾನ್ಸರ್ ಗಳಿಗೆ ತಪಾಸಣೆಗಾಗಿ ಬಳಸಬಹುದು ಎಂದು ತಿಳಿಸಲಾಗಿದೆ. ಲಾಕ್ಡೌನ್ ದೃಷ್ಟಿಯಿಂದ ಟೆಲಿಮೆಡಿಸಿನ್ ಮತ್ತು ಟೆಲಿ-ಕೌನ್ಸೆಲಿಂಗ್ ಅನ್ನು ಹೆಚ್ಚಿನ ಜನಸಂಖ್ಯೆಗೆ ಬಳಸಬಹುದು. ಅಗತ್ಯ ಔಷಧಿಗಳ ಸಮರ್ಪಕ ದಾಸ್ತಾನು ಇಡಲು ರಾಜ್ಯಗಳಿಗೆ ಸೂಚಿಸಲಾಗಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಮೂರು ರೀತಿಯ ಕ್ಯಾನ್ಸರ್ ಗಳ ತಪಾಸಣೆಗಾಗಿ ಬಳಸಬಹುದು ಎಂದು ತಿಳಿಸಲಾಯಿತು. ಲಾಕ್ಡೌನ್ ದೃಷ್ಟಿಯಿಂದ ಟೆಲಿಮೆಡಿಸಿನ್ ಮತ್ತು ಟೆಲಿ-ಕೌನ್ಸೆಲಿಂಗ್ ಅನ್ನು ಹೆಚ್ಚಿನ ಜನರಿಗಾಗಿ ಬಳಸಬಹುದು. ಅಗತ್ಯ ಔಷಧಿಗಳ ಸಮರ್ಪಕ ದಾಸ್ತಾನನ್ನು ಇಡಲು ರಾಜ್ಯಗಳಿಗೆ ಸೂಚಿಸಲಾಗಿದೆ. ಕೋವಿಡ್ ಅಲ್ಲದ ಅಗತ್ಯ ಸೇವೆಗಳಿಗೆ ಕುಂದುಕೊರತೆ ನಿವಾರಣೆಗೆ 1075 ಜೊತೆಗೆ ಸಹಾಯವಾಣಿ ಸಂಖ್ಯೆ 104 ಅನ್ನು ಬಳಸಬಹುದು ಮತ್ತು ಈ ಸೇವೆಗಳ ಲಭ್ಯತೆಯ ಬಗ್ಗೆ ಪ್ರಚಾರಮಾಡಲು ರಾಜ್ಯಗಳಿಗೆ ತಿಳಿಸಲಾಯಿತು. ವೆಕ್ಟರ್ ಕಾಯಿಲೆಗಳ ತಡೆಗಟ್ಟುವಿಕೆಗೆ ಸಾಕಷ್ಟು ಕ್ರಮಗಳನ್ನು ಸಹ ತೆಗೆದುಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.
ಡಾ.ಹರ್ಷವರ್ಧನ್ ಅವರು ತಮಿಳುನಾಡು, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳ ವಿವಿಧ ಜಿಲ್ಲೆಗಳ ಜಿಲ್ಲಾ ದಂಡಾದಿಕಾರಿಗಳೊಂದಿಗೆ ಮಾತನಾಡಿದರು ಮತ್ತು ಜಿಲ್ಲೆಗಳಲ್ಲಿ ಕೋವಿಡ್-19 ಸ್ಥಿತಿ ಮತ್ತು ನಿರ್ವಹಣೆಯ ಬಗ್ಗೆ ವಿವರವಾಗಿ ಚರ್ಚಿಸಿದರು. ಇಂತಹ ಸಭೆಗಳು ಹೆಚ್ಚು ಒಗ್ಗಟ್ಟಿನಿಂದ ಕೆಲಸ ಮಾಡಲು ಸಹಾಯ ಮಾಡುತ್ತದೆ ಮತ್ತು ಯಾವುದಾದರೂ ಅಂತರವಿದ್ದರೆ ಅದನ್ನು ಸರಿಪಡಿಸಲು ಸಹಾಯ ಮಾಡುತ್ತದೆ ಮತ್ತು ಸಮಸ್ಯೆಗಳನ್ನು ಹೆಚ್ಚು ನಿಕಟವಾಗಿ ಮತ್ತು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಮತ್ತು ಪರಿಹರಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಕಾರ್ಯದರ್ಶಿ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ - ಎಚ್ಎಫ್ಡಬ್ಲ್ಯು) ಶ್ರೀಮತಿ ಪ್ರೀತಿ ಸುಧನ್ ರವರು, ವಿಶೇಷ ಕರ್ತವ್ಯದ ಅಧಿಕಾರಿ ( ಒಎಸ್ಡಿ - ಎಚ್ಎಫ್ಡಬ್ಲ್ಯು), ಶ್ರೀ ರಾಜೇಶ್ ಭೂಷಣ್, ಎಎಸ್ ಮತ್ತು ಎಂಡಿ (ಎನ್ಎಚ್ಎಂ) ಶ್ರೀಮತಿ ವಂದನಾ ಗುರ್ನಾನಿ, ಜಂಟಿ ಕಾರ್ಯದರ್ಶಿ (ಎಂಒಹೆಚ್ಡಬ್ಲ್ಯು), ಡಾ. ಮನೋಹರ್ ಅಗ್ನಾನಿ, ಎನ್ಸಿಡಿಸಿ ನಿರ್ದೇಶಕರು ಡಾ.ಎಸ್.ಕೆ. ಸಿಂಗ್, ಪ್ರಧಾನ ಕಾರ್ಯದರ್ಶಿ (ಆರೋಗ್ಯ) ಮತ್ತು ರಾಜ್ಯದ ಹಿರಿಯ ಆರೋಗ್ಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
***
(Release ID: 1622343)