ಸಂಪುಟ
ಸ್ವದೇಶ ದರ್ಶನ ಯೋಜನೆಗೆ ಸಂಪುಟ ಅನುಮೋದನೆ: ದೇಶದಲ್ಲಿ ವಿಷಯಾಧಾರಿತ ಪ್ರವಾಸಿ ವಲಯಗಳ ಸಮಗ್ರ ಅಭಿವೃದ್ಧಿ
Posted On:
19 FEB 2019 8:59PM by PIB Bengaluru
ಸ್ವದೇಶ ದರ್ಶನ ಯೋಜನೆಗೆ ಸಂಪುಟ ಅನುಮೋದನೆ: ದೇಶದಲ್ಲಿ ವಿಷಯಾಧಾರಿತ ಪ್ರವಾಸಿ ವಲಯಗಳ ಸಮಗ್ರ ಅಭಿವೃದ್ಧಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಮಿತಿ ಸಭೆ ಈ ಕೆಳಗಿನ ಪ್ರಸ್ತಾವಗಳಿಗೆ ಅನುಮೋದನೆ ನೀಡಿದೆ:
1. 14ನೇ ಹಣಕಾಸು ಅವಧಿಯಲ್ಲಿ ಮತ್ತು ಅದರ ನಂತರ ಸ್ವದೇಶ್ ದರ್ಶನ್ ಯೋಜನೆಯನ್ನು ಮುಂದುವರಿಕೆ;
2. ಡಿಸೆಂಬರ್ 2019 ರಲ್ಲಿ ಮುಕ್ತಾಯಗೊಳ್ಳಲಿರುವ 60 ಚಾಲ್ತಿ ಯೋಜನೆಗಳಿಗೆ ರೂ. 2055.96 ಕೋಟಿಗಳು : ಮತ್ತು
3. ಬೃಹತ್ ಪ್ರಮಾಣದ ಮೊತ್ತ ಬಿಡುಗಡೆ ಮಾಡಲಾಗಿರುವ ಮತ್ತು ಸೆಪ್ಟೆಂಬರ್ 2020 ರಲ್ಲಿ ಮುಕ್ತಾಯಗೊಳ್ಳಲಿರುವ 6 ಯೋಜನೆಗಳಿಗೆ ರೂ 324.09 ಕೋಟಿ
ವಿವರ:
ಸ್ವದೇಶ್ ದರ್ಶನ್ ಯೋಜನೆ – ವಿಷಯಾಧಾರಿತ ಪ್ರವಾಸಿ ವಲಯಗಳ ಸಮಗ್ರ ಅಭಿವೃದ್ಧಿ ಎಂಬುದು ದೇಶದಲ್ಲಿ ಪ್ರವಾಸಿ ಮೂಲಭೂತ ಸೌಲಭ್ಯ ಅಭಿವೃದ್ಧಿಗಾಗಿ ಕೈಗೊಳ್ಳಲಾಗುವ ಪ್ರವಾಸೋದ್ಯಮ ಸಚಿವಾಲಯದ ಫ್ಲ್ಯಾಗ್ ಶಿಪ್ ಕಾರ್ಯಕ್ರಮವಾಗಿದೆ. ಈ ಯೋಜನೆ ಕೆಳಗಿನ ಅಂಶಗಳನ್ನು ಒಳಗೊಂಡಿದೆ.
i. ಪ್ರವಾಸೋದ್ಯಮವನ್ನು ಆರ್ಥಿಕ ಮತ್ತು ಉದ್ಯೋಗಾವಕಾಶದ ಪ್ರಮುಖ ಚಾಲನಾ ಸಾಧನವೆಂದು ಪರಿಗಣಿಸಿ
ii. ಯೋಜನಾಬದ್ಧವಾಗಿ ಮತ್ತು ಆದ್ಯತೆ ಮೇರೆಗೆ ಪ್ರವಾಸಿ ಸಾಮರ್ಥ್ಯ ಹೊಂದಿದ ವಲಯಗಳನ್ನು ಅಭಿವೃದ್ಧಿಪಡಿಸಿ
iii. ಗುರುತಿಸಲಾದ ಪ್ರದೇಶಗಳಲ್ಲಿ ಜೀವನೋಪಾಯ ಸೃಷ್ಟಿಸುವುದಕ್ಕೋಸ್ಕರ ದೇಶದ ಸಾಂಸ್ಕೃತಿಕ ಮತ್ತು ಪಾರಂಪರಿಕ ಮೌಲ್ಯವನ್ನು ಉತ್ತೇಜಿಸಿ
iv. ವಲಯ/ಗಮ್ಯಸ್ಥಾನದಲ್ಲಿ ಮೂಲಭೂತ ಸೌಲಭ್ಯಗಳನ್ನು ವಿಶ್ವ ದರ್ಜೆಗೇರಿಸುವ ಮೂಲಕ ನಿರಂತರವಾಗಿ ಪ್ರವಾಸಿಗರನ್ನು ಸೆಳೆಯುವುದರತ್ತ ಹೆಚ್ಚು ಗಮನಹರಿಸಿ.
v. ಸಮುದಾಯ ಆಧಾರಿತ ಅಭಿವೃದ್ಧಿ ಮತ್ತು ಬಡವರ ಪರ ಪ್ರವಾಸೋದ್ಯಮ ವಿಧಾನವನ್ನು ಅನುಸರಿಸುವುದು;
vi. ಆ ಪ್ರದೇಶದ ಸಮಗ್ರ ಅಭಿವೃದ್ಧಿ, ಜೀವನ ಮಟ್ಟದಲ್ಲಿ ಸುಧಾರಣೆ, ಹೆಚ್ಚುವ ಆದಾಯದ ಮೂಲಗಳಿಗೆ ಸಂಬಂಧಿಸಿದಂತೆ ಪ್ರವಾಸೋದ್ಯಮದ ಪ್ರಾಮುಖ್ಯತೆಯ ಕುರಿತು ಸ್ಥಳೀಯ ಸಮುದಾಯಗಳಲ್ಲಿ ಅರಿವು ಮೂಡಿಸುವುದು
vii. ಸ್ಥಳೀಯ ಸಮುದಾಯಗಳು ಸಕ್ರಿಯವಾಗಿ ಪಾಲ್ಗೊಳ್ಳುವಿಕೆ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು
viii. ಆರ್ಥಿಕ ಅಭಿವೃದ್ಧಿ ಮತ್ತು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲು, ಪ್ರವಾಸೋದ್ಯಮದ ಸಾಮರ್ಥ್ಯ ಪ್ರಭಾವ ಬೀರುವಂತೆ ಸಜ್ಜುಗೊಳಿಸುವುದು
ix. ವಿಷಯಾಧಾರಿತ ವಲಯಗಳನ್ನು ದೇಶಾದ್ಯಂತ ಅಭಿವೃದ್ಧಿಗೊಳಿಸುವುದರಿಂದ, ಪ್ರತಿ ಪ್ರದೇಶದಲ್ಲೂ ಲಭ್ಯವಿರುವ ಮೂಲಭೂತ ಸೌಕರ್ಯಗಳು, ರಾಷ್ಟ್ರೀಯ ಸಂಸ್ಕೃತಿ ಪ್ರತಿ ಪ್ರದೇಶದ ವಿಶಿಷ್ಢ ಅಂಶಗಳ ಸಾಮರ್ಥ್ಯವನ್ನು, ಸಂಪೂರ್ಣವಾಗಿ ಲಾಭದಾಯಕವಾಗುವ ರೀತಿಯಲ್ಲಿ ಎಲ್ಲಾ ಅನುಕೂಲಗಳನ್ನು ಬಳಸಿಕೊಳ್ಳುವುದು.
ಸ್ವದೇಶ ದರ್ಶನ್ ಯೋಜನೆಯಡಿಯಲ್ಲಿ ಪ್ರವಾಸೋದ್ಯಮ ಸಚಿವಾಲಯ, ಭಾರತವನ್ನು ವಿಶ್ವ ಮಟ್ಟದ ಪ್ರವಾಸಿ ತಾಣವನ್ನಾಗಿಸಲು, ಸಮರ್ಥನೀಯ ಹಾಗೂ ಸಮಗ್ರ ವಿಧಾನದಲ್ಲಿ, ಅತ್ಯಂತ ಮಹತ್ವವಾದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ಯೋಜನೆಯಡಿಯಲ್ಲಿ, ಖಾಸಗಿ ವಲಯದವರು ಹೂಡಿಕೆ ಮಾಡಲು ಮುಂದೆ ಬಾರದಿರುವ, ಕೊನೆಯ ಮೈಲಿಗಲ್ಲಿನ ವರೆಗೂ ಸಂಪರ್ಕ, ಪ್ರವಾಸಿ ಸಹಾಯ ಕೇಂದ್ರಗಳು, ಮಧ್ಯಮಾರ್ಗದ ಸೌಲಭ್ಯಗಳು, ಘನ ತ್ಯಾಜ್ಯ ನಿರ್ವಹಣೆ, ಉದ್ದೀಪನ, ಭೂದೃಶ್ಯಗಳು, ಉದ್ಯಾನವನಗಳು ಇತ್ಯಾದಿ. ಸೌಕರ್ಯಗಳನ್ನು ಅಭಿವೃದ್ಧಿಗೊಳಿಸುವ ಗುರಿ ಹೊಂದಲಾಗಿದೆ.
ಹಿನ್ನೆಲೆ :
ಎ. 2014-15 ರ ಆಯವ್ಯಯ ಭಾಷಣದಲ್ಲಿ ವಿತ್ತ ಸಚಿವರು ಈ ಕೆಳಗಿನ ಘೋಷಣೆಗಳನ್ನು ಮಾಡಿದ್ದರು “ಭಾರತದ ಶ್ರೀಮಂತ ಸಂಸ್ಕೃತಿ, ಇತಿಹಾಸ, ದಾರ್ಮಿಕ ಮತ್ತು ನೈಸರ್ಗಿಕ ಪರಂಪರೆ ಒಂದು ಉದ್ಯಮದ ರೀತಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಉದ್ಯೋಗಸೃಷ್ಟಿಯನ್ನು ಮಾಡಬಲ್ಲ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದ್ದರು. ನಾನು ನಿರ್ದಿಷ್ಟ ವಿಷಯಾಧಾರಿತ ಸುಮಾರು 5 ವಲಯಗಳ ನಿರ್ಮಾಣಕ್ಕೆ ಪ್ರಸ್ತಾಪಿಸುತ್ತಿದ್ದೇನೆ ಮತ್ತು ಆ ಉದ್ದೇಶಕ್ಕಾಗಿ ರೂ 500 ಕೋಟಿ ಮೀಸಲಿರಿಸುತ್ತಿದ್ದೇನೆ.”
ಬಿ. ನಂತರ 2015 ರ ಜನವರಿಯಲ್ಲಿ ಪ್ರವಾಸೋದ್ಯಮ ಸಚಿವಾಲಯ ಹಿಮಾಲಯ ವಲಯ, ಈಶಾನ್ಯ ವಲಯ, ಕೃಷ್ಣ ವಲಯ, ಬೌದ್ಧ ವಲಯ ಹಾಗೂ ಕರಾವಳಿ ವಲಯಗಳನ್ನೊಳಗೊಂಡ 5 ವಲಯಗಳ ಸ್ವದೇಶ್ ದರ್ಶನ್ ಯೋಜನೆ (ಕೇಂದ್ರ ಕಾರ್ಯ ಕ್ಷೇತ್ರ ಯೋಜನೆ)ಯನ್ನು ಆರಂಭಿಸಿತು. ನಂತರ 2015, 2016 ಮತ್ತು 2017ರಲ್ಲಿ ಇನ್ನೂ 10 ವಿಷಯಾಧಾರಿತ ವಲಯಗಳನ್ನು ಸೇರಿಸಿ ಯೋಜನೆಯನ್ನು 15 ವಿಷಯಾಧಾರಿತ ವಲಯಗಳಿಗೆ ವಿಸ್ತರಿಸಲಾಯಿತು. ಇದರಲ್ಲಿ ಮರುಭೂಮಿ ವಲಯ, ಬುಡಕಟ್ಟು ವಲಯ, ಪರಿಸರ ವಲಯ, ವನ್ಯಮೃಗ ವಲಯ, ತೀರ್ಥಂಕರ ವಲಯ ಮತ್ತು ಸೂಫಿ ವಲಯಗಳನ್ನು ಸೇರಿಸಲಾಯಿತು.
ಸಿ. ರಾಷ್ಟ್ರೀಯ ಉತ್ಪಾದನಾ ಮಂಡಳಿ (NPC) ಈ ಯೋಜನೆಯ ಮಧ್ಯಸ್ಥಿಕೆ ವಹಿಸುವವರ ಕುರಿತ ಮೌಲ್ಯ ಮಾಪನ ಮಾಡಿತು. ಎನ್ ಪಿ ಸಿ ತನ್ನ ಮೌಲ್ಯ ಮಾಪನ ವರದಿಯನ್ನು ದಿನಾಂಕ 15.06.2017 ರಂದು ಸಲ್ಲಿಸಿದೆ. ಈ ಮೌಲ್ಯ ಮಾಪನವನ್ನು ಆಧರಿಸಿ ಈ ಯೋಜನೆಯಲ್ಲಿ ಮಧ್ಯಂತರ ತಿದ್ದುಪಡಿ ಮಾಡಲಾಗಿದೆ. ಸ್ವದೇಶ್ ದರ್ಶನ್ ಯೋಜನೆ ಅಡಿಯಲ್ಲಿ ಮಧ್ಯಮಾರ್ಗದ ಸೌಲಭ್ಯಗಳ ಅಭಿವೃದ್ಧಿಯನ್ನು ಪ್ರವಾಸೋದ್ಯಮ ವಲಯಗಳಲ್ಲಿ ಉಪ ಯೋಜನೆಯನ್ನಾಗಿ ಪರಿವರ್ತಿಸಲಾಗಿದೆ.
ಡಿ. 13 ಅಕ್ಟೋಬರ್ 2017 ರಂದು ವಿತ್ತೀಯ ಖರ್ಚು ವೆಚ್ಚ ಸಮೀತಿ ಸಭೆ ನಡೆದಿತ್ತು ಹಾಗೂ ಈ ಸಭೆಯಲ್ಲಿ 2017-18 ರಿಂದ 2019-20 ರ ವರೆಗೂ ಈ ಯೋಜನೆಯಡಿಯಲ್ಲಿ ರೂ 5048 ಕೋಟಿ ಖರ್ಚು ಮಾಡಲು ಶಿಫಾರಸ್ಸು ಮಾಡಿದೆ. ಇದರಲ್ಲಿ ರೂ 3848 ಕೋಟಿ ಚಾಲ್ತಿಯಲ್ಲಿರುವ ಯೋಜನೆಗಳನ್ನು ಪೂರ್ತಿಗೊಳಿಸಲು ಮತ್ತು ರೂ 1200 ಕೋಟಿ ಹೊಸ ಯೋಜನೆಗಳಿಗಾಗಿ ಆಯವ್ಯಯದಲ್ಲಿ ಮೀಸಲಿರಿಸಲಾಗಿದೆ. ಹಣಕಾಸು ಖರ್ಚು ವೆಚ್ಚದ ಸಮೀತಿಯು 2017-2020 ರವರೆಗೂ ಕೈಗೊಳ್ಳುವ ಹೊಸ ಯೋಜನೆಗಳಿಗೆ ಮಂಜೂರಾತಿಯನ್ನು ರೂ 2500 ಕೋಟಿಗಳಿಗೆ ಸೀಮಿತಗೊಳಿಸಬೇಕೆಂದು ಶಿಫಾರಸ್ಸು ಮಾಡಿದೆ.
ಇ. ಇದನ್ನು ಆರಂಭಿಸಿದಾಗಿನಿಂದ ಪ್ರವಾಸೋದ್ಯಮ ಸಚಿವಾಲಯ 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 77 ಯೋಜನೆಗಳ ಅನುಮತಿ ನೀಡಿದ್ದು ರೂ 6121.69 ಕೋಟಿ ಮಂಜೂರು ಮಾಡಿದೆ ಮತ್ತು ಈ ಯೋಜನೆಯಡಿಯಲ್ಲಿ ರೂ 3096.14 ಕೋಟಿ ವೆಚ್ಚವನ್ನು ಮಾಡಲಾಗಿದೆ. ಈ ಯೋಜನೆಗಳಲ್ಲಿ 2014-15 ರಿಂದ 2017-18 ವರೆಗೆ ಈಗಾಗಲೇ ಮಂಜೂರು ಮಾಡಲಾದ 66 ಯೋಜನೆಗಳ ಕೆಲಸ ಈಗಾಗಲೇ ಆರಂಭವಾಗಿದೆ. 2018-19 ರಲ್ಲಿ ಮಂಜೂರು ಮಾಡಲಾದ 11 ಯೋಜನೆಗಳು ಇನ್ನೂ ಆರಂಭಿಕ ಹಂತದಲ್ಲಿದ್ದು ಇವುಗಳಿಗೆ ಯಾವುದೇ ಹಣಕಾಸು ಬಿಡುಗಡೆ ಮಾಡಲಾಗಿಲ್ಲ. 17 ಯೋಜನೆಗಳ ಪ್ರಮುಖ ಅಂಶಗಳು ಈಗಾಗಲೇ ಪೂರ್ಣಗೊಂಡಿದ್ದು ಅಗಸ್ಟ್ 2018 ರಿಂದ ಜನವರಿ 2019 ರ ಮಧ್ಯೆ 13 ಯೋಜನೆಗಳನ್ನು ಉದ್ಘಾಟಿಸಲಾಗಿದೆ.
(Release ID: 1565708)
Visitor Counter : 115