ಪ್ರಧಾನ ಮಂತ್ರಿಯವರ ಕಛೇರಿ

ಸ್ವಾಮಿ ವಿವೇಕಾನಂದ ಜಯಂತಿಯಂದು ಪ್ರಧಾನಮಂತ್ರಿ ಅವರನ್ನು ಸ್ಮರಿಸಿಕೊಂಡರು 

Posted On: 12 JAN 2019 10:55AM by PIB Bengaluru

ಸ್ವಾಮಿ ವಿವೇಕಾನಂದ ಜಯಂತಿಯಂದು ಪ್ರಧಾನಮಂತ್ರಿ ಅವರನ್ನು ಸ್ಮರಿಸಿಕೊಂಡರು 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಾಮಿ ವಿವೇಕಾನಂದ ಜಯಂತಿಯಂದು ಅವರನ್ನು ಸ್ಮರಿಸಿದರು. 

“ ಏಳಿರಿ, ಎದ್ದೇಳಿರಿ ಮತ್ತು ಗುರಿಮುಟ್ಟುವ ತನಕ ಮುನ್ನುಗ್ಗಿರಿ. ಪೂಜ್ಯ ಸ್ವಾಮಿ ವಿವೇಕಾನಂದ ಅವರ ಜಯಂತಿಯಂದು ಅಂತಹ ಶಕ್ತಿಶಾಲಿ ಶಬ್ದಗಳನ್ನು ಮತ್ತು ಪ್ರಬುದ್ಧ ಚಿಂತನೆಗಳನ್ನು ಸ್ಮರಿಸಿಕೊಳ್ಳೋಣ. ಸೇವೆ ಮತ್ತು ತ್ಯಾಗಗಳ ಆದರ್ಶವನ್ನು ಅವರು ಒತ್ತಿ ಸಾರುತ್ತಿದ್ದರು. ಯುವಶಕ್ತಿಯಲ್ಲಿ ಅವರಿಗೆ ಅಚಲ/ಸದೃಢ ನಂಬಿಕೆಯಿತ್ತು. 

ಸ್ವಾಮಿ ವಿವೇಕಾನಂದ ಅವರ ಚಿಂತನೆಗಳು ಮತ್ತು ಆದರ್ಶಗಳು ಕೋಟ್ಯಾಂತರ ಭಾರತೀಯರಿಗೆ, ಅದರಲ್ಲೂ ಯುವ ಜನತೆಗೆ ಪ್ರೇರಣೆ ಹಾಗೂ ಚೈತನ್ಯ ನೀಡುತ್ತವೆ. ಬಲಿಷ್ಠ, ಸಂಚಲನಶೀಲ, ಸರ್ವರ ಸೇರ್ಪಡೆಯುಳ್ಳ ಭಾರತ ನಿರ್ಮಾಣ ಹಾಗೂ ಅಂತಹ ಭಾರತವು ಹಲವಾರು ಕ್ಷೇತ್ರಗಳಲ್ಲಿ ಜಾಗತಿಕ ನಾಯಕತ್ವವನ್ನು ಹೊಂದಲು ಅಗತ್ಯ ಪ್ರೇರಣೆಯನ್ನು ನಾವು ಅವರಿಂದ ಪಡೆದಿದ್ದೇವೆ " ಎಂದು ಪ್ರಧಾನಮಂತ್ರಿ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ 
 

***



(Release ID: 1559798) Visitor Counter : 93