ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಕೇದಾರನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು; ಪುನರ್ನಿರ್ಮಾಣ ಯೋಜನೆಗಳ ಪ್ರಗತಿ ಪರಿಶೀಲಿಸಿದರು

Posted On: 07 NOV 2018 12:02PM by PIB Bengaluru

ಪ್ರಧಾನಮಂತ್ರಿ ಕೇದಾರನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು; ಪುನರ್ನಿರ್ಮಾಣ ಯೋಜನೆಗಳ ಪ್ರಗತಿ ಪರಿಶೀಲಿಸಿದರು


ದೀಪಾವಳಿಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇದಾರನಾಥಕ್ಕೆ ಭೇಟಿ ನೀಡಿದರು. ಐತಿಹಾಸಿಕ ಕೇದಾರನಾಥ ದೇವಾಲಯದಲ್ಲಿ ಪ್ರಧಾನಮಂತ್ರಿ ಅವರು ಪ್ರಾರ್ಥನೆ ಸಲ್ಲಿಸಿದರು. ಪ್ರಮುಖ ಪುನರ್ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿ ನಡೆಯುತ್ತಿರುವ ಸಂಪೂರ್ಣ ದೇವಾಲಯ ಸಂಕೀರ್ಣದ ಸುತ್ತ ಪ್ರಧಾನಮಂತ್ರಿ ನಡೆದಾಡಿದರು . ಕಾಮಗಾರಿ ಪ್ರಗತಿಯ ಕುರಿತು ಹಿರಿಯ ಅಧಿಕಾರಿಗಳು ಪ್ರಧಾನಮಂತ್ರಿ ಅವರಿಗೆ  ವಿವರಿಸಿದರು. ದೇವಾಲಯ ಸಂಕೀರ್ಣದ ಆವರಣದಲ್ಲಿದ್ದ ವಿವಿಧ ಜನರಲ್ಲಿ ಪ್ರಧಾನಮಂತ್ರಿ ಅವರು ಸಂಕ್ಷಿಪ್ತ ಸಂವಾದ ನಡೆಸಿದರು.  
 

2013ರಲ್ಲಿ ಉಂಟಾದ ಭೀಕರ ನೆರೆ ಮತ್ತು ಭೂಕುಸಿತದಿಂದ ಹಾನಿಗೊಳಗಾದ ಕೇದಾರನಾಥ ದೇವಾಲಯ ಸಂಕೀರ್ಣ ಈಗ ಬೃಹತ್ ಅಭಿವೃದ್ಧಿ ಮತ್ತು ಪುನರ್ನಿರ್ಮಾಣ ಕಾರ್ಯಗಳ ಪ್ರಧಾನ ಕೇಂದ್ರವಾಗಿದೆ.


****



(Release ID: 1552059) Visitor Counter : 50