ಸಂಪುಟ
ಜಮ್ಮು & ಕಾಶ್ಮೀರದ ಗ್ರಾಮೀಣ ದುರ್ಬಲ ಕುಟುಂಬಗಳಿಗೆ ಕಾಯಕಲ್ಪ
Posted On:
19 SEP 2018 1:22PM by PIB Bengaluru
ಜಮ್ಮು & ಕಾಶ್ಮೀರದ ಗ್ರಾಮೀಣ ದುರ್ಬಲ ಕುಟುಂಬಗಳಿಗೆ ಕಾಯಕಲ್ಪ
ಜಮ್ಮು ಮತ್ತು ಕಾಶ್ಮೀರಕ್ಕೆ ದೀನದಯಾಳ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಮಿಷನ್ ನನ್ನು ಅನುಷ್ಠಾನಗೊಳಿಸಲು ವಿಶೇಷ ಪ್ಯಾಕೇಜ್ – ಉಮ್ಮೀದ್ ವಿಸ್ತರಣೆ ಜಮ್ಮು & ಕಾಶ್ಮೀರಕ್ಕೆ ದೀನದಯಾಳ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಮಿಷನ್ ಅಡಿಯಲ್ಲಿ ಬಡತನದ ಅನುಪಾತಕ್ಕೆ ಜೋಡಿಸದೆ ಅನುದಾನ ನೀಡಲು ಕೇಂದ್ರ ಸಂಪುಟ ಸಭೆ ಅಂಗೀಕಾರ
ಜಮ್ಮು & ಕಾಶ್ಮೀರಕ್ಕೆ ದೀನದಯಾಳ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಮಿಷನ್ ಅಡಿ ವಿಶೇಷ ಪ್ಯಾಕೇಜನ್ನು ಅನುಷ್ಠಾನಗೊಳಿಸಲು 2018-19ರ ಅವಧಿಯನ್ನು ಇನ್ನೊಂದು ವರ್ಷದ ತನಕ ವಿಸ್ತಾರಗೊಳಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕೇಂದ್ರ ಸಂಪುಟ ಸಭೆ ಅನುಮೋದನೆ ನೀಡಿತು.
ರಾಜ್ಯ ಸರಕಾರಕ್ಕೆ ದೀನದಯಾಳ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಮಿಷನ್ ಅಡಿ ವಿಶೇಷ ಪ್ಯಾಕೇಜ್ ನ್ನು ಬಡತನದ ಅನುಪಾತಕ್ಕೆ ಜೋಡಿಸದೆ ಆವಶ್ಯಕತೆಯ ಆಧಾರದ ಮೇಲೆ ಅನುಷ್ಠಾನಗೊಳಿಸುವುದಕ್ಕಾಗಿ ಅನುದಾನ ನೀಡಲು ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಮೊದಲೇ ಅನುಮೋದನೆಗೊಂಡ ಮೂಲ ಆರ್ಥಿಕ ಮೊತ್ತ ರೂ 755.32 ಕೋಟಿಗಳ ಚೌಕಟ್ಟಿನೊಳಗೆ ಯಾವುದೇ ಹೆಚ್ಚುವರಿ ಆರ್ಥಿಕ ಬಾಧ್ಯತೆಗಳಾಗದಂತೆ ರಾಜ್ಯದಲ್ಲಿರುವ ಮೂರರಲ್ಲಿ ಎರಡು ಪಾಲಿನಷ್ಟು ದುರ್ಬಲ ಕುಟುಂಬಗಳನ್ನು ತಲುಪಲು ಸಮಯಾವಕಾಶವನ್ನು ವಿಸ್ತರಿಸಲಾಗಿದೆ. 2018-19ರ ಒಂದು ವರ್ಷದ ಅವಧಿಗೆ ರೂ 143.604 ಕೋಟಿಯಷ್ಟು ಮೊತ್ತದ ಅಗತ್ಯವಿದೆ.
ಪರಿಣಾಮ:
• ಇದು ನಿರ್ಧಿಷ್ಟ ಕಾಲ ಮಿತಿಯೊಳಗೆ ರಾಜ್ಯ ಎಲ್ಲ ದುರ್ಬಲ ಕುಟುಂಬಗಳನ್ನು ವ್ಯಾಪ್ತಿಯೊಳಗೆ ತರಲು ಸಹಾಯ ಮಾಡುತ್ತದೆ. ( ಒಟ್ಟಾರೆ ಇರುವ ಕುಟುಂಬಗಳಲ್ಲಿ ಮೂರರಲ್ಲಿ ಎರಡು ಪಾಲಿನಷ್ಟು ಎಂದು ಅಂದಾಜಿಸಲಾಗಿದೆ)
• ಸಾಮಾಜಿಕ – ಆರ್ಥಿಕ ಜಾತಿ ಜನಗಣತಿ 2011ರಲ್ಲಿ ಪಟ್ಟಿಮಾಡಿರುವ ವಂಚಿತ ವರ್ಗಕ್ಕೆ ಸೇರಿದ ಕನಿಷ್ಟ ಒಂದು ಕುಟುಂಬ ಮತ್ತು ಸ್ವಯಂ ಸೇರ್ಪಡೆ ವರ್ಗದಡಿ ಕುಟುಂಬಗಳ ಸಂಚಲನವನ್ನು ಇದು ದೃಢೀಕರಿಸುತ್ತದೆ.
• ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಬ್ಲಾಕ್ ಗಳೂ ದೀನದಯಾಳ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಮಿಷನ್ ನ ವ್ಯಾಪ್ತಿಯೊಳಗೆ ಬರುವುದನ್ನು ದೃಢೀಕರಿಸುತ್ತದೆ ಮತ್ತು ರಾಜ್ಯದಲ್ಲಿ ಸಾಮಾಜಿಕ ಒಳಗೊಳ್ಳುವಿಕೆ, ಸಾಮಾಜಿಕ ಅಭಿವೃದ್ಧಿ ಹಾಗೂ ಜೀವನೋಪಾಯಗಳಲ್ಲಿ ಸುಧಾರಣೆ ತರುವ ಮೂಲಕ ಬಡತನ ನಿರ್ಮೂಲನೆಗೆ ಒತ್ತು ನೀಡಲಾಗಿದೆ .
ಹಿನ್ನಲೆ:
ಮೇ. 2013ರಲ್ಲಿ ಅಂಗಿಕರಿಸಿದ ವಿಶೇಷ ಪ್ಯಾಕೇಜ್ ಗಳನ್ನು ರಾಜ್ಯದಲ್ಲಿದ್ದ ಗೊಂದಲದ ವಾತಾವರಣ ಮತ್ತು ತಡೆಗಟ್ಟಲಾಗದ ಕಾರಣಗಳಿಂದಾಗಿ ಸಂಪೂರ್ಣವಾಗಿ ಅನುಷ್ಠಾನಗೊಳಿಸಲಾಗಿಲ್ಲ. ಜಮ್ಮು ಮತ್ತು ಕಾಶ್ಮೀರಕ್ಕಾಗಿ ಈ ವಿಸ್ತರಿಸಿದ ಅವಧಿಯಲ್ಲಿ ಬಡತನದ ಅನುಪಾತವನ್ನು ಜೋಡಿಸದೆ, ಬೇಡಿಕೆಯಾಧಾರದಲ್ಲಿ ದೀನದಯಾಳ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಮಿಷನ್ ಅಡಿ ಅನುದಾನ ಬಿಡುಗಡೆಯನ್ನು ಮುಂದುವರಿಸಲು ಮತ್ತು ಈ ಹಿಂದೆ ಅನುಮೋದನೆಗೊಂಡ ಅನುಷ್ಠಾನದ ಅವಧಿಯ ವಿಸ್ತರಣೆಗಾಗಿ ಈಗ ರಾಜ್ಯ ಸರಕಾರವು ಭಾರತ ಸರಕಾರವನ್ನು ಪುನಃ ಮನವಿ ಮಾಡಿಕೊಂಡಿತ್ತು. ಆದುದರಿಂದ, ಸಂಪುಟ ಸಭೆಯ ಅಂಗೀಕಾರವು ಜಮ್ಮು ಮತ್ತು ಕಾಶ್ಮೀರದ ಗ್ರಾಮೀಣ ದುರ್ಬಲ ಕುಟುಂಬಗಳಿಗೆ ಕಾಯಕಲ್ಪವಾಗಲಿದೆ.
(Release ID: 1547178)
Visitor Counter : 66