ಪ್ರಧಾನ ಮಂತ್ರಿಯವರ ಕಛೇರಿ
ಶ್ರೀ ಗುರು ಗ್ರಂಥ ಸಾಹಿಬ್ ಅವರ ಪ್ರಕಾಶ್ ಪುರಬ್ ಗೆ ಶುಭ ಕೋರಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
12 SEP 2026 11:59PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಗುರು ಗ್ರಂಥ ಸಾಹಿಬ್ ಅವರ ಪ್ರಕಾಶ್ ಪುರಬ್ ಸಂದರ್ಭದಲ್ಲಿ ಶುಭಾಶಯಗಳನ್ನು ಕೋರಿದ್ದಾರೆ.
ಶತಮಾನಗಳಿಂದ ಶ್ರೀ ಗುರು ಗ್ರಂಥ ಸಾಹಿಬ್ ಅವರು ಮಾನವೀಯತೆಗೆ ನಿಸ್ವಾರ್ಥ ಸೇವೆ, ಮಾನವ ಘನತೆ ಮತ್ತು ಒಗ್ಗಟ್ಟಿನ ಮಾರ್ಗವನ್ನು ತೋರಿಸಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು.
ಈ ಪವಿತ್ರ ಸಂದರ್ಭವು ಸಮಾಜದಲ್ಲಿ ಈ ಮೌಲ್ಯಗಳನ್ನು ಗಾಢವಾಗಿಸಲು ಮತ್ತು ಹೆಚ್ಚು ಸಹಾನುಭೂತಿ ಮತ್ತು ಸಾಮರಸ್ಯದ ಜಗತ್ತನ್ನು ನಿರ್ಮಿಸಲು ಪ್ರತಿಯೊಬ್ಬರಿಗೂ ಸ್ಫೂರ್ತಿ ನೀಡುತ್ತದೆ ಎಂದು ಶ್ರೀ ಮೋದಿ ಭರವಸೆ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;
"ಶ್ರೀ ಗುರು ಗ್ರಂಥ ಸಾಹಿಬ್ ಅವರ ಪ್ರಕಾಶ್ ಪುರಬ್ ಗೆ ಶುಭಾಶಯಗಳು.
ಶತಮಾನಗಳಿಂದ, ಇದು ಮಾನವೀಯತೆಗೆ ನಿಸ್ವಾರ್ಥ ಸೇವೆ, ಮಾನವ ಘನತೆ ಮತ್ತು ಒಗ್ಗಟ್ಟಿನ ಮಾರ್ಗವನ್ನು ತೋರಿಸಿದೆ.
ಈ ಪವಿತ್ರ ಸಂದರ್ಭವು ನಮ್ಮ ಸಮಾಜದಲ್ಲಿ ಈ ಮೌಲ್ಯಗಳನ್ನು ಗಾಢವಾಗಿಸಲು ಮತ್ತು ಹೆಚ್ಚು ಸಹಾನುಭೂತಿ ಮತ್ತು ಸಾಮರಸ್ಯದ ಜಗತ್ತನ್ನು ನಿರ್ಮಿಸಲು ನಮಗೆ ಸ್ಫೂರ್ತಿ ನೀಡಲಿ."
*****
(ಪ್ರಕಟಣೆ ಐ.ಡಿ.: 2310273)
ವಿಸಿಟರ್ ಕೌಂಟರ್ : 29