ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಡೋದರಾದಲ್ಲಿ ಪ್ರಮುಖ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿನ ತಮ್ಮ ಭಾಷಣದ ಆಯ್ದ ಭಾಗ ಹಂಚಿಕೊಂಡಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 08 SEP 2026 5:55PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಡೋದರಾದಲ್ಲಿ ನಡೆದ ಪ್ರಮುಖ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ತಾವು ಮಾಡಿದ ಭಾಷಣದ ಕೆಲವು ಭಾಗವನ್ನು ಹಂಚಿಕೊಂಡಿದ್ದಾರೆ.

 

ಶ್ರೀ ಮೋದಿ ಅವರು ಸರಣಿ ಎಕ್ಸ್ ಪೋಸ್ಟ್ ಗಳಲ್ಲಿ ಹೀಗೆ ಹೇಳಿದ್ದಾರೆ : 

 

“2,800ಕ್ಕೂ ಹೆಚ್ಚು ಕಿಮೀ ಉದ್ದದ ಪ್ರತ್ಯೇಕ ಸರಕು ಸಾಗಣೆ ಕಾರಿಡಾರ್ ಈಗ ಪೂರ್ಣ.

 

ಇದು ಗತಿ ಶಕ್ತಿ ಮತ್ತು ಭಾರತದ ಸರಕು ಸಾಗಣೆಯ ರೂಪಾಂತರ ಪ್ರಕ್ರಿಯೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲು.”

"ಭಾರತ ನಿರ್ಮಿಸುತ್ತಿದೆ:

 

ಚಿಪ್ (ವಿದ್ಯುನ್ಮಾನ ಸಾಧನ) ಗಳಿಂದ ಹಿಡಿದು ಶಿಪ್ (ಹಡಗು) ಗಳವರೆಗೆ... ಸ್ಥಳೀಯವಾಗಿ ಸಂಪೂರ್ಣ ಮೌಲ್ಯ ಸರಪಳಿ.

 

ಸೌರಶಕ್ತಿಯಿಂದ ಪರಮಾಣು ಶಕ್ತಿಯವರೆಗೆ... ಭವಿಷ್ಯದ ಎಐ, ದತ್ತಾಂಶ ಕೇಂದ್ರಗಳು ಮತ್ತು ಕೈಗಾರಿಕೆಗಳಿಗೆ ಇಂಧನ ಪರಿಸರ ವ್ಯವಸ್ಥೆ."

 

*****


(ಪ್ರಕಟಣೆ ಐ.ಡಿ.: 2308081) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Assamese , Gujarati , Telugu , Malayalam