ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐ.ಎಲ್.ಒ.) ಗುರುತಿಸಿರುವಂತೆ ಭಾರತದ ಸಾಮಾಜಿಕ ಭದ್ರತಾ ಜಾಲದ ಅಡಿಯಲ್ಲಿ ಈಗ 101 ಕೋಟಿ ನಾಗರಿಕರು ಸೇರಿದ್ದಾರೆ ಎಂದು ಡಾ. ಮನ್ಸುಖ್ ಮಾಂಡವಿಯಾ ಅವರು ಹೇಳಿದರು


ಕಾರ್ಮಿಕರ ಕಲ್ಯಾಣ ಮತ್ತು ಉದ್ಯೋಗದಾತರ ಹಿತಾಸಕ್ತಿಗಳನ್ನು ಮುನ್ನಡೆಸುವ ಸಮತೋಲಿತ ಅಭಿವೃದ್ಧಿ ಮಾದರಿಯನ್ನು ಹೊಂದಿರುವುದು ಅತ್ಯಗತ್ಯ ಎಂದು ಕೇಂದ್ರ ಸಚಿವರಾದ ಡಾ. ಮಾಂಡವಿಯಾ ಹೇಳಿದರು

ಉತ್ಪತ್ತಿಯಾಗುವ ಉದ್ಯೋಗವು ಜಿಡಿಪಿ ಬೆಳವಣಿಗೆಯ ಶೇಕಡಾವಾರು ಸಂಖ್ಯೆ ಆಧಾರದಲ್ಲಿ ಹನ್ನೆರಡು ವರ್ಷಗಳ ಹಿಂದೆ ಇದ್ದ ಶೇ. 0.008 ರಿಂದ ಇಂದು ಅದು ಶೇ. 1.11 ಕ್ಕೆ ಏರಿದೆ: ಡಾ. ಮಾಂಡವಿಯಾ

ಉತ್ತಮ ರೀತಿಯಲ್ಲಿ ನಡೆಸಲ್ಪಡುವ ಖಾಸಗಿ ಆಸ್ಪತ್ರೆಗಳನ್ನು ಉದ್ಯೋಗಿಗಳ ರಾಜ್ಯ ವಿಮಾ ನಿಗಮದ (ಇ.ಎಸ್.ಐ.ಸಿ.) ಸೌಲಭ್ಯಗಳಾಗಿ ಗೊತ್ತುಪಡಿಸಬಹುದು ಎಂದು ಕೇಂದ್ರ ಸಚಿವರು ಹೇಳಿದರು

ಒಂದು ಶತಕೋಟಿಗೂ ಹೆಚ್ಚು ನಾಗರಿಕರಿಗೆ ಸಾಮಾಜಿಕ ರಕ್ಷಣೆ ನೀಡುತ್ತಿರುವುದಕ್ಕೆ ಐ.ಎಲ್.ಒ. ಪ್ರತಿನಿಧಿಗಳು ಭಾರತವನ್ನು ಅಭಿನಂದಿಸಿದರು

प्रविष्टि तिथि: 31 JUL 2026 1:47PM by PIB Bengaluru

ಭಾರತದ ಸಾಮಾಜಿಕ ರಕ್ಷಣಾ ವ್ಯವಸ್ಥೆಗಳು ಈಗ ಸುಮಾರು 101 ಕೋಟಿ ಜನರನ್ನು ಅಥವಾ ಒಟ್ಟಾರೆ ಜನಸಂಖ್ಯೆಯ ಶೇ. 68 ಕ್ಕಿಂತ ಹೆಚ್ಚು ಜನರನ್ನು ಒಳಗೊಳ್ಳುತ್ತವೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರು ಇಂದು ನವದೆಹಲಿಯಲ್ಲಿ ನಡೆದ 4ನೇ ಜಾಗತಿಕ ಕೈಗಾರಿಕಾ ಸಂಬಂಧಗಳ ಶೃಂಗಸಭೆಯಲ್ಲಿ ಹೇಳಿದರು. ಕಳೆದ ವಾರ ಹೈದರಾಬಾದ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐ.ಎಲ್.ಒ.) ಮತ್ತು ಬ್ರಿಕ್ಸ್ ಕಾರ್ಮಿಕ ಸಚಿವರ ಸಭೆಯು ಈ ಅಂಕಿ ಅಂಶವನ್ನು ವಿವರವಾಗಿ ವಿವರಿಸಿ ಹೇಳಿದೆ ಎಂದು ಕೇಂದ್ರ ಸಚಿವರು ಹೇಳಿದರು, ಇದು ಭಾರತದ ಸಾಮಾಜಿಕ ಭದ್ರತಾ ವ್ಯಾಪ್ತಿಗೆ ದೊರಕಿದ ಜಾಗತಿಕ ಮನ್ನಣೆಗೆ ಉತ್ತಮ ಸಾಕ್ಷಿಯಾಗಿದೆ.

ಅಖಿಲ ಭಾರತ ಉದ್ಯೋಗದಾತರ ಸಂಸ್ಥೆ (ಎ.ಐ.ಒ.ಇ.) ಯು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ (ಎಫ್.ಐ.ಸಿ.ಸಿ.ಐ.) ಮತ್ತು ಐ.ಎಲ್.ಒ ಸಹಯೋಗದೊಂದಿಗೆ ಶೃಂಗಸಭೆಯನ್ನು ಆಯೋಜಿಸಿದೆ.

ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿ ಒಟ್ಟಿಗೆ ಪ್ರಗತಿ ಸಾಧಿಸುವುದನ್ನು ಖಚಿತಪಡಿಸಿಕೊಳ್ಳಲು ಸಾಮರಸ್ಯದ ಕೈಗಾರಿಕಾ ಸಂಬಂಧಗಳಿಗೆ ಸರ್ಕಾರಗಳು, ಕೈಗಾರಿಕೆಗಳು, ಉದ್ಯೋಗದಾತರು, ಕಾರ್ಮಿಕರು ಮತ್ತು ಕಾರ್ಮಿಕ ಸಂಘಗಳ ನಡುವೆ ನಿರಂತರ ಸಮನ್ವಯದ ಅಗತ್ಯವಿದೆ ಎಂದು ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಹೇಳಿದರು. ಉದ್ಯೋಗ ಸೃಷ್ಟಿಗೆ ಚಾಲನೆ ನೀಡುವುದರಿಂದ ರಾಷ್ಟ್ರೀಯ ಅಭಿವೃದ್ಧಿಗೆ ಕೈಗಾರಿಕೀಕರಣ ಅತ್ಯಗತ್ಯ ಎಂದು ಒತ್ತಿ ಹೇಳಿದ ಕೇಂದ್ರ ಸಚಿವರು, ಜೀವನೋಪಾಯ ಅವಕಾಶಗಳನ್ನು ವಿಸ್ತರಿಸುವಲ್ಲಿ, ಆರ್ಥಿಕತೆಯನ್ನು ಬಲಪಡಿಸುವಲ್ಲಿ ಮತ್ತು ಮಹಿಳಾ ಸಬಲೀಕರಣವನ್ನು ಉತ್ತೇಜಿಸುವಲ್ಲಿ ಸ್ವ-ಸಹಾಯ ಗುಂಪುಗಳು ಮತ್ತು ಸಹಕಾರಿ ಮಾದರಿಗಳು, ವಿಶೇಷವಾಗಿ ಮಹಿಳಾ ನೇತೃತ್ವದ ಉಪಕ್ರಮಗಳ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ವಿವರಿಸಿ ಹೇಳಿದರು. "ಕಾರ್ಮಿಕರ ಕಲ್ಯಾಣ ಮತ್ತು ಸಾಮಾಜಿಕ ಭದ್ರತೆಯನ್ನು ಮುನ್ನಡೆಸುವ ಸಮತೋಲಿತ ಅಭಿವೃದ್ಧಿ ಮಾದರಿಯನ್ನು ಹೊಂದಿರುವುದು ಅತ್ಯಗತ್ಯ, ಜೊತೆಗೆ ಉದ್ಯೋಗದಾತರಿಗೆ ವ್ಯವಹಾರ ಮಾಡುವ ಸುಲಭತೆಯನ್ನು ಖಚಿತಪಡಿಸುತ್ತದೆ" ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಸ್ಥಿರವಾದ ತೆರಿಗೆ, ಹೆಚ್ಚುತ್ತಿರುವ ಉಳಿತಾಯ, ಹೆಚ್ಚಿನ ಖರೀದಿ ಶಕ್ತಿ ಮತ್ತು ಹೆಚ್ಚಿದ ಉತ್ಪಾದನೆಯಿಂದ ಬೆಂಬಲಿತವಾದ ನಿರಂತರ ಆರ್ಥಿಕ ಬೆಳವಣಿಗೆ ಅಭಿವೃದ್ಧಿ ಮತ್ತು ಉದ್ಯೋಗದ ಸದ್ಗುಣ ಚಕ್ರವನ್ನು ಸೃಷ್ಟಿಸಿದೆ ಎಂದು ಕೇಂದ್ರ ಸಚಿವ ಡಾ. ಮಾಂಡವಿಯ ಅವರು ಹೇಳಿದರು. ಉದ್ಯೋಗ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುವುದನ್ನು ಉಲ್ಲೇಖಿಸಿ, ಹನ್ನೆರಡು ವರ್ಷಗಳ ಹಿಂದೆ ಕಂಡುಬಂದ ಉದ್ಯೋಗದಲ್ಲಿ ಶೇ. 0.008 ರಷ್ಟು ಬೆಳವಣಿಗೆಗೆ ಹೋಲಿಸಿದರೆ, ಜಿಡಿಪಿಯಲ್ಲಿನ ಪ್ರತಿ ಒಂದು ಶೇಕಡಾ ಹೆಚ್ಚಳವು ಶೇ. 1.11 ರಷ್ಟು ಉದ್ಯೋಗ ಬೆಳವಣಿಗೆಯನ್ನು ಉತ್ಪಾದಿಸುತ್ತಿದೆ ಎಂದು ಅವರು ಹೇಳಿದರು.

ಉದ್ಯೋಗಿಗಳ ರಾಜ್ಯ ವಿಮಾ ನಿಗಮವು (ಇ.ಎಸ್.ಐ.ಸಿ.) ತನ್ನದೇ ಆದ ಯೋಜನೆಯಡಿಯಲ್ಲಿ ಆರೈಕೆ ನೀಡುವ ಏಕೈಕ ಪೂರೈಕೆದಾರರಾಗಿ ಉಳಿಯಬೇಕಾಗಿಲ್ಲ ಎಂದು ಕೇಂದ್ರ ಸಚಿವ ಡಾ. ಮಾಂಡವಿಯ ಅವರು ಸೂಚಿಸಿದರು. ಉತ್ತಮವಾಗಿ ನಡೆಸಲ್ಪಡುವ ಖಾಸಗಿ ಆಸ್ಪತ್ರೆಗಳನ್ನು ಉದ್ಯೋಗಿಗಳ ರಾಜ್ಯ ವಿಮಾ ನಿಗಮದ (ಇ.ಎಸ್.ಐ.ಸಿ.) ಸೌಲಭ್ಯಗಳಾಗಿ ಗೊತ್ತುಪಡಿಸಬಹುದು ಎಂದು ನಿಗಮದ ಮುಂಬರುವ ಸುಧಾರಣೆಯನ್ನು ವಿವರಿಸುತ್ತಾ ಅವರು ಹೇಳಿದರು. ಯುಪಿಐ ಆಧಾರಿತ ಹಿಂಪಡೆಯುವಿಕೆಯನ್ನು ಪರಿಗಣಿಸಲಾಗುತ್ತಿದ್ದು, ನೌಕರರ ಭವಿಷ್ಯ ನಿಧಿ ಸಂಘಟನೆಯ (ಇ.ಪಿ.ಎಫ್.ಒ) ಸಂಪೂರ್ಣ ಡಿಜಿಟಲ್ ಕ್ಲೈಮ್ ಗಳು ಮತ್ತು ಒಂದೇ ಯು.ಎ.ಎನ್‌ ನಲ್ಲಿ ವಿವಿಧ ಖಾತೆಗಳ ಸ್ವಯಂಚಾಲಿತ ವರ್ಗಾವಣೆಗೆ ಕ್ರಮವನ್ನು ಸಹ ಅವರು ಸೂಚಿಸಿದರು.

ಭಾರತದ ಸಾಮಾಜಿಕ ಭದ್ರತಾ ವ್ಯಾಪ್ತಿಯ ವಿಸ್ತರಣೆಗೆ ಐ.ಎಲ್.ಒ. ಡಿ.ಡಬ್ಲ್ಯೂ.ಟಿ ಮತ್ತು ಭಾರತದ ದೇಶೀಯ ಕಚೇರಿಯ ನಿರ್ದೇಶಕರಾದ ಶ್ರೀಮತಿ ಮಿಚಿಕೊ ಮಿಯಾಮೊಟೊ ಅವರು ಭಾರತವನ್ನು ಅಭಿನಂದಿಸಿದರು, ಐ.ಎಲ್.ಒ. ಅಂದಾಜಿನ ಪ್ರಕಾರ, ದೇಶವು ಕನಿಷ್ಠ ಒಂದು ಸಾಮಾಜಿಕ ರಕ್ಷಣಾ ಮಾನದಂಡದಿಂದ ಆವರಿಸಲ್ಪಟ್ಟ ಒಂದು ಶತಕೋಟಿ ಜನರ ಸಂಖ್ಯೆಯನ್ನು ದಾಟಿದೆ ಎಂದು ಹೇಳಿದರು. ಈ ಸಾಧನೆಯು ಮುಂದಿನ ದಿನಗಳಲ್ಲಿ ಭಾರತದ ಆರ್ಥಿಕ ಬೆಳವಣಿಗೆಯನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು.

ಎರಡು ದಿನಗಳ ಶೃಂಗಸಭೆಯನ್ನು ಗುರುತಿಸುವ ವಿಶೇಷ ಸ್ಮರಣಿಕೆಯನ್ನು ಕೇಂದ್ರ ಸಚಿವರಾದ ಡಾ. ಮಾಂಡವಿಯಾ ಮತ್ತು ಇತರ ಗಣ್ಯರು ಸಮಾರಂಭದಲ್ಲಿ ಬಿಡುಗಡೆ ಮಾಡಿದರು.

 

*****


(रिलीज़ आईडी: 2292374) आगंतुक पटल : 7
इस विज्ञप्ति को इन भाषाओं में पढ़ें: English , Urdu , हिन्दी , Gujarati , Tamil , Malayalam