ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವೀರ ಸಾವರ್ಕರ್ ಜಯಂತಿಯಂದು ಅವರನ್ನು ಸ್ಮರಿಸಿದ ಪ್ರಧಾನಮಂತ್ರಿ


ಸಂಸ್ಕೃತ ಸುಭಾಷಿತಂ ಹಂಚಿಕೊಂಡ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 28 MAY 2026 9:52AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವೀರ ಸಾವರ್ಕರ್ ಅವರನ್ನು ಅವರ ಜಯಂತಿಯಂದು ಸ್ಮರಿಸಿದ್ದಾರೆ ಮತ್ತು ಅವರ ಧೈರ್ಯ, ದೇಶಭಕ್ತಿ ಮತ್ತು ಸಾಮಾಜಿಕ ಸುಧಾರಣೆಗೆ ನೀಡಿದ ಕೊಡುಗೆಗೆ ಗೌರವ ನಮನ ಸಲ್ಲಿಸಿದ್ದಾರೆ.

ಮಹಾನ್ ಕ್ರಾಂತಿಕಾರಿ ಮತ್ತು ಪ್ರಖ್ಯಾತ ರಾಷ್ಟ್ರೀಯವಾದಿ ಚಿಂತಕ ತಮ್ಮ ಧೈರ್ಯ, ಬುದ್ಧಿಶಕ್ತಿ ಮತ್ತು ದೇಶಭಕ್ತಿಯ ಮನೋಭಾವದ ಮೂಲಕ ದೇಶದ ಪ್ರತಿಯೊಂದು ಪೀಳಿಗೆಗೂ ಸ್ಫೂರ್ತಿ ನೀಡುತ್ತಲೇ ಇರುತ್ತಾರೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಅವರು ಸಂಸ್ಕೃತ ಸುಭಾಷಿತಂ ಹಂಚಿಕೊಂಡಿದ್ದಾರೆ-

“अनन्तोद्भूतभूतौघसङ्कुले भूतलेऽखिले।

शस्त्रे शास्त्रे त्रिचतुराश्चतुरा यदि मादृशाः।। ”

ಈ ಜಗತ್ತಿನಲ್ಲಿ, ಅನೇಕ ಜನರು ಜ್ಞಾನಕ್ಕಾಗಿ ಅಥವಾ ಶಕ್ತಿಗಾಗಿ ಹೆಸರುವಾಸಿಯಾಗಿದ್ದಾರೆ, ಆದರೆ ಬುದ್ಧಿವಂತಿಕೆ ಮತ್ತು ಶೌರ್ಯ ಎರಡನ್ನೂ ಹೊಂದಿರುವ ಶಾಂತ ಮತ್ತು ಮಹಾನ್ ವ್ಯಕ್ತಿತ್ವಗಳು ನಿಜವಾಗಿಯೂ ಅಪರೂಪ ಎಂದು ಸುಭಾಷಿತಂ ತಿಳಿಸುತ್ತದೆ.

ಈ ಕುರಿತು ಟ್ವೀಟ್ ಮಾಡಿರುವ ಅವರು,

"ವೀರ ಸಾವರ್ಕರ್ ಅವರ ಜಯಂತಿಯಂದು ಅವರನ್ನು ಸ್ಮರಿಸುತ್ತಿದ್ದೇನೆ. ಅವರ ಧೈರ್ಯ ಮತ್ತು ದೇಶಭಕ್ತಿ ಯಾವಾಗಲೂ ಜನರಿಗೆ ಸ್ಫೂರ್ತಿ ನೀಡುತ್ತದೆ. ಅವರ ಬುದ್ಧಿವಂತಿಕೆ ಮತ್ತು ಸಾಮಾಜಿಕ ಸುಧಾರಣೆಗೆ ನೀಡಿದ್ದ ಮಹತ್ವವೂ ಗಮನಾರ್ಹವಾಗಿದೆ." ಎಂದು ಹೇಳಿದ್ದಾರೆ.

 

“महान क्रांतिकारी और प्रखर राष्ट्रवादी चिंतक वीर सावरकर जी को उनकी जयंती पर सादर नमन! वीरता और बौद्धिकता से भरा उनका व्यक्तित्व देश की हर पीढ़ी को प्रेरित करता रहेगा।

अनन्तोद्भूतभूतौघसङ्कुले भूतलेऽखिले। 

शस्त्रे शास्त्रे त्रिचतुराश्चतुरा यदि मादृशाः।।”

 

*****


(ಪ್ರಕಟಣೆ ಐ.ಡಿ.: 2266161) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Manipuri , Assamese , Bengali , Gujarati , Odia , Tamil , Telugu , Malayalam