ಭಾರೀ ಕೈಗಾರಿಕೆಗಳ ಸಚಿವಾಲಯ
azadi ka amrit mahotsav

ಇ-ಬಸ್ಸುಗಳು ಮತ್ತು ಇ-ಟ್ರಕ್‌ ಗಳ ಅಳವಡಿಕೆಯನ್ನು ವೇಗಗೊಳಿಸಲು ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಾಲೋಚನೆ ಸಭೆ ನಡೆಯಿತು


ಭಾರತದ ಮುಂದಿನ ಹಂತದ ಹಸಿರು ಚಲನಶೀಲತೆ ಪರಿವರ್ತನೆಯನ್ನು ಮುನ್ನಡೆಸಲು ಕೇಂದ್ರ ಸಚಿವರಿಂದ ಪಾಲುದಾರರಿಗೆ ಕರೆ 

ಭಾರತದಾದ್ಯಂತದ ನಿರ್ವಾಹಕರು, ಸಂಗ್ರಾಹಕರು ಮತ್ತು ಕೈಗಾರಿಕಾ ಮುಖಂಡರು ಈ ವಿಶೇಷ ಇವಿ ಚಲನಶೀಲತೆ ಸಂವಾದದಲ್ಲಿ ಭಾಗವಹಿಸಿದರು 

ಸುಸ್ಥಿರ ಮತ್ತು ಕಠಿಣ ಆಡಳಿತಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೃಷ್ಟಿಕೋನಕ್ಕೆ ಈ ಸಭೆಯು ಅನುಗುಣವಾಗಿದೆ 

ಪ್ರಕಟಣಾ ದಿನಾಂಕ: 20 MAY 2026 6:10PM by PIB Bengaluru

ಭಾರತದ ಸ್ವಚ್ಛ ಚಲನಶೀಲತೆ ಪರಿವರ್ತನೆಯನ್ನು ವೇಗಗೊಳಿಸುವ ಮಹತ್ವದ ಹೆಜ್ಜೆಯಾಗಿ, ದೇಶಾದ್ಯಂತ ವಿದ್ಯುತ್ ಬಸ್ಸುಗಳು ಮತ್ತು ವಿದ್ಯುತ್ ಟ್ರಕ್‌ ಗಳ ವ್ಯಾಪಕ ಅಳವಡಿಕೆ ಮತ್ತು ನಿಯೋಜನೆಯನ್ನು ಉತ್ತೇಜಿಸಲು ಕೇಂದ್ರ ಬೃಹತ್ ಕೈಗಾರಿಕೆಗಳು ಮತ್ತು ಉಕ್ಕು ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ನವದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಪಾಲುದಾರರ ಸಮಾಲೋಚನೆಯ ಅಧ್ಯಕ್ಷತೆ ವಹಿಸಿದ್ದರು.

ಈ ಸಭೆಯು ಭಾರತದಾದ್ಯಂತದ ಪ್ರಮುಖ ಪಾಲುದಾರರನ್ನು ಒಟ್ಟುಗೂಡಿಸಿತು.  ಫ್ಲೀಟ್ ನಿರ್ವಾಹಕರು, ಸಂಗ್ರಾಹಕರು, ಸಾರಿಗೆ ನಾಯಕರು, ಹಣಕಾಸು ಸಂಸ್ಥೆಗಳು, ಗುತ್ತಿಗೆ ಕಂಪನಿಗಳು ಮತ್ತು ವೇಗವಾಗಿ ವಿಕಸನಗೊಳ್ಳುತ್ತಿರುವ ವಿದ್ಯುತ್ ಚಲನಶೀಲತೆ ಪರಿಸರ ವ್ಯವಸ್ಥೆಯಲ್ಲಿ ತೊಡಗಿರುವ ಉದ್ಯಮ ಪ್ರತಿನಿಧಿಗಳು ಇದರಲ್ಲಿ ಸೇರಿದ್ದಾರೆ.  ಕಾರ್ಯಾಚರಣೆಯ ವಾಸ್ತವಗಳನ್ನು ಅರ್ಥಮಾಡಿಕೊಳ್ಳುವುದು, ಇ-ಬಸ್‌ ಗಳು ಮತ್ತು ಇ-ಟ್ರಕ್‌ ಗಳನ್ನು ವೇಗವಾಗಿ ಅಳವಡಿಸಿಕೊಳ್ಳುವುದನ್ನು ಪ್ರೋತ್ಸಾಹಿಸುವುದು ಮತ್ತು ಸರ್ಕಾರ ಮತ್ತು ಖಾಸಗಿ ಪಾಲುದಾರರ ನಡುವಿನ ಸಹಯೋಗವನ್ನು ಬಲಪಡಿಸುವ ಉದ್ದೇಶದಿಂದ ಈ ಸಮಾಲೋಚನಾ ಸಭೆಯನ್ನು ಕರೆಯಲಾಗಿತ್ತು.

ಇಲಾಖೆಯ ಕಾರ್ಯದರ್ಶಿ ಶ್ರೀ ಕಮ್ರಾನ್ ರಿಜ್ವಿ ಮತ್ತು ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಡಾ. ಹನೀಫ್ ಖುರೇಷಿ ಅವರು ಸೇರಿದಂತೆ ಬೃಹತ್ ಕೈಗಾರಿಕಾ ಸಚಿವಾಲಯದ ಹಿರಿಯ ಅಧಿಕಾರಿಗಳು ಚರ್ಚೆಯ ಸಮಯದಲ್ಲಿ ಹಾಜರಿದ್ದರು ಮತ್ತು ಭಾರತದಲ್ಲಿ ಬೃಹತ್ ವಿದ್ಯುತ್ ವಾಹನಗಳ ಚಲನಶೀಲತೆಯ ಭವಿಷ್ಯದ ಮಾರ್ಗಸೂಚಿಯ ಕುರಿತು ಪಾಲುದಾರರೊಂದಿಗೆ ತಮ್ಮ ತಮ್ಮ ಒಳನೋಟಗಳನ್ನು ಪರಸ್ಪರ ಹಂಚಿಕೊಂಡರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು, ವಿದ್ಯುತ್ ಬಸ್‌ ಗಳು ಭಾರತದಲ್ಲಿ ಪ್ರಯಾಣಿಕ ಸಾರಿಗೆಯ ಭವಿಷ್ಯದ ಬೆನ್ನೆಲುಬಾಗಲಿವೆ, ಆದರೆ ವಿದ್ಯುತ್ ಟ್ರಕ್‌ ಗಳು ಸುಸ್ಥಿರ ಲಾಜಿಸ್ಟಿಕ್ಸ್ ಮತ್ತು ಸರಕು ಸಾಗಣೆಯ ಭವಿಷ್ಯವನ್ನು ರೂಪಿಸುವಲ್ಲಿ ಪರಿವರ್ತನಾತ್ಮಕ ಪಾತ್ರವನ್ನು ವಹಿಸುತ್ತವೆ ಎಂದು ಒತ್ತಿ ಹೇಳಿದರು.

"ಭಾರತವು ಸ್ವಚ್ಛ ಮತ್ತು ಪರಿಣಾಮಕಾರಿ ಸಾರಿಗೆಯತ್ತ ನಿರ್ಣಾಯಕ ಬದಲಾವಣೆಗೆ ಸಾಕ್ಷಿಯಾಗುತ್ತಿದೆ. ಇ-ಬಸ್‌ ಗಳು ಪ್ರಯಾಣಿಕರ ಚಲನಶೀಲತೆಯ ಭವಿಷ್ಯವಾಗಿದೆ ಮತ್ತು ಇ-ಟ್ರಕ್‌ ಗಳು ನಮ್ಮ ದೇಶದಲ್ಲಿ ಲಾಜಿಸ್ಟಿಕ್ಸ್ ಮತ್ತು ಸರಕು ಸಾಗಣೆಯ ಮುಂದಿನ ಯುಗವನ್ನು ವ್ಯಾಖ್ಯಾನಿಸುತ್ತವೆ" ಎಂದು ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.

ಸಹಯೋಗದ ನೀತಿ ನಿರೂಪಣೆಯ ಮಹತ್ವವನ್ನು ವಿವರಿಸಿದ ಕೇಂದ್ರ ಸಚಿವರು, ಭಾರತದ ವಿದ್ಯುತ್ ಚಲನಶೀಲತೆಗೆ ಪರಿವರ್ತನೆಯು ಪ್ರಾಯೋಗಿಕ, ಎಲ್ಲರನ್ನೂ ಒಳಗೊಳ್ಳುವ ಮತ್ತು ವಾಣಿಜ್ಯಿಕವಾಗಿ ಸುಸ್ಥಿರವಾಗುವಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರವು ನಿರ್ವಾಹಕರು ಮತ್ತು ಉದ್ಯಮದ ಪಾಲುದಾರರೊಂದಿಗೆ ಕೈಜೋಡಿಸಲು ಬದ್ಧವಾಗಿದೆ ಎಂದು ಹೇಳಿದರು.

“ಈ ಸಮಾಲೋಚನೆ ಕೇವಲ ನೀತಿ ಚರ್ಚೆಯಾಗಿರಲಿಲ್ಲ. ಭಾರತದಾದ್ಯಂತ ಸಾರಿಗೆ ಸೇವೆಗಳನ್ನು ಚಾಲನೆ ಮಾಡುತ್ತಿರುವ ನಿರ್ವಾಹಕರು ಮತ್ತು ಪಾಲುದಾರರಿಂದ ನೇರವಾಗಿ ಕೇಳಲು ಇದು ಒಂದು ಪ್ರಮುಖ ವೇದಿಕೆಯಾಗಿತ್ತು. ಭವಿಷ್ಯದ ಮಾರ್ಗಸೂಚಿಯನ್ನು ರೂಪಿಸುವಲ್ಲಿ ಅವರ ಪ್ರತಿಕ್ರಿಯೆ ಮತ್ತು ಅನುಭವವು ಅತ್ಯಂತ ಮೌಲ್ಯಯುತವಾಗಿದೆ” ಎಂದು ಅವರು ಹೇಳಿದರು.

ಈ ಉಪಕ್ರಮವು ಸುಸ್ಥಿರತೆ, ಕಾರ್ಯಾಚರಣೆಯ ದಕ್ಷತೆ ಮತ್ತು ಜವಾಬ್ದಾರಿಯುತ ಆಡಳಿತದ ಕಡೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೃಷ್ಟಿಕೋನಕ್ಕೆ ನಿಕಟವಾಗಿ ಹೊಂದಿಕೆಯಾಗುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು.

“ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಭಾರತವು ಸುಸ್ಥಿರತೆ, ನಾವೀನ್ಯತೆ ಮತ್ತು ಪರಿಣಾಮಕಾರಿ ಸಾರ್ವಜನಿಕ ಮೂಲಸೌಕರ್ಯಕ್ಕೆ ಆದ್ಯತೆ ನೀಡುವ ಭವಿಷ್ಯದತ್ತ ಸಾಗುತ್ತಿದೆ. ಇ-ಬಸ್‌ ಗಳು ಮತ್ತು ಇ-ಟ್ರಕ್‌ ಗಳಿಗೆ ಒತ್ತು ನೀಡುವುದು ಕೇವಲ ಪರಿಸರ ಅಗತ್ಯವಲ್ಲ, ಬದಲಾಗಿ ನವ ಭಾರತಕ್ಕೆ ಆರ್ಥಿಕ ಮತ್ತು ಕಾರ್ಯತಂತ್ರದ ಸಫಲತೆಗೆ ಕಡ್ಡಾಯವಾಗಿದೆ” ಎಂದು ಶ್ರೀ ಕುಮಾರಸ್ವಾಮಿ ಹೇಳಿದರು.

ಸಭೆಯಲ್ಲಿ, ಪಾಲುದಾರರು ವ್ಯಾಪಕ ಪ್ರತಿಕ್ರಿಯೆ, ಕಾರ್ಯಾಚರಣೆಯ ಅನುಭವಗಳು, ವಲಯದ ಕಾಳಜಿಗಳು ಮತ್ತು ವಿದ್ಯುತ್ ವಾಣಿಜ್ಯ ವಾಹನಗಳಿಗೆ ಹಣಕಾಸು ಪ್ರವೇಶ, ಚಾರ್ಜಿಂಗ್ ಮೂಲಸೌಕರ್ಯ, ಫ್ಲೀಟ್ ನಿಯೋಜನೆ, ಕಾರ್ಯಾಚರಣೆಯ ಕಾರ್ಯಸಾಧ್ಯತೆ ಮತ್ತು ದೀರ್ಘಕಾಲೀನ ಪರಿಸರ ವ್ಯವಸ್ಥೆಯ ಬೆಂಬಲಕ್ಕೆ ಸಂಬಂಧಿಸಿದ ಪ್ರಾಯೋಗಿಕ ಸಲಹೆಗಳನ್ನು ಪರಸ್ಪರ ಹಂಚಿಕೊಂಡರು.

ಸಭೆಯಲ್ಲಿ ಭಾಗವಹಿಸಿದವರು,  ಸಚಿವಾಲಯದ ಪೂರ್ವಭಾವಿ ಸಂಪರ್ಕ ಮತ್ತು ವಲಯದ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಕುರಿತು ಸರ್ಕಾರದೊಂದಿಗೆ ನೇರವಾಗಿ ತೊಡಗಿಸಿಕೊಳ್ಳುವ ಅವಕಾಶವನ್ನು ಸ್ವಾಗತಿಸಿದರು. ವಿದ್ಯುತ್ ಚಲನಶೀಲತೆಯ ಅಳವಡಿಕೆಯಲ್ಲಿ ವಿಶ್ವಾಸವನ್ನು ಬಲಪಡಿಸುವುದು ಮತ್ತು ನಗರ, ಅಂತರ-ನಗರ ಮತ್ತು ಸರಕು ಸಾಗಣೆ ಜಾಲಗಳಲ್ಲಿ ಇ-ಬಸ್‌ ಗಳು ಮತ್ತು ಇ-ಟ್ರಕ್‌ ಗಳ ದೊಡ್ಡ ಪ್ರಮಾಣದ ನಿಯೋಜನೆಗಾಗಿ ದೃಢವಾದ ಪರಿಸರ ವ್ಯವಸ್ಥೆಯನ್ನು ರಚಿಸುವ ಬಗ್ಗೆ ಚರ್ಚೆಗಳು ಗಮನಹರಿಸಿದವು.

ದೇಶದ ಮುಂದಿನ ಹಂತದ ಸಾರಿಗೆ ಮತ್ತು ಸಾಗಾಣಿಕೆ (ಲಾಜಿಸ್ಟಿಕ್ಸ್) ರೂಪಾಂತರವನ್ನು ರೂಪಿಸುವಲ್ಲಿ ಉದ್ಯಮದ ಪಾಲುದಾರರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವಾಗ ಭಾರತದ ಸುಸ್ಥಿರ ಭಾರೀ ಚಲನಶೀಲತೆಗೆ ಪರಿವರ್ತನೆಯನ್ನು ವೇಗಗೊಳಿಸುವತ್ತ ಬೃಹತ್ ಕೈಗಾರಿಕಾ ಸಚಿವಾಲಯವು ಈ ಸಮಾಲೋಚನೆಯನ್ನು ಮಹತ್ವದ ಹೆಜ್ಜೆಯಾಗಿ ನೋಡುತ್ತಿದೆ.

 

*****


(ಪ್ರಕಟಣೆ ಐ.ಡಿ.: 2263450) ವಿಸಿಟರ್ ಕೌಂಟರ್ : 13
ಪ್ರಕಟಣೆಯನ್ನು ಇದರಲ್ಲಿ ಓದಿ: हिन्दी , English , Urdu , Marathi , Tamil , Telugu