ಪ್ರಧಾನ ಮಂತ್ರಿಯವರ ಕಛೇರಿ
ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಪ್ರಧಾನಮಂತ್ರಿ ಅವರ ಭೇಟಿ
ಪ್ರಕಟಣಾ ದಿನಾಂಕ:
15 MAY 2026 3:59PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಅಧಿಕೃತ ಭೇಟಿ ನೀಡಿದರು. ಅವರನ್ನು ಯುಎಇ ಅಧ್ಯಕ್ಷರಾದ ಗೌರವಾನ್ವಿತ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು ಮತ್ತು ಔಪಚಾರಿಕ ಸ್ವಾಗತ ನೀಡಿದರು.
ಇಬ್ಬರೂ ನಾಯಕರು ವಿವರವಾದ ಚರ್ಚೆಗಳ ಸರಣಿಯನ್ನು ನಡೆಸಿದರು, ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರು ಯುಎಇ ಮೇಲಿನ ದಾಳಿಗಳನ್ನು ಭಾರತ ತೀವ್ರವಾಗಿ ಖಂಡಿಸುತ್ತದೆ ಮತ್ತು ನಾಯಕತ್ವ ಮತ್ತು ಯುಎಇ ಜನರೊಂದಿಗೆ ಇರುವ ಅದರ ಒಗ್ಗಟ್ಟನ್ನು ಪುನರುಚ್ಚರಿಸಿದರು. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆ ಹಾಗೂ ಇಂಧನ ಮತ್ತು ಆಹಾರ ಭದ್ರತೆಗೆ ಅತ್ಯಗತ್ಯವಾಗಿರುವ ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತ ಸಂಚಾರ ಮತ್ತು ಅಡೆತಡೆಯಿಲ್ಲದ ನೌಕಾಯಾನವನ್ನು ಖಚಿತಪಡಿಸಿಕೊಳ್ಳುವ ಪರವಾಗಿ ಭಾರತದ ಸ್ಪಷ್ಟ ನಿಲುವನ್ನು ಪ್ರಧಾನಮಂತ್ರಿಯವರು ತಿಳಿಸಿದರು.
ಎರಡೂ ದೇಶಗಳ ನಾಯಕರು ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ವ್ಯಾಪ್ತಿಯನ್ನು ಪರಿಶೀಲಿಸಿದರು ಮತ್ತು ಇಂಧನ, ವ್ಯಾಪಾರ, ಹೂಡಿಕೆ, ರಕ್ಷಣೆ, ಭದ್ರತೆ, ಫಿನ್-ಟೆಕ್, ಮೂಲಸೌಕರ್ಯ, ಶಿಕ್ಷಣ, ಸಂಸ್ಕೃತಿ ಮತ್ತು ಜನರ ನಡುವಿನ ಬಾಂಧವ್ಯ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿನ 'ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ'ಯ ಬಲವರ್ಧನೆಯನ್ನು ಸ್ವಾಗತಿಸಿದರು. ದ್ವಿಪಕ್ಷೀಯ ವ್ಯಾಪಾರವು ಹೊಸ ಎತ್ತರಕ್ಕೆ ಏರಲು ಕಾರಣವಾದ ಭಾರತ ಮತ್ತು ಯುಎಇ ನಡುವಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ (ಸಿಇಪಿಎ) ಯಶಸ್ಸನ್ನು ಅವರು ಶ್ಲಾಘಿಸಿದರು.
ಕಚ್ಚಾ ತೈಲ, ಎಲ್ ಎನ್ ಜಿ ಮತ್ತು ಎಲ್ ಪಿ ಜಿ ಪೂರೈಕೆ ಸೇರಿದಂತೆ ಭಾರತದ ಇಂಧನ ಭದ್ರತೆಯಲ್ಲಿ ಯುಎಇ ತನ್ನ ಪ್ರಮುಖ ಪಾಲುದಾರನಾಗಿಯೇ ಇರುವುದನ್ನು ಇಬ್ಬರು ನಾಯಕರು ಚೈತನ್ಯದಾಯಕ ಮತ್ತು ಬೆಳೆಯುತ್ತಿರುವ ದ್ವಿಪಕ್ಷೀಯ ಇಂಧನ ಪಾಲುದಾರಿಕೆಯನ್ನು ಶ್ಲಾಘಿಸಿದರು. ಸಮಗ್ರ ಇಂಧನ ಪಾಲುದಾರಿಕೆಗಾಗಿ ಹೊಸ ಉಪಕ್ರಮಗಳನ್ನು ಉತ್ತೇಜಿಸಲು ಉಭಯ ನಾಯಕರು ಒಪ್ಪಿಕೊಂಡರು. ಈ ಸಂದರ್ಭದಲ್ಲಿ, ಭಾರತದ ಪ್ರಮುಖ ಪೆಟ್ರೋಲಿಯಂ ನಿಕ್ಷೇಪಗಳಲ್ಲಿ ಯುಎಇ ಪಾಲ್ಗೊಳ್ಳುವಿಕೆಯನ್ನು 30 ದಶಲಕ್ಷ ಬ್ಯಾರೆಲ್ ಗಳಿಗೆ ಹೆಚ್ಚಿಸಲು ಮತ್ತು ಭಾರತದಲ್ಲಿ ಪ್ರಮುಖ ಅನಿಲ ನಿಕ್ಷೇಪಗಳನ್ನು ಸ್ಥಾಪಿಸಲು ಒಟ್ಟಾಗಿ ಕೆಲಸ ಮಾಡಲು 'ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್' ಮತ್ತು 'ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿ' ನಡುವೆ ಕಾರ್ಯತಂತ್ರದ ಸಹಯೋಗ ಒಪ್ಪಂದವನ್ನು ಅವರು ಸ್ವಾಗತಿಸಿದರು. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿ ನಡುವೆ ದೀರ್ಘಕಾಲದ ಎಲ್ ಪಿಜಿ ಪೂರೈಕೆಗಾಗಿ ಮಾಡಿಕೊಂಡಿರುವ ವ್ಯವಸ್ಥೆಯನ್ನು ಸಹ ಅವರು ಸ್ವಾಗತಿಸಿದರು.
ಯುಎಇ ಸಂಸ್ಥೆಗಳಿಂದ ಭಾರತದಲ್ಲಿ 5 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆಯ ಘೋಷಣೆಯನ್ನು ಉಭಯ ನಾಯಕರು ಸ್ವಾಗತಿಸಿದರು. ಇದು ಭಾರತದ ಆರ್ ಬಿಎಲ್ ಬ್ಯಾಂಕ್ನಲ್ಲಿ ಎಮಿರೇಟ್ಸ್ ನ್ಯೂ ಡೆವಲಪ್ಮೆಂಟ್ ಬ್ಯಾಂಕ್ ವತಿಯಿಂದ 3 ಬಿಲಿಯನ್ ಡಾಲರ್ ಹೂಡಿಕೆ, ಭಾರತದ ಆದ್ಯತೆಯ ಮೂಲಸೌಕರ್ಯ ಯೋಜನೆಗಳಲ್ಲಿ ನ್ಯಾಷನಲ್ ಇನ್ಫ್ರಾಸ್ಟ್ರಕ್ಚರ್ ಮತ್ತು ಇನ್ವೆಸ್ಟ್ಮೆಂಟ್ ಫಂಡ್ ಜೊತೆಗೆ ಅಬುಧಾಬಿ ಇನ್ವೆಸ್ಟ್ಮೆಂಟ್ ಅಥಾರಿಟಿ ವತಿಯಿಂದ 1 ಬಿಲಿಯನ್ ಡಾಲರ್ ಹೂಡಿಕೆ ಮತ್ತು ಭಾರತದ `ಸಮ್ಮಾನ್ ಕ್ಯಾಪಿಟಲ್’ನಲ್ಲಿ ಇಂಟರ್ನ್ಯಾಷನಲ್ ಹೋಲ್ಡಿಂಗ್ ಕಂಪನಿ ವತಿಯಿಂದ 1 ಬಿಲಿಯನ್ ಡಾಲರ್ ಹೂಡಿಕೆಯನ್ನು ಒಳಗೊಂಡಿದೆ. ಈ ಹೂಡಿಕೆಗಳು ದ್ವಿಪಕ್ಷೀಯ ಕಾರ್ಯತಂತ್ರದ ಹೂಡಿಕೆ ಪಾಲುದಾರಿಕೆಯನ್ನು ಬಲಪಡಿಸುವುದರ ಜೊತೆಗೆ, ಭಾರತದ ಬೆಳವಣಿಗೆಗೆ ಯುಎಇ ಹೊಂದಿರುವ ನಿರಂತರ ಮತ್ತು ದೀರ್ಘಕಾಲದ ಬದ್ಧತೆಯನ್ನು ಬಲಪಡಿಸುತ್ತವೆ.
ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಪ್ರಮುಖ ಸ್ತಂಭವಾಗಿರುವ ಸ್ಥಿರ ಮತ್ತು ಬಲವಾದ ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ನಾಯಕರು ಒಪ್ಪಿಕೊಂಡರು. ಭೇಟಿಯ ಸಂದರ್ಭದಲ್ಲಿ ಉಭಯ ದೇಶಗಳ ನಡುವೆ `ಕಾರ್ಯತಂತ್ರದ ರಕ್ಷಣಾ ಪಾಲುದಾರಿಕೆಯ ಚೌಕಟ್ಟಿಗೆ' ಸಹಿ ಹಾಕಿರುವುದನ್ನು ಅವರು ಸ್ವಾಗತಿಸಿದರು. ಇದರ ಅಡಿಯಲ್ಲಿ, ರಕ್ಷಣಾ ಕೈಗಾರಿಕಾ ಸಹಯೋಗವನ್ನು ಹೆಚ್ಚಿಸಲು ಮತ್ತು ನಾವೀನ್ಯತೆ ಹಾಗೂ ಸುಧಾರಿತ ತಂತ್ರಜ್ಞಾನ, ತರಬೇತಿ, ಸಮರಾಭ್ಯಾಸಗಳು, ಕಡಲ ಭದ್ರತೆ, ಸೈಬರ್ ರಕ್ಷಣೆ, ಸುರಕ್ಷಿತ ಸಂವಹನ ಮತ್ತು ಮಾಹಿತಿ ವಿನಿಮಯದಲ್ಲಿ ಸಹಕರಿಸಲು ಉಭಯ ದೇಶಗಳು ಒಪ್ಪಿಕೊಂಡವು.
ಭೇಟಿಯ ಸಂದರ್ಭದಲ್ಲಿ, ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಈ ಕೆಳಗಿನ ಹೆಚ್ಚುವರಿ ಒಪ್ಪಂದಗಳಿಗೂ ಉಭಯ ನಾಯಕರು ಸಾಕ್ಷಿಯಾದರು:
ಭಾರತ ಸರ್ಕಾರವು ಪ್ರಾರಂಭಿಸಿದ 'ಸಾಗರ ಅಭಿವೃದ್ಧಿ ನಿಧಿ' ಯೋಜನೆಯಡಿಯಲ್ಲಿ, ವಾಡಿನಾರ್ ನಲ್ಲಿ ಕಡಲಾಚೆಯ ಫ್ಯಾಬ್ರಿಕೇಶನ್ ಒಳಗೊಂಡಂತೆ 'ಹಡಗು ದುರಸ್ತಿ ಕ್ಲಸ್ಟರ್ʼ ಅನ್ನು ಸ್ಥಾಪಿಸುವ ಕುರಿತು ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ ಮತ್ತು ದುಬೈನ ಡ್ರೈಡಾಕ್ಸ್ ವರ್ಲ್ಡ್ ನಡುವಿನ ತಿಳುವಳಿಕಾ ಒಪ್ಪಂದ.
ಹಡಗು ದುರಸ್ತಿ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದಂತೆ ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್, ದುಬೈನ ಡ್ರೈಡಾಕ್ಸ್ ವರ್ಲ್ಡ್ ಮತ್ತು ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಮ್ಯಾರಿಟೈಮ್ ಅಂಡ್ ಶಿಪ್ ಬಿಲ್ಡಿಂಗ್ ನಡುವಿನ ತ್ರಿಪಕ್ಷೀಯ ತಿಳುವಳಿಕಾ ಒಪ್ಪಂದ. ಇದು ನುರಿತ ಸಮುದ್ರಯಾನ ಕಾರ್ಯಪಡೆಯನ್ನು ಸಜ್ಜುಗೊಳಿಸಲು, ತರಬೇತಿ ನೀಡಲು ಮತ್ತು ಉದ್ಯೋಗ ಒದಗಿಸಲು ಒಂದು ಚೌಕಟ್ಟನ್ನು ಸ್ಥಾಪಿಸುತ್ತದೆ; ಭಾರತೀಯ ಸಮುದ್ರಯಾನ ಕಾರ್ಯಪಡೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಭಾರತವನ್ನು ಕೌಶಲ್ಯಪೂರ್ಣ ಹಡಗು ನಿರ್ಮಾಣ ಮತ್ತು ಹಡಗು ದುರಸ್ತಿ ವೃತ್ತಿಪರರ ಕೇಂದ್ರವನ್ನಾಗಿ ರೂಪಿಸುತ್ತದೆ.
ಭಾರತದ ಸಿ-ಡಾಕ್ ಮತ್ತು ಯುಎಇ ನ ಜಿ-42 ಸಹಭಾಗಿತ್ವದಲ್ಲಿ '8 ಎಕ್ಸಾಫ್ಲಾಪ್ ಸೂಪರ್ ಕಂಪ್ಯೂಟ್ ಕ್ಲಸ್ಟರ್' ಸ್ಥಾಪಿಸಲು ಉದ್ದೇಶಿಸಲಾದ ಒಪ್ಪಂದದ ನಿಬಂಧನೆಗಳ ಪಟ್ಟಿ
ಮೈತ್ರಿ (ಅಂತರರಾಷ್ಟ್ರೀಯ ವ್ಯಾಪಾರ ಮತ್ತು ನಿಯಂತ್ರಕ ಇಂಟರ್ಫೇಸ್ ಇಂಟರ್ಫೇಸ್ಗಾಗಿ ಮಾಸ್ಟರ್ ಅಪ್ಲಿಕೇಶನ್) ಬಳಸಿಕೊಂಡು 'ವರ್ಚುವಲ್ ಟ್ರೇಡ್ ಕಾರಿಡಾರ್' ಕಾರ್ಯಾರಂಭ ಮಾಡಿರುವುದನ್ನು ಉಭಯ ನಾಯಕರು ಸ್ವಾಗತಿಸಿದರು. ಉಭಯ ರಾಷ್ಟ್ರಗಳ ಕಸ್ಟಮ್ಸ್ ಮತ್ತು ಬಂದರು ಅಧಿಕಾರಿಗಳನ್ನು ಸಂಪರ್ಕಿಸುವ ಈ ಡಿಜಿಟಲ್ ಚೌಕಟ್ಟು, ಸರಕು ಸಾಗಣೆಯನ್ನು ಸುಗಮಗೊಳಿಸುತ್ತದೆ ಮತ್ತು ವೆಚ್ಚ ಹಾಗೂ ಸಾಗಾಣಿಕೆ ಸಮಯ ಎರಡನ್ನೂ ಕಡಿಮೆ ಮಾಡುತ್ತದೆ, ಇದರಿಂದಾಗಿ ಹೆಚ್ಚು ಪರಿಣಾಮಕಾರಿ ವ್ಯಾಪಾರ ಪ್ರಗತಿಗೆ ಅನುವು ಮಾಡಿಕೊಡುತ್ತದೆ.
ತಮಗೆ ನೀಡಿದ ಆತ್ಮೀಯ ಸ್ವಾಗತ ಮತ್ತು ಗೌರವಪೂರ್ವಕ ಆತಿಥ್ಯಕ್ಕಾಗಿ ಪ್ರಧಾನಮಂತ್ರಿಯವರು ಅಧ್ಯಕ್ಷರಾದ ಗೌರವಾನ್ವಿತ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಸಾಧ್ಯವಾದಷ್ಟು ಬೇಗ ಭಾರತಕ್ಕೆ ಭೇಟಿ ನೀಡುವಂತೆ ಅವರನ್ನು ಆಹ್ವಾನಿಸಿದರು.
*****
(ಪ್ರಕಟಣೆ ಐ.ಡಿ.: 2261637)
ವಿಸಿಟರ್ ಕೌಂಟರ್ : 5