ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಡೋದರಾಕ್ಕೆ ಹೋಗುವ ದಾರಿಯಲ್ಲಿ ತೆಗೆದ ಸೋಮನಾಥ ದೇವಾಲಯದ ಛಾಯಾಚಿತ್ರವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 11 MAY 2026 5:14PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸೋಮನಾಥದಿಂದ ವಡೋದರಾಕ್ಕೆ ಹೋಗುವ ದಾರಿಯಲ್ಲಿ ತೆಗೆದ ಸೋಮನಾಥ ದೇವಾಲಯದ ಛಾಯಾಚಿತ್ರವನ್ನು ಹಂಚಿಕೊಂಡಿದ್ದಾರೆ.

ಪ್ರಭಾಸ್ ಪಟಾನ್ ತೀರದಲ್ಲಿ, ಸೋಮನಾಥ ದೇವಾಲಯವು ಭಕ್ತಿ, ಇತಿಹಾಸ ಮತ್ತು ನಾಗರಿಕತೆಯ ಉಜ್ವಲ ಸಂಕೇತವಾಗಿ ಎತ್ತರವಾಗಿ ನಿಂತಿದೆ ಎಂದು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಶ್ರೀ ಮೋದಿ ಅವರು ಶಾಶ್ವತ ದೇವಾಲಯವು ಅನಾಗರಿಕ ದಾಳಿಗಳು, ಆಕ್ರಮಣಗಳು ಮತ್ತು ಶತಮಾನಗಳ ಹಾದಿಯನ್ನು ಮೀರಿ ನಿಂತಿದೆ ಎಂದು ವಿವರಿಸಿದರು.

ಸೋಮನಾಥವು ಪ್ರತಿಯೊಬ್ಬ ಭಾರತೀಯರಿಗೂ ಶಕ್ತಿ, ಧೈರ್ಯ ಮತ್ತು ಭರವಸೆಯನ್ನು ನೀಡುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಈ ಕುರಿತ ಎಕ್ಸ್‌ ತಾಣದ ಸರಣಿ ಸಂದೇಶಗಳಲ್ಲಿ ಪ್ರಧಾನಮಂತ್ರಿಯವರು ಹೀಗೆ ಬರೆದಿದ್ದಾರೆ:

"ಸೋಮನಾಥದಿಂದ ವಡೋದರಾಗೆ ಹೋಗುವ ದಾರಿಯಲ್ಲಿ ಈ ಛಾಯಾಚಿತ್ರಗಳನ್ನು ತೆಗೆದೆ...

ಪ್ರಭಾಸ್ ಪಟಾನ್ ತೀರದಲ್ಲಿ, ಸೋಮನಾಥ ದೇವಾಲಯವು ಭಕ್ತಿ, ಇತಿಹಾಸ ಮತ್ತು ನಾಗರಿಕತೆಯ ಚೈತನ್ಯದ ಉಜ್ವಲ ಸಂಕೇತವಾಗಿ ಎತ್ತರವಾಗಿ ನಿಂತಿದೆ. ಇದು ಅನಾಗರಿಕ ದಾಳಿಗಳು, ಆಕ್ರಮಣಗಳು ಮತ್ತು ಶತಮಾನಗಳ ಗತಿಯನ್ನು ಮೀರಿಸಿದೆ. ಇದು ಶಾಶ್ವತವಾಗಿದೆ. ಸೋಮನಾಥವು ಪ್ರತಿಯೊಬ್ಬ ಭಾರತೀಯರಿಗೂ ಶಕ್ತಿ, ಧೈರ್ಯ ಮತ್ತು ಭರವಸೆಯನ್ನು ನೀಡುತ್ತದೆ.

ಹರಹರ ಮಹಾದೇವ!"

"सोमनाथ से वडोदरा जाते समय यह तस्वीर खींची है…

प्रभास पाटन के तट पर सोमनाथ मंदिर श्रद्धा, भक्ति और भारत की सनातन संस्कृति का दिव्य प्रतीक बनकर आज भी अडिग खड़ा है। इस पावन मंदिर ने बर्बर आक्रमणों, विदेशी हमलों और सदियों के चुनौतीपूर्ण कालखंड को पार करते हुए अपनी अमर चेतना को अक्षुण्ण रखा है। सोमनाथ हर भारतीय के लिए शक्ति, साहस और उम्मीद का प्रतीक है।

हर हर महादेव!"

 

*****


(ಪ್ರಕಟಣೆ ಐ.ಡಿ.: 2259911) ವಿಸಿಟರ್ ಕೌಂಟರ್ : 6