ಪ್ರಧಾನ ಮಂತ್ರಿಯವರ ಕಛೇರಿ
ಜನಪ್ರತಿನಿಧಿಗಳ ಪಾತ್ರವನ್ನು ಬೆಳಗಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
ಇಂದು ಪಂಚಾಯತ್ ರಾಜ್ ದಿವಸದ ಅಂಗವಾಗಿ ದೇಶಾದ್ಯಂತ ಜನಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
24 APR 2026 10:20AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನಪ್ರತಿನಿಧಿಗಳ ಅಗತ್ಯ ಮತ್ತು ಪಾತ್ರವನ್ನು ಪ್ರತಿಬಿಂಬಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ:
“प्रजासुखे सुखं राज्ञः प्रजानां च हिते हितम्।
नात्मप्रियं प्रियं राज्ञः प्रजानां तु प्रियं प्रियम्॥"
ಈ ಸುಭಾಷಿತದ ಅರ್ಥ ಹೀಗಿದೆ, “ಜನಪ್ರತಿನಿಧಿಗಳ ಸಂತೋಷವು ಜನರ ಸಂತೋಷದಲ್ಲಿದೆ; ಅವರ ಹಿತವು ಜನರ ಹಿತದಲ್ಲಿದೆ. ಜನಪ್ರತಿನಿಧಿಗೆ ವೈಯಕ್ತಿಕವಾಗಿ ಪ್ರಿಯವಾದದ್ದು ಯಾವುದೂ ಇಲ್ಲ. ಜನರಿಗೆ ಪ್ರಿಯವಾದದ್ದೇ ಅವರಿಗೂ ಪ್ರಿಯವಾಗಿರುತ್ತದೆ.”
ಇಂದು ಪಂಚಾಯತ್ ರಾಜ್ ದಿನದ ಅಂಗವಾಗಿ ದೇಶಾದ್ಯಂತ ಜನಪ್ರತಿನಿಧಿಗಳಿಗೆ ಶ್ರೀ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. “ ಸಾರ್ವಜನಿಕ ಸೇವೆಗೆ ನಿಮ್ಮ ನಿಷ್ಠೆ ಮತ್ತು ದೇಶಸೇವೆಯು ಪ್ರತಿಯೊಬ್ಬರಿಗೂ ನಿಜವಾಗಿಯೂ ಪ್ರೇರಣೆಯಾಗಿದೆ,” ಎಂದು ಶ್ರೀ ಮೋದಿ ತಿಳಿಸಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;
“पंचायती राज दिवस के अवसर पर देशभर के जनप्रतिनिधियों का हार्दिक अभिनंदन! जनसेवा के साथ राष्ट्रसेवा के प्रति आप सभी का समर्पण हर किसी को प्रेरित करने वाला है।
प्रजासुखे सुखं राज्ञः प्रजानां च हिते हितम्।
नात्मप्रियं प्रियं राज्ञः प्रजानां तु प्रियं प्रियम्॥"
*****
(ಪ್ರಕಟಣೆ ಐ.ಡಿ.: 2255185)
ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Assamese
,
Manipuri
,
Punjabi
,
Gujarati
,
Telugu
,
Malayalam