ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆತ್ಮ ವಿಶ್ವಾಸ ಮತ್ತು ಇಚ್ಛಾಶಕ್ತಿಯ ಮಹತ್ವವನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ​​​​​​​ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 02 MAR 2026 8:50AM by PIB Bengaluru

ರಾಷ್ಟ್ರದ ಯುವಜನರ ಶಕ್ತಿಯನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಸಂದೇಶದಲ್ಲಿ, ಪ್ರಧಾನಮಂತ್ರಿ ಅವರು ಆತ್ಮ ವಿಶ್ವಾಸ ಮತ್ತು ಇಚ್ಛಾಶಕ್ತಿಯ ಮಹತ್ವವನ್ನು ಒತ್ತಿ ಹೇಳುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ.

ಭಾರತದ ಯುವ ಶಕ್ತಿಯ ದೃಢಸಂಕಲ್ಪವು ಹೋಲಿಕೆ ಮಾಡಲಾಗದು ಎಂದು ಪ್ರಧಾನಮಂತ್ರಿ ಅವರು ಬಲವಾಗಿ ಪ್ರತಿಪಾದಿಸಿದ್ದಾರೆ. ನಮ್ಮ ಯುವ ಸ್ನೇಹಿತರು ತಾವು ಮಾಡಲು ನಿರ್ಧರಿಸುವ ಯಾವುದೇ ಕೆಲಸವನ್ನು ಸಾಧಿಸುತ್ತಾರೆ, ಅದಕ್ಕಾಗಿಯೇ ದೇಶವು ಇಂದು ತನ್ನ ಕನಸುಗಳನ್ನು ನನಸಾಗಿಸುತ್ತಿದೆ ಎಂದು ಅವರು ಉಲ್ಲೇಖಿಸಿದರು.

ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಜಾಲತಾನ X ಪೋಸ್ಟ್ ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ.

ಭಾರತದ ಯುವಜನತೆಯ ದೃಢಸಂಕಲ್ಪವು ಅಪ್ರತಿಮ. ನಮ್ಮ ಯುವ ಸ್ನೇಹಿತರು ಏನು ಮಾಡಲು ಹೊರಟರೂ ಅದನ್ನು ಸಾಧಿಸಿಯೇ ಸಾಧಿಸುತ್ತಾರೆ. ಇಂದು ನಮ್ಮ ದೇಶವು ತನ್ನ ಕನಸುಗಳನ್ನು ನನಸಾಗಿಸಲು ಇದೇ ಕಾರಣ.

ನ ವಾ ಉಮ್ ಮಾ ವ್ರಜ್ಞೇ ವರಯಂತೇ ನ ಪರ್ವತಸೋ ಯದಹನ್ ಮನಸ್ಯೇ.

ಮಂ ಸ್ವಾನಾತ್ ಕೃಧುಕರ್ಣೋ ಭಯಾತ್ ಅವೇದ್ನು ದ್ಯುಂಕಿರನಃ ಸಮೇಜಾತ್.”

"भारतवर्ष की युवाशक्ति का दृढ़ संकल्प अतुलनीय है। हमारे युवा साथी जो ठान लेते हैं, वो करके दिखाते हैं। यही वजह है कि आज हमारा देश अपने सपनों को साकार कर रहा है।

न वा उ मां वृजने वारयन्ते न पर्वतासो यदहं मनस्ये।

मम स्वनात् कृधुकर्णो भयात एवेदनु द्यून्किरणः समेजात्।।"

​ನಿಮ್ಮ ಆತ್ಮವಿಶ್ವಾಸದ ಶಕ್ತಿ ಅಗಾಧವಾಗಿದೆ. ನಿಮ್ಮ ಸ್ವ-ನಿರ್ಣಯವನ್ನು ಯಾರೂ ಹತ್ತಿಕ್ಕಲು ಸಾಧ್ಯವಿಲ್ಲ. ದೊಡ್ಡ ಪರ್ವತದ ಗಾತ್ರದ ದೊಡ್ಡ ಅಡೆತಡೆಗಳು ಸಹ ನಿಮ್ಮ ಹಾದಿಗೆ ಅಡ್ಡಿಯಾಗಲು ಸಾಧ್ಯವಿಲ್ಲ. ನಿಮಗೆ ಇಚ್ಛಾಶಕ್ತಿಯ ಬಲವಿದ್ದರೆ, ನೀವು ಸೂರ್ಯನಿಗಿಂತ ಹೆಚ್ಚು ಶಕ್ತಿಶಾಲಿ

 

*****


(ಪ್ರಕಟಣೆ ಐ.ಡಿ.: 2234437) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Bengali , Manipuri , Gujarati , Tamil , Malayalam