ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು 2024 ರ ಅಕ್ಟೋಬರ್ 21 ರ ಸೋಮವಾರ ಹೊಸದಿಲ್ಲಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಪೊಲೀಸ್ ಸಂಸ್ಮರಣಾ ದಿನದಂದು ಹುತಾತ್ಮರಿಗೆ ಗೌರವ ನಮನ ಸಲ್ಲಿಸಲಿದ್ದಾರೆ


1959ರ ಅಕ್ಟೋಬರ್ 21ರಂದು, ಲಡಾಖಿನ  ಹಾಟ್ ಸ್ಪ್ರಿಂಗ್ಸ್ ನಲ್ಲಿ ಭಾರಿ ಶಸ್ತ್ರಸಜ್ಜಿತ ಚೀನೀ ಪಡೆಗಳು ನಡೆಸಿದ ದಾಳಿಯಲ್ಲಿ ಹತ್ತು ವೀರ ಪೊಲೀಸರು ಪ್ರಾಣ ಕಳೆದುಕೊಂಡರು

ಅಕ್ಟೋಬರ್ 21ನ್ನು ಈ ಹುತಾತ್ಮರು ಮತ್ತು ಕರ್ತವ್ಯದಲ್ಲಿ ನಿರತರಾಗಿದ್ದಾಗ ಸರ್ವೋಚ್ಚ ತ್ಯಾಗ ಮಾಡಿದ ಇತರ ಎಲ್ಲಾ ಹುತಾತ್ಮರ ನೆನಪಿಗಾಗಿ ಹುತಾತ್ಮ ದಿನವಾಗಿ ಆಚರಿಸಲಾಗುತ್ತದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಪೊಲೀಸ್ ಸಿಬ್ಬಂದಿ ಮಾಡಿದ ತ್ಯಾಗ ಮತ್ತು ರಾಷ್ಟ್ರೀಯ ಭದ್ರತೆ ಹಾಗು ಸಮಗ್ರತೆಯನ್ನು ಕಾಪಾಡುವಲ್ಲಿ ಅವರ ಪ್ರಮುಖ ಪಾತ್ರವನ್ನು ಗುರುತಿಸಿ, 2018ರ ಪೊಲೀಸ್ ಸಂಸ್ಮರಣಾ ದಿನದಂದು ರಾಷ್ಟ್ರೀಯ ಪೊಲೀಸ್ ಸ್ಮಾರಕವನ್ನು ದೇಶಕ್ಕೆ ಸಮರ್ಪಿಸಿದರು

Posted On: 18 OCT 2024 6:11PM by PIB Bengaluru

 

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು 2024 ರ ಅಕ್ಟೋಬರ್ 21 ರ ಸೋಮವಾರ,  ಪೊಲೀಸ್ ಸಂಸ್ಮರಣಾ ದಿನದಂದು ಹೊಸದಿಲ್ಲಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸಲಿದ್ದಾರೆ.

1959ರ ಅಕ್ಟೋಬರ್ 21ರಂದು, ಲಡಾಖಿನ  ಹಾಟ್ ಸ್ಪ್ರಿಂಗ್ಸ್ ನಲ್ಲಿ ಭಾರಿ ಶಸ್ತ್ರಸಜ್ಜಿತ ಚೀನೀ ಪಡೆಗಳು ನಡೆಸಿದ ದಾಳಿಯಲ್ಲಿ ಹತ್ತು ವೀರ ಪೊಲೀಸರು ಪ್ರಾಣ ಕಳೆದುಕೊಂಡರು. ಅಕ್ಟೋಬರ್ 21 ನ್ನು ಹುತಾತ್ಮರು ಮತ್ತು ಕರ್ತವ್ಯದಲ್ಲಿದ್ದಾಗ ಸರ್ವೋಚ್ಚ ತ್ಯಾಗ ಮಾಡಿದ ಇತರ ಎಲ್ಲಾ ಹುತಾತ್ಮರ ನೆನಪಿಗಾಗಿ ಆಚರಿಸಲಾಗುತ್ತದೆ. ಪೊಲೀಸ್ ಸಿಬ್ಬಂದಿಯ ತ್ಯಾಗ ಮತ್ತು ರಾಷ್ಟ್ರೀಯ ಭದ್ರತೆ ಹಾಗುಸಮಗ್ರತೆಯನ್ನು ಕಾಪಾಡುವಲ್ಲಿ ಅವರ ಪ್ರಮುಖ ಪಾತ್ರವನ್ನು ಗುರುತಿಸಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2018ರ ಪೊಲೀಸ್ ಸಂಸ್ಮರಣಾ ದಿನದಂದು ಹೊಸದಿಲ್ಲಿಯ ಚಾಣಕ್ಯಪುರಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕವನ್ನು (ಎನ್ ಪಿಎಂ) ದೇಶಕ್ಕೆ ಸಮರ್ಪಿಸಿದರು.

ಸ್ಮಾರಕವು ಪೊಲೀಸ್ ಪಡೆಗಳಿಗೆ ರಾಷ್ಟ್ರೀಯ ಅಸ್ಮಿತೆ, ಹೆಮ್ಮೆ, ಉದ್ದೇಶದ ಏಕತೆ, ಸಾಮಾನ್ಯ ಇತಿಹಾಸ ಮತ್ತು ಅದೃಷ್ಟದ/ವಿಧಿಯ ಪ್ರಜ್ಞೆಯನ್ನು ನೀಡುತ್ತದೆ, ಜೊತೆಗೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ರಾಷ್ಟ್ರವನ್ನು ರಕ್ಷಿಸುವ ಬದ್ಧತೆಯನ್ನು ಬಲಪಡಿಸುತ್ತದೆ. ಈ ಸ್ಮಾರಕವು ಕೇಂದ್ರ ಶಿಲ್ಪ, 'ಶೌರ್ಯದ ಗೋಡೆ' ಮತ್ತು ವಸ್ತುಸಂಗ್ರಹಾಲಯವನ್ನು ಒಳಗೊಂಡಿದೆ. 30 ಅಡಿ ಎತ್ತರದ ಗ್ರಾನೈಟ್ ಏಕಶಿಲಾ ಸ್ಮಾರಕವಾಗಿರುವ ಕೇಂದ್ರ ಶಿಲ್ಪವು ಪೊಲೀಸ್ ಸಿಬ್ಬಂದಿಯ ಶಕ್ತಿ, ಸ್ಥಿತಿಸ್ಥಾಪಕತ್ವ ಮತ್ತು ನಿಸ್ವಾರ್ಥ ಸೇವೆಯನ್ನು ಪ್ರತಿನಿಧಿಸುತ್ತದೆ. ಹುತಾತ್ಮರ ಹೆಸರುಗಳನ್ನು ಕೆತ್ತಲಾದ ಶೌರ್ಯದ ಗೋಡೆಯು ಸ್ವಾತಂತ್ರ್ಯದ ನಂತರ ಕರ್ತವ್ಯದಲ್ಲಿದ್ದಾಗ  ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಪೊಲೀಸ್ ಸಿಬ್ಬಂದಿಯ ಶೌರ್ಯ ಮತ್ತು ತ್ಯಾಗಕ್ಕೆ ದೃಢವಾದ ಮನ್ನಣೆಯ ಪ್ರತೀಕವಾಗಿ ನಿಂತಿದೆ. ಈ ವಸ್ತುಸಂಗ್ರಹಾಲಯವನ್ನು ಭಾರತದಲ್ಲಿ ಪೊಲೀಸ್ ವ್ಯವಸ್ಥೆಯ ಬಗ್ಗೆ ಐತಿಹಾಸಿಕ ಮತ್ತು ವಿಕಸನಗೊಳ್ಳುತ್ತಿರುವ ವ್ಯವಸ್ಥೆಯ ಪ್ರದರ್ಶನವಾಗಿ ಪರಿಕಲ್ಪಿಸಲಾಗಿದೆ. ಸ್ಮಾರಕವು ತೀರ್ಥಯಾತ್ರೆಯ ತಾಣವಾಗಿದೆ, ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕರಿಗೆ ಸಮಾನವಾಗಿ ಪೂಜ್ಯನೀಯ ಸ್ಥಳವಾಗಿದೆ.  ಎನ್ ಪಿ ಎಂ ಸೋಮವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಸಾರ್ವಜನಿಕರಿಗೆ ತೆರೆದಿರುತ್ತದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (ಸಿಎಪಿಎಫ್) ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ ಎನ್ ಪಿ ಎಂನಲ್ಲಿ ಬ್ಯಾಂಡ್ ಪ್ರದರ್ಶನ, ಮೆರವಣಿಗೆ ಮತ್ತು ಹಿಮ್ಮರಳುವ  ಸಮಾರಂಭವನ್ನು ಆಯೋಜಿಸುತ್ತವೆ.

ಪೊಲೀಸ್ ಸಂಸ್ಮರಣಾ ದಿನ ಅಂದರೆ ಅಕ್ಟೋಬರ್ 21 ನ್ನು ದೇಶಾದ್ಯಂತ ಆಚರಿಸಲಾಗುತ್ತದೆ ಮತ್ತು ಸಾಂಪ್ರದಾಯಿಕವಾಗಿ  ಕೇಂದ್ರ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಮುಖ್ಯ ಸಮಾರಂಭವನ್ನು ಆಯೋಜಿಸಲಾಗುತ್ತದೆ. ಕೇಂದ್ರ ಗೃಹ ಸಚಿವರ ನೇತೃತ್ವದಲ್ಲಿ  ಪೊಲೀಸ್ ಹುತಾತ್ಮರಿಗೆ ಗೌರವ ಸಲ್ಲಿಸಲಾಗುತ್ತದೆ. ದಿಲ್ಲಿ ಪೊಲೀಸರೊಂದಿಗೆ ಸಿಎಪಿಎಫ್ ಗಳ ಜಂಟಿ ಪರೇಡ್ (ಮೆರವಣಿಗೆ) ನಡೆಯುತ್ತದೆ. ಕೇಂದ್ರ ಗೃಹ ಸಚಿವರು, ಸಹಾಯಕ ಸಚಿವರು, ಸಂಸದರು, ಸಿಎಪಿಎಫ್/ ಸಿಪಿಒಗಳ ಮುಖ್ಯಸ್ಥರು ಹುತಾತ್ಮರಿಗೆ ಪುಷ್ಪಗುಚ್ಛ ಅರ್ಪಿಸುವ ಮೂಲಕ ಗೌರವ ನಮನ ಸಲ್ಲಿಸುತ್ತಾರೆ. ನಂತರ, ಕೇಂದ್ರ ಗೃಹ ಸಚಿವರು ನೆರೆದಿದ್ದವರನ್ನು ಉದ್ದೇಶಿಸಿ ಹುತಾತ್ಮರನ್ನು ಸ್ಮರಿಸಿ ಮಾತನಾಡುತ್ತಾರೆ ಮತ್ತು ಪೊಲೀಸ್ ವ್ಯವಸ್ಥೆಯ ಸವಾಲುಗಳನ್ನು ವಿವರಿಸುತ್ತಾರೆ. ನಿವೃತ್ತ ಡಿಜಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಇತರ ಗಣ್ಯರು ಸಹ ಭಾಗವಹಿಸುತ್ತಾರೆ. ಕೇಂದ್ರ ಗೃಹ ಸಚಿವರು ಹಾಟ್ ಸ್ಪ್ರಿಂಗ್ಸ್ ಹುತಾತ್ಮರಿಗೆ ಸಮರ್ಪಿತವಾದ ಪವಿತ್ರ ಸ್ಥಳದಲ್ಲಿ  ಪುಷ್ಪಗುಚ್ಛ ಇಡುವುದರೊಂದಿಗೆ ಕಾರ್ಯಕ್ರಮ ಕೊನೆಗೊಳ್ಳುತ್ತದೆ.

ತರುವಾಯ, ಸಿಎಪಿಎಫ್ಗಳು / ಸಿಪಿಒಗಳು ಅಕ್ಟೋಬರ್ 22 ರಿಂದ 30 ರವರೆಗೆ ಎನ್ ಪಿ ಎಂನಲ್ಲಿ ಹುತಾತ್ಮರ ಕುಟುಂಬ ಸದಸ್ಯರ ಭೇಟಿ, ಪೊಲೀಸ್ ಬ್ಯಾಂಡ್ ಪ್ರದರ್ಶನ, ಮೋಟಾರ್ ಸೈಕಲ್ ಮೆರವಣಿಗೆಗಳು, ಹುತಾತ್ಮರಿಗಾಗಿ ಓಟ, ರಕ್ತದಾನ ಶಿಬಿರ, ಪ್ರಬಂಧ / ಚಿತ್ರಕಲೆ ಸ್ಪರ್ಧೆಗಳು, ಪೊಲೀಸ್ ಸಿಬ್ಬಂದಿಯ ತ್ಯಾಗ, ಶೌರ್ಯ ಮತ್ತು ಸೇವೆಯನ್ನು ಪ್ರದರ್ಶಿಸುವ ವೀಡಿಯೊ ಚಲನಚಿತ್ರಗಳ ಪ್ರದರ್ಶನ ಸೇರಿದಂತೆ ವಿವಿಧ ಸ್ಮರಣಾರ್ಥ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಈ ಅವಧಿಯಲ್ಲಿ ದೇಶಾದ್ಯಂತ ಎಲ್ಲಾ ಪೊಲೀಸ್ ಪಡೆಗಳು ಇದೇ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ.

ರಾಷ್ಟ್ರೀಯ ಪೊಲೀಸ್ ಸ್ಮಾರಕ

ಚಾಣಕ್ಯಪುರಿ, ನವದೆಹಲಿ

 

*****



(Release ID: 2066365) Visitor Counter : 7