ಹಣಕಾಸು ಸಚಿವಾಲಯ
azadi ka amrit mahotsav g20-india-2023

ಕೇಂದ್ರ ಹಣಕಾಸು ಸಚಿವರಾದ​​​​​​​ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ನವದೆಹಲಿಯಲ್ಲಿ ಎನ್‌ ಪಿ ಎಸ್ ವಾತ್ಸಲ್ಯ‌ ಯೋಜನೆಗೆ ಚಾಲನೆ ನೀಡಿದರು


ಎನ್‌ ಪಿ ಎಸ್ ವಾತ್ಸಲ್ಯವು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ವಿಕಸಿತ ಭಾರತ್ @2047 ದೃಷ್ಟಿಯನ್ನು ಈಡೇರಿಸುವ ಪ್ರಮುಖ ಅಂಶವಾಗಿದೆ: ಶ್ರೀಮತಿ ಸೀತಾರಾಮನ್

ಎನ್‌ಪಿಎಸ್ ವಾತ್ಸಲ್ಯ ಯೋಜನೆಯು ಸಮಗ್ರ ಆರ್ಥಿಕ ಅಭಿವೃದ್ಧಿಯತ್ತ ಸರ್ಕಾರದ ಮಹತ್ವದ ಹೆಜ್ಜೆಯಾಗಿದೆ: ಹಣಕಾಸು ಖಾತೆ ರಾಜ್ಯ ಸಚಿವ ಶ್ರೀ ಪಂಕಜ್ ಚೌಧರಿ

ಇತ್ತೀಚಿನ ಸುಧಾರಣೆಗಳು ಪಿಂಚಣಿ ವ್ಯಾಪ್ತಿಯ ವ್ಯಾಪ್ತಿಯನ್ನು ವಿಸ್ತರಿಸಿವೆ, ಹೆಚ್ಚಿನ ಉತ್ಪನ್ನಗಳ ಮೂಲಕ ಹೆಚ್ಚು ಅಂತರ್ಗತ ವ್ಯವಸ್ಥೆಯನ್ನು ರಚಿಸುವ ಗುರಿಯನ್ನು ಹೊಂದಿವೆ: ಹಣಕಾಸು ಸೇವೆಗಳ ಇಲಾಖೆ ಕಾರ್ಯದರ್ಶಿ

ಎನ್‌ ಪಿ ಎಸ್ ವಾತ್ಸಲ್ಯವು ಸರ್ಕಾರದ ಮುಂದಾಲೋಚನೆಯ ವಿಧಾನವಾಗಿದೆ, ಎಲ್ಲರಿಗೂ ಸಾಮಾಜಿಕ ಭದ್ರತೆಯನ್ನು ಒದಗಿಸುವ ಪ್ರಮುಖ ಉದ್ದೇಶವಾಗಿದೆ: ಪಿ ಎಫ್‌ ಆರ್‌ ಡಿ ಎ ಅಧ್ಯಕ್ಷರು

ಕೇಂದ್ರ ಹಣಕಾಸು ಸಚಿವರು ಎನ್‌ ಪಿ ಎಸ್ ವಾತ್ಸಲ್ಯಕ್ಕೆ ಚಂದಾದಾರರಾಗುವ ಆನ್‌ಲೈನ್ ವೇದಿಕೆಗೆ ಚಾಲನೆ ನೀಡಿದರು ಮತ್ತು ಯೋಜನೆಯ ಕಿರುಪುಸ್ತಕವನ್ನು ಬಿಡುಗಡೆ ಮಾಡಿದರು

ಶ್ರೀಮತಿ ಸೀತಾರಾಮನ್ ಮತ್ತು ಶ್ರೀ ಚೌಧರಿ ಅವರು ದೇಶದ ವಿವಿಧ ಭಾಗಗಳ ಸಣ್ಣ ಚಂದಾದಾರರಿಗೆ PRAN ಕಾರ್ಡ್‌ ಗಳನ್ನು ವಿತರಿಸಿದರು

Posted On: 18 SEP 2024 8:15PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ನವದೆಹಲಿಯಲ್ಲಿ 'ಅಪ್ರಾಪ್ತ ವಯಸ್ಕರಿಗೆ ಪಿಂಚಣಿ ಯೋಜನೆ' ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ವಾತ್ಸಲ್ಯ (ಎನ್‌ ಪಿ ಎಸ್ ವಾತ್ಸಲ್ಯ) ಯೋಜನೆಗೆ ಚಾಲನೆ ನೀಡಿದರು. ಎನ್‌‌ ಪಿ ಎಸ್ ವಾತ್ಸಲ್ಯವನ್ನು ಕೇಂದ್ರ ಹಣಕಾಸು ಸಚಿವರು 2024-25ರ ಕೇಂದ್ರ ಬಜೆಟ್‌ ನಲ್ಲಿ ಜುಲೈ 23, 2024 ರಂದು ಘೋಷಿಸಿದ್ದರು.

ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಶ್ರೀ ಪಂಕಜ್ ಚೌಧರಿ; ಹಣಕಾಸು ಸೇವೆಗಳ ಇಲಾಖೆ (ಡಿ ಎಫ್‌ ಎಸ್) ಕಾರ್ಯದರ್ಶಿ ಶ್ರೀ ನಾಗರಾಜು ಮದ್ದಿರಾಳ ಮತ್ತು ಪಿಂಚಣಿ ನಿಧಿ ನಿಯಂತ್ರಣ ಪ್ರಾಧಿಕಾರದ (ಪಿ ಎಫ್‌ ಆರ್‌ ಡಿ ಎ) ಅಧ್ಯಕ್ಷ ಶ್ರೀ ದೀಪಕ್ ಮೊಹಂತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಲಾ ಮಕ್ಕಳು, ಅವರ ಪೋಷಕರು ಮತ್ತು ಇತರ ಗೌರವಾನ್ವಿತ ಅತಿಥಿಗಳೊಂದಿಗೆ ಹಣಕಾಸು ಸೇವೆಗಳ ಇಲಾಖೆ ಮತ್ತು ಪಿಂಚಣಿ ನಿಧಿ ನಿಯಂತ್ರಣ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದರು.

ಎನ್‌‌ ಪಿ ಎಸ್ ವಾತ್ಸಲ್ಯದ ಚಾಲನೆಯನ್ನು ಏಕಕಾಲದಲ್ಲಿ ದೇಶದಾದ್ಯಂತ 75 ಸ್ಥಳಗಳಲ್ಲಿ ಆಯೋಜಿಸಲಾಯಿತು, 250 ಕ್ಕೂ ಹೆಚ್ಚು PRAN ಕಾರ್ಡ್‌ ಗಳನನು ಅಪ್ರಾಪ್ತ ಚಂದಾದಾರರಿಗೆ ವಿತರಿಸಲಾಯಿತು. ಎಲ್ಲಾ ಸ್ಥಳಗಳಲ್ಲಿ, ಶಾಲಾ ಮಕ್ಕಳು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ, ಕೇಂದ್ರ ಹಣಕಾಸು ಸಚಿವರು ಎನ್‌ ಪಿ ಎಸ್ ವಾತ್ಸಲ್ಯಕ್ಕೆ ಚಂದಾದಾರರಾಗಲು ಆನ್‌ಲೈನ್ ಪ್ಲಾಟ್‌ಫಾರ್ಮ್ ಗೆ ಚಾಲನೆ ನೀಡಿದರು ಹಾಗೂ ಯೋಜನೆಯ ಕಿರುಪುಸ್ತಕವನ್ನು ಬಿಡುಗಡೆ ಮಾಡಿದರು.

ಶ್ರೀಮತಿ ಸೀತಾರಾಮನ್ ಅವರು ಎನ್‌ ಪಿ ಎಸ್ ವಾತ್ಸಲ್ಯ ಯೋಜನೆಯ ವೈಶಿಷ್ಟ್ಯಗಳನ್ನು ವಿವರಿಸುವ ಕಿರುಪುಸ್ತಕವನ್ನು ಸಹ ಬಿಡುಗಡೆ ಮಾಡಿದರು.

ಶ್ರೀಮತಿ ಸೀತಾರಾಮನ್ ಮತ್ತು ಶ್ರೀ ಚೌಧರಿ ಅವರು ದೇಶದ ವಿವಿಧ ಭಾಗಗಳಿಂದ ಬಂದಿದ್ದ ಅಪ್ರಾಪ್ತ ಚಂದಾದಾರರಿಗೆ ಶಾಶ್ವತ ನಿವೃತ್ತಿ ಖಾತೆ ಸಂಖ್ಯೆ (PRAN) ಕಾರ್ಡ್‌ ಗಳನ್ನು ವಿತರಿಸಿದರು.

ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ವಿಕಸಿತ ಭಾರತ್ @2047 ದೃಷ್ಟಿಯನ್ನು ಈಡೇರಿಸುವಲ್ಲಿ ಎನ್‌ ಪಿ ಎಸ್ ವಾತ್ಸಲ್ಯ ಯೋಜನೆಯು ಪ್ರಮುಖ ಅಂಶವಾಗಿದೆ ಎಂದು ಹೇಳಿದರು.

 

ಎಲ್ಲಾ ನಾಗರಿಕರಿಗೆ ದೀರ್ಘಾವಧಿಯ ಹಣಕಾಸು ಯೋಜನೆ ಮತ್ತು ಭದ್ರತೆಯನ್ನು ಉತ್ತೇಜಿಸುವ ಸರ್ಕಾರದ ಪ್ರಯತ್ನದಲ್ಲಿ ಎನ್‌ ಪಿ ಎಸ್‌ ವಾತ್ಸಲ್ಯ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಶ್ರೀಮತಿ ಸೀತಾರಾಮನ್ ಹೇಳಿದರು. ಗ್ರಾಹಕರ ಭವಿಷ್ಯವನ್ನು ಭದ್ರಪಡಿಸುವುದರ ಹೊರತಾಗಿ, ಎನ್‌ ಪಿ ಎಸ್ ವಾತ್ಸಲ್ಯವು ಕುಟುಂಬದ ಹಿರಿಯ ಮತ್ತು ಕಿರಿಯ ಸದಸ್ಯರಿಗೆ ರಕ್ಷಣೆಯನ್ನು ಒದಗಿಸುವ ಮೂಲಕ ಅಂತರ-ಪೀಳಿಗೆಯ ಈಕ್ವಿಟಿಯ ತತ್ವವನ್ನು ಆಧರಿಸಿದೆ ಎಂದು ಅವರು ಹೇಳಿದರು.

ಎನ್‌ ಪಿ ಎಸ್ ವಾತ್ಸಲ್ಯ ಯೋಜನೆಯು ಯುವ ಗ್ರಾಹಕರಲ್ಲಿ ಉಳಿತಾಯದ ಹವ್ಯಾಸವನ್ನು ಬೆಳೆಸುತ್ತದೆ ಮತ್ತು ಚಕ್ರಬಡ್ಡಿ ಮೂಲಕ ಅಪಾರ ಸಂಪತ್ತನ್ನು ಗಳಿಸಲು ಅನುವು ಮಾಡಿಕೊಡುತ್ತದೆ. ಈ ಯೋಜನೆಯು ಜನರಿಗೆ ವೃದ್ಧಾಪ್ಯದಲ್ಲಿ ಗೌರವಯುತ ಜೀವನ ನಡೆಸಲು ಅವಕಾಶವನ್ನು ನೀಡುತ್ತದೆ ಎಂದು ಕೇಂದ್ರ ಹಣಕಾಸು ಸಚಿವರು ಒತ್ತಿ ಹೇಳಿದರು.

ಅಟಲ್ ಪಿಂಚಣಿ ಯೋಜನೆಯ ಯಶಸ್ಸನ್ನು ಶ್ಲಾಘಿಸಿದ ಕೇಂದ್ರ ಹಣಕಾಸು ಸಚಿವರು, "2015 ರಲ್ಲಿ ಪ್ರಾರಂಭವಾದಾಗಿನಿಂದ, 6.90 ಕೋಟಿ ಜನರು ಅಟಲ್ ಪಿಂಚಣಿ ಯೋಜನೆಗೆ ಚಂದಾದಾರರಾಗಿದ್ದಾರೆ ಮತ್ತು 35,149 ಕೋಟಿ ಗಳ ಕಾರ್ಪಸ್ ಸಂಗ್ರಹವಾಗಿದೆ" ಎಂದು ಹೇಳಿದರು.

ಪ್ರಾರಂಭದಿಂದಲೂ ಎನ್‌ ಪಿ ಎಸ್ ಯೋಜನೆಯಲ್ಲಿನ ಸ್ಪರ್ಧಾತ್ಮಕ ಆದಾಯವನ್ನು ಒತ್ತಿಹೇಳಿದ  ಶ್ರೀಮತಿ ಸೀತಾರಾಮನ್, ಸರ್ಕಾರಿ ವಲಯಕ್ಕೆ, ಎನ್‌ ಪಿ ಎಸ್‌  ಅದರ ಪ್ರಾರಂಭದಿಂದಲೂ ಸರಾಸರಿ ಶೇ. 9.5 ಸಂಯುಕ್ತ ವಾರ್ಷಿಕ ಬೆಳವಣಿಗೆಯ ದರವನ್ನು (ಸಿಎಜಿಆರ್) ನೀಡಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಶ್ರೀ ಪಂಕಜ್ ಚೌಧರಿ, ಎನ್‌ ಪಿ ಎಸ್ ವಾತ್ಸಲ್ಯ ಯೋಜನೆಯು ಸಮಗ್ರ ಆರ್ಥಿಕ ಬೆಳವಣಿಗೆಗೆ ಸರ್ಕಾರ ತೆಗೆದುಕೊಂಡ ಪ್ರಮುಖ ಹೆಜ್ಜೆಯಾಗಿದೆ ಎಂದರು. ಯೋಜನೆಯ ಅನುಷ್ಠಾನದಲ್ಲಿ ತೊಡಗಿರುವ ಎಲ್ಲಾ ಸಂಸ್ಥೆಗಳು ಯೋಜನೆಯ ಗರಿಷ್ಠ ವ್ಯಾಪ್ತಿಯನ್ನು ಮತ್ತು ಸಂಪೂರ್ಣತೆಯನ್ನು ಖಚಿತಪಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.

 

 ಈ ಸಂದರ್ಭದಲ್ಲಿ ಮಾತನಾಡಿದ ಡಿ ಎಫ್‌ ಎಸ್‌ ನ ಕಾರ್ಯದರ್ಶಿ ಶ್ರೀ ನಾಗರಾಜು ಮದ್ದಿರಾಳ ಅವರು, ಎನ್‌ ಪಿ ಎಸ್ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಮತ್ತು ಔಟ್‌ರೀಚ್‌ ಗಾಗಿ ಬ್ಯಾಂಕ್‌ಗಳು ಸೇರಿದಂತೆ ಮಧ್ಯಸ್ಥಗಾರರ ಸಹಕಾರದ ಅಗತ್ಯವನ್ನು ಒತ್ತಿ ಹೇಳಿದರು.

 

ಅನೌಪಚಾರಿಕ ವಲಯದಿಂದ ಹೆಚ್ಚಿನ ಕಾರ್ಮಿಕರನ್ನು ಪಿಂಚಣಿ ವ್ಯಾಪ್ತಿಗೆ ಸೇರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಶ್ರೀ ಮದ್ದಿರಾಳ ಹೇಳಿದರು. ನಿವೃತ್ತಿ ಯೋಜನೆಯ ಪ್ರಾಮುಖ್ಯತೆ ಮತ್ತು ಪಿಂಚಣಿ ಯೋಜನೆಗಳಲ್ಲಿ ಭಾಗವಹಿಸುವ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲು ಪಿಂಚಣಿಗಳನ್ನು ಗುರಿಯಾಗಿಟ್ಟುಕೊಂಡು ಡಿ ಎಫ್‌ ಎಸ್ ನಿಂದ ಸಮಗ್ರ ಆರ್ಥಿಕ ಶಿಕ್ಷಣ ಮತ್ತು ಸಾಕ್ಷರತಾ ಅಭಿಯಾನಗಳನ್ನು ಅಳವಡಿಸಲಾಗಿದೆ ಎಂದು ಅವರು ಹೇಳಿದರು.‌

ಭಾರತದಲ್ಲಿ ಪಿಂಚಣಿ ಕ್ಷೇತ್ರವು ನಿರ್ಣಾಯಕ ಘಟ್ಟದಲ್ಲಿದೆ. ಇತ್ತೀಚಿನ ಸುಧಾರಣೆಗಳು ಪಿಂಚಣಿ ವ್ಯಾಪ್ತಿಯನ್ನು ವಿಸ್ತರಿಸಿವೆ, ಹೆಚ್ಚಿನ ಸಂಖ್ಯೆಯ ಮಾರ್ಗಗಳ ಮೂಲಕ ಹೆಚ್ಚಿನ ಉತ್ಪನ್ನಗಳನ್ನು ನೀಡುವ ಮೂಲಕ ಹೆಚ್ಚು ಅಂತರ್ಗತ ವ್ಯವಸ್ಥೆಯನ್ನು ರಚಿಸುವ ಗುರಿಯನ್ನು ಹೊಂದಿವೆ. ಸುಧಾರಣೆಗಳನ್ನು ಮುಂದುವರಿಸುವ ಮೂಲಕ ಮತ್ತು ಚಂದಾದಾರರ ಪ್ರತಿಕ್ರಿಯೆ ಮತ್ತು ಕಾಳಜಿಗಳನ್ನು ಸ್ವೀಕರಿಸುವ ಮೂಲಕ ಹೆಚ್ಚು ಅಂತರ್ಗತ ಮತ್ತು ಸುಸ್ಥಿರ ಪಿಂಚಣಿ ವ್ಯವಸ್ಥೆಯನ್ನು ನಿರ್ಮಿಸಲು ನಾವು ಪ್ರಯತ್ನಿಸುತ್ತೇವೆ ಎಂದು ಶ್ರೀ ಮದ್ದಿರಾಳ ಹೇಳಿದರು.

ಪಿ ಎಫ್‌ ಆರ್‌ ಡಿ ಎ ಅಧ್ಯಕ್ಷ ಡಾ.ದೀಪಕ್ ಮೊಹಂತಿ ಅವರು ಮಾತನಾಡಿ, ಈ ಯೋಜನೆಯು ಸರ್ಕಾರದ ಮುಂದಾಲೋಚನೆಯ ವಿಧಾನವಾಗಿದ್ದು, ಎಲ್ಲರಿಗೂ ಸಾಮಾಜಿಕ ಭದ್ರತೆಯನ್ನು ಒದಗಿಸುವ ಸಮಗ್ರ ಉದ್ದೇಶದ ಅಡಿಯಲ್ಲಿ ಇಂದು ಎನ್‌ ಪಿ ಎಸ್ ವಾತ್ಸಲ್ಯವನ್ನು ಪ್ರಾರಂಭಿಸಲಾಗಿದೆ. ಇದು ಚಕ್ರಬಡ್ಡಿಯ ಶಕ್ತಿಯನ್ನು ಬಳಸಿಕೊಳ್ಳಲು ನಮಗೆ ಅನುವು ಮಾಡಿಕೊಡುತ್ತದೆ, ಇದು ನಮ್ಮ ಯುವ ಪೀಳಿಗೆಯ ಆರ್ಥಿಕ ಭವಿಷ್ಯವನ್ನು ಭದ್ರಪಡಿಸುವ ಕಾಲಾನಂತರದಲ್ಲಿ ಗಣನೀಯ ಪ್ರಮಾಣದ ಸಂಪತ್ತಿನ ಸಂಗ್ರಹಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.

 

ಪಿಂಚಣಿಗಳ ವಿಷಯಕ್ಕೆ ಬಂದಾಗ, ಉತ್ತಮ ಆರಂಭವು ಮುಂಚಿತವಾಗಿ ಪ್ರಾರಂಭಿಸುವುದು: ಸಣ್ಣ ಮೊತ್ತದ ಹಣವನ್ನು ಉಳಿಸುವುದು ಚಕ್ರಬಡ್ಡಿಯ ಲಾಭವನ್ನು ಪಡೆಯುವ ಮೂಲಕ ಗಣನೀಯ ಮೊತ್ತವನ್ನು ಗಳಿಸಬಹುದು. ಜನರು ಸಾಮಾನ್ಯವಾಗಿ ವಿಭಿನ್ನ ಆರ್ಥಿಕ ಆದ್ಯತೆಗಳನ್ನು ಹೊಂದಿರುತ್ತಾರೆ ಮತ್ತು ನಂತರದ ಜೀವನದಲ್ಲಿ ನಿವೃತ್ತಿ ಯೋಜನೆಯನ್ನು ಪರಿಗಣಿಸದೇ ಇರಬಹುದು, ಇದು ವೃದ್ಧಾಪ್ಯದಲ್ಲಿ ಅಸಮರ್ಪಕ ಆದಾಯವನ್ನು ಉಂಟುಮಾಡುತ್ತದೆ. ಆದ್ದರಿಂದ, ಆರಂಭಿಕ ಉಳಿತಾಯ ಮತ್ತು ಹೂಡಿಕೆಯ ಸಂಸ್ಕೃತಿಯನ್ನು ಬೆಳೆಸುವ ಪಿಂಚಣಿ ಯೋಜನೆಯ ಅಗತ್ಯತೆ ಇತ್ತು.

ಎನ್‌ ಪಿ ಎಸ್ ವಾತ್ಸಲ್ಯಕ್ಕೆ ಅರ್ಹತೆ ಈ ಕೆಳಗಿನಂತಿದೆ:

i.        ಎಲ್ಲಾ ಅಪ್ರಾಪ್ತ ನಾಗರಿಕರು (18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು).

ii        ಅಪ್ರಾಪ್ತರ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು ಮತ್ತು ಪೋಷಕರು ಅಥವಾ ಪಾಲಕರು ನಿರ್ವಹಿಸಬಹುದು. ಅಪ್ರಾಪ್ತರು ಫಲಾನುಭವಿಗಳಾಗುತ್ತಾರೆ.

iii       ಪ್ರಮುಖ ಬ್ಯಾಂಕ್‌ ಗಳು, ಇಂಡಿಯಾ ಪೋಸ್ಟ್, ಪಿಂಚಣಿ ನಿಧಿಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್ (ಇ-ಎನ್‌ ಪಿ ಎಸ್) ನಂತಹ ಪಿ ಎಫ್‌ ಆರ್‌ ಡಿ ಎ ನಿಯಂತ್ರಣದಲ್ಲಿರುವ ವಿವಿಧ ಉಪಸ್ಥಿತಿ ಪಾಯಿಂಟ್‌ ಗಳ ಮೂಲಕ ಯೋಜನೆಗೆ ಸೇರಬಹುದು.

iv.      ಚಂದಾದಾರರು ವರ್ಷಕ್ಕೆ ಕನಿಷ್ಠ ರೂ 1000/- ಕೊಡುಗೆಯನ್ನು ನೀಡಬೇಕು. ಗರಿಷ್ಠ ಕೊಡುಗೆಗೆ ಯಾವುದೇ ಮಿತಿಯಿಲ್ಲ.

v.       ಪಿ ಎಫ್‌ ಆರ್‌ ಡಿ ಎ ಚಂದಾದಾರರಿಗೆ ಬಹು ಹೂಡಿಕೆ ಆಯ್ಕೆಗಳನ್ನು ಒದಗಿಸುತ್ತದೆ. ಚಂದಾದಾರರು ಅಪಾಯದ ತೀವ್ರತೆ ಮತ್ತು ಅಪೇಕ್ಷಿತ ಆದಾಯದ ಆಧಾರದ ಮೇಲೆ ವಿವಿಧ ಅನುಪಾತಗಳಲ್ಲಿ ಸರ್ಕಾರಿ ಭದ್ರತೆಗಳು, ಕಾರ್ಪೊರೇಟ್ ಸಾಲ ಮತ್ತು ಇಕ್ವಿಟಿಗಳಲ್ಲಿ ಹೂಡಿಕೆ ಮಾಡಬಹುದು.

vi.      ಪ್ರೌಢಾವಸ್ಥೆಯನ್ನು ತಲುಪಿದ ನಂತರ, ಯೋಜನೆಯನ್ನು ಸುಲಭವಾಗಿ ಸಾಮಾನ್ಯ ಎನ್‌ ಪಿ ಎಸ್ ಖಾತೆಯಾಗಿ ಪರಿವರ್ತಿಸಬಹುದು.‌

 

 

*****

 



(Release ID: 2056654) Visitor Counter : 25