ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದಲ್ಲಿ ಕ್ಷಯರೋಗಕ್ಕೆ ಔಷಧ-ನಿರೋಧಕ, ನೂತನ ಕಡಿಮೆ ಮತ್ತು ಹೆಚ್ಚು ಪರಿಣಾಮಕಾರಿ ಚಿಕಿತ್ಸಾ ಕ್ರಮವನ್ನು ಪರಿಚಯಿಸಲು ಕೇಂದ್ರ ಆರೋಗ್ಯ ಸಚಿವಾಲಯದ ಅನುಮೋದನೆ


ನಾಲ್ಕು-ಔಷಧಗಳು ಬಿಪಿಎಲ್ ಎಂಎನ್ - ಬೆಡಾಕ್ವಿಲಿನ್, ಪ್ರಿಟೊಮನಿಡ್, ಲೈನ್‌ಜೋಲಿಡ್ ಮತ್ತು ಮೊಕ್ಸಿಫ್ಲೋಕ್ಸಾಸಿನ್ ಸಂಯೋಜನೆಯನ್ನು ಈ ಚಿಕಿತ್ಸೆ ಒಳಗೊಂಡಿದೆ ; ಹಿಂದಿನ ಎಂಡಿಆರ್ -ಟಿಬಿ ಚಿಕಿತ್ಸೆಗಿಂತ ಸುರಕ್ಷಿತ, ಹೆಚ್ಚು ಪರಿಣಾಮಕಾರಿ ಮತ್ತು ತ್ವರಿತ ಚಿಕಿತ್ಸಾ ಆಯ್ಕೆ ಇದಾಗಿದೆ

ಕೇಂದ್ರ ಸರ್ಕಾರದ ಈ ಕ್ರಮವು ಭಾರತದಲ್ಲಿ ಟಿಬಿಯನ್ನು ನಿರ್ಮೂಲನೆ ಮಾಡುವ  ರಾಷ್ಟ್ರೀಯ ಗುರಿ ಸಾಧಿಸಲು ಮತ್ತು ಈ ನಿಟ್ಟಿನಲ್ಲಿ ಗಮನಾರ್ಹವಾಗಿ ಪ್ರಗತಿ ಹೆಚ್ಚುವ ನಿರೀಕ್ಷೆಯಿದೆ.

Posted On: 06 SEP 2024 3:14PM by PIB Bengaluru

ಬರುವ 2025ರ ವೇಳೆಗೆ ದೇಶದಲ್ಲಿ ಕ್ಷಯರೋಗವನ್ನು ಮೂಲೋತ್ಪಾಟನೆ ಮಾಡಲು ಗೌರವಾನ್ವಿತ ಪ್ರಧಾನಮಂತ್ರಿಯವರ ದೃಷ್ಟಿಕೋನದಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳ ಅಡಿಯಲ್ಲಿ ರೋಗವನ್ನು ತೊಡೆದುಹಾಕುವ ಜಾಗತಿಕ ಗುರಿಗಿಂತ ಐದು ವರ್ಷಗಳ ಮುಂಚಿತವಾಗಿ ಇದನ್ನು ಸಾಧಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾರತದಲ್ಲಿ ಟಿಬಿಗೆ ಔಷಧ-ನಿರೋಧಕ, ನೂತನ ಕಡಿಮೆ ಮತ್ತು ಹೆಚ್ಚು ಪರಿಣಾಮಕಾರಿ ಚಿಕಿತ್ಸಾ ಕ್ರಮವನ್ನು ಪರಿಚಯಿಸಲು ಅನುಮೋದನೆ ನೀಡಿದೆ. ನಾಲ್ಕು-ಔಷಧಗಳು ಬಿಪಿಎಲ್ ಎಂಎನ್ - ಬೆಡಾಕ್ವಿಲಿನ್, ಪ್ರಿಟೊಮನಿಡ್, ಲೈನ್‌ಜೋಲಿಡ್ (ಮಿಕ್ಸಿಪ್ಲೋಕ್ಸಾಸಿಸ್ ಮಿಶ್ರಣ/ಮಿಶ್ರಣವಿಲ್ಲದೇ) ಮತ್ತು ಮೊಕ್ಸಿಫ್ಲೋಕ್ಸಾಸಿನ್ ಸಂಯೋಜನೆಯನ್ನು ಇದು ಒಳಗೊಂಡಿದೆ ಈ ಚಿಕಿತ್ಸೆ ;  ಹಿಂದಿನ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಎಂಡಿಆರ್ -ಟಿಬಿ ಚಿಕಿತ್ಸೆಗಿಂತ ಸುರಕ್ಷಿತ, ಹೆಚ್ಚು ಪರಿಣಾಮಕಾರಿ ಮತ್ತು ತ್ವರಿತ ಚಿಕಿತ್ಸಾ ಆಯ್ಕೆಯಾಗಿರುವುದು ಇದರಿಂದ ಸಾಬೀತಾಗಿದೆ. ಪ್ರಿಟೊಮನಿಡ್ ಅನ್ನು ಈ ಹಿಂದೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆ [ಸಿಡಿಎಸ್ಸಿಒ] ಭಾರತದಲ್ಲಿ ಬಳಸಲು ಅನುಮೋದಿಸಲಾಗಿದೆ ಮತ್ತು ಇದರ ಪರವಾನಗಿಯನ್ನು ಸಹ ಪಡೆಯಲಾಗಿದೆ.

ಸಾಂಪ್ರದಾಯಿಕ ಎಂಡಿಆರ್ -ಟಿಬಿ ಚಿಕಿತ್ಸೆಯಲ್ಲಿ ಕಳೆದ 20 ತಿಂಗಳುಗಳಲ್ಲಿ ಗಂಭೀರ ಅಡ್ಡ ಪರಿಣಾಮಗಳು ಉಂಟಾಗಿತ್ತು. ಆದರೆ ಬಿಪಿಎಲ್ ಎಂಎನ್ ಚಿಕಿತ್ಸೆ ಔಷಧ ನಿರೋಧಕವಾಗಿದ್ದು, ಕ್ಷಯ ರೋಗ ಆರು ತಿಂಗಳಲ್ಲಿ ವಾಸಿಯಾಗುತ್ತದೆ ಹಾಗೂ ಈ ಚಿಕಿತ್ಸೆಯ ಸರಾಸರಿ ಯಶಸ್ಸು ಅತ್ಯಧಿಕವಾಗಿದೆ. ಭಾರತದ 75,000 ಕ್ಷಯ ರೋಗಿಗಳು ಅಲ್ಪಾವಧಿಯಲ್ಲಿ ಇದರ ಲಾಭ ಪಡೆದಿದ್ದಾರೆ. ಇದರ ಜೊತೆಗೆ ಒಟ್ಟಾರೆ ಚಿಕಿತ್ಸಾ ವೆಚ್ಚವನ್ನು ಸಹ ಕಡಿಮೆ ಮಾಡಬಹುದಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರೋಗ್ಯ ಸಂಶೋಧನೆ ತಜ್ಞರ ಜೊತೆ ಚಿಟಿ ಚಿಕಿತ್ಸೆಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಿದ್ದು, ಪುರಾವೆಗಳ ಸಹಿತ ಇದರ ಪರಿಣಾಮಗಳು ಸಾಬೀತಾಗಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈ ಎಂಡಿಆರ್ - ಟಿಬಿ ಚಿಕಿತ್ಸಾ ಆಯ್ಕೆಯು ಸುರಕ್ಷಿತ ಮತ್ತು ಕಡಿಮೆ ವೆಚ್ಚದಾಯಕವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಆರೋಗ್ಯ ಸಂಶೋಧನಾ ಇಲಾಖೆಯ ಮೂಲಕ ಆರೋಗ್ಯ ತಂತ್ರಜ್ಞಾನದ ಮೌಲ್ಯಮಾಪನ ಮಾಡಲಾಗಿದೆ.

ಭಾರತ ಸರ್ಕಾರದ ಈ ಕ್ರಮದಿಂದ ಕ್ಷಯರೋಗವನ್ನು ಕೊನೆಗೊಳಿಸುವ ತನ್ನ ರಾಷ್ಟ್ರೀಯ ಗುರಿ ಸಾಧಿಸಲು, ದೇಶದ ಪ್ರಗತಿಯನ್ನು ಗಣನೀಯವಾಗಿ ಹೆಚ್ಚಿಸುವ ನಿರೀಕ್ಷೆಯಿದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಜೊತೆ ಸಮಾಲೋಚಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕೇಂದ್ರ ಟಿಬಿ ವಿಭಾಗವು ಬಿಪಿಎಎಲ್ ಎಂ ವಿಧಾನವನ್ನು ದೇಶಾದ್ಯಂತ ಕಾಲಮಿತಿಯಲ್ಲಿ ಜಾರಿಗೊಳಿಸಲು  ಯೋಜನೆಯನ್ನು ಸಿದ್ಧಪಡಿಸುತ್ತಿದೆ, ಇದು ಹೊಸ ಸುರಕ್ಷಿತ ಆಡಳಿತಕ್ಕಾಗಿ ಆರೋಗ್ಯ ವೃತ್ತಿಪರರ ಕಠಿಣ ಸಾಮರ್ಥ್ಯದ ನಿರ್ಮಾಣವನ್ನು ಸಹ ಒಳಗೊಂಡಿದೆ.

ಹಿನ್ನೆಲೆ;

ಹಿಂದೆ ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮ (ಎನ್.ಟಿ.ಇ.ಪಿ) ಎಂದು ಕರೆಯಲ್ಪಡುವ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮ (ಆರ್.ಎನ್.ಟಿ.ಸಿ.ಪಿ), ಸುಸ್ಥಿರ ಅಭಿವೃದ್ಧಿ ಗುರಿಗಳಿಗಿಂತ ಐದು ವರ್ಷಗಳ ಮುನ್ನ 2025 ರ ವೇಳೆಗೆ ಭಾರತದಲ್ಲಿ ಕ್ಷಯ ರೋಗದ ಹೊರೆಯನ್ನು ರಚನಾತ್ಮಕವಾಗಿ  ಕಡಿಮೆ ಮಾಡುವ ಗುರಿ ಹೊಂದಿದೆ. ಇದು 632 ಜಿಲ್ಲೆಗಳು/ವರದಿ ಘಟಕಗಳಲ್ಲಿ ಒಂದು ಶತಕೋಟಿ ಜನರನ್ನು ತಲುಪಿದೆ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಟಿಬಿ ನಿರ್ಮೂಲನೆಗಾಗಿ ಭಾರತ ಸರ್ಕಾರದ ಐದು ವರ್ಷಗಳ ರಾಷ್ಟ್ರೀಯ ಕಾರ್ಯತಂತ್ರದ ಯೋಜನೆಗಳನ್ನು ಕೈಗೊಳ್ಳುವ ಜವಾಬ್ದಾರಿಯನ್ನು ಹೊಂದಿದೆ.

ಅಭಿಯಾನದ ಮಾದರಿಯಲ್ಲಿ 2025 ರ ವೇಳೆಗೆ ಕ್ಷಯ ರೋಗವನ್ನು ಕೊನೆಗೊಳಿಸುವ ಗುರಿ ಸಾಧಿಸಲು, ಟಿಬಿ ನಿರ್ಮೂಲನೆಗಾಗಿ ರಾಷ್ಟ್ರೀಯ ಕಾರ್ಯತಂತ್ರದ ಯೋಜನೆಯನ್ನು ಪ್ರಾರಂಭಿಸಲಾಯಿತು. ಖಾಸಗಿ ಪೂರೈಕೆದಾರರಿಂದ ಆರೈಕೆಯನ್ನು ಪಡೆಯುವ ಕ್ಷಯ ರೋಗಿಗಳನ್ನು ತಲುಪಲು ಒತ್ತು ನೀಡುವ ಮೂಲಕ ಎಲ್ಲಾ ರೋಗಿಗಳನ್ನು ಪತ್ತೆಹಚ್ಚುವ ಗುರಿಯನ್ನು ಹೊಂದಲು ಇದು ಬಹು-ಹಂತದ ವಿಧಾನವಾಗಿದೆ ಮತ್ತು ಹೆಚ್ಚಿನ ಅಪಾಯದ ಜನಸಂಖ್ಯೆಯಲ್ಲಿ ರೋಗನಿರ್ಣಯ ಮಾಡದ ಟಿಬಿ. ಯೂನಿವರ್ಸಲ್ ಡ್ರಗ್ ಸಸೆಪ್ಟಿಬಿಲಿಟಿ ಟೆಸ್ಟಿಂಗ್ (ಯುಡಿಎಸ್‌ಟಿ) ಅನ್ನು ಎನ್.ಟಿ.ಇ.ಪಿಯಲ್ಲಿ ಅಡಿಯಲ್ಲಿ ಅಳವಡಿಸಲಾಗಿದೆ, ಪ್ರತಿ ರೋಗನಿರ್ಣಯದಲ್ಲಿ ಕ್ಷಯ ರೋಗಿಯನ್ನು ಚಿಕಿತ್ಸೆಯ ಪ್ರಾರಂಭದ ಮೊದಲು ಅಥವಾ ಚಿಕಿತ್ಸಾ ಸಮಯದಲ್ಲಿ ಔಷಧಿ ಪ್ರತಿರೋಧವನ್ನು ಪರೀಕ್ಷಿಸಲಾಗುತ್ತದೆ.

2022 ರ ಸೆಪ್ಟೆಂಬರ್ 9 ರಂದು ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಪ್ರಧಾನಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನ [ಪಿಎಂಟಿಬಿಎಂಬಿಎ]ವನ್ನು ಆರಂಭಿಸಿದರು. ಜನರ ಸಹಭಾಗಿತ್ವದಲ್ಲಿ ಸಮರೋಪಾದಿಯಲ್ಲಿ ಸಾಮೂಹಿಕವಾಗಿ ಕ್ಷಯ ರೋಗ ನಿರ್ಮೂಲನೆಗಾಗಿ ಕಾರ್ಯನಿರ್ವಹಿಸುವಂತೆ ಅವರು ಕರೆ ನೀಡಿದ್ದರು. ರಾಷ್ಟ್ರಪತಿಯವರು ಹೆಚ್ಚುವರಿ ರೋಗ ಪತ್ತೆ, ಪೌಷ್ಟಿಕತೆ ಮತ್ತು ಕ್ಷಯ ರೋಗ ನಿರ್ಮೂಲನೆಗೆ ವೃತ್ತಿನಿರತರ ಬೆಂಬಲ ಒದಗಿಸುವ ನಿಟ್ಟಿನಲ್ಲಿ ನಿ-ಕ್ಷಯ ಮಿತ್ರ ಉಪಕ್ರಮವನ್ನು ಸಹ ಆರಂಭಿಸಿದ್ದರು ಮತ್ತು ಚುನಾಯಿತ ಪ್ರತಿನಿಧಿಗಳು, ಸಾಂಸ್ಥಿಕ ವಲಯ, ಎನ್.ಜಿ.ಒಗಳು ಈ ನಿಟ್ಟಿನಲ್ಲಿ ರೋಗಿಗಳು ಸಂಪೂರ್ಣ ಗುಣಮುಖರಾಗುವವರೆಗೆ ನೆರವಾಗುವಂತೆ ದಾನಿಗಳಿಗೆ ಅವರು ಕರೆ ನೀಡಿದ್ದರು.   

ನಿ – ಕ್ಷಯ 2.0 ಪೋರ್ಟಲ್ (https://communitysupport.nikshay.in/) ರೋಗಿಗಳಿಗೆ ಹೆಚ್ಚುವರಿ ಬೆಂಬಲ ಒದಗಿಸುವ, ಕ್ಷಯದಿಂದ ಮುಕ್ತರಾಗಲು ಸಮುದಾಯದ ನೆರವು ದೊರಕಿಸಿಕೊಡುವ, 2025 ರ ವೇಳೆಗೆ ದೇಶವನ್ನು ಕ್ಷಯ ರೋಗ ಮುಕ್ತಗೊಳಿಸುವ ನಿಟ್ಟಿನಲ್ಲಿ ಭಾರತದ ಬದ್ಧತೆಯನ್ನು ಸಾಕಾರಗೊಳಿಸಲು ಉದ್ದೇಶಿಸಲಾಗಿದೆ. ಸಾಮಾಜಿಕ ಸಾಂಸ್ಥಿಕ ಜವಾಬ್ದಾರಿಯ ಅವಕಾಶಗಳನ್ನು ಬಳಸಿಕೊಂಡು 2025 ರ ವೇಳೆಗೆ ಕ್ಷಯರೋಗ ನಿರ್ಮೂಲನೆ ಮಾಡುವ ಗುರಿ ನಿಗದಿಪಡಿಸಲಾಗಿತ್ತು. ಭಾರತ ಜಗತ್ತಿನಲ್ಲಿಯೇ ಅತಿ ಹೆಚ್ಚು 7,767 ತ್ವರಿತ ಕ್ಷಯರೋಗ ಪತ್ತೆ ಪರೀಕ್ಷಾ ಪ್ರಯೋಗಾಲಯ ಸೌಲಭ್ಯ ಹೊಂದಿದೆ ಮತ್ತು 87 ಸಂಸ್ಕೃತಿ ಮತ್ತು ಔಷಧದ ಸೂಕ್ಷ್ಮತೆಯ ಪರೀಕ್ಷಾ ಪ್ರಯೋಗಾಲಯಗಳು ದೇಶದ ಉದ್ದಗಲಗಳಲ್ಲಿ  ಹರಡಿಕೊಂಡಿವೆ. ಈ ವ್ಯಾಪಕವಾದ ಪ್ರಯೋಗಾಲಯ ಜಾಲವು ಎಂಡಿಆರ್ -ಟಿಬಿಯನ್ನು ಸಮಯೋಚಿತವಾಗಿ ಪತ್ತೆಹಚ್ಚಲು ಮತ್ತು ಟಿಬಿ ಚಿಕಿತ್ಸೆಯನ್ನು ತ್ವರಿತವಾಗಿ ಪ್ರಾರಂಭಿಸಲು ಸಹಾಯ ಮಾಡಲಿದೆ.

 

*****



(Release ID: 2052761) Visitor Counter : 11