ಕಲ್ಲಿದ್ದಲು ಸಚಿವಾಲಯ
azadi ka amrit mahotsav

ರಾಷ್ಟ್ರೀಯ ಕಲ್ಲಿದ್ದಲು ಗಣಿ ಸುರಕ್ಷತಾ ವರದಿ ಪೋರ್ಟಲ್; ವರ್ಧಿತ ಸುರಕ್ಷತೆಯತ್ತ ಒಂದು ಹೆಜ್ಜೆ

Posted On: 24 AUG 2024 12:08PM by PIB Bengaluru

ಕಲ್ಲಿದ್ದಲು ಕಂಪನಿಗಳ ಸುರಕ್ಷತಾ ಸ್ಥಿತಿಯನ್ನು ಮೌಲ್ಯಮಾಪನ ಮಾಡಲು/ನಿರ್ಣಯಿಸಲು, ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿ ಶ್ರೀ ಅಮೃತ್ ಲಾಲ್ ಮೀನಾ ಅವರು ಶುಕ್ರವಾರ ರಾಷ್ಟ್ರೀಯ ಕಲ್ಲಿದ್ದಲು ಗಣಿ ಸುರಕ್ಷತಾ ವರದಿ ಪೋರ್ಟಲ್ ಅಭಿವೃದ್ಧಿಯನ್ನು ಪರಿಶೀಲಿಸಿದರು.

ಪರಿಶೀಲನಾ ಸಭೆಯಲ್ಲಿ ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಅಧ್ಯಕ್ಷರು ಮತ್ತು ಸಿಐಎಲ್ ನ  ಅಂಗಸಂಸ್ಥೆಗಳ ಸಿಎಂಡಿಗಳು ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಶ್ರೀ ಅಮೃತ್ ಲಾಲ್ ಮೀನಾ ಅವರು, ಎಲ್ಲಾ ಕಲ್ಲಿದ್ದಲು ಗಣಿಗಳಲ್ಲಿ 100% ಸುರಕ್ಷತಾ ಲೆಕ್ಕಪರಿಶೋಧನೆ ನಡೆಸುವ ಅಗತ್ಯವನ್ನು ಒತ್ತಿ ಹೇಳಿದರು, "ಶೂನ್ಯ ಅಪಘಾತ, ಯಾವ ಸಂದರ್ಭದಲ್ಲೂ ವಿಫಲಗೊಳ್ಳದ ಪೂರ್ಣ ಪ್ರಮಾಣದ  ಸುರಕ್ಷತೆ" ಸಾಧಿಸುವ ಸಚಿವಾಲಯದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಸಿಐಎಲ್ ಅಧ್ಯಕ್ಷರು ಪೋರ್ಟಲ್ ಅನ್ನು ಪ್ರದರ್ಶಿಸಿದರು, ಮತ್ತು ಕಲ್ಲಿದ್ದಲು ಗಣಿಗಳಲ್ಲಿ ಸುರಕ್ಷತಾ ಸುಧಾರಣೆಗಳನ್ನು ತ್ವರಿತಗೊಳಿಸಲು ಅಧಿಕಾರಿಗಳು ಅಮೂಲ್ಯವಾದ ಒಳನೋಟಗಳನ್ನು ನೀಡಿದರು.

ಪೋರ್ಟಲ್ ಪ್ರಾತ್ಯಕ್ಷಿಕೆಯು ಎರಡು ಪ್ರಮುಖ ಮಾಡ್ಯೂಲ್ ಗಳನ್ನು ಪ್ರದರ್ಶಿಸಿತು: ಅಪಘಾತ ಮಾಡ್ಯೂಲ್ ಮತ್ತು ಸುರಕ್ಷತಾ ಲೆಕ್ಕಪರಿಶೋಧನಾ ಮಾಡ್ಯೂಲ್. ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಎದುರಾಗುವ ಹಲವಾರು ಕಾರ್ಯಾಚರಣೆ ಮತ್ತು ಔದ್ಯೋಗಿಕ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು, ಗಣಿಗಳಲ್ಲಿ ಸುರಕ್ಷಿತವಾಗಿ ಕೆಲಸ ಮಾಡಲು ಕಠಿಣ ಸುರಕ್ಷತಾ ಶಿಷ್ಟಾಚಾರಗಳು (ಪ್ರೋಟೋಕಾಲ್ಗಳು)  ಅತ್ಯಗತ್ಯ. ಕಲ್ಲಿದ್ದಲು ಕಂಪನಿಗಳು ತಮ್ಮ ಚಿಂತನೆ  ಮತ್ತು ಧ್ಯೇಯಕ್ಕೆ ಅನುಗುಣವಾಗಿ ಸಮಗ್ರ ಸುರಕ್ಷತಾ ನೀತಿಯನ್ನು ಜಾರಿಗೆ ತರಲು ಬದ್ಧವಾಗಿವೆ.

ರಾಷ್ಟ್ರೀಯ ಕಲ್ಲಿದ್ದಲು ಗಣಿ ಸುರಕ್ಷತಾ ವರದಿ ಪೋರ್ಟಲ್ ಸುರಕ್ಷತಾ ನಿರ್ವಹಣೆಯಲ್ಲಿ ಮಹತ್ವದ ಪ್ರಗತಿಯನ್ನು ಸೂಚಿಸುತ್ತದೆ. ಅಪಘಾತ ಮಾಡ್ಯೂಲ್ 24 ಗಂಟೆಗಳ ಅವಧಿಯಲ್ಲಿ ಅತ್ಯಂತ ನಿಖರ  ಸಮಯದ  ವರದಿ ಮಾಡಲು ಮತ್ತು ಅಪಘಾತಗಳ ಸಮರ್ಥ ನಿರ್ವಹಣೆಯನ್ನು ಸಕ್ರಿಯಗೊಳಿಸುತ್ತದೆ, ತ್ವರಿತ ಪ್ರತಿಕ್ರಿಯೆ ಮತ್ತು ಸಮಗ್ರ ವಿಶ್ಲೇಷಣೆಯನ್ನು ಖಚಿತಪಡಿಸಲು ಇದರಿಂದ ಸಾಧ್ಯವಾಗುತ್ತದೆ. ಸುರಕ್ಷತಾ ಲೆಕ್ಕಪರಿಶೋಧನಾ ಮಾಡ್ಯೂಲ್ ಲೆಕ್ಕಪರಿಶೋಧನಾ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ, ಕಲ್ಲಿದ್ದಲು ಗಣಿಗಾರಿಕೆ ವಲಯದಾದ್ಯಂತ ಸುರಕ್ಷತಾ ಅಭ್ಯಾಸಗಳು ಮತ್ತು ಶಿಷ್ಟಾಚಾರಗಳನ್ನು (ಪ್ರೋಟೋಕಾಲ್ಗಳನ್ನು) ಬಲಪಡಿಸುತ್ತದೆ ಹಾಗು ಸುಧಾರಿತ ಮಾಡ್ಯೂಲ್ಗಳನ್ನು ಸಂಯೋಜಿಸುವ ಮೂಲಕ, ನಿರ್ಣಾಯಕ ಸುರಕ್ಷತಾ ಸವಾಲುಗಳನ್ನು ಪರಿಹರಿಸಲಾಗುತ್ತಿದೆ, ಸುರಕ್ಷತಾ ನಿರ್ವಹಣೆಗೆ ಹೊಸ ಮಾನದಂಡಗಳನ್ನು ಅದು ನಿಗದಿಪಡಿಸುತ್ತದೆ.

ಕಲ್ಲಿದ್ದಲು ಸಚಿವಾಲಯ ಮತ್ತು ಕಲ್ಲಿದ್ದಲು-ಪಿಎಸ್ ಯುಗಳು ಕಲ್ಲಿದ್ದಲು ಸಚಿವರ ನಾಯಕತ್ವದಲ್ಲಿ ಸಂಭಾವ್ಯ ಅಪಾಯಗಳನ್ನು ಗುರುತಿಸುವ ಮತ್ತು ಕಡಿಮೆ ಮಾಡುವ ಅಪಾಯ ಮೌಲ್ಯಮಾಪನ ಕಾರ್ಯವಿಧಾನಗಳ ಮೂಲಕ "ಗಣಿ ಸುರಕ್ಷತೆಯ ಸಂಸ್ಕೃತಿ" ಯನ್ನು ಬೆಳೆಸಲು ಬದ್ಧವಾಗಿವೆ. ನವೀನ ತಂತ್ರಜ್ಞಾನಗಳು ಮತ್ತು ನೀತಿಗಳನ್ನು ಬಳಸಿಕೊಳ್ಳುವ ಮೂಲಕ, ಕಲ್ಲಿದ್ದಲು ಸಚಿವಾಲಯವು ಸುರಕ್ಷತೆ, ಉತ್ಪಾದಕತೆಯ ಸಂಸ್ಕೃತಿಯನ್ನು ಉತ್ತೇಜಿಸುವ ಮತ್ತು ಕಲ್ಲಿದ್ದಲು ಗಣಿಗಾರಿಕೆ ಕ್ಷೇತ್ರದ ಎಲ್ಲಾ ಉದ್ಯೋಗಿಗಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.

 

*****


(Release ID: 2048661)