ಉಪರಾಷ್ಟ್ರಪತಿಗಳ ಕಾರ್ಯಾಲಯ

ನೆಲದ ಕಾನೂನಿನ ಬಗ್ಗೆ ಭಾರತ ಯಾವುದೇ ದೇಶದಿಂದ ಪಾಠ ಕಲಿಯುವ ಅಗತ್ಯವಿಲ್ಲ – ಉಪರಾಷ್ಟ್ರಪತಿ 


ಕೆಲವರು ಮಾನವ ಹಕ್ಕುಗಳ ಮೂಲಕ ಕೆಟ್ಟ ಸ್ವಭಾವದ ಅಪರಾಧ ಮರೆ ಮಾಚಲು ಪ್ರಯತ್ನಿಸುತ್ತಿದ್ದಾರೆ – ಉಪ ರಾಷ್ಟ್ರಪತಿ

ಕಾನೂನಿನ ಉಲ್ಲಂಘನೆಯಲ್ಲಿ ತೊಡಗಿರುವವರು ಸಂತ್ರಸ್ತರ ಚೀಟಿಯನ್ನು ಹೇಗೆ ಬಳಸಬಹುದು – ಶ್ರೀ ಜಗದೀಪ್ ಧನ್ಕರ್‌

ಭ್ರಷ್ಟಾಚಾರ ಅವಕಾಶದ ಮಾರ್ಗವಲ್ಲ; ಇದು ಜೈಲಿನ ಹಾದಿ – ಉಪ ರಾಷ್ಟ್ರಪತಿ 

ಭ್ರಷ್ಟರ ಜೊತೆ ವ್ಯವಹರಿಸಬಾರದು, ಏಕೆಂದರೆ ಇದು ಹಬ್ಬ ಅಥವಾ ಕೃಷಿ ಚಟುವಟಿಕೆಯ ಋತುವಾಗಿದೆ

ಭಾರತ ಪ್ರಜಾತಂತ್ರ ದೇಶವಾಗಿದ್ದು, ಯಾವುದೇ ವ್ಯಕ್ತಿ ಇಲ್ಲವೆ ಗುಂಪಿನೊಂದಿಗೆ ರಾಜೀಯಾಗದ ದೃಢವಾದ ನ್ಯಾಯಾಂಗ ವ್ಯವಸ್ಥೆ ಹೊಂದಿದೆ ಎಂದು ಉಪ ರಾಷ್ಟ್ರಪತಿ ಶ್ರೀ ಜಗದೀಪ್‌ ಧನ್ಕರ್‌ ಹೇಳಿದ್ದಾರೆ

ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ [ಐಐಪಿಎ]ಯ ನವೀಕೃತ ಕಟ್ಟಡ ಉದ್ಘಾಟಿಸಿದ ಉಪ ರಾಷ್ಟ್ರಪತಿಯವರು

Posted On: 29 MAR 2024 7:03PM by PIB Bengaluru

ಭಾರತದ ಪ್ರಜಾತಂತ್ರ ಅಸಾಧಾರಣವಾಗಿದ್ದು, ಈ ನೆಲದ ಕಾನೂನಿನ ಬಗ್ಗೆ ಯಾರಿಂದಲೂ ಪಾಠ ಕಲಿಯುವ ಅಗತ್ಯವಿಲ್ಲ ಎಂದು ವ್ಯಾಖ್ಯಾನಿಸಿದ್ದಾರೆ. 

 

ನವದೆಹಲಿಯಲ್ಲಿಂದು ಭಾರತೀಯ ಆಡಳಿತಾತ್ಮಕ ಸಂಸ್ಥೆ[ಐಐಪಿಎ]ಯ 7೦ ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಇಂದು "ಕಾನೂನಿನ ಮುಂದೆ ಸಮಾನತೆ ಒಂದು ಹೊಸ ರೂಢಿಯಾಗಿದೆ" ಮತ್ತು ಕಾನೂನನ್ನು ಮೀರಿದವರೆಂದು ಭಾವಿಸುವವರನ್ನು ಕಾನೂನು ಹೊಣೆಗಾರರನ್ನಾಗಿ ಮಾಡಲಿದೆ.

"ಆದರೆ ನಾವು ಏನು ನೋಡುತ್ತೇವೆ? ಕಾನೂನು ತನ್ನ ಹಾದಿಯನ್ನು ಹಿಡಿದ ಕ್ಷಣದಲ್ಲಿ, ಅವರು ಬೀದಿಗಿಳಿಯುತ್ತಾರೆ, ಹೆಚ್ಚಿನ ಚರ್ಚೆಗಳು, ಮಾನವ ಹಕ್ಕುಗಳ ಮೂಲಕ ಕೆಟ್ಟ ಸ್ವಭಾವದ ಅಪರಾಧವನ್ನು ಮರೆಮಾಚುತ್ತಾರೆ ಎಂದರು. 

ಭಾರತೀಯ ನ್ಯಾಯಾಂಗ ವ್ಯವಸ್ಥೆ ದೃಢವಾಗಿದ್ದು, ಇದು ಜನಪರ ಮತ್ತು ಸ್ವಾಯತ್ತತೆಯಿಂದ ಕೂಡಿದೆ. "ಕಾನೂನು ಜಾರಿಯಲ್ಲಿರುವಾಗ ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಅಥವಾ ಸಂಘಟನೆ ಬೀದಿಗಿಳಿಯಲು ಸಮರ್ಥನೆ ಏನು?" ಎಂದು ಪ್ರಶ್ನಿಸಿದರು.

ಈ ವಿಷಯದ ಬಗ್ಗೆ ಆಳವಾದ ಚರ್ಚೆಗೆ ಕರೆ ನೀಡಿದ ಶ್ರೀ ಧನ್ಕರ್ ಅವರು, “ಜನರು ದೂರು ನೀಡುವ ವಿಧಾನದಲ್ಲಿ ವಾದ್ಯವೃಂದ ನಡೆಸಬಹುದೇ?. ಇದು ಕಾನೂನಿನ ನಿಯಮದಿಂದ ದೂರವಿರಲು ಹಾನಿಕಾರಕ ಪ್ರವೃತ್ತಿ?. ಕಾನೂನಿನ ಉಲ್ಲಂಘನೆಯಲ್ಲಿ ತೊಡಗಿರುವ ಒಬ್ಬರು ಸಂತ್ರಸ್ತರ ಚೀಟಿಯನ್ನು ಹೇಗೆ ಬಳಸಲು ಸಾಧ್ಯ? ಎಂದರು. 

ಭ್ರಷ್ಷಾಚಾರ ದೀರ್ಘಕಾಲದ ಬಹುಮಾನವಲ್ಲ ಎಂದು ಹೇಳಿದ ಉಪ ರಾಷ್ಟ್ರಪತಿಯವರು, “ಭ್ರಷ್ಟಾಚಾರ ಅವಕಾಶಗಳು, ಉದ್ಯೋಗ ಇಲ್ಲವೆ ಗುತ್ತಿಗೆ ಸೇರಿದಂತೆ ಯಾವುದಕ್ಕೂ ಹಾದಿಯಲ್ಲ, ಇದು ಜೈಲಿನ ಹಾದಿ ತೋರಿಸುತ್ತದೆ. ವ್ಯವಸ್ಥೆಯು ಇದನ್ನು ಭದ್ರಪಡಿಸುತ್ತದೆ. ಭ್ರಷ್ಟರ ಜೊತೆ ವ್ಯವಹರಿಸಬಾರದು, ಏಕೆಂದರೆ ಇದು ಹಬ್ಬ ಅಥವಾ ಕೃಷಿ ಚಟುವಟಿಕೆಯ ಋತುವಾಗಿದೆ. ಆದಾಗ್ಯೂ ತಪ್ಪಿತಸ್ಥರನ್ನು ಉಳಿಸಲು ಯಾವುದೇ ಋತು ಹೇಗೆ ಕಾಪಾಡಲು ಸಾಧ್ಯ?. ಕಾನೂನಿನ ಹಾದಿ ಹಿಡಿಯಿರಿ, ಅದೊಂದೇ ಸೂಕ್ತ ದಾರಿ” ಎಂದು ಕಿವಿ ಮಾತು ಹೇಳಿದರು. 

 

 

ಜನಪರವಾಗಿರುವ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಉಪ ರಾಷ್ಟ್ರಪತಿಯವರು, "ನ್ಯಾಯಾಂಗ ವ್ಯವಸ್ಥೆಯೂ ಮಧ್ಯರಾತ್ರಿಯಲ್ಲಿಯೂ ಸಭೆ ಸೇರಿದ್ದು, ರಜಾದಿನಗಳಲ್ಲೂ ಕಲಾಪ ನಡೆಸಿ ಪರಿಹಾರ ನೀಡಿದೆ. ನಮ್ಮ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಪ್ರಶ್ನೆ ಮಾಡುವ ಕುರಿತು ಪ್ರಸ್ತಾಪಿಸಿದ ಉಪ ರಾಷ್ಟ್ರಪತಿಯವರು, "ನೋಂದಾಯಿತ ಅಥವಾ ಗುರುತಿಸಲ್ಪಟ್ಟ ಪಕ್ಷವಿಲ್ಲದ ಜನರ ಗುಂಪು ರಾಜಕೀಯ ಪಕ್ಷವಾಗಿ ವರ್ತಿಸಿದರೆ, ನಾವು ಏನು ಮಾಡಬೇಕು? ಅವರು ಜವಾಬ್ದಾರರಲ್ಲ, ಅದು ಬಾಲಿಶತನವಾಗುತ್ತದೆ. ನಾವು ಅದಕ್ಕಿಂತ ಮೇಲಿನ ಹಂತಕ್ಕೆ  ಏರಬೇಕು” ಎಂದರು. 

ಭಾರತದ ಅಭಿವೃದ್ಧಿಯನ್ನು ಕೆಲವು ಕಡೆಗಳಲ್ಲಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. “ಅದರ ನಾಗರಿಕತೆ, ಆರ್ಥಿಕತೆಯ ಗಾತ್ರ, ಜನಸಂಖ್ಯೆ, ಪ್ರಜಾಪ್ರಭುತ್ವದ ಕೆಲಸದಿಂದಾಗಿ ಭಾರತವು ಜಾಗತಿಕವಾಗಿ ಮಹತ್ವ ಪಡೆದುಕೊಂಡಿದೆ.

ಭಾರತಕ್ಕೆ ವಿಶ್ವಸಂಸ್ಥೆ – ಯು.ಎನ್.ಎಸ್.ಸಿಯಲ್ಲಿ ಶಾಶ್ವತ ಸದಸ್ಯತ್ವ ಹೊಂದಲು ಪ್ರಯತ್ನ ನಡೆಯುತ್ತಿದೆ. ವಿಶ್ವಸಂಸ್ಥೆಗೆ ಭಾರತದಂತಹ ದೇಶದ ಪ್ರತಿನಿಧಿಗಳಿಲ್ಲದಿದ್ದರೆ ಅದು ಫಲಪ್ರದವಾಗದು ಮತ್ತು ಉತ್ಪಾದಕತೆಯಾಗದು. ಎಲ್ಲಾ ಹಂತಗಳಲ್ಲಿ ಸಾಂವಿಧಾನಿಕವಾಗಿ ರಚನಾತ್ಮಕ ಪ್ರಜಾಪ್ರಭುತ್ವವನ್ನು ಹೊಂದಿರುವ ವಿಶ್ವದ ಏಕೈಕ ದೇಶ ಎಂಬ ವಿಶಿಷ್ಟ ಸ್ಥಾನವನ್ನು ಭಾರತ ಹೊಂದಿದೆ. ನಮ್ಮ ಸಂವಿಧಾನವು ಪ್ರಜಾಪ್ರಭುತ್ವದ ಎಲ್ಲಾ ಹಂತಗಳಲ್ಲೂ ಪ್ರಜಾಪ್ರಭುತ್ವ ಆಶಯಗಳನ್ನು ಎತ್ತಿಹಿಡಿಯುತ್ತಿದೆ ಎಂದರು. 

ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ [ಐಐಪಿಎ]ಯ ನವೀಕೃತ ಕಟ್ಟಡವನ್ನು  ಉಪ ರಾಷ್ಟ್ರಪತಿಯವರು ಉದ್ಘಾಟಿಸಿದರು ಮತ್ತು ಐಐಪಿಎ ಸಂಸ್ಥೆಯ ಹಲವು ಪ್ರಕಟಣೆಗಳನ್ನು ಬಿಡುಗಡೆ ಮಾಡಿದರು. 

ಐಐಪಿಎ ನ ಡಿಜಿ ಶ್ರೀ ಸುರೇಂದ್ರ ನಾಥ್‌ ತ್ರಿಪಾಠಿ, ಐಐಪಿಎ ರಿಜಿಸ್ಟ್ರಾರ್‌ ಶ್ರೀ ಅಮಿತಾಭ್‌ ರಂಜನ್‌ ಮತ್ತು ಇತರೆ ಗಣ್ಯರು ಉಪಸ್ಥಿತರಿದ್ದರು.

*****



(Release ID: 2016740) Visitor Counter : 46