ಪ್ರಧಾನ ಮಂತ್ರಿಯವರ ಕಛೇರಿ

ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿ ಅವರ ಉತ್ತರದ ಕನ್ನಡ ಅನುವಾದ

Posted On: 05 FEB 2024 10:34PM by PIB Bengaluru

ಗೌರವಾನ್ವಿತ ಸ್ಪೀಕರ್ ಸರ್‌,

ರಾಷ್ಟ್ರಪತಿ ಅವರ ಭಾಷಣದ ಮೇಲಿನ ವಂದನಾ ನಿರ್ಣಯವನ್ನು ಬೆಂಬಲಿಸಲು ನಾನು ಇಲ್ಲಿ ನಿಂತಿದ್ದೇನೆ. ಗೌರವಾನ್ವಿತ ರಾಷ್ಟ್ರಪತಿ ಅವರು, ನಮ್ಮೆಲ್ಲರನ್ನುದ್ದೇಶಿಸಿ ಸಂಸತ್ತಿನ ಹೊಸ ಕಟ್ಟಡದಲ್ಲಿ ಮಾತನಾಡಿದರು ಮತ್ತು ಆಗ ಸೆಂಗೋಲ್ ಘನತೆ ಮತ್ತು ಗೌರವದಿಂದ ಇಡೀ ಮೆರವಣಿಗೆಯಲ್ಲಿ ಮುಂಚೂಣಿಯಲ್ಲಿತ್ತು. ನಾವೆಲ್ಲರೂ ಅದರ ಹಿಂದೆ ಸಾಗುತ್ತಿದ್ದೆವು. ಹೊಸ ಸದನದಲ್ಲಿ ಹೊಸ ಪರಂಪರೆ ಭಾರತದ ಸ್ವಾತಂತ್ರ್ಯದ ಸಂಭ್ರಮದ ಪವಿತ್ರ ಕ್ಷಣವನ್ನು ಪ್ರತಿಬಿಂಬಿಸುತ್ತಿತ್ತು. ಇದರಿಂದ ಪ್ರಜಾಪ್ರಭುತ್ವದ ಘನತೆ ಹಲವು ಪಟ್ಟು ಹೆಚ್ಚಾಯಿತು. 75ನೇ ಗಣರಾಜ್ಯೋತ್ಸವದ ನಂತರ ಹೊಸ ಸಂಸತ್ತಿನ ಕಟ್ಟಡ ಮತ್ತು ಸೆಂಗೋಲ್ ಮುನ್ನಡೆಸಿದ್ದು, ಈ ಕ್ಷಣಗಳೆಲ್ಲ ಅತ್ಯಂತ ಆಕರ್ಷಣೀಯವಾಗಿದ್ದವು. ನಾನು ಇಡೀ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಅಂತಹ ಹಿರಿಮೆಯನ್ನು ನಾನೆಲ್ಲೂ ನೋಡಲಿಲ್ಲ. ಆದರೆ ಅಲ್ಲಿಂದ ನಾನು ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಅವರ ಘನ ಉಪಸ್ಥಿತಿಯನ್ನು ಹೊಸ ಸಂಸತ್ ಕಟ್ಟಡದಲ್ಲಿ ಗಮನಿಸಿದಾಗ ಕ್ಷಣವನ್ನು ನಾನು ಸದಾ ಸ್ಮರಿಸುತ್ತೇನೆ. ರಾಷ್ಟ್ರಪತಿ ಅವರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತಂತೆ 60ಕ್ಕೂ ಅಧಿಕ ಗೌರವಾನ್ವಿತ ಸದಸ್ಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿರುವುದಕ್ಕೆ ಅವರಿಗೆ ನಾನು ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ.

ವಿಶೇಷವಾಗಿ ನಾನು ಪ್ರತಿಪಕ್ಷ ಕೈಗೊಂಡಿರುವ ನಿರ್ಣಯವನ್ನು ಶ್ಲಾಘಿಸುತ್ತೇನೆ. ಅವರ ಭಾಷಣದ ಪ್ರತಿಯೊಂದು ಅಂಶವೂ ನನ್ನ ಕೈ ಬಲಪಡಿಸಿದೆ ಮತ್ತು ದೀರ್ಘಕಾಲ ಅವರು (ಪ್ರತಿಪಕ್ಷಗಳ ಸಾಲಿನಲ್ಲೇ ಇರಬೇಕು) ಎಂಬ ರಾಷ್ಟ್ರದ ಸಂಕಲ್ಪವನ್ನು ಬಲಪಡಿಸಿದೆ. ನೀವು ಹಲವು ದಶಕಗಳ ಕಾಲ ಇಲ್ಲೇ (ಟ್ರಷರಿ ಬೆಂಚ್ ನಲ್ಲಿ– ಆಡಳಿತ ಪಕ್ಷದಲ್ಲಿ ಕುಳಿತಿದ್ದೀರಿ), ಆದರೆ ಈಗ ನೀವು ಅಲ್ಲಿ ಹಲವು ದಶಕಗಳ ಕಾಲ(ಪ್ರತಿಪಕ್ಷಗಳ)ಸಾಲಿನಲ್ಲೇ ಕುಳಿತುಕೊಳ್ಳಬೇಕಾಗಿದೆ. ಜನರು ದೇವರ ಪ್ರತಿರೂಪವಿದ್ದಂತೆ. ಇತ್ತೀಚಿನ ದಿನಗಳಲ್ಲಿ ನೀವು ಅತ್ಯಂತ ಶ್ರಮವಹಿಸಿ ಕೆಲಸ ಮಾಡುತ್ತಿದ್ದೀರಿ. ಜನರ ಆಶೀರ್ವಾದ ಖಂಡಿತವಾಗಿ ನಿಮ್ಮ ಮೇಲಿರಲಿ ಎಂದು ಬಯಸುತ್ತೇನೆ ಮತ್ತು ನೀವು ಖಂಡಿತ ಇನ್ನೂ ಎತ್ತರಕ್ಕೆ ಏರುತ್ತೀರಿ, ಇದೀಗ ನೀವು ಮುಂದಿನ ಚುನಾವಣೆಗಳ ನಂತರ ವೀಕ್ಷಕರ ಗ್ಯಾಲರಿಯಲ್ಲಿ ಕಾಣಿಸಿಕೊಳ್ಳುತ್ತೀರಿ. ಅಧೀರ್ ರಂಜನ್ (ಚೌಧುರಿ) ಜಿ ನೀವು ಪಡೆದಿರುವ ಗುತ್ತಿಗೆಗೆ ಕೊಡುಗೆ ಸಿಕ್ಕಿದೆಯೇ?. ನೀವು ಎಲ್ಲ ಅನುಕೂಲಗಳನ್ನು ಮಾಡಿಕೊಂಡಿದ್ದೀರಿ.

ಗೌರವಾನ್ವಿತ ಸ್ಪೀಕರ್ ಸರ್‌,

ನಿಮ್ಮಲ್ಲಿ ಹಲವರು ಚುನಾವಣೆಗಳಲ್ಲಿ ಹೋರಾಡುವ ಉಮೇದುನ್ನು ಕಳೆದುಕೊಂಡಿರುವುದನ್ನು ನಾನು ಕಾಣುತ್ತಿದ್ದೇನೆ. ಹಲವು ಜನರು ಕಳೆದ ಚುನಾವಣೆಯಲ್ಲಿ ತಮ್ಮ ಕ್ಷೇತ್ರಗಳನ್ನು (ಚುನಾವಣೆಗಳಲ್ಲಿ ಸ್ಪರ್ಧಿಸುವುದನ್ನು) ಬದಲಾಯಿಸಿಕೊಂಡಿದ್ದೀರಿ.  ಮತ್ತು ಚುನಾವಣೆಯಲ್ಲೂ ಕೂಡ ನೀವು ನಿಮ್ಮ ಕ್ಷೇತ್ರಗಳನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ ಮತ್ತು ನಿಮ್ಮಲ್ಲಿ ಹಲವು ಜನರು ಲೋಕಸಭೆಗಿಂತ ರಾಜ್ಯಸಭೆಗೆ ಹೋಗಲು ಬಯಸುತ್ತಿದ್ದೀರಿ. ನೀವು ನಿಮ್ಮದೇ ಆದ ರೀತಿಯಲ್ಲಿ ಪರಿಸ್ಥಿತಿಯನ್ನು ಅವಲೋಕಿಸಲು ಪ್ರಯತ್ನಿಸುತ್ತಿದ್ದೀರಿ.

ಗೌರವಾನ್ವಿತ ಸ್ಪೀಕರ್ ಸರ್‌,

ರಾಷ್ಟ್ರಪತಿಗಳ ಭಾಷಣ ಒಂದು ರೀತಿಯಲ್ಲಿ ವಾಸ್ತವ ಅಂಕಿ-ಅಂಶಗಳನ್ನು ಆಧರಿಸಿದ ದಾಖಲೆಯಾಗಿದೆ. ಅದನ್ನು ರಾಷ್ಟ್ರಪತಿ, ರಾಷ್ಟ್ರದ ಮುಂದೆ ಮಂಡಿಸಿದ್ದಾರೆ. ನೀವು ಇಡೀ ದಾಖಲೆಯನ್ನು ನೋಡಿದರೆ, ಗೌರವಾನ್ವಿತ ರಾಷ್ಟ್ರಪತಿಗಳು, ವಾಸ್ತವತೆಯನ್ನು ಬಿಂಬಿಸಲು ಪ್ರಯತ್ನಿಸಿರುವುದನ್ನು ಕಾಣಬಹುದು. ಅದು ದೇಶದ ಪ್ರಗತಿಯ ವೇಗವನ್ನು ಬಿಂಬಿಸುತ್ತದೆ ಮತ್ತು ಚಟುವಟಿಕೆಗಳ ವಿಸ್ತರಣೆಯ ವ್ಯಾಪ್ತಿಯನ್ನು ಬಿಂಬಿಸುತ್ತದೆ. ಭಾರತದ ಉಜ್ವಲ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ಗೌರವಾನ್ವಿತ ರಾಷ್ಟ್ರಪತಿಗಳು, ನಾಲ್ಕು ಆಧಾರ ಸ್ತಂಭಗಳ ಮೇಲೆ ನಮ್ಮ ಗಮನವನ್ನು ಸೆಳೆದಿದ್ದಾರೆ. ಅವರ ನಿಖರ ಮೌಲ್ಯಮಾಪನ ನಾಲ್ಕು ಪ್ರಮುಖ ಆಧಾರಸ್ತಂಭಗಳನ್ನು ಅವಲಂಬಿಸಿದ್ದು, ಅವುಗಳಿಂದ ದೇಶ ಸಮೃದ್ಧವಾಗುತ್ತದೆ ಮತ್ತು ಕ್ಷಿಪ್ರವಾಗಿ ಪ್ರಗತಿ ಸಾಧಿಸುತ್ತದೆ.  ಆ ನಾಲ್ಕು ಆಧಾರ ಸ್ತಂಭಗಳನ್ನು ಉಲ್ಲೇಖಿಸುತ್ತಾ ರಾಷ್ಟ್ರಪತಿ ಅವರು, ದೇಶದ ನಾರಿಶಕ್ತಿ (ಮಹಿಳಾ ಶಕ್ತಿ), ದೇಶದ ಯುವಶಕ್ತಿ (ಯೂತ್ ಪವರ್), ನಮ್ಮ ಬಡ ಸಹೋದರ ಸಹೋದರಿಯರು ಮತ್ತು ದೇಶದ ರೈತರು, ಮೀನುಗಾರರು ಹಾಗೂ ಜಾನುವಾರು ಸಾಕಾಣಿಕೆದಾರರ ಬಗ್ಗೆ ಮಾತನಾಡಿದ್ದಾರೆ. ಗೌರವಾನ್ವಿತ ರಾಷ್ಟ್ರಪತಿ ಅವರು, ಈ ನಾಲ್ಕು ಆಧಾರ ಸ್ತಂಭಗಳ ಸಬಲೀಕರಣದಿಂದ ವಿಕಸಿತ ಭಾರತ (ಅಭಿವೃದ್ಧಿ ಹೊಂದಿದ ಭಾರತ) ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಸಾಗುತ್ತಿದ್ದೇವೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ನೀವು ಮೀನುಗಾರರು, ಜಾನುವಾರು ಸಾಕಾಣಿಕೆದಾರರು, ರೈತರು ಮಹಿಳೆಯರು ಮತ್ತು ಯುವಜನರನ್ನು ಅಲ್ಪಸಂಖ್ಯಾತರು ಎಂದು ಪರಿಗಣಿಸದೇ ಇರಬಹುದು. ನಿಮ್ಮ ದಾದಾ (ಅಧೀರ್ ರಂಜನ್ ಚೌಧರಿ) ಅವರಿಗೆ ಏನಾಗಿದೆ ? ದೇಶದ ಯುವಜನತೆಯ ಬಗ್ಗೆ ಏನು ಮಾತನಾಡುತ್ತೀರಿ ? ಸಮಾಜದ ಎಲ್ಲ ವರ್ಗಗಳು ಸಮಾನವಾಗಿರಬೇಕಲ್ಲವೇ ? ದೇಶದ ಮಹಿಳೆಯರು ಸಮಾನವಾಗಿರಬಾರದೆ? ಎಷ್ಟು ವರ್ಷಗಳ ಕಾಲ ನೀವು ವಿಭಜನೆಯ ಬಗ್ಗೆ ಯೋಚಿಸುತ್ತೀರಿ? ಎಷ್ಟು ವರ್ಷಗಳ ಕಾಲ ನೀವು ಸಮಾಜವನ್ನು ವಿಭಜಿಸುತ್ತೀರಿ? ನಿಮ್ಮ ಮಾತುಗಳ ಮೇಲೆ ಹಿಡಿತವಿರಲಿ, ನಿಮ್ಮ ಮಿತಿಗಳನ್ನು ಅರಿತುಕೊಳ್ಳಿ, ನೀವು ದೇಶವನ್ನು ವಿಪರೀತ ಹಾಳು ಮಾಡಿದ್ದೀರಿ.

ಗೌರವಾನ್ವಿತ ಸ್ಪೀಕರ್ ಸರ್‌,

ನೀವು ಸದನದಿಂದ ಹೊರಗೆ ಹೋಗುವ ಮುನ್ನ ಕನಿಷ್ಠ ಕೆಲವು ಸಕಾರಾತ್ಮಕ ಅಂಶಗಳತ್ತ ಬೆಳಕು ಚೆಲ್ಲಿದರೆ ಒಳ್ಳೆಯದಿತ್ತು. ಕೆಲವು ಸಕಾರಾತ್ಮಕ ಸಲಹೆಗಳು ನಿಮ್ಮಿಂದ ಬಂದಿದ್ದರೆ ಒಳ್ಳೆಯದಿತ್ತು, ಆದರೆ ಎಂದಿನಂತೆ ನೀವು ದೇಶವನ್ನು ತುಂಬಾ ನಿರಾಶೆಗೊಳಿಸಿದ್ದೀರಿ ? ದೇಶಕ್ಕೆ ನಿಮ್ಮ ಯೋಚನಾ ಲಹರಿಯ ಮಿತಿ ಅರ್ಥವಾಗುತ್ತದೆ. ನಿಮ್ಮ ಪರಿಸ್ಥಿತಿ, ಸ್ಥಿತಿಗತಿ ಮತ್ತು ನಿಮ್ಮ ಯೋಚನೆಗಳ ಮಿತಿ ನೋಡಿ ನನಗೆ ಪದೇ ಪದೇ ನೋವಾಗುತ್ತದೆ.

ಗೌರವಾನ್ವಿತ ಸ್ಪೀಕರ್ ಸರ್‌,

ನಾಯಕರು ಬದಲಾಗಿರಬಹುದು, ಆದರೆ ಟೇಪ್ ರೆಕಾರ್ಡರ್‌ ಅದೇ ರಾಘವ (ಟ್ಯೂನ್) ಅನ್ನೇ ಹಾಡುತ್ತಿದೆ. ಅದೇ ಹಳೆಯ ಧ್ಯೇಯಗಳನ್ನು ಇಟ್ಟುಕೊಂಡಿದ್ದೀರಿ, ಹೊಸದೇನು ಇಲ್ಲ, ಅದೇ ಹಳೆಯ ವಾಕ್ಚಾತುರ್ಯ ಮತ್ತು ಅದೇ ಹಳೆಯ ಟ್ಯೂನ್ ನಿಮ್ಮ ಕಡೆಯಿಂದ ಮುಂದುವರಿದಿದೆ. ಇದು ಚುನಾವಣಾ ವರ್ಷ. ನೀವು ಇನ್ನಷ್ಟು ಶ್ರಮವಹಿಸಿ ಕೆಲಸ ಮಾಡಬೇಕು, ಕೆಲವು ವಿಷಯಗಳನ್ನು ಮುಂದೆ ತನ್ನಿ ಮತ್ತು ಜನರಿಗೆ ಸಂದೇಶವನ್ನು ರವಾನಿಸಿ, ನೀವು ಅದರಲ್ಲೂ ವಿಫಲರಾಗಿದ್ದೀರಿ. ಅದನ್ನೂ ಸಹ ನಿಮಗೆ ನಾನು ಬೋಧಿಸುತ್ತೇನೆ.

ಗೌರವಾನ್ವಿತ ಸ್ಪೀಕರ್ ಸರ್‌,

ಕಾಂಗ್ರೆಸ್ ಪಕ್ಷವೇ ಬಹುತೇಕ ಇಂದಿನ ಪ್ರತಿಪಕ್ಷಗಳ ಸ್ಥಿತಿಗತಿಗೆ ಕಾರಣವಾಗಿದೆ. ಕಾಂಗ್ರೆಸ್ ಗೆ ಉತ್ತಮ ಪ್ರತಿಪಕ್ಷವಾಗಲು ಒಳ್ಳೆಯ ಅವಕಾಶವಿತ್ತು ಮತ್ತು ಹತ್ತು ವರ್ಷಗಳ ಅವಧಿ ಕಡಿಮೆಯೇನಲ್ಲ. ಆದರೆ ಹತ್ತು ವರ್ಷಗಳಲ್ಲಿ ಅವರು ತಮ್ಮ ಜವಾಬ್ದಾರಿಯನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಪ್ರತಿಪಕ್ಷದಲ್ಲಿ (ಕಾಂಗ್ರೆಸ್ ಪಾರ್ಟಿ) ಸಮರ್ಥ ಜನರಿದ್ದರೂ ಅದರ ನಾಯಕರು ವಿಫಲರಾಗಿದ್ದಾರೆ. ಅದರಲ್ಲಿ ಸಮರ್ಥ ಜನರಿದ್ದರೂ ಅವರನ್ನು ಬೆಳೆಯಲು ಬಿಡಲಿಲ್ಲ, ಏಕೆಂದರೆ ಹಾಗೆ ಮಾಡಿದರೆ ಅದು ತೊಡಕುಗಳಿಗೆ ಕಾರಣವಾಗುತ್ತಿತ್ತು ಮತ್ತು ಅದೇ ಕಾರಣಕ್ಕೆ ಅವರು ಬೇರೇನು ಮಾಡಿದರು ಎಂದರೆ ಪ್ರತಿಪಕ್ಷಗಳಲ್ಲಿದ್ದ ಪ್ರತಿಭಾವಂತರನ್ನು ಪದೇ ಪದೇ ತುಳಿದರು. ನಮ್ಮ ಸದನದಲ್ಲಿ ಹಲವು ಯುವ ಮತ್ತು ಉತ್ಸಾಹಿ ಸಂಸದರಿದ್ದಾರೆ. ಅವರಲ್ಲಿ ಅತ್ಯುತ್ಸಾಹ ಮತ್ತು ಶಕ್ತಿ ಇದೆ. ಅವರು ಎದ್ದು ನಿಂತು ಮಾತನಾಡಿದರೆ ಅವರ ವರ್ಚಸ್ಸು ಹೆಚ್ಚಾಗಬಹುದು ಮತ್ತು ಅದರಿಂದ ಬೇರೆಯವರ ವರ್ಚಸ್ಸಿಗೆ ತೊಂದರೆಯೂ ಆಗಬಹುದು. ಆ ಕಾಳಜಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಯುವಜನತೆಗೆ ಮಾತನಾಡುವ ಅವಕಾಶವನ್ನು ತಪ್ಪಿಸುವ ಸಲುವಾಗಿ ಅವರು ಸದನದ ಕಾರ್ಯ ಕಲಾಪವನ್ನು ನಡೆಯಲು ಬಿಡಲಿಲ್ಲ. ಒಂದು ರೀತಿಯಲ್ಲಿ ಅವರು ತಮಗೆ ತಾವೇ, ದೊಡ್ಡ ನಷ್ಟವನ್ನು ಮಾಡಿಕೊಂಡರು. ಜತೆಗೆ ಪ್ರತಿಪಕ್ಷ, ಸಂಸತ್ತು ಮತ್ತು ರಾಷ್ಟ್ರಕ್ಕೂ ನಷ್ಟ ಮಾಡಿದರು. ಆದ್ದರಿಂದ ನಾನು ಸದಾ ದೇಶದಲ್ಲಿ ಆರೋಗ್ಯಯುತ ಮತ್ತು ಪರಿಣಾಮಕಾರಿ ಪ್ರತಿಪಕ್ಷವಿರಬೇಕು ಎಂದು ಬಯಸುತ್ತೇನೆ. ಕುಟುಂಬ ರಾಜಕಾರಣದಿಂದ ದೇಶ ಸಾಕಷ್ಟು ಹಾನಿ ಅನುಭವಿಸಿದೆ ಮತ್ತು ಕಾಂಗ್ರೆಸ್ ಕೂಡ ಅದಕ್ಕೆ ಸಾಕಷ್ಟು ಬೆಲೆ ತೆತ್ತಿದೆ. ಇದೀಗ ಅಧೀರ್ ಬಾಬು ಕೂಡ ಬೆಲೆ ತೆರುತ್ತಿದ್ದಾರೆ. ನಾವು ಇದೀಗ ಅಧೀರ್ ಬಾಬು ಸ್ಥಿತಿಯನ್ನು ನೋಡುತ್ತಿದ್ದೇವೆ. ಇಲ್ಲವಾದರೆ ಇದು ಸಂಸತ್ತಿನಲ್ಲಿರುವ ಕಾಲ, ಆದರೆ ಅವರು, ಕುಟುಂಬದ ಸೇವೆಯನ್ನು ಮಾಡುತ್ತಿದ್ದಾರೆ.

ಗೌರವಾನ್ವಿತ ಸ್ಪೀಕರ್ ಸರ್‌,

ಈಗಿನ ಪರಿಸ್ಥಿತಿಯಲ್ಲಿ ನಮ್ಮ (ಮಲ್ಲಿಕಾರ್ಜುನ) ಖರ್ಗೆ ಜಿ ಅವರು ಸದನದಿಂದ ಮತ್ತೊಂದು ಸದನಕ್ಕೆ ಪಲ್ಲಟಗೊಂಡಿದ್ದಾರೆ ಮತ್ತು ಗುಲಾಂ ನಬಿ ಆಜಾದ್ ಜಿ ಅವರು ಪಕ್ಷದಿಂದಲೇ ವರ್ಗಾವಣೆಗೊಂಡಿದ್ದಾರೆ. ಇದೆಲ್ಲವೂ ಕುಟುಂಬ ರಾಜಕಾರಣದ ಫಲಿತಾಂಶವಾಗಿದೆ. ಒಂದೇ ಉತ್ಪನ್ನವನ್ನು ಪದೇ ಪದೇ ಬಿಡುಗಡೆ ಮಾಡುವ ಉಮೇದಿನಲ್ಲಿ ಕಾಂಗ್ರೆಸ್ ಮಳಿಗೆ ಇದೀಗ ಮುಚ್ಚುವ ಹಂತ ತಲುಪಿದೆ ಮತ್ತು ನಾವು ಮಳಿಗೆಯ ಬಗ್ಗೆ ಮಾತನಾಡುವುದಿಲ್ಲ. (ಮೊಹಬ್ಬತ್ ಕಿ ದುಕಾನ್) ನೀವೆ ಅದನ್ನು ಹೇಳುತ್ತಿದ್ದೀರಿ. ನಾವು ಮಳಿಗೆ ಆರಂಭಿಸಿದ್ದೇವೆ ಎಂದು ನೀವೇ ಎಲ್ಲೆಡೆ ಹೇಳುತ್ತಿದ್ದೀರಿ. ಇದೀಗ ಮಳಿಗೆಗೆ ಬೀಗ ಹಾಕುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಇಲ್ಲಿ ನಮ್ಮ ದಾದ (ಅಧೀರ್ ರಂಜನ್ ಚೌಧರಿ) ತಮ್ಮ ಹವ್ಯಾಸವನ್ನು ಬಿಡಲು ಒಪ್ಪುತ್ತಿಲ್ಲ. ಅವರು ಅಲ್ಲೇ ಕುಳಿತಿದ್ದಾರೆ ಮತ್ತು ಕುಟುಂಬ ರಾಜಕಾರಣದ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಇಂದು ನಾನು ಬಗ್ಗೆ ಸ್ವಲ್ಪ ವಿವರಣೆ ನೀಡಲು ಬಯಸುತ್ತೇನೆ. ಕ್ಷಮಿಸಿ ಸ್ಪೀಕರ್ ಸರ್ ಇಂದು ನಾನು ಸ್ವಲ್ಪ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತೇನೆ. ನಾವು ಮಾತನಾಡುವ ಕುಟುಂಬ ರಾಜಕಾರಣ ಯಾವುದು ? ಒಬ್ಬ ವ್ಯಕ್ತಿಗಿಂತ ಹೆಚ್ಚಿನ ಜನರು ರಾಜಕೀಯ ವಲಯದಲ್ಲಿ ಸಾರ್ವಜನಿಕ ಬೆಂಬಲದೊಂದಿಗೆ ಒಂದೇ ಕುಟುಂಬದಲ್ಲಿ ಏಳಿಗೆ ಸಾಧಿಸುವ ಕುಟುಂಬ ರಾಜಕಾರಣವನ್ನು ನಾವು ಎಂದೂ ವಿರೋಧಿಸಿಲ್ಲ. ನಾವು ಕುಟುಂಬವೇ ನಡೆಸುತ್ತಿರುವ ಪಕ್ಷದ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದೇನೆ. ಅದರಲ್ಲಿ ಕುಟುಂಬದ ಸದಸ್ಯರೇ ಪಕ್ಷದವರಾಗಿರುತ್ತಾರೆ ಮತ್ತು ಕುಟುಂಬದ ಸದಸ್ಯರೇ ಎಲ್ಲಾ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಅದೇ ವಂಶ ರಾಜಕಾರಣ. ರಾಜನಾಥ್ (ಸಿಂಗ್) ಅಥವಾ ಅಮಿತ್ ಶಾ ಜಿ, ಅವರಿಗೆ ತಮ್ಮದೇ ಆದ ರಾಜಕೀಯ ಪಕ್ಷಗಳಿವೆ. ಆದ್ದರಿಂದಲೇ ಒಂದೇ ಕುಟುಂಬದ ಎರಡು ಪಕ್ಷಗಳನ್ನು ನಾನು ಉಲ್ಲೇಖಿಸಿದ್ದೇನೆ. ಪ್ರಜಾಪ್ರಭುತ್ವದಲ್ಲಿ ಇದು ಸೂಕ್ತವಲ್ಲ. ಪ್ರಜಾಪ್ರಭುತ್ವದಲ್ಲಿ ಒಂದೇ ಕುಟುಂಬದ ಹತ್ತು ಮಂದಿ ರಾಜಕೀಯಕ್ಕೆ ಬರುವುದು ತಪ್ಪಲ್ಲ, ಯುವಜನರು ರಾಜಕೀಯಕ್ಕೆ ಬರಬೇಕೆಂದು ಬಯಸುತ್ತೇವೆ. ಈ ಬಗ್ಗೆ ಚರ್ಚೆಯಾಗಬೇಕು ಎಂದು ನಾವು ಬಯಸುತ್ತೇವೆ. ಇದು ನನ್ನೊಬ್ಬನ ಕಾಳಜಿಯಲ್ಲ, ಇದು ದೇಶದ ಪ್ರಜಾಪ್ರಭುತ್ವದ ಕಾಳಜಿಯಾಗಿದೆ. ಕುಟುಂಬ ರಾಜಕಾರಣ ಮತ್ತು ಕುಟುಂಬ ಪಕ್ಷದ ರಾಜಕಾರಣವಾಗಿದೆ. ಹಾಗಾಗಿಯೇ ಒಂದೇ ಕುಟುಂಬದ ಇಬ್ಬರು ಪ್ರಗತಿ ಸಾಧಿಸಿದರೆ ನಾನು ಸ್ವಾಗತಿಸುತ್ತೇನೆ. ಹತ್ತು ಜನರು ಪ್ರಗತಿ ಸಾಧಿಸಿದರೂ ನಾನು ಸ್ವಾಗತಿಸುತ್ತೇನೆ. ಹೊಸ ಪೀಳಿಗೆಯ ಮತ್ತು ಒಳ್ಳೆಯ ಜನರು ರಾಷ್ಟ್ರದ ಸೇವೆಗೆ ಬಂದರೆ ಅದು ಒಳ್ಳೆಯದು. ಇಲ್ಲಿ ಪ್ರಶ್ನೆ ಬಂದಿರುವುದು ಕುಟುಂಬಗಳು ನಡೆಸುತ್ತಿರುವ ರಾಜಕೀಯ ಪಕ್ಷದ ಬಗ್ಗೆ. ಒಂದು ವೇಳೆ ಒಬ್ಬರು ಅಧ್ಯಕ್ಷರಾಗಲಿಲ್ಲ ಅಂದರೆ ಅಥವಾ ಅವರ ಪುತ್ರ ಅಧ್ಯಕ್ಷರಾಗುತ್ತಾರೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಧನ್ಯವಾದಗಳು ದಾದಾ (ಅಧೀರ್ ರಂಜನ್ ಚೌಧರಿ)_ ಸಾಮಾನ್ಯವಾಗಿ ವಿಷಯದ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಇಂದು ಬಗ್ಗೆ ಮಾತನಾಡಿದೆ.

ಗೌರವಾನ್ವಿತ ಸ್ಪೀಕರ್ ಸರ್‌,

ಒಂದೇ ಉತ್ಪನ್ನವನ್ನು ಪದೇ ಪದೇ ಬಿಡುಗಡೆ ಮಾಡಲು ಪ್ರಯತ್ನಗಳನ್ನು ನಡೆಸಲಾಗುತ್ತಿದೆ.

ಗೌರವಾನ್ವಿತ ಸ್ಪೀಕರ್ ಸರ್‌,

ಕಾಂಗ್ರೆಸ್ ಒಂದು ಕುಟುಂಬದೊಳಗೆ ಸಿಲುಕಿದೆ. ಅದು ಲಕ್ಷಾಂತರ ಕುಟುಂಬಗಳ ಆಶೋತ್ತರಗಳು ಹಾಗೂ ಸಾಧನೆಗಳನ್ನು ನೋಡಲು ಬಯಸುತ್ತಿಲ್ಲ. ಅದು ತಮ್ಮದೇ ಕುಟುಂಬದ ಹೊರಗೆ ನೋಡಲೂ ಸಹ ಸಿದ್ಧವಿಲ್ಲ, “ಕ್ಯಾನ್ಸಲ್ (ರದ್ದತಿ) ಸಂಸ್ಕೃತಿ” ಕಾಂಗ್ರೆಸ್ ಪಕ್ಷದಲ್ಲಿ ಅಭಿವೃದ್ಧಿಯಾಗಿದೆ. ಯಾವುದನ್ನಾದರೂ ಕ್ಯಾನ್ಸಲ್ ಮಾಡಬಹುದಾಗಿದೆ. ಕಾಂಗ್ರೆಸ್ ಕ್ಯಾನ್ಸಲ್ ಸಂಸ್ಕೃತಿಯಲ್ಲಿ ಸಿಲುಕಿಕೊಂಡಿದೆ. ನಾವು ಮೇಕ್ ಇನ್ ಇಂಡಿಯಾ ಬಗ್ಗೆ ಮಾತನಾಡಿದರೆ, ಕಾಂಗ್ರೆಸ್ ಅದನ್ನು ಕ್ಯಾನ್ಸಲ್ ಮಾಡಿ ಎಂದು ಹೇಳುತ್ತದೆ. ನಾವು ಆತ್ಮನಿರ್ಭರ ಭಾರತ (ಸ್ವಾವಲಂಬಿ ಭಾರತ) ಬಗ್ಗೆ ಮಾತನಾಡಿದರೆ, ಕಾಂಗ್ರೆಸ್ ಅದನ್ನು ಕ್ಯಾನ್ಸಲ್ ಮಾಡಿ ಎಂದು ಹೇಳುತ್ತದೆ. ನಾವು ವೋಕಲ್ ಫಾರ್ ಲೋಕಲ್ ಬಗ್ಗೆ ಮಾತನಾಡಿದರೆ, ಕಾಂಗ್ರೆಸ್ ಅದನ್ನು ರದ್ದುಗೊಳಿಸಿ ಎಂದು ಹೇಳುತ್ತದೆ. ನಾವು ವಂದೇ ಭಾರತ್ ಎಕ್ಸ್ ಪ್ರೆಸ್ ಬಗ್ಗೆ ಮಾತನಾಡಿದರೆ ಅದನ್ನು ಕ್ಯಾನ್ಸಲ್ ಮಾಡಿ ಎಂದು ಹೇಳುತ್ತದೆ. ನಾವು ಹೊಸ ಸಂಸತ್ ಕಟ್ಟಡದ ಬಗ್ಗೆ ಮಾತನಾಡಿದರೆ, ಕಾಂಗ್ರೆಸ್ ಅದನ್ನು ಕ್ಯಾನ್ಸಲ್ ಮಾಡಿ ಎಂದು ಹೇಳುತ್ತದೆ. ನನಗೆ ಅಚ್ಚರಿಯಾಗುತ್ತದೆ ಇವೆಲ್ಲವೂ ಮೋದಿಯ ಸಾಧನೆಗಳಲ್ಲ, ಇವೆಲ್ಲವೂ ದೇಶದ ಸಾಧನೆಗಳಾಗಿವೆ. ಇನ್ನೂ ನೀವು ಎಷ್ಟು ವರ್ಷಗಳ ಕಾಲ ದ್ವೇಷ ಭಾವನೆಯನ್ನು ಪೋಷಿಸುತ್ತೀರಿ. ಹಾಗೆ ಮಾಡುವ ಮೂಲಕ ದೇಶದ ಯಶಸ್ಸನ್ನು ಮತ್ತು ಸಾಧನೆಗಳನ್ನೂ ಸಹ ನಿರಾಕರಣೆ ಮಾಡುತ್ತೀದ್ದೀರಿ.

ಗೌರವಾನ್ವಿತ ಸ್ಪೀಕರ್ ಸರ್‌,

ಗೌರವಾನ್ವಿತ ರಾಷ್ಟ್ರಪತಿ ಅವರು, ಆರ್ಥಿಕ ಆಯಾಮಗಳ ಬಗ್ಗೆ ವಿವರವಾಗಿ ಚರ್ಚಿಸಿದ್ದಾರೆ ಮತ್ತು ‘ವಿಕಸಿತ ಭಾರತದ’ ನೀಲ ನಕ್ಷೆಯ ಬಗ್ಗೆ ಮಾತನಾಡಿದ್ದಾರೆ. ಅವರು ಆರ್ಥಿಕತೆಯ ಮೂಲ ಬುನಾದಿಯ ಬಗ್ಗೆ ಚರ್ಚಿಸಿದ್ದಾರೆ. ಇಂದು ಭಾರತದ ಉತ್ಕೃಷ್ಟ ಆರ್ಥಿಕತೆಯ ಬಗ್ಗೆ ವಿಶ್ವದಾದ್ಯಂತ ಶ್ಲಾಘನೆ ವ್ಯಕ್ತವಾಗುತ್ತಿದೆ. ಇಡೀ ವಿಶ್ವ ಇದರಿಂದ ಪ್ರೇರಿತವಾಗಿದೆ ಮತ್ತು ಇಡೀ ವಿಶ್ವ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಭಾರತ ಪ್ರಗತಿ ಸಾಧಿಸುತ್ತಿರುವುದಕ್ಕೆ ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಜಿ-20 ಶೃಂಗಸಭೆಯ ವೇಳೆ ಎಲ್ಲ ದೇಶಗಳು ಭಾರತದ ಬಗ್ಗೆ ಆಲೋಚಿಸುತ್ತಿದ್ದವು. ವಿಶ್ವ ಭಾರತದ ಬಗ್ಗೆ ಏನು ಹೇಳುತ್ತದೆ ಎಂದು ಕಾಯುತ್ತಿದ್ದವು ಮತ್ತು ಇಡೀ ವಿಶ್ವ ಭಾರತಕ್ಕೆ ಏನು ಮಾಡುತ್ತದೆ. ಈ 10 ವರ್ಷಗಳ ಅನುಭವವನ್ನು ಆಧರಿಸಿ ಮತ್ತು ಇಂದು ಸದೃಢ ಆರ್ಥಿಕತೆಯನ್ನು ಕಂಡು, ಭಾರತ ಕ್ಷಿಪ್ರಗತಿಯಲ್ಲಿ ಪ್ರಗತಿ ಸಾಧಿಸುತ್ತಿದೆ. ನಮ್ಮ ಮೂರನೇ ಅವಧಿಯಲ್ಲಿ ಭಾರತ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಎಂದು ನಾನು ವಿಶ್ವಾಸದಿಂದ ಹೇಳ ಬಯಸುತ್ತೇನೆ ಮತ್ತು ಇದು ಮೋದಿ ಅವರ ಗ್ಯಾರಂಟಿಯಾಗಿದೆ.

ಗೌರವಾನ್ವಿತ ಸ್ಪೀಕರ್ ಸರ್‌,

ಹಿಂದೆ ಏಕೆ ಅವಕಾಶವನ್ನು ನೀಡಿರಲಿಲ್ಲ ? ಎಲ್ಲರಿಗೂ ಅವಕಾಶ ನೀಡುವುದು ಸರಿಯಲ್ಲವೇ !

ಗೌರವಾನ್ವಿತ ಸ್ಪೀಕರ್ ಸರ್‌,

ನೀವು ವಿಶ್ವದ ಮೂರನೇ ಅತಿದೊಡ್ಡ ಶಕ್ತಿಯಾಗಿ ಹೊರ ಹೊಮ್ಮುತ್ತೀರಿ. ಆದರೆ ಪ್ರತಿಪಕ್ಷದ ನಿಮ್ಮ ಸಹೋದ್ಯೋಗಿಗಳು ಬಗ್ಗೆ ವಿತಂಡವಾದವನ್ನು ಮುಂದಿಡುತ್ತಾರೆ. ಅವರು ಹೇಳುತ್ತಾರೆ. ಅದರಲ್ಲೇನಿದೆ ವಿಶೇಷ ಎಂದು, ಅದು ತಾನಾಗಿಯೇ ಆಗುತ್ತದೆ. ಅದಕ್ಕೆ ನಿಮ್ಮ ಕೊಡುಗೆ ಏನು, ಅದಕ್ಕೆ ಮೋದಿ ಅವರು ಕೊಡುಗೆ ಏನು ? ಅದು ತಾನಾಗಿಯೇ ಆಗುತ್ತದೆ ಎಂದು. ನಾನು ಸದನದ ಮೂಲಕ ಇದರಲ್ಲಿ ಸರ್ಕಾರದ ಪಾತ್ರವೇನು ಮತ್ತು ವಿಶೇಷವಾಗಿ ದೇಶದ ಯುವಜನತೆಯ ಪಾತ್ರವೇನು ಎಂಬುದನ್ನು ವಿವರಿಸಲು ಬಯಸುತ್ತೇನೆ. ನಾನು ದೇಶದ ಯುವಜನತೆಗೆ ಏನೆಲ್ಲಾ ಸಂಗತಿಗಳು ನಡೆದವು ಮತ್ತು ಅದರಲ್ಲಿ ಸರ್ಕಾರದ ಪಾತ್ರವೇನು ಎಂದು ಹೇಳಲು ಬಯಸುತ್ತೇನೆ.

ಗೌರವಾನ್ವಿತ ಸ್ಪೀಕರ್ ಸರ್‌,

ಹತ್ತು ವರ್ಷದ ಹಿಂದೆ 2014ರ ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್ ಮಂಡಿಸಲಾಗಿತ್ತು. ಆಗ ಯಾರು ಅಧಿಕಾರದಲ್ಲಿದ್ದರು ಎಂಬುದು ನಿಮಗೂ ಗೊತ್ತು. ದೇಶಕ್ಕೂ ಗೊತ್ತು. ಆ ಹತ್ತು ವರ್ಷದ ಹಿಂದೆ ಅಂದಿನ ಹಣಕಾಸು ಸಚಿವರು ಮಧ್ಯಂತರ ಬಜೆಟ್ ಅನ್ನು ಮಂಡಿಸಿದ್ದರು. ಆಗ ಅವರು, ಏನು ಹೇಳಿದ್ದರು ಎಂಬುದು ಅತ್ಯಂತ ಮಹತ್ವದ್ದಾಗಿದೆ. ಅವರು ಏನು ಹೇಳಿದ್ದರು ಎಂಬುದನ್ನು ನಾನು ಪ್ರತಿಯೊಂದು ಪದದ ಸಮೇತ ಉಲ್ಲೇಖಿಸುತ್ತಿದ್ದೇನೆ. ನೀವು ಭಾರತ ಸಹಜವಾಗಿಯೇ 3ನೇ ಸ್ಥಾನವನ್ನು ತಲುಪುತ್ತದೆ ಎಂದು ಹೇಳುತ್ತಿದ್ದೀರಿ, ಅಂತಹವರು ಇದನ್ನು ಮತ್ತು ಅವರು ಏನು ಹೇಳಿದರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. “ನಾನು ಇದೀಗ ಭವಿಷ್ಯದ ದೂರದೃಷ್ಟಿಯನ್ನು, ಆಯಾಮವನ್ನು ಎದುರು ನೋಡುತ್ತಿದ್ದೇನೆ” ಇದನ್ನು ಜಗತ್ತಿನ ಶ್ರೇಷ್ಠ ಆರ್ಥಿಕ ತಜ್ಞರು ಹೇಳಿದ್ದರು. “ನಾನು ಇದೀಗ ಭವಿಷ್ಯದ ಆರ್ಥಿಕತೆಯ ದೂರದೃಷ್ಟಿಯನ್ನು ಎದುರು ನೋಡಲು ಬಯಸುತ್ತೇನೆ” ಎಂದು ಹೇಳಿದ್ದರು ಮತ್ತು ಅವರು ಇನ್ನು ಮುಂದುವರಿದು, ನಿಮಗೆ ಗೊತ್ತಿರಬಹುದು ವಾಸ್ತವ ಸಂಗತಿ ಎಂದರೆ ದೇಶದ ಆರ್ಥಿಕತೆ ಜಿಡಿಪಿಯ ಗಾತ್ರದಲ್ಲಿ ವಿಶ್ವದಲ್ಲೇ 11ನೇ ಸ್ಥಾನದಲ್ಲಿದೆ” 2014ರಲ್ಲಿ ನಾವು 11ನೇ ಸ್ಥಾನವನ್ನು ತಲುಪಿದ್ದಾಗ ಹೆಮ್ಮೆಇತ್ತು ಎಂಬುದನ್ನು ಊಹಿಸಿಕೊಳ್ಳಿ. ಇಂದು ನಾವು 5ನೇ ಸ್ಥಾನವನ್ನು ತಲುಪಿದ್ದೇವೆ ಮತ್ತು ಇದೀಗ ಏನು ನಡೆಯುತ್ತಿದೆ ಎಂಬುದನ್ನು ನೀವೆ ನೋಡಿ.  

ಗೌರವಾನ್ವಿತ ಸ್ಪೀಕರ್ ಸರ್‌,

ನಾನು ಮತ್ತಷ್ಟು ಓದಲು ಬಯಸುತ್ತೇನೆ (ಗೌರವ್) ಗೊಗೋಯ್ ಜಿ, ಧನ್ಯವಾದಗಳು. ನೀವು ಚೆನ್ನಾಗಿ ಹೇಳಿದ್ದೀರಿ. ನಾನು ಮತ್ತಷ್ಟು ಓದಲು ಬಯಸುತ್ತೇನೆ. ಎಚ್ಚರಿಕೆಯಿಂದ ಆಲಿಸಿ, ಸಹೋದ್ಯೊಗಿಗಳೇ, ತುಂಬಾ ಎಚ್ಚರಿಕೆಯಿಂದ ಆಲಿಸಿ. ಅವರು ಹೇಳಿದ್ದರು, ವಿಶ್ವದ 11ನೇ ಬೃಹತ್ ಆರ್ಥಿಕತೆಯಾಗಿದೆ ಎಂದು. ಅದು ಅತ್ಯಂತ ಹೆಮ್ಮೆಯ ವಿಷಯವಾಗಿತ್ತೆಂದು ಅವರು ಹೇಳಿದ್ದರು ಮಳಿಗೆಯಲ್ಲಿ ಸಾಕಷ್ಟು ಒಳ್ಳೆಯ ಸಂಗತಿಗಳಿವೆ. ಮುಂದಿನ ಮೂರು ದಶಕಗಳಲ್ಲಿ ದೇಶದ ಜಿಡಿಪಿ ಅಮೆರಿಕ ಮತ್ತು ಚೀನಾದ ನಂತರ ಮೂರನೇ ಸ್ಥಾನ ಗಳಿಸುತ್ತದೆ ಎಂದು ಪ್ರತಿಪಾದಿಸಿದ್ದರು. ಆ ಸಮಯದಲ್ಲಿ ಶ್ರೇಷ್ಠ ಆರ್ಥಿಕ ತಜ್ಞರು 30 ವರ್ಷಗಳಲ್ಲಿ ನಾವು 3ನೇ ಸ್ಥಾನವನ್ನು ತಲುಪುತ್ತೇವೆ ಎಂದು ಹೇಳಿದ್ದರು ಮತ್ತು ಅದು ನನ್ನ ದೂರದೃಷ್ಟಿ ಎಂದು ಹೇಳಿದ್ದರು. ಕೆಲವು ಜನರು ಇರುತ್ತಾರೆ, ಅವರು ಕಲ್ಪನೆಗಳಲ್ಲೇ ಜೀವನ ನಡೆಸುತ್ತಿರುತ್ತಾರೆ. ಅವರು ವಿಶ್ವದ ಶ್ರೇಷ್ಠ ಆರ್ಥಿಕ ತಜ್ಞರು. ಅವರೆಲ್ಲ 2014ರಲ್ಲಿ ಇದನ್ನು ಹೇಳುತ್ತಿದ್ದರು. ಅವರೆಲ್ಲಾ ಹೇಳುತ್ತಿದ್ದುದು 2044ಕ್ಕೆ ಭಾರತ 3ನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಲಿದೆ ಎಂದು ಹೇಳುತ್ತಿದ್ದರು. ಇದು ಅವರ ದೂರದೃಷ್ಟಿಯಾಗಿತ್ತು. ಅದು ಅವರ ಮಿತಿಯಾಗಿತ್ತು. ಅವರು ಕನಸು ಕಾಣುವ ಸಾಮರ್ಥ್ಯವನ್ನೂ ಸಹ ಕಳೆದುಕೊಂಡಿದ್ದರು. ಬದ್ಧತೆ ಕೂಡ ಅವರಲ್ಲಿ ಇರಲಿಲ್ಲ.

ಅವರು ದೇಶದ ಯುವಜನತೆಗೆ 30 ವರ್ಷಗಳ ಕಾಲ ಕಾಯಿರಿ ಎಂದು ಹೇಳಿದ್ದರು. ಆದರೆ ಇಂದು ನಾವು ನಿಮ್ಮ ಮುಂದೆ ಹೆಮ್ಮೆಯಿಂದ ನಿಂತಿದ್ದೇವೆ. ಈ ಘನ ಸದನದಲ್ಲಿ ನಿಂತಿದ್ದೇವೆ. ಮತ್ತು ನಾನು ಭರವಸೆ ನೀಡುತ್ತೇನೆ. ನಾವು 30 ವರ್ಷ ತೆಗೆದುಕೊಳ್ಳುವುದಿಲ್ಲ, ಇದು ಮೋದಿಯ ಗ್ಯಾರಂಟಿ ನನ್ನ ಮೂರನೇ ಅವಧಿಯಲ್ಲಿ ದೇಶ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲಿದೆ. ಅವರು, ಹೇಗೆ ಗುರಿಗಳನ್ನು ನಿಗದಿಪಡಿಸಿದರು ಮತ್ತು ಅವರು ಯಾವ ರೀತಿಯ ಆಲೋಚನೆ ಮಾಡುತ್ತಿದ್ದರು ಎಂಬುದಕ್ಕೆ ನಾನು ನಿಮಗೆ ಕ್ಷಮೆ ಕೇಳುತ್ತೇನೆ ಮತ್ತು ನೀವು (ಕಾಂಗ್ರೆಸ್ ನಾಯಕರು) 11ನೇ ಸ್ಥಾನದ ಬಗ್ಗೆ ಹೆಮ್ಮೆಪಡುತ್ತಿದ್ದಿರಿ, ಆದರೆ ನಾವು ದೇಶದ ಆರ್ಥಿಕತೆಯನ್ನು 5ನೇ ಸ್ಥಾನಕ್ಕೆ ತಂದಿದ್ದೇವೆ. ದೇಶ 11ನೇ ಸ್ಥಾನಕ್ಕೆ ತಲುಪಿದಾಗ ನೀವು ಸಂತೋಷ ಪಟ್ಟಿದ್ದೀರಿ, ಅದೇ ರೀತಿ 5ನೇ ಸ್ಥಾನ ತಲುಪಿದ್ದಕ್ಕೂ ಕೂಡ ನೀವು ಸಂತೋಷ ಪಡಬೇಕಲ್ಲವೇ? ದೇಶ 5ನೇ ಸ್ಥಾನ ತಲುಪಿದ್ದಕ್ಕೆ ನೀವು ಸಂತೋಷ ಪಡಬೇಕು. ಆದರೆ ನೀವು ಎಲ್ಲಿ ಸಿಲುಕಿಕೊಂಡಿದ್ದೀರಿ?

ಗೌರವಾನ್ವಿತ ಸ್ಪೀಕರ್ ಸರ್‌,

ಇಡೀ ವಿಶ್ವ ಬಿಜೆಪಿ ಸರ್ಕಾರದ ಕಾರ್ಯದ ವೇಗವನ್ನು, ನಮ್ಮ ಗುರಿಗಳ ಪ್ರಮಾಣವನ್ನು ಮತ್ತು ನಮ್ಮ ಸಂಕಲ್ಪದ ಶಕ್ತಿಯನ್ನು ವೀಕ್ಷಿಸುತ್ತಿದೆ.

ಮತ್ತು ಗೌರವಾನ್ವಿತ ಸ್ಪೀಕರ್ ಸರ್‌,

ಉತ್ತರ ಪ್ರದೇಶದಲ್ಲಿ ಆಗಾಗ್ಗೆ ಪದವನ್ನು ಹೇಳಲಾಗುತ್ತಿದೆ. नौ दिन चले अढ़ाई कोस ಇದು ಕಾಂಗ್ರೆಸ್ ಪಕ್ಷಕ್ಕೆ ಸೂಕ್ತವಾಗಿ ಒಪ್ಪುತ್ತದೆ ಎಂಬುದು ನನ್ನ ವಿಶ್ವಾಸವಾಗಿದೆ. ಕಾಂಗ್ರೆಸ್ ಮಂದಗತಿಗೆ ಹೋಲಿಕೆಯೇ ಇಲ್ಲ. ದೇಶದಲ್ಲಿ ಇಂದು ನಡೆಯುತ್ತಿರುವ ವೇಗದ ಕೆಲಸಗಳು ಕಾಂಗ್ರೆಸ್ ಹಿಂದೆಂದೂ ಊಹಿಸದ ರೀತಿಯಲ್ಲಿ ಇದೆ.

ಗೌರವಾನ್ವಿತ ಸ್ಪೀಕರ್ ಸರ್‌,

ಗ್ರಾಮೀಣ ಬಡವರಿಗೆ ನಾವು 4 ಕೋಟಿ ಮನೆಗಳನ್ನು ನಿರ್ಮಿಸಿದ್ದೇವೆ ಮತ್ತು ನಗರ ಪ್ರದೇಶದ ಬಡವರಿಗೆ 80 ಲಕ್ಷ ಪಕ್ಕಾ ಮನೆಗಳನ್ನು ನಿರ್ಮಿಸಿದ್ದೇವೆ. ಈ ಮನೆಗಳನ್ನು (ಕಾಂಗ್ರೆಸ್ ಸರ್ಕಾರದ) ಅವಧಿಯ ವೇಗದಲ್ಲಿ ನಿರ್ಮಿಸಿದ್ದರೆ ಏನಾಗುತ್ತಿತ್ತು ಎಂಬುದನ್ನು ನಾನು ಲೆಕ್ಕ ಹಾಕುತ್ತೇನೆ. ಕಾಂಗ್ರೆಸ್ ಸರ್ಕಾರದ ವೇಗದಲ್ಲೇ ನಿರ್ಮಿಸಿದ್ದರೆ, ಈ ಕಾರ್ಯವನ್ನು ಮಾಡಲು 100 ವರ್ಷಗಳು ಬೇಕಾಗಿತ್ತು. ಐದು ಪೀಳಿಗೆಗಳು ಬಂದು ಹೋಗುತ್ತಿದ್ದವು.  

ಗೌರವಾನ್ವಿತ ಸ್ಪೀಕರ್ ಸರ್‌,

ಕಳೆದ 10 ವರ್ಷಗಳಲ್ಲಿ 40,000 ಕಿಲೋಮೀಟರ್ ರೈಲ್ವೆ ಮಾರ್ಗಗಳ ವಿದ್ಯುದೀಕರಣವನ್ನು ಪೂರ್ಣಗೊಳಿಸಲಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯ ವೇಗದಲ್ಲೇ ಮುಂದುವರಿದಿದ್ದರೆ, ಈ ಕಾರ್ಯವನ್ನು ಪೂರ್ಣಗೊಳಿಸಲು 80 ವರ್ಷಗಳ ಕಾಲ ಹಿಡಿಯುತ್ತಿತ್ತು, ಒಂದು ರೀತಿಯಲ್ಲಿ 4 ತಲೆಮಾರುಗಳು ಬಂದು ಹೋಗುತ್ತಿದ್ದವು.

ಗೌರವಾನ್ವಿತ ಸ್ಪೀಕರ್ ಸರ್‌,

ನಾವು 17 ಕೋಟಿ ಹೆಚ್ಚುವರಿ ಅನಿಲ ಸಂಪರ್ಕಗಳನ್ನು ಒದಗಿಸಿದ್ದೇವೆ ಮತ್ತು ಅದು 10 ವರ್ಷಗಳ ನಮ್ಮ ಲೆಕ್ಕವಾಗಿದೆ. ನಾವು ಕಾಂಗ್ರೆಸ್ ಸರ್ಕಾರದ ವೇಗವನ್ನು ಪರಿಗಣಿಸಿದರೆ, ಈ ಸಂಪರ್ಕಗಳನ್ನು ನೀಡಲು 60 ವರ್ಷಗಳು ಬೇಕಾಗಿತ್ತು. ಅದು ಮೂರು ಪೀಳಿಗೆಗಳಿಗೆ ಸಮನಾಗಿತ್ತು. ಜನರು ಅಡುಗೆ ಮನೆಯ ಹೊಗೆಯಲ್ಲಿಯೇ ಜೀವನ ಕಳೆಯಬೇಕಿತ್ತು.

ಗೌರವಾನ್ವಿತ ಸ್ಪೀಕರ್ ಸರ್‌,

ನಮ್ಮ ಸರ್ಕಾರದ ಅವಧಿಯಲ್ಲಿ ನೈರ್ಮಲ್ಯದ ವ್ಯಾಪ್ತಿ ಶೇಕಡ 40 ರಿಂದ ಶೇಕಡ 100ರಷ್ಟು ತಲುಪಿದೆ. ಕಾಂಗ್ರೆಸ್ ಸರ್ಕಾರದ ವೇಗವನ್ನೇ ಅನುಸರಿಸಿದ್ದರೆ. ಈ ಕಾರ್ಯ ಪೂರ್ಣಗೊಳಿಸಲು 60-70 ವರ್ಷ ಬೇಕಾಗುತ್ತಿತ್ತು, ಆ ವೇಳೆಗೆ ಮೂರು ತಲೆಮಾರುಗಳು ಬಂದು ಹೋಗುತ್ತಿದ್ದವು. ಆದರೂ ಇದನ್ನು ಸಾಧಿಸುತ್ತಿದ್ದರೆ, ಅಥವಾ ಇಲ್ಲವೇ ಎಂಬುದಕ್ಕೆ ಯಾವುದೇ ಖಾತ್ರಿ ಇರುತ್ತಿರಲಿಲ್ಲ.

ಗೌರವಾನ್ವಿತ ಸ್ಪೀಕರ್ ಸರ್‌,

ಕಾಂಗ್ರೆಸ್ ಮನಸ್ಥಿತಿಯಿಂದ ದೇಶಕ್ಕೆ ಸಾಕಷ್ಟು ಹಾನಿಯಾಗಿದೆ. ಕಾಂಗ್ರೆಸ್ ಎಂದಿಗೂ ರಾಷ್ಟ್ರದ ಸಾಮರ್ಥ್ಯದ ಮೇಲೆ ವಿಶ್ವಾಸವಿಡಲಿಲ್ಲ. ಅವರು ಸದಾ ತಾವೇ ಆಡಳಿತಗಾರರು ಎಂದು ಪರಿಗಣಿಸಿದ್ದರು ಮತ್ತು ನಿರಂತರವಾಗಿ ಜನತೆಯ ಸಾಮರ್ಥ್ಯವನ್ನು ಅರಿಯಲಿಲ್ಲ ಮತ್ತು ಅವರ ಪ್ರಾಮುಖ್ಯತೆಯನ್ನು ಕುಗ್ಗಿಸಿದ್ದರು.

ಗೌರವಾನ್ವಿತ ಸ್ಪೀಕರ್ ಸರ್‌,

ಅವರು ದೇಶದ ಜನರ ಬಗ್ಗೆ ಹೇಗೆ ಚಿಂತಿಸುತ್ತಿದ್ದರು ಎಂಬುದನ್ನು ನಾನು ಬಲ್ಲೆ. ನಾನು ಕೆಲವರ ಹೆಸರನ್ನು ತೆಗೆದುಕೊಂಡರೆ ಅವರಿಗೆ ಸ್ವಲ್ಪ ನೋವಾಗಬಹುದು. ಭಾರತದ ಮೊದಲ ಪ್ರಧಾನಮಂತ್ರಿ ಜವಹರಲಾಲ್ ನೆಹರು ಅವರು ಆಗಸ್ಟ್ 15ರಂದು ಕೆಂಪು ಕೋಟೆಯಲ್ಲಿ ಮಾಡಿದ ಭಾಷಣವನ್ನು ನಾನು ಇದೀಗ ನಿಮಗೆ ಓದಿ ಹೇಳುತ್ತೇನೆ. “ಭಾರತದಲ್ಲಿ ಕಷ್ಟಪಟ್ಟು ಕೆಲಸ ಮಾಡುವ ಅಭ್ಯಾಸ ಸಾಮಾನ್ಯವೇನಲ್ಲ. ನಾವು ಯೂರೋಪ್, ಜಪಾನ್, ಚೀನಾ, ರಷ್ಯಾ ಅಥವಾ ಅಮೆರಿಕದ ಜನರಷ್ಟು ಕೆಲಸ ಮಾಡುವುದಿಲ್ಲ” ಎಂದು ಹೇಳಿದ್ದರು. ನೆಹರು ಜಿ ಕೆಂಪುಕೋಟೆಯಿಂದ ಹೇಳಿಕೆ ನೀಡಿದ್ದರು. “ಈ ರಾಷ್ಟ್ರಗಳು ಪವಾಡ ಸೃಷ್ಟಿಸಿ, ಅಭಿವೃದ್ಧಿ ಹೊಂದಿದವೇ, ಅವು ಕಠಿಣ ಪರಿಶ್ರಮ ಮತ್ತು ಬುದ್ಧಿಶಕ್ತಿಯಿಂದಾಗಿ ಪ್ರಗತಿ ಸಾಧಿಸಿವೆ” ಎಂದು ಹೇಳಿದ್ದರು. ಅವರು, ಬೇರೆಯವರಿಗೆ ಪ್ರಮಾಣಪತ್ರವನ್ನು ನೀಡಿದರೂ ಮತ್ತು ಭಾರತದ ಜನತೆಯನ್ನು ನಿರ್ಲಕ್ಷಿಸಿದರು. ನೆಹರು ಜಿ ಅವರ ಪರಿಕಲ್ಪನೆಯಂತೆ ಭಾರತೀಯರು ತುಂಬಾ ಸೋಮಾರಿಗಳು ಎಂದು ಹೇಳಿದ್ದರು ಮತ್ತು ನೆಹರು ಜಿ ಅವರ ಕಲ್ಪನೆಯಂತೆ ಭಾರತೀಯರು ಕಡಿಮೆ ಬುದ್ಧಿವಂತರು ಎಂಬುದಾಗಿತ್ತು.

ಗೌರವಾನ್ವಿತ ಸ್ಪೀಕರ್ ಸರ್‌,

ಇಂದಿರಾ (ಗಾಂಧಿ) ಜಿ ಅವರ ಮನಸ್ಥಿತಿಯೂ ಕೂಡ ನೆಹರು ಅವರ ಮನಸ್ಥಿತಿಗಿಂತ ತುಂಬಾ ಭಿನ್ನವಾಗೇನೂ ಇರಲಿಲ್ಲ. ಆಗಸ್ಟ್ 15ರಂದು ಇಂದಿರಾ ಜಿ ಕೆಂಪುಕೋಟೆಯಿಂದ ಹೀಗೆ ಹೇಳಿದ್ದರು“ ದುರದೃಷ್ಟವಶಾತ್, ಉತ್ತಮ ಕೆಲಸ ಪೂರ್ಣಗೊಳಿಸಿದಾಗ ನಾವು ಸಂತೃಪ್ತರಾಗುತ್ತೇವೆ ಮತ್ತು ಕಷ್ಟಗಳು ಎದುರಾದಾಗ ನಾವು ಹತಾಶರಾಗುತ್ತೇವೆ, ಕೆಲವೊಮ್ಮೆ ನಾವು ಇಡೀ ರಾಷ್ಟ್ರ ಸೋಲಿನ ಭಾವನೆಯನ್ನು ಸ್ವೀಕರಿಸುತ್ತದೆ ಎಂದು ಭಾಸವಾಗುತ್ತದೆ. ಇಂದು ಕಾಂಗ್ರೆಸ್ ಸದಸ್ಯರನ್ನು ನೋಡಿ ಇಂದಿರಾ ಜಿ ಅವರು, ದೇಶದ ಜನರ ಸಾಮರ್ಥ್ಯವನ್ನು ಅಳೆಯಲು ವಿಫಲರಾಗಿದ್ದರು. ಅವರು, ಕಾಂಗ್ರೆಸ್ ಪಕ್ಷದ ಬಗ್ಗೆಯೂ ನಿಖರ ಮೌಲ್ಯಮಾಪನ ಮಾಡಿದ್ದರು. ಕಾಂಗ್ರೆಸ್ ರಾಜಮನೆತನದ ಸದಸ್ಯರು ದೇಶದ ಜನರನ್ನು ಅದೇ ದೃಷ್ಟಿಯಲ್ಲಿಯೇ ನೋಡುತ್ತಿದ್ದರು ಮತ್ತು ಇಂದಿಗೂ ಅದೇ ಬಗೆಯ ಆಲೋಚನೆ ಹೊಂದಿದ್ದಾರೆ ಎಂಬುದನ್ನು ನಾವು ಕಾಣುತ್ತಿದ್ದೇವೆ.

ಗೌರವಾನ್ವಿತ ಸ್ಪೀಕರ್ ಸರ್‌,

ಕಾಂಗ್ರೆಸ್ ಪಕ್ಷ ಸದಾ ತನ್ನ ಸಂಪೂರ್ಣ ವಿಶ್ವಾಸವನ್ನು ಒಂದು ಕುಟುಂಬದ ಮೇಲಿಟ್ಟಿದೆ. ಅವರು, ಸ್ವತಂತ್ರವಾಗಿ ಏನನ್ನು ಯೋಚಿಸುವುದಿಲ್ಲ ಮತ್ತು ಕುಟುಂಬದ ಹೊರಗೆ ಏನೂ ಚಿಂತಿಸುವುದಿಲ್ಲ. ಅವರು ಇತ್ತೀಚೆಗೆ ‘ಬಾನುಮತಿ ಕಾ ಕುನ್ಬಾ’ (ಐ.ಎನ್.ಡಿ.ಐ.ಎ) ಸ್ಥಾಪಿಸಿಕೊಂಡಿದ್ದಾರೆ. ಅವರು ‘ಏಕ್ತಾ ಛಲೋ ರೆ’ ಆರಂಭಿಸಿದ್ದರು. ಕಾಂಗ್ರೆಸ್ ಸದಸ್ಯರು ಮೋಟಾರ್ ಮೆಕಾನಿಕ್ಸ್ ಹೊಸ ವ್ಯಾಪಾರವನ್ನು ಕಲಿತುಕೊಂಡಿದ್ದಾರೆ. ಅವರು ಜೋಡಣೆಯ ಅರ್ಥವನ್ನು ಮಾಡಿಕೊಂಡಿರಬಹುದು. ಆದರೆ ನಾನು ಮೈತ್ರಿಕೂಟದ ಹೊಂದಾಣಿಕೆಯನ್ನು (ಐ.ಎನ್.ಡಿ.ಐ.ಎ.) ಗಮನಿಸಿದರೆ, ಅದು ಹಳಿತಪ್ಪಿದೆ ಎನಿಸುತ್ತದೆ. ಮೈತ್ರಿಕೂಟದ ಸದಸ್ಯರ ನಡುವೆಯೇ ವಿಶ್ವಾಸವಿರಲಿಲ್ಲ ಎಂದರೆ ಅವರು ದೇಶದ ಮೇಲೆ ಏನು ವಿಶ್ವಾಸವಿಡಬಹುದು ?

ಗೌರವಾನ್ವಿತ ಸ್ಪೀಕರ್ ಸರ್‌,

ನಮಗೆ ನಮ್ಮ ರಾಷ್ಟ್ರದ ಸಾಮರ್ಥ್ಯದ ಬಗ್ಗೆ ವಿಶ್ವಾಸವಿದೆ ಮತ್ತು ನಮಗೆ ಜನರ ಶಕ್ತಿಯ ಬಗ್ಗೆ ವಿಶ್ವಾಸವಿದೆ.

ಗೌರವಾನ್ವಿತ ಸ್ಪೀಕರ್ ಸರ್‌,

ದೇಶದ ಜನತೆ ಮೊದಲ ಬಾರಿಗೆ ನಮಗೆ ಸೇವೆ ಮಾಡುವ ಅವಕಾಶವನ್ನು ನೀಡಿದಾಗ, ನಮ್ಮ ಮೊದಲ ಅವಧಿಯಲ್ಲಿ ನಾವು ನಮ್ಮ ಸಾಕಷ್ಟು ಸಮಯ ಮತ್ತು ಶಕ್ತಿಯನ್ನು ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಮಾಡಿದ್ದ ಗುಂಡಿಗಳನ್ನು ಮುಚ್ಚಲು ಪ್ರಯತ್ನಿಸಿದೆವು. ಮೊದಲ ಅವಧಿಯುದ್ಧಕ್ಕೂ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನೇ ಮಾಡಿದೆವು. ನಮ್ಮ 2ನೇ ಅವಧಿಯಲ್ಲಿ ನವಭಾರತ ನಿರ್ಮಾಣಕ್ಕೆ ನಾವು ಬುನಾದಿ ಹಾಕಿದೆವು ಮತ್ತು ನಮ್ಮ 3ನೇ ಅವಧಿಯಲ್ಲಿ ‘ವಿಕಸಿತ ಭಾರತ’ ನಿರ್ಮಾಣಕ್ಕೆ ನಾವು ವೇಗ ನೀಡಿದ್ದೇವೆ.

ಗೌರವಾನ್ವಿತ ಸ್ಪೀಕರ್ ಸರ್‌,

ನಮ್ಮ ಮೊದಲ ಅವಧಿಯಲ್ಲಿ ಹಲವು ಅತ್ಯಾಧುನಿಕ ಸಾರ್ವಜನಿಕ ಕಲ್ಯಾಣ ಉಪಕ್ರಮಗಳಾದ ಸ್ವಚ್ಛ ಭಾರತ, ಉಜ್ವಲ, ಆಯುಷ್ಮಾನ್ ಭಾರತ, ಭೇಟಿ ಬಚಾವೊ-ಬೇಟಿ ಪಢಾವೊ, ಸುಗಮ್ಯ ಭಾರತ, ಡಿಜಿಟಲ್ ಇಂಡಿಯಾ ಮತ್ತಿತರ ಉಪಕ್ರಮಗಳನ್ನು ಆರಂಭಿಸಿದೆವು. ನಾವು ಹಲವು ಜನಸ್ನೇಹಿ ಯೋಜನೆಗಳನ್ನು ಅಭಿಯಾನಗಳನ್ನಾಗಿ ಪರಿವರ್ತಿಸಿದೆವು. ನಾವು ತೆರಿಗೆ ಪದ್ಧತಿಯನ್ನು ಸುಲಭಗೊಳಿಸಿ, ಜಿಎಸ್ ಟಿ ಜಾರಿಗೊಳಿಸಿದೆವು. ಈ ಉಪಕ್ರಮಗಳನ್ನು ಜನರು ಹೃದಯಪೂರ್ವಕವಾಗಿ ಬೆಂಬಲಿಸಿದರು. ಜನರು ಮೊದಲಿಗಿಂತ ಹೆಚ್ಚು ನಮಗೆ ಆಶೀರ್ವಾದ ನೀಡಿ ಬೆಂಬಲಿಸಿದರು. ನಂತರ ನಮ್ಮ ಎರಡನೇ ಅವಧಿ ಆರಂಭವಾಯಿತು. ನಮ್ಮ ಎರಡನೇ ಅವಧಿಯಲ್ಲಿ ನಾವು ಭರವಸೆಗಳು ಮತ್ತು ಬದ್ಧತೆಗಳನ್ನು ಈಡೇರಿಸಿದೆವು. ಎರಡನೇ ಅವಧಿಯಲ್ಲಿ ನಾವು ದೇಶ ದೀರ್ಘಕಾಲದಿಂದ ಕಾಯುತ್ತಿದ್ದ ಸಾಧನೆಗಳನ್ನು ಪೂರ್ಣಗೊಳಿಸಿದೆವು. ನಾವು ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದೆವು. ಗೌರವಾನ್ವಿತ ಸಂಸದರ ಮತಶಕ್ತಿಯಿಂದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದೆವು. ಎರಡನೇ ಅವಧಿಯಲ್ಲಿ ನಾವು ಮಹಿಳೆಯರ ಸಬಲೀಕರಣಗೊಳಿಸುವ ನಾರಿಶಕ್ತಿ ವಂದನಾ ಅಧಿನಿಯಮ ಕಾನೂನನ್ನು ಜಾರಿಗೊಳಿಸಿದೆವು.

ಗೌರವಾನ್ವಿತ ಸ್ಪೀಕರ್ ಸರ್‌,

ಬಾಹ್ಯಾಕಾಶದಿಂದ ಒಲಿಂಪಿಕ್ಸ್ ವರೆಗೆ ಬಲಿಷ್ಠ ಸೇನಾಪಡೆಗಳಿಂದ ಸಂಸತ್ತಿನವರೆಗೆ ‘ನಾರಿಶಕ್ತಿ’ (ಮಹಿಳಾ ಶಕ್ತಿ) ಎಲ್ಲೆಡೆ ಪ್ರತಿಧ್ವನಿಸುತ್ತಿದೆ. ದೇಶ ಇಂದು ನಾರಿಶಕ್ತಿಯ ಸಬಲೀಕರಣಕ್ಕೆ ಸಾಕ್ಷಿಯಾಗುತ್ತಿದೆ.

ಗೌರವಾನ್ವಿತ ಸ್ಪೀಕರ್ ಸರ್‌,

ಉತ್ತರದಿಂದ ದಕ್ಷಿಣದವರೆಗೆ, ಪೂರ್ವದಿಂದ ಪಶ್ಚಿಮದ ವರೆಗೆ ದಶಕಗಳ ಕಾಲ ಸ್ಥಗಿತಗೊಂಡಿದ್ದ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗಿದೆ.

ಗೌರವಾನ್ವಿತ ಸ್ಪೀಕರ್ ಸರ್‌,

ಬ್ರಿಟೀಷ್ ಆಡಳಿತದಲ್ಲಿದ್ದ ದಂಡನೀಯ ಸ್ವರೂಪದ ಪ್ರಾಚೀನ ಕಾನೂನುಗಳಿಂದ ಹೊರಬಂದು, ಅತ್ಯಾಧುನಿಕ ನ್ಯಾಯ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಅಪ್ರಸ್ತುತವಾಗಿದ್ದ ನೂರಾರು ಕಾನೂನುಗಳನ್ನು ನಮ್ಮ ಸರ್ಕಾರ ರದ್ದುಗೊಳಿಸಿದೆ. 40,000ಕ್ಕೂ ಅಧಿಕ ಅನುಪಾಲನೆಗಳನ್ನು ಸರ್ಕಾರ ತೆಗೆದು ಹಾಕಿದೆ.

ಗೌರವಾನ್ವಿತ ಸ್ಪೀಕರ್ ಸರ್‌,

‘ಅಮೃತ ಭಾರತ’ ಮತ್ತು ‘ನಮೋ ಭಾರತ’ ರೈಲುಗಳಂತಹ ಉಪಕ್ರಮದ ಮೂಲಕ ಭಾರತ ಭವಿಷ್ಯದ ಪ್ರಗತಿಗೆ ಮುನ್ನುಡಿ ಬರೆದಿದೆ.

ಗೌರವಾನ್ವಿತ ಸ್ಪೀಕರ್ ಸರ್‌,

ದೇಶದ ಗ್ರಾಮಗಳು ಮತ್ತು ಲಕ್ಷಾಂತರ ಜನರು ‘ವಿಕಸಿತ ಭಾರತ’ದ ‘ಸಂಕಲ್ಪ ಯಾತ್ರೆ’ಗೆ ಸಾಕ್ಷಿಯಾಗಿದ್ದಾರೆ ಮತ್ತು ಗರಿಷ್ಠ ಪ್ರಮಾಣದ ಜನರನ್ನು ತಲುಪುವ ಪ್ರಯತ್ನ ನಡೆಸಲಾಗುತ್ತಿದೆ, ಎಲ್ಲರಿಗೂ ಅರ್ಹ ಪ್ರಯೋಜನಗಳನ್ನು ಖಾತ್ರಿಪಡಿಸಲಾಗುತ್ತಿದೆ ಮತ್ತು ಇದೇ ಮೊದಲ ಬಾರಿಗೆ ಪ್ರಯತ್ನಗಳು ಗರಿಷ್ಠ ಪ್ರಮಾಣದಲ್ಲಿ ನಡೆಯುತ್ತಿದ್ದು, ಜನತೆಯ ಮನೆಬಾಗಿಲಿಗೆ ಸೇವೆಗಳನ್ನು ಒದಗಿಸಲಾಗುತ್ತಿದೆ.

ಗೌರವಾನ್ವಿತ ಸ್ಪೀಕರ್ ಸರ್‌,

ಭಗವಾನ್ ರಾಮ ತನ್ನ ಮನೆಗೆ ಮರಳಿದ್ದಲ್ಲದೆ, ದೊಡ್ಡ ದೇವಾಲಯವನ್ನು ನಿರ್ಮಿಸಲಾಯಿತು, ಅದು ಭಾರತದ ಮಹಾನ್ ಸಾಂಸ್ಕೃತಿಕ ಪರಂಪರೆಯನ್ನು ಹೊಸ ಶಕ್ತಿಯೊಂದಿಗೆ ಪುನರುಜ್ಜೀವನಗೊಳಿಸುತ್ತದೆ.

ಗೌರವಾನ್ವಿತ ಸ್ಪೀಕರ್ ಸರ್‌,

ಇದೀಗ ನಮ್ಮ ಸರ್ಕಾರದ ಮೂರನೇ ಅವಧಿ ಇನ್ನು ದೂರವೇನಿಲ್ಲ. ಸುಮಾರು 100ರಿಂದ 125 ದಿನಗಳಿರಬಹುದು. ಮತ್ತು ಇದೇ ಮೊದಲ ಬಾರಿಗೆ ಮೋದಿ ಸರ್ಕಾರ  ಮತ್ತು ಇಡೀ ದೇಶ ಹೇಳುತ್ತಿದೆ “ಈ ಬಾರಿಯೂ ಮೋದಿ ಸರ್ಕಾರ’’ ಎಂದು, ಖರ್ಗೆಜೀ ಕೂಡ ಅದನ್ನೇ ಹೇಳಿದರು. “ಈ ಬಾರಿ ಮೋದಿ ಸರ್ಕಾರ’’ ಎಂದು. ಆದರೆ ಸ್ಪೀಕರ್ ಸರ್, ನಾನು ಸಾಮಾನ್ಯವಾಗಿ ಅಂಕಿ ಸಂಖ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ದೇಶದ ಮನಸ್ಥಿತಿಯನ್ನು ನೋಡುತ್ತಿದ್ದೇನೆ, ಅದರಂತೆ ಎನ್ ಡಿಎ (ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್‌) ಮೈತ್ರಿಕೂಟ 400ರ ಗಡಿ ದಾಟಲಿದೆ ಎಂಬುದನ್ನು ಖಾತ್ರಿಪಡಿಸುತ್ತೇನೆ. ಆದರೆ ಭಾರತೀಯ ಜನತಾ ಪಕ್ಷವೊಂದೇ ಖಂಡಿತಾ 370 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಮತ್ತು ಬಿಜೆಪಿ 370 ಹಾಗೂ ಎನ್ 400ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಲಿದೆ.

ಗೌರವಾನ್ವಿತ ಸ್ಪೀಕರ್ ಸರ್‌,

ನಮ್ಮ ಮೂರನೇ ಅವಧಿಯಲ್ಲಿ ಸ್ಮರಣಾರ್ಹ ನಿರ್ಧಾರಗಳಿಗೆ ಸಾಕ್ಷಿಯಾಗಲಿದೆ. ಅದನ್ನು ನಾನು ಕೆಂಪು ಕೋಟೆಯಿಂದಲೂ ಹೇಳಿದ್ದೆ ಮತ್ತು ರಾಮ ದೇವಾಲಯದ ಪ್ರಾಣಪ್ರತಿಷ್ಠಾಪನಾ ಸಂದರ್ಭದಲ್ಲೂ ಪುನರುಚ್ಚರಿಸಿದ್ದೆನು. ನಾನು ಹೇಳಿದ್ದೆ- ಮುಂದಿನ ಸಾವಿರ ವರ್ಷಗಳಲ್ಲಿ ದೇಶವು ಏಳಿಗೆ ಮತ್ತು ಯಶಸ್ಸಿನ ಪರಾಕಾಷ್ಠೆಯನ್ನು ತಲುಪುವುದನ್ನು ನೋಡಲು ನಾನು ಬಯಸುತ್ತೇನೆ. ಮೂರನೆಯ ಅವಧಿಯಲ್ಲಿ 1,000 ವರ್ಷಗಳವರೆಗೆ ಬಲವಾದ ಅಡಿಪಾಯ ಹಾಕುವ ಬದ್ಧತೆ ಇದೆ.  

ಗೌರವಾನ್ವಿತ ಸ್ಪೀಕರ್ ಸರ್‌,

ಭಾರತದ ಜನರಲ್ಲಿ ಮತ್ತು ಅವರ ಭವಿಷ್ಯದಲ್ಲಿ ನನಗೆ ಹೆಚ್ಚಿನ ವಿಶ್ವಾಸವಿದೆ. ನಮ್ಮ 1.4 ಬಿಲಿಯನ್ ಜನರ ಸಾಮರ್ಥ್ಯದ ಮೇಲೆ ಅಪಾರವಾದ ನಂಬಿಕೆ ಇದೆ.  ಕಳೆದ 10 ವರ್ಷಗಳಿಂದೀಚೆಗೆ 25 ಕೋಟಿ ಜನರು ಬಡತನ ರೇಖೆಯಿಂದ ಹೊರಬಂದಿದ್ದಾರೆ, ಇದು ನಮ್ಮ ಸಾಮರ್ಥ್ಯವನ್ನು ಬಿಂಬಿಸುತ್ತದೆ.

ಗೌರವಾನ್ವಿತ ಸ್ಪೀಕರ್ ಸರ್‌,

ನಾನು ಸದಾ ಹೇಳುತ್ತಿರುತ್ತೇನೆ, ಬಡವರಿಗೆ ಸಾಧನಗಳು, ಸಂಪನ್ಮೂಲಗಳು ಮತ್ತು ಘನತೆಯನ್ನು ನೀಡಿದರೆ ನಮ್ಮ ಬಡಜನರಿಗೆ ಬಡತನದಿಂದ ಹೊರಬರುವ ಸಾಮರ್ಥ್ಯವಿದೆ ಎಂದು, ನಾವು ಮಾರ್ಗವನ್ನು ಅಯ್ಕೆ ಮಾಡಿಕೊಂಡಿದ್ದೇವೆ ಮತ್ತು ನಮ್ಮ ಬಡ ಸಹೋದರ ಮತ್ತು ಸಹೋದರಿಯರು ಬಡತನದಿಂದ ಹೊರಬರುವ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಆ ಮನಸ್ಥಿತಿಯಲ್ಲಿ, ನಾವು ಅವರಿಗೆ ಸಾಧನಗಳು, ಸಂಪನ್ಮೂಲಗಳು, ಘನತೆ ಮತ್ತು ಸ್ವಯಂ ಗೌರವ ನೀಡಿದ್ದೇವೆ. ಇಂದು 50 ಕೋಟಿ ಜನರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ, ಈ ರೀತಿ ಹಿಂದೆಂದೂ ಸಹ ಯೋಚನೆ ಮಾಡಿರಲಿಲ್ಲ. ಸುಮಾರು 4 ಕೋಟಿ ಬಡ ಕುಟುಂಬಗಳಿಗೆ ತಮ್ಮ ನೆತ್ತಿಯ ಮೇಲೆ ಸೂರು ಒದಗಿಸಲಾಗಿದೆ. ಆ ಮೂಲಕ ಅವರಿಗೆ ಸೂಕ್ತ ಘನತೆ ನೀಡಲಾಗಿದೆ. 11 ಕೋಟಿಗೂ ಅಧಿಕ ಕುಟುಂಬಗಳಿಗೆ ಕೊಳಾಯಿ ಮೂಲಕ ಶುದ್ಧ ಕುಡಿಯುವ ನೀರು ಒದಗಿಸಲಾಗಿದೆ. ಸುಮಾರು 55 ಕೋಟಿ ಬಡಜನರಿಗೆ ಆಯುಷ್ಮಾನ್ ಭಾರತ್ ಕಾರ್ಡ್ ಗಳನ್ನು ವಿತರಿಸಲಾಗಿದೆ. ಕುಟುಂಬದಲ್ಲಿ ಯಾವುದೇ ಕಾಯಿಲೆಯಿದ್ದರೂ ಅವರು ಬಡತನಕ್ಕೆ ಮತ್ತೆ ಹಿಂತಿರುಗುವುದಿಲ್ಲ. ಯಾವುದೇ ರೀತಿಯ ಕಾಯಿಲೆ ಬಂದರೂ ಅವರಿಗೆ ವಿಶ್ವಾಸವಿದೆ. ನಮಗಾಗಿ ಮೋದಿ ಇದ್ದಾರೆ ಎಂಬ ವಿಶ್ವಾಸವಿದೆ. 80 ಕೋಟಿ ಜನರಿಗೆ ಉಚಿತ ಆಹಾರಧಾನ್ಯ ಸೌಕರ್ಯವನ್ನು ಒದಗಿಸಲಾಗುತ್ತಿದೆ.

ಗೌರವಾನ್ವಿತ ಸ್ಪೀಕರ್ ಸರ್‌,

ಹಿಂದೆಂದೂ ಕಂಡಿರದ ರೀತಿ ಮೋದಿ ಅವರು, ತಮ್ಮ ಬಗ್ಗೆ ಗಮನ ಹರಿಸುತ್ತಿದ್ದಾರೆ ಎಂದು ತಿಳಿದಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಬೀದಿ ಬದಿ ವ್ಯಾಪಾರಿಗಳನ್ನೂ ಸಹ ಪರಿಗಣಿಸಲಾಗಿದೆ. ಪಿಎಂ-ಸ್ವನಿಧಿ ಯೋಜನೆ ಮೂಲಕ ಅವರು, ಬಡ್ಡಿಯ ವಿಷವರ್ತುಲದಿಂದ ಹೊರಬಂದಿದ್ದಾರೆ. ಬ್ಯಾಂಕ್ ಗಳಿಂದ ಸಾಲಗಳನ್ನು ಪಡೆದು, ತಮ್ಮ ವ್ಯಾಪಾರಗಳನ್ನು ವಿಸ್ತರಿಸುತ್ತಿದ್ದಾರೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಕರಕುಶಲ ಕಲೆಯನ್ನು ಪರಿಗಣಿಸಲಾಗಿದ್ದು, ಅವರೂ ಸಹ ರಾಷ್ಟ್ರ ನಿರ್ಮಾಣದ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರೇ ನಮ್ಮ ವಿಶ್ವಕರ್ಮ ಮಿತ್ರರು. ಅವರಿಗೆ ನಾವು ಆಧುನಿಕ ಸಾಧನಗಳು, ತರಬೇತಿ ಮತ್ತು ಆರ್ಥಿಕ ನೆರವು ನೀಡುತ್ತಿದ್ದೇವೆ ಮತ್ತು ಜಾಗತಿಕ ಮಾರುಕಟ್ಟೆಯ ವರೆಗೆ ಅವರು, ಬೆಳವಣಿಗೆ ಹೊಂದಲು ಸಹಾಯ ಮಾಡುತ್ತಿದ್ದೇವೆ. ದೇಶದಲ್ಲಿ ಇದೇ ಮೊದಲ ಬಾರಿಗೆ ನಿರ್ದಿಷ್ಟ ದುರ್ಬಲ ಬುಡಕಟ್ಟು ವರ್ಗ (ಪಿವಿಟಿಜಿ) ನಮ್ಮ ವರ್ಗದ ಸಹೋದರ ಸಹೋದರಿಯರ ಅವರ ಸಂಖ್ಯೆ ಕಡಿಮೆ ಇರಬಹುದು. ಅವರ ಧ್ವನಿ ಕೇಳುತ್ತಲೇ ಇರಲಿಲ್ಲ. ನಾವು ಅವರನ್ನು ಮತಕ್ಕಾಗಿ ಅಲ್ಲ ಹೃದಯದ ಮೂಲಕ ಸಂಪರ್ಕ ಸಾಧಿಸಿದೆವು. ಅದಕ್ಕಾಗಿ ಪಿವಿಟಿಜಿ ಸಮುದಾಯದವರಿಗೆ ಅವರ ಕಲ್ಯಾಣ ನಿಟ್ಟಿನಲ್ಲಿ ಪಿಎಂ-ಜನಮನ ಯೋಜನೆಯನ್ನು ಆರಂಭಿಸಿದ್ದೇವೆ. ಅಲ್ಲದೆ ಗಡಿಗಳಲ್ಲಿನ ಗ್ರಾಮಗಳಲ್ಲಿ ಕೊನೆಯ ಗ್ರಾಮದಲ್ಲಿ ಈವರೆಗೂ ತಲುಪದಿದ್ದಂತಹ ಜನರನ್ನು ಸಂಪರ್ಕಿಸಿ, ಆ ಗ್ರಾಮಗಳ ಅಭಿವೃದ್ಧಿಯ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾಯಿಸಲಾಗಿದೆ.

ಗೌರವಾನ್ವಿತ ಸ್ಪೀಕರ್ ಸರ್‌,

ನಾನು ಪದೇ ಪದೇ ಸಿರಿಧಾನ್ಯಗಳ ಬಗ್ಗೆ ಪ್ರತಿಪಾದಿಸುತ್ತಿರುತ್ತೇನೆ. ನಾನು ಸಿರಿಧಾನ್ಯಗಳ ಬಗ್ಗೆ ವಿಶ್ವದೆಲ್ಲೆಡೆ ಮಾತನಾಡಿದ್ದೇನೆ ಮತ್ತು ಜಿ-20 ನಾಯಕರಿಗೆ ಹೆಮ್ಮೆಯಿಂದ ಸಿರಿಧಾನ್ಯಗಳಿಂದ ತಯಾರಿಸಿದ ಆಹಾರದ ಆತಿಥ್ಯ ನೀಡಿದ್ದೇವೆ. ಅದರ ಹಿಂದೆ ಸಿರಿಧಾನ್ಯಗಳನ್ನು ಬೆಳೆಯುವ 3 ಕೋಟಿಗೂ ಅಧಿಕ ಸಣ್ಣ ರೈತರ ಹೃದಯವಿದೆ. ಅವರ ಕಲ್ಯಾಣದ ಗುರಿಯಿದೆ.

ಗೌರವಾನ್ವಿತ ಸ್ಪೀಕರ್ ಸರ್‌,

ನಾನು ವೋಕಲ್ ಫಾರ್ ಲೋಕಲ್ ಗಾಗಿ ಪ್ರತಿಪಾದಿಸುತ್ತಿರುವಾಗ, ನಾನು ಮೇಕ್ ಇನ್ ಇಂಡಿಯಾ ಬಗ್ಗೆ ಮಾತನಾಡಿದಾಗ, ಅದರ ಜತೆ ಸಂಬಂಧ ಹೊಂದಿರುವ ಲಕ್ಷಾಂತರ ಕುಟುಂಬಗಳ ಕಲ್ಯಾಣ, ಗೃಹ ಕೈಗಾರಿಕೆಗಳು, ಸಣ್ಣ ಉದ್ಯಮಗಳು ಮತ್ತು ಗುಡಿ ಕೈಗಾರಿಕೆಗಳನ್ನು ಅವಲಂಬಿಸಿರುವ ಕೋಟ್ಯಾಂತರ ಕುಟುಂಬಗಳ ಕಲ್ಯಾಣದ ಬಗ್ಗೆ ಆಲೋಚಿಸುತ್ತೇನೆ.

ಗೌರವಾನ್ವಿತ ಸ್ಪೀಕರ್ ಸರ್‌,

ಹಿಂದಿನ ಕಾಂಗ್ರೆಸ್ ಸರ್ಕಾರ ಖಾದಿಯನ್ನು ಮರೆತೇ ಬಿಟ್ಟಿದೆ. ಆದರೆ ಇಂದು ನಾನು ಯಶಸ್ವಿಯಾಗಿ ಖಾದಿಯನ್ನು ಮುನ್ನಡೆಸಿದ್ದೇವೆ ಮತ್ತು ಖಾದಿ ಜತೆ ಸಂಬಂಧ ಹೊಂದಿದ ಲಕ್ಷಾಂತರ ನೇಕಾರ ಕುಟುಂಬಗಳನ್ನು ಸಬಲೀಕರಣಗೊಳಿಸಿದ್ದೇವೆ. ಅವರ ಕಲ್ಯಾಣದ ಬಗ್ಗೆಯೂ ನನಗೆ ಕಾಳಜಿ ಇದೆ.  

ಗೌರವಾನ್ವಿತ ಸ್ಪೀಕರ್ ಸರ್‌,

ನಮ್ಮ ಸರ್ಕಾರ ಬಡತನ ನಿರ್ಮೂಲನೆಗೆ ಮತ್ತು ಬಡವರ ಸಮೃದ್ಧಿಗೆ ದೇಶದ ಮೂಲೆ ಮೂಲೆಯಲ್ಲಿ ನಾನಾ ಪ್ರಯತ್ನಗಳನ್ನು ಕೈಗೊಂಡಿದೆ. ಕೆಲವರಿಗೆ ಮತ ಬ್ಯಾಂಕ್ ಎಲ್ಲವೂ ಆಗಿತ್ತು. ಅಂತಹವರಿಂದ ಯಾವುದೇ ಕಲ್ಯಾಣ ಸಾಧ್ಯವಿಲ್ಲ. ಅವರ ಕಲ್ಯಾಣವೇ ನಮಗೆ ರಾಷ್ಟ್ರದ ಕಲ್ಯಾಣವಾಗಿದೆ. ಹಾಗಾಗಿಯೇ ನಿಟ್ಟಿನಲ್ಲಿ ನಾವು ಪಯಣ ಮುಂದುವರಿಸಿದ್ದೇವೆ.

ಗೌರವಾನ್ವಿತ ಸ್ಪೀಕರ್ ಸರ್‌,

ಕಾಂಗ್ರೆಸ್ ಪಕ್ಷದ ಯುಪಿಎ ಸರ್ಕಾರ ಒಬಿಸಿ (ಇತರೆ ಹಿಂದುಳಿದ ವರ್ಗ) ಸಮುದಾಯಕ್ಕೆ ಯಾವುದೇ ನ್ಯಾಯ ದೊರಕಿಸಿಕೊಡಲಿಲ್ಲ. ಅವರು ಅನ್ಯಾಯವೆಸಗಿದರು. ಒಬಿಸಿ ನಾಯಕರನ್ನು ಅವಮಾನಿಸುವ ಯಾವ ಸಂದರ್ಭವನ್ನೂ ಅವರು ಬಿಡಲಿಲ್ಲ. ಕೆಲವು ದಿನಗಳ ಹಿಂದೆ ಕರ್ಪೂರಿ ಠಾಕೂರ್ ಜಿ ಅವರಿಗೆ ಭಾರತರತ್ನ ನೀಡಲಾಯಿತು. ಆದರೆ ಒಬಿಸಿ ಸಮುದಾಯದ ಶ್ರೇಷ್ಠ ನಾಯಕ ಕರ್ಪೂರಿ ಠಾಕೂರ್ ಅವರನ್ನು ನಡೆಸಿಕೊಂಡ ರೀತಿಯ ಬಗ್ಗೆ ಯೋಚಿಸಿ, ಅವರನ್ನು ಹೇಗೆ ಅನ್ಯಾಯದಿಂದ ನಡೆಸಿಕೊಳ್ಳಲಾಯಿತು. ಅವರು 1970ರಲ್ಲಿ ಬಿಹಾರದ ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಏನೆಲ್ಲಾ ತಂತ್ರಗಳನ್ನು ಬಳಸಿದ್ದರು. ಸರ್ಕಾರವನ್ನು ಅಸ್ಥಿರಗೊಳಿಸಲು ಏನೆಲ್ಲಾ ಮಾಡಿದ್ದರು ಗೊತ್ತೇ ?

ಗೌರವಾನ್ವಿತ ಸ್ಪೀಕರ್ ಸರ್‌,

ಕಾಂಗ್ರೆಸ್ ಪಕ್ಷ ತೀರಾ ಹಿಂದುಳಿದ ವರ್ಗಗಳ ನಾಯಕರನ್ನು ಸಹಿಸಿಕೊಳ್ಳುತ್ತಿರಲಿಲ್ಲ. 1987ರಲ್ಲಿ ದೇಶಾದ್ಯಂತ ಕಾಂಗ್ರೆಸ್ ಪಕ್ಷದ ಧ್ವಜ ಉನ್ನತ ಮಟ್ಟದಲ್ಲಿ ಹಾರಾಡುತ್ತಿದ್ದಾಗ ಅವರು ಎಲ್ಲೆಡೆ ಅಧಿಕಾರದಲ್ಲಿದ್ದರೂ, ಕರ್ಪೂರಿ ಠಾಕೂರ್ ಜಿ ಅವರನ್ನು ಪ್ರತಿಪಕ್ಷದ ನಾಯಕನಾಗಿ ಸ್ವೀಕರಿಸಲು ನಿರಾಕರಿಸಿತ್ತು ಮತ್ತು ಅವರು ಸಂವಿಧಾನಕ್ಕೆ ಗೌರವ ಕೊಡುವುದಿಲ್ಲ ಎನ್ನುವ ಕಾರಣವನ್ನೊಡ್ಡಿದರು. ಅದೇ ಕರ್ಪೂರಿ ಠಾಕೂರ್ ಜಿ, ಪ್ರಜಾಪ್ರಭುತ್ವದ ತತ್ವಗಳಿಗೆ ತಮ್ಮ ಇಡೀ ಜೀವನವನ್ನು ಸಮರ್ಪಿಸಿದ್ದರು. ಸಂವಿಧಾನದ ಆದರ್ಶಗಳಿಗೆ ಬದ್ಧರಾಗಿ ನಿಂತಿದ್ದರು. ಅವರನ್ನು ಕಾಂಗ್ರೆಸ್ ಪಕ್ಷ ಅಪಮಾನಿಸಿತು.

ಗೌರವಾನ್ವಿತ ಸ್ಪೀಕರ್ ಸರ್‌,

ಇತ್ತೀಚಿನ ದಿನಗಳಲ್ಲಿ ನಮ್ಮ ಕಾಂಗ್ರೆಸ್ ಸಹೋದ್ಯೋಗಿಗಳು ಸರ್ಕಾರದ ಹಿಂದುಳಿದ ವರ್ಗಗಳ ನಾಯಕರ ಮೇಲೆ ಹೆಚ್ಚಿನ ಕಾಳಜಿ ತೋರುತ್ತಿದೆ. ಅವರನ್ನು ಎಲ್ಲಿಡಲಾಗಿದೆ ಮತ್ತು ಅವರ ಬಗ್ಗೆ ನಿರಂತರ ನಿಗಾ ವಹಿಸಲಾಗುತ್ತಿದೆ. ಅತಿದೊಡ್ಡ ಒಬಿಸಿಯನ್ನು ಅವರು ಗುರುತಿಸದಿರುವುದು ನನಗೆ ಅಚ್ಚರಿ ಮೂಡಿಸಿದೆ. ಆ ಬಗ್ಗೆ ಅವರು ಕಣ್ಣುಮುಚ್ಚಿಕೊಂಡಿದ್ದಾರೆ.

ಗೌರವಾನ್ವಿತ ಸ್ಪೀಕರ್ ಸರ್‌,

ಇಂತಹ ವಿಷಯಗಳನ್ನು ಯಾರು ಮತ್ತೆ ಪ್ರಚೋದನೆಗೊಳಿಸುತ್ತಾರೆ ಎಂಬುದರ ಬಗ್ಗೆ ಹೇಳುತ್ತೇನೆ. ಯುಪಿಎ ಆಡಳಿತದ ಸಮಯದಲ್ಲಿ ಒಂದು ಹೆಚ್ಚುವರಿ ಸಾಂವಿಧಾನಿಕ ಸಂಸ್ಥೆ ಸೃಷ್ಟಿಯಾಗಿತ್ತು ಮತ್ತು ಅದರ ಮುಂದೆ ಸರ್ಕಾರ ಏನು ಹೇಳುವಂತಿರಲಿಲ್ಲ. ರಾಷ್ಟ್ರೀಯ ಭದ್ರತಾ ಮಂಡಳಿ ಇತ್ತೇ, ಅದರಲ್ಲಿ ಯಾರಾದರು ಒಬಿಸಿ ನಾಯಕರಿದ್ದರೆ ? ಸುಮ್ಮನೆ ಒಮ್ಮೆ ಗಮನಿಸಿ, ಅಂತಹ ಬಲಿಷ್ಠ ಸಂಸ್ಥೆಯನ್ನು ಸೃಷ್ಟಿಸಲಾಗಿತ್ತು ಮತ್ತು ಅವರು ಎಲ್ಲ ನೇಮಕಾತಿಗಳನ್ನು ಮಾಡುತ್ತಿದ್ದರು.

ಗೌರವಾನ್ವಿತ ಸ್ಪೀಕರ್ ಸರ್‌,

ಕಳೆದ 10 ವರ್ಷಗಳಲ್ಲಿ ಮಹಿಳೆಯರ ಸಬಲೀಕರಣ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಹಿಳೆಯರ ನೇತೃತ್ವದಲ್ಲಿ ಸಮಾಜದ ಸಬಲೀಕರಣದ ನಿಟ್ಟಿನಲ್ಲಿ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ.

ಗೌರವಾನ್ವಿತ ಸ್ಪೀಕರ್ ಸರ್‌,

ಇತ್ತೀಚಿನ ದಿನಗಳಲ್ಲಿ ದೇಶದ ಹೆಣ್ಣುಮಕ್ಕಳಿಗೆ ಯಾವುದೇ ವಲಯದಲ್ಲೂ ಬಾಗಿಲುಗಳನ್ನು ಮುಚ್ಚಲಾಗಿಲ್ಲ. ಇಂದು ನಮ್ಮ ದೇಶದ ಹೆಣ್ಣು ಮಕ್ಕಳು ಯುದ್ಧ ವಿಮಾನಗಳಲ್ಲಿ ಹಾರಾಡುತ್ತಿದ್ದಾರೆ ಮತ್ತು ನಮ್ಮ ದೇಶದ ಗಡಿ ಕಾಯುವಲ್ಲೂ ಸಹ ತೊಡಗಿಕೊಂಡಿದ್ದಾರೆ.  

ಗೌರವಾನ್ವಿತ ಸ್ಪೀಕರ್ ಸರ್‌,

ನಮ್ಮ ಗ್ರಾಮೀಣ ಆರ್ಥಿಕತೆಯಲ್ಲಿ ನಮ್ಮ ಹತ್ತು ಕೋಟಿ ಸಹೋದರಿಯರು ಮಹಿಳಾ ಸ್ವಸಹಾಯ ಗುಂಪುಗಳ ಜತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಮತ್ತು ಅವರೆಲ್ಲಾ ಆದ್ಯತಾ ಚಟುವಟಿಕೆಗಳಲ್ಲಿ ತೊಡಗಿ ಕೊಂಡಿದ್ದಾರೆ. ಅವರು ಗ್ರಾಮೀಣ ಆರ್ಥಿಕತೆಗೆ ಹೊಸ ಶಕ್ತಿಯನ್ನು ತುಂಬುತ್ತಿದ್ದಾರೆ. ಈ ಎಲ್ಲ ಪ್ರಯತ್ನಗಳ ಫಲವಾಗಿ ನಾನು ಸಂತೋಷದಿಂದ ಹೇಳುವುದೇನೆಂದೆರೆ ಇಂದು ದೇಶದಲ್ಲಿ ಸುಮಾರು ಒಂದು ಕೋಟಿ ಸಹೋದರಿಯರು ‘ಲಕ್ಷಾಧಿಪತಿ ದೀದಿಗಳು’ ಆಗಿದ್ದಾರೆ. ನಾನು ಅವರ ಬಗ್ಗೆ ಮಾತನಾಡುವಾಗ ಅವರ ಆತ್ಮವಿಶ್ವಾಸವನ್ನು ನೋಡಿದ್ದೇನೆ. ನನಗೆ ಖಂಡಿತಾ ವಿಶ್ವಾಸವಿದೆ. ನಮ್ಮ ಮುಂದಿನ ಅವಧಿಯಲ್ಲಿ ನಮ್ಮ ದೇಶದಲ್ಲಿ 3 ಕೋಟಿ ‘ಲಕ್ಷಾಧಿಪತಿ ದೀದಿಗಳು’ ಇರಲಿದ್ದಾರೆ. ಗ್ರಾಮೀಣ ಆರ್ಥಿಕತೆಯಲ್ಲಿ ಹೇಗೆ ಮಹತ್ವದ ಬದಲಾವಣೆಗಳಾಗುತ್ತವೆ ಎಂಬುದನ್ನು ನೀವೆ ಊಹಿಸಿಕೊಳ್ಳಿ.

ಗೌರವಾನ್ವಿತ ಸ್ಪೀಕರ್ ಸರ್‌,

ನಮ್ಮ ಆರ್ಥಿಕತೆಯಲ್ಲಿ ಹೆಣ್ಣು ಮಕ್ಕಳ ದೃಷ್ಟಿಯಲ್ಲೂ ನಾವು ಸಮಾಜ ಮತ್ತು ಮನಸ್ಸುಗಳನ್ನು ಆಳವಾಗಿ ಬೆಸೆಯಬೇಕಿದೆ. ಏಕೆಂದರೆ ಅದು ಕ್ಷಿಪ್ರವಾಗಿ ಬದಲಾಗುತ್ತಿರುತ್ತದೆ. ನಾವು ಅತ್ಯಂತ ಸನಿಹದಿಂದ ನೋಡಿದಾಗ ಹೇಗೆ ಮಹತ್ವದ ಮತ್ತು ಸಕಾರಾತ್ಮಕ ಬದಲಾವಣೆಗಳು ಆಗುತ್ತಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ. ಹಿಂದೆ ಹೆಣ್ಣು ಮಕ್ಕಳು ಜನಿಸಿದಾಗ ಹೇಗೆ ವೆಚ್ವಗಳನ್ನು ನಿರ್ವಹಿಸಬೇಕು, ಆಕೆಗೆ ಹೇಗೆ ಶಿಕ್ಷಣ ನೀಡುವುದು ಮತ್ತು ಆಕೆಯ ಭವಿಷ್ಯವೇನು ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಅದು ಕುಟುಂಬಕ್ಕೆ ಹೊರೆಯಾಗುತ್ತದೆ ಎಂಬುದು ಸಾಮಾನ್ಯವಾಗಿತ್ತು. ಆದರೆ ಇಂದು ಹೆಣ್ಣು ಮಗು ಜನಿಸಿದರೆ, ಆಕೆಯ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ಆರಂಭಿಸಿದ್ದೀರಾ ಅಥವಾ ಇಲ್ಲವೇ ಎಂದು ಕೇಳಲಾಗುತ್ತಿದೆ. ಈ ಬದಲಾವಣೆ ಅತ್ಯಂತ ಗಮನಾರ್ಹವಾದುದು.  

ಗೌರವಾನ್ವಿತ ಸ್ಪೀಕರ್ ಸರ್‌,

ಹಿಂದೆ ಮಹಿಳೆ ಗರ್ಭಿಣಿಯಾದ ನಂತರವೂ ಕೆಲಸ ಮುಂದುವರಿಸಬಹುದೇ ಎಂದು ಕೇಳಲಾಗುತ್ತಿತ್ತು. ಒಮ್ಮೆ ಗರ್ಭಿಣಿಯಾದರೆ ಆಕೆ ಕೆಲಸ ಮಾಡಲಾಗದು ಎಂದು ನಂಬಲಾಗಿತ್ತು. ಆದರೆ ಇಂದು ಚಿತ್ರಣ ಬದಲಾಗಿದೆ. ಆಕೆಗೆ 26 ವಾರ ವೇತನ ಸಹಿತ ರಜೆ ನೀಡಲಾಗುವುದು. ಆನಂತರವೂ ಸಹ ಅಗತ್ಯಬಿದ್ದರೆ ಹೆಚ್ಚಿನ ರಜೆ ಪಡೆಯಬಹುದು. ಇದು ಮಹತ್ವದ ಬದಲಾವಣೆಯಾಗಿದೆ. ಹಿಂದೆ ಮದುವೆಯ ನಂತರವೂ ಏಕೆ ಮಹಿಳೆ ಕೆಲಸ ಮಾಡಬೇಕು ಎಂದು ಕೇಳಲಾಗುತ್ತಿತ್ತು. ಅಲ್ಲದೆ ಗಂಡನ ಸಂಬಳ ಸಾಕಾಗುತ್ತಿಲ್ಲವೇ ಎಂಬ ಪ್ರಶ್ನೆಗಳು ಸಹ ಏಳುತ್ತಿದ್ದವು. ಇಂದು ಜನರು ಕೇಳುತ್ತಿದ್ದಾರೆ ಮೇಡಂ ‘ನಿಮ್ಮ ಸ್ಟಾರ್ಟ್ ಅಪ್ ಕಂಪನಿ ಚೆನ್ನಾಗಿ ಕೆಲಸ ಮಾಡುತ್ತಿದೆ. ನನಗೆ ಅಲ್ಲಿ ಉದ್ಯೋಗ ಸಿಗಬಹುದೇ ಎಂದು ಕೇಳುತ್ತಿದ್ದಾರೆ. ಈ ಬದಲಾವಣೆ ಅತ್ಯಂತ ಮಹತ್ವದ್ದಾಗಿದೆ.

ಗೌರವಾನ್ವಿತ ಸ್ಪೀಕರ್ ಸರ್‌,

ಒಂದು ಕಾಲದಲ್ಲಿ ನಿಮ್ಮ ಮಗಳಿಗೆ ವಯಸ್ಸಾಗುತ್ತಿದೆ. ಆಕೆ ಯಾವಾಗ ಮದುವೆಯಾಗುತ್ತಾಳೆ ಎಂದು ಕೇಳುತ್ತಿದ್ದರು, ಈಗ ನಿಮ್ಮ ಮಗಳು ಹೇಗೆ ವೈಯಕ್ತಿಕ ಬದುಕು ಮತ್ತು ವೃತ್ತಿಪರ ಹೊಣೆಗಾರಿಕೆ ಎರಡನ್ನೂ ಹೇಗೆ ನಿಭಾಯಿಸುತ್ತಿದ್ದಾಳೆ ಎಂದು ಕೇಳುತ್ತಾರೆ.

ಗೌರವಾನ್ವಿತ ಸ್ಪೀಕರ್ ಸರ್‌,

ಒಂದು ಕಾಲದಲ್ಲಿ ಕುಟುಂಬದ ಮುಖ್ಯಸ್ಥ ಉಪಸ್ಥಿತನಿದ್ದಾನೋ ಇಲ್ಲವೋ ಎಂದು ಕೇಳಲಾಗುತ್ತಿತ್ತು. ಇಲ್ಲವಾದರೆ ಕುಟುಂಬದ ಯಜಮಾನನನ್ನು ಕರೆಯಿರಿ ಎಂದು ಹೇಳುತ್ತಿದ್ದರು, ಇಂದು ನೀವು ಯಾವುದಾದರು ಮನೆಗೆ ಭೇಟಿ ನೀಡಿದರೆ ಮನೆಯ ವಿದ್ಯುತ್, ನೀರು ಮತ್ತು ಅನಿಲ ಸಂಪರ್ಕದ ಬಿಲ್ ಗಳು ಮಹಿಳೆಯರ ಹೆಸರಿನಲ್ಲಿ ಬಂದಿರುವುದನ್ನು ಕಾಣಬಹುದು. ನಮ್ಮ ತಾಯಂದಿರು ಮತ್ತು ಸಹೋದರಿಯರು ಕುಟುಂಬದ ಮುಖ್ಯಸ್ಥನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಬದಲಾವಣೆಯನ್ನು ತರಲಾಗಿದೆ ಮತ್ತು ಬದಲಾವಣೆ ಅಮೃತ ಕಾಲದಲ್ಲಿ ‘ವಿಕಸಿತ ಭಾರತ’ವನ್ನು ಅಭಿವೃದ್ಧಿಗೊಳಿಸುವ ನಮ್ಮ ಸಂಕಲ್ಪದ ಭಾಗವಾಗಿದೆ ಮತ್ತು ಶ್ರೇಷ್ಠ ಪಡೆಯ ಉದಯಕ್ಕೆ ಸಾಕ್ಷಿಯಾಗಿದ್ದೇವೆ ಮತ್ತು ಅವರ ಶಕ್ತಿ ಹಲವು ಪಟ್ಟು ವೃದ್ಧಿಯಾಗಿರುವುದನ್ನು ನಾನು ಕಾಣುತ್ತಿದ್ದೇನೆ.

ಗೌರವಾನ್ವಿತ ಸ್ಪೀಕರ್ ಸರ್‌,

ರೈತರಿಗಾಗಿ ಕಣ್ಣೀರು ಹಾಕುವ ಪರಿಪಾಠವನ್ನು ನಾನು ಕಣ್ಣಾರೆ ಕಂಡಿದ್ದೇನೆ. ರೈತರ ನಂಬಿಕೆಗೆ ನಾನಾ ರೀತಿಯಲ್ಲಿ ದ್ರೋಹ ಬಗೆದಿರುವುದನ್ನು ದೇಶ ನೋಡಿದೆ. ಗೌರವಾನ್ವಿತ ಸ್ಪೀಕರ್ ಸರ್, ಕಾಂಗ್ರೆಸ್ ಕಾಲದಲ್ಲಿ ಕೃಷಿಗೆ ವಾರ್ಷಿಕ ಬರೋಬ್ಬರಿ 25,000 ಕೋಟಿ ರೂ ಇತ್ತು, ನಮ್ಮ ಸರ್ಕಾರದ ಬಜೆಟ್ 1.25 ಲಕ್ಷ ಕೋಟಿ ರೂಪಾಯಿಗಳು.

ಗೌರವಾನ್ವಿತ ಸ್ಪೀಕರ್ ಸರ್‌,

ಕಾಂಗ್ರೆಸ್ ಪಕ್ಷ (ಸರ್ಕಾರ) ತನ್ನ 10 ವರ್ಷಗಳ ಅಧಿಕಾರಾವಧಿಯಲ್ಲಿ ರೈತರಿಂದ 7 ಲಕ್ಷ ಕೋಟಿ ರೂಪಾಯಿ ಮೌಲ್ಯದ ಅಕ್ಕಿ ಮತ್ತು ಗೋಧಿಯನ್ನು ಖರೀದಿಸಿದೆ. ನಮ್ಮ 10 ವರ್ಷಗಳಲ್ಲಿ ನಾವು ಸುಮಾರು 18 ಲಕ್ಷ ಕೋಟಿ ರೂಪಾಯಿ ಮೌಲ್ಯದ ಅಕ್ಕಿ ಮತ್ತು ಗೋಧಿಯನ್ನು ಖರೀದಿಸಿದ್ದೇವೆ. ಕಾಂಗ್ರೇಸ್ ಸರ್ಕಾರವು ಉದ್ದು ಮತ್ತು ಎಳ್ಳು ಕಾಳುಗಳನ್ನು ಖರೀದಿಸಲಿಲ್ಲ. ನಾವು 1.25 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಉದ್ದು ಮತ್ತು ಎಳ್ಳು ಬೀಜಗಳನ್ನು ಖರೀದಿಸಿದ್ದೇವೆ. ನಮ್ಮ ಕಾಂಗ್ರೆಸ್ ಸಹೋದ್ಯೋಗಿಗಳು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಗೇಲಿ ಮಾಡಿದರು ಮತ್ತು ನಾನು ಯೋಜನೆಯನ್ನು ನನ್ನ ಮೊದಲ ಅವಧಿಯಲ್ಲಿ ಆರಂಭಿಸಿದಾಗ, ಹರಡಿದ ಸುಳ್ಳು ನಿರೂಪಣೆ ನನಗೆ ನೆನಪಿದೆ. ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ "ಮೋದಿ ಹಣ ತೆಗೆದುಕೊಳ್ಳಬೇಡಿ. ಒಮ್ಮೆ ಚುನಾವಣೆಯಲ್ಲಿ ಗೆದ್ದಾಗ ಬಡ್ಡಿ ಸಮೇತ ಎಲ್ಲ ಹಣವನ್ನು ವಾಪಸ್ ಕೇಳುತ್ತಾರೆ" ಎಂದು ಹೇಳುತ್ತಿದ್ದರು. ಹೀಗೊಂದು ಸುಳ್ಳು ಹಬ್ಬಿಸಲಾಗಿತ್ತು. ರೈತರನ್ನು ಮೂರ್ಖರನ್ನಾಗಿ ಮಾಡುವ ಪ್ರಯತ್ನವೂ ನಡೆದಿತ್ತು.

ಗೌರವಾನ್ವಿತ ಸ್ಪೀಕರ್ ಸರ್‌,

ನಾವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 2 ಲಕ್ಷ 80 ಸಾವಿರ ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿದ್ದೇವೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 30,000 ರೂ. ಪ್ರೀಮಿಯಂಗಾಗಿ ನನ್ನ ರೈತ ಸಹೋದರ ಸಹೋದರಿಯರಿಗೆ 1.5 ಲಕ್ಷ ಕೋಟಿ ರೂ.  ನೀಡಲಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಮೀನುಗಾರರು ಅಥವಾ ಜಾನುವಾರು ಸಾಕಾಣೆದಾರರಿಗೆ ಮನ್ನಣೆಯಾಗಲಿ, ಕಾಳಜಿಯಾಗಲಿ ಇರಲಿಲ್ಲ. ಈ ದೇಶದಲ್ಲಿ ಮೊದಲ ಬಾರಿಗೆ, ಮೀನುಗಾರರಿಗೆ ಪ್ರತ್ಯೇಕ ಸಚಿವಾಲಯವನ್ನು ಸೃಷ್ಟಿಸಲಾಗಿದೆ; ಪಶುಸಂಗೋಪನೆಗಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಲಾಗಿದೆ. ಜಾನುವಾರು ಸಾಕಣೆದಾರರು ಮತ್ತು ಮೀನುಗಾರರಿಗೆ ಮೊದಲ ಬಾರಿಗೆ ರೈತ ಕ್ರೆಡಿಟ್ ಕಾರ್ಡ್ ನೀಡಲಾಗಿದೆ, ಇದರಿಂದಾಗಿ ಅವರು ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್‌ನಿಂದ ಹಣ ಪಡೆದು ತಮ್ಮ ವ್ಯವಹಾರ ವಿಸ್ತರಿಸಬಹುದು. ಈ ಕಾಳಜಿ ಕೇವಲ ರೈತರು ಮತ್ತು ಮೀನುಗಾರರಿಗೆ ಮಾತ್ರವಲ್ಲ, ಜಾನುವಾರುಗಳಿಗೂ ಇದೆ, ಏಕೆಂದರೆ ಅವು  ಜೀವನದ ಪ್ರಮುಖ ಭಾಗವಾಗಿದೆ. ಈ ಜಾನುವಾರುಗಳು ಆರ್ಥಿಕ ಚಕ್ರವನ್ನು ನಡೆಸುವಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ನಮ್ಮ ಜಾನುವಾರುಗಳನ್ನು ಕಾಲು ಮತ್ತು ಬಾಯಿ ರೋಗದಿಂದ ರಕ್ಷಿಸಲು ನಾವು 50 ಕೋಟಿಗೂ ಅಧಿಕ ಲಸಿಕೆಗಳನ್ನು ನೀಡಿದ್ದೇವೆ, ಈ ಬಗ್ಗೆ ಹಿಂದೆಂದೂ ಯೋಚಿಸಿರಲಿಲ್ಲ.

ಗೌರವಾನ್ವಿತ ಸ್ಪೀಕರ್ ಸರ್‌,

ದೇಶದಲ್ಲಿ ಇಂದು ಯುವಜನತೆಗೆ ಹಿಂದೆಂದಿಗಿಂತಲೂ ಹೆಚ್ಚಿನ ಹೊಸ ಅವಕಾಶಗಳಿವೆ. ಸಂಪೂರ್ಣ ಶಬ್ದಕೋಶ ಬದಲಾಗಿದೆ; ಹಿಂದೆಂದೂ ಕೇಳಿರದ ಪದಗಳು ಈಗ ಜಗತ್ತಿನಾದ್ಯಂತದ ಸಂಭಾಷಣೆಗಳಲ್ಲಿ ಸಾಮಾನ್ಯವಾಗಿದೆ. ಇಂದು, ನವೋದ್ಯಮಗಳ ಝೇಂಕಾರವು ಎಲ್ಲೆಡೆ ಕೇಳಿಬರುತ್ತಿದೆ ಮತ್ತು ಯುನಿಕಾರ್ನ್‌ಗಳ ಬಗ್ಗೆ ಚರ್ಚಿಸಲಾಗುತ್ತಿದೆ. ಡಿಜಿಟಲ್ ಸೃಷ್ಟಿಕರ್ತರು ಇಂದು ಗಮನಾರ್ಹ ಗುಂಪಗಳನ್ನು ಸೃಷ್ಟಿಸುತ್ತಾರೆ. ಇಂದಿನ ಚರ್ಚೆಯು ಹಸಿರು ಆರ್ಥಿಕತೆಯ ಸುತ್ತ ಸುತ್ತುತ್ತದೆ. ನವಭಾರತದ ಹೊಸ ಶಬ್ದಕೋಶ ಯುವಜನರ ಬಾಯಲ್ಲಿದೆ. ಇವು ಹೊಸ ಆರ್ಥಿಕ ಸಾಮ್ರಾಜ್ಯದ ಹೊಸ ಪರಿಸರ, ಹೊಸ ಹೆಗ್ಗುರುತಾಗಿವೆ. ಈ ವಲಯಗಳು ಯುವಕರಿಗೆ ಲಕ್ಷಾಂತರ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ. 2014ರ ಮೊದಲು, ಡಿಜಿಟಲ್ ಆರ್ಥಿಕತೆಯ ಗಾತ್ರವು ಅತ್ಯಲ್ಪವಾಗಿತ್ತು ಮತ್ತು ಅದನ್ನು ಅಷ್ಟೇನೂ ಚರ್ಚಿಸುತ್ತಿರಲಿಲ್ಲ. ಇಂದು ಭಾರತವು ವಿಶ್ವದ ಡಿಜಿಟಲ್ ಆರ್ಥಿಕತೆಯಲ್ಲಿ ಮುಂಚೂಣಿಯಲ್ಲಿದೆ. ಲಕ್ಷಾಂತರ ಯುವಕರು ಇದರೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ಮುಂಬರುವ ದಿನಗಳಲ್ಲಿ ಡಿಜಿಟಲ್ ಇಂಡಿಯಾ ಆಂದೋಲನವು ದೇಶದ ಯುವಕರು ಮತ್ತು ವಿವಿಧ ವೃತ್ತಿಪರರಿಗೆ ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

ಗೌರವಾನ್ವಿತ ಸ್ಪೀಕರ್ ಸರ್‌,

ಇಂದು ಮೇಡ್ ಇನ್ ಇಂಡಿಯಾ ಫೋನ್‌ಗಳು ವಿಶ್ವವನ್ನು ತಲುಪುತ್ತಿವೆ. ನಾವು ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದ್ದೇವೆ. ಒಂದು ಕಡೆ ಅಗ್ಗದ ಮೊಬೈಲ್ ಫೋನ್ ಗಳ ಲಭ್ಯತೆ, ಮತ್ತೊಂದೆಡೆ ಅಗ್ಗದ ಡೇಟಾ. ಈ ಎರಡು ಅಂಶಗಳಿಂದಾಗಿ ದೇಶ ಮತ್ತು ವಿಶ್ವದಲ್ಲಿ ದೊಡ್ಡ ಕ್ರಾಂತಿಯೇ ನಡೆದಿದೆ. ಇಂದು ನಾವು ನಮ್ಮ ಯುವಕರಿಗೆ ಮೊಬೈಲ್ ಫೋನ್‌ಗಳು ಮತ್ತು ಡೇಟಾವನ್ನು ಕಡಿಮೆ ಬೆಲೆಗೆ ಒದಗಿಸುತ್ತಿರುವುದು ಕ್ರಾಂತಿಗೆ ಕಾರಣವಾಗಿದೆ. ದೇಶವು ಇಂದು ಮೇಕ್ ಇನ್ ಇಂಡಿಯಾ ಅಭಿಯಾನ, ದಾಖಲೆ ಉತ್ಪಾದನೆ ಮತ್ತು ದಾಖಲೆ ರಫ್ತುಗಳಿಗೆ ಸಾಕ್ಷಿಯಾಗಿದೆ

ಗೌರವಾನ್ವಿತ ಸ್ಪೀಕರ್ ಸರ್‌,

ಇವು ನಮ್ಮ ಯುವಜನತೆಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ತರುತ್ತದೆ ಮತ್ತು ಹೆಚ್ಚಿನ ಉದ್ಯೋಗಗಳನ್ನು ಸೃಜಿಸುತ್ತದೆ.

ಗೌರವಾನ್ವಿತ ಸ್ಪೀಕರ್ ಸರ್‌,

ಕಳೆದ 10 ವರ್ಷಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಭೂತಪೂರ್ವ ಪ್ರಗತಿ ಕಂಡುಬಂದಿದೆ. ನಮ್ಮ ದೇಶದಲ್ಲಿ, ಪ್ರವಾಸೋದ್ಯಮವು ಕನಿಷ್ಠ ಬಂಡವಾಳ ಹೂಡಿಕೆಯೊಂದಿಗೆ ಗರಿಷ್ಠ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಕ್ಷೇತ್ರವಾಗಿದೆ. ಸಾಮಾನ್ಯ ವ್ಯಕ್ತಿಗೂ ಕ್ಷೇತ್ರದಲ್ಲಿ ಉದ್ಯೋಗ ಕಂಡುಕೊಳ್ಳುವ ಅವಕಾಶವಿದೆ. ಪ್ರವಾಸೋದ್ಯಮ ಕ್ಷೇತ್ರವು ಸ್ವಯಂ ಉದ್ಯೋಗಕ್ಕೆ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ. ಕಳೆದ 10 ವರ್ಷಗಳಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ ದುಪ್ಟಟ್ಟಾಗಿದೆ. ಭಾರತ ಕೇವಲ ವಿಮಾನ ನಿಲ್ದಾಣಗಳನ್ನು ನಿರ್ಮಿಸಿಲ್ಲ; ಇದು ವಿಶ್ವದ ಮೂರನೇ-ಅತಿದೊಡ್ಡ ದೇಶೀಯ ವಿಮಾನಯಾನ ಕ್ಷೇತ್ರವಾಗಿದೆ, ವಿಶ್ವದ ಮೂರನೇ ಅತಿ ದೊಡ್ಡದಾಗಿದೆ. ನಾವೆಲ್ಲರೂ ಸಂತೋಷವಾಗಿರಬೇಕು; ಭಾರತೀಯ ವಿಮಾನಯಾನ ಸಂಸ್ಥೆಗಳು ದೇಶದಲ್ಲಿ 1,000 ಹೊಸ ವಿಮಾನಗಳು, 1,000 ಹೊಸ ವಿಮಾನಗಳಿಗಾಗಿ ಬೇಡಿಕೆಯನ್ನು ಸಲ್ಲಿಸಿವೆ! ಮತ್ತು ಹಲವಾರು ವಿಮಾನಗಳು ಕಾರ್ಯಾಚರಣೆಯಲ್ಲಿದ್ದಾಗ, ಎಲ್ಲಾ ವಿಮಾನ ನಿಲ್ದಾಣಗಳು ಎಷ್ಟು ರೋಮಾಂಚಕವಾಗಿರುತ್ತವೆ. ಎಷ್ಟು ಪೈಲಟ್‌ಗಳು, ಸಿಬ್ಬಂದಿ ಸದಸ್ಯರು, ಇಂಜಿನಿಯರ್‌ಗಳು, ಗ್ರೌಂಡ್ ಸರ್ವೀಸ್ ಸಿಬ್ಬಂದಿಗಳು ಬೇಕಾಗುತ್ತಾರೆ-ಅಂದರೆ, ಉದ್ಯೋಗದ ಹೊಸ ಕ್ಷೇತ್ರಗಳು ತೆರೆದುಕೊಳ್ಳುತ್ತಿವೆ. ವೈಮಾನಿಕ ಕ್ಷೇತ್ರವು ಭಾರತಕ್ಕೆ ಒಂದು ದೊಡ್ಡ ಹೊಸ ಅವಕಾಶವಾಗಿ ಹೊರಹೊಮ್ಮಿದೆ.

ಗೌರವಾನ್ವಿತ ಸ್ಪೀಕರ್ ಸರ್‌,

ನಾವು ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಆರ್ಥಿಕತೆಯನ್ನು ಭದ್ರಪಡಿಸಲು ಪ್ರಯತ್ನಿಸುತ್ತಿದ್ದೇವೆ. ಯುವಕರು ಉದ್ಯೋಗಗಳನ್ನು ಹುಡುಕಬೇಕು ಮತ್ತು ಸಾಮಾಜಿಕ ಭದ್ರತೆಯನ್ನು ಹೊಂದಬೇಕೆಂದು ನಾವು ಬಯಸುತ್ತೇವೆ. ಈ ಎರಡು ಅಂಶಗಳ ಆಧಾರದ ಮೇಲೆ ಮತ್ತು ನಮ್ಮ ಸ್ವಂತ ತತ್ವಗಳ ಮೇಲೆ, ನಾವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಇಪಿಎಫ್ ಒ (ನೌಕರರ ಭವಿಷ್ಯ ನಿಧಿ ಸಂಸ್ಥೆ)ಯಲ್ಲಿ ಕಳೆದ 10 ವರ್ಷಗಳಲ್ಲಿ ಸುಮಾರು 18 ಕೋಟಿ ಹೊಸ ಚಂದಾದಾರರು ಸೇರ್ಪಡೆಯಾಗಿದ್ದಾರೆ, ಇದರಲ್ಲಿ ಯಾವುದೇ ನಕಲಿ ಹೆಸರುಗಳನ್ನು ಒಳಗೊಂಡಿಲ್ಲ. ಮುದ್ರಾ ಸಾಲ ಪಡೆದವರಲ್ಲಿ 8 ಕೋಟಿ ಜನರಿದ್ದಾರೆ, ಜೀವನದಲ್ಲಿ ಮೊದಲ ಬಾರಿಗೆ ತಮ್ಮ ವ್ಯವಹಾರವನ್ನು ಆರಂಭಿಸಿದ್ದಾರೆ. ಮತ್ತು ಅವರು ಮುದ್ರಾ ಸಾಲವನ್ನು ತೆಗೆದುಕೊಂಡಾಗ, ಅವರು ತಮ್ಮ ಉದ್ಯೋಗವನ್ನು ಭದ್ರಪಡಿಸಿಕೊಳ್ಳುತ್ತಾರೆ ಆದರೆ ಅವರ ಕೆಲಸದ ಸ್ವರೂಪದಿಂದಾಗಿ ಇನ್ನೂ ಒಬ್ಬರು ಅಥವಾ ಇಬ್ಬರಿಗೆ ಉದ್ಯೋಗವನ್ನು ನೀಡುತ್ತಾರೆ. ಲಕ್ಷಾಂತರ ಬೀದಿ ವ್ಯಾಪಾರಿಗಳಿಗೆ ನಾವು ಬೆಂಬಲ ನೀಡಿದ್ದೇವೆ. ಇಂತಹ ಉದ್ಯೋಗದಲ್ಲಿ 10 ಕೋಟಿ ಮಹಿಳೆಯರು ಸಂಪರ್ಕ ಹೊಂದಿದ್ದಾರೆ. ಮತ್ತು ನಾನು ಹೇಳಿದಂತೆ, ನಮ್ಮ ದೇಶದೊಳಗೆ ನಾವು ಶೀಘ್ರದಲ್ಲೇ ಮೂರು ಕೋಟಿ ‘ಲಕ್ಷಾಧಿಪತಿ ದೀದಿಗಳನ್ನು’ ನೋಡುತ್ತೇವೆ.

ಗೌರವಾನ್ವಿತ ಸ್ಪೀಕರ್ ಸರ್‌,

ಅರ್ಥಶಾಸ್ತ್ರಜ್ಞರಿಗೆ ಮಾತ್ರ ಅರ್ಥವಾಗುವ ಕೆಲವು ಅಂಕಿ ಅಂಶಗಳಿವೆ, ಆದರೆ ಇದು ಹಾಗಲ್ಲ. ಒಬ್ಬ ಸಾಮಾನ್ಯ ವ್ಯಕ್ತಿಯೂ ಅವುಗಳನ್ನು ಗ್ರಹಿಸಬಹುದು. 2014ರ ಹಿಂದಿನ 10 ವರ್ಷಗಳಲ್ಲಿ ಮೂಲಸೌಕರ್ಯ ನಿರ್ಮಾಣಕ್ಕೆ ಅಂದಾಜು 12 ಲಕ್ಷ ಕೋಟಿ ರೂ. ವ್ಯಯಿಸಲಾಗಿತ್ತು. ಆ 10 ವರ್ಷಗಳಲ್ಲಿ ಅದು 12 ಲಕ್ಷ ಕೋಟಿ ರೂ ಆದರೆ, ಕಳೆದ 10 ವರ್ಷಗಳಲ್ಲಿ ಮೂಲಸೌಕರ್ಯ ನಿರ್ಮಾಣಕ್ಕೆ 44 ಲಕ್ಷ ಕೋಟಿ ರೂ. ಖರ್ಚು ಮಾಡಲಾಗಿದೆ, ಇದು ಉದ್ಯೋಗಾವಕಾಶಗಳು ಹೇಗೆ ಹೆಚ್ಚಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಈ ಅಂಕಿ ಅಂಶದಿಂದ ಯಾರೊಬ್ಬರೂ ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.

ಗೌರವಾನ್ವಿತ ಸ್ಪೀಕರ್ ಸರ್‌,

ಮೊತ್ತದಿಂದ ಉದ್ಯೋಗವನ್ನು ಕಂಡುಕೊಂಡ ಜನರ ಸಂಖ್ಯೆಯನ್ನು ನೀವು ಅಂದಾಜು ಮಾಡಬಹುದು. ನಾವು ಭಾರತವನ್ನು ಉತ್ಪಾದನೆ, ಸಂಶೋಧನೆ ಮತ್ತು ನಾವೀನ್ಯತೆಗಳ ತಾಣವನ್ನಾಗಿ ಮಾಡುತ್ತಿದ್ದೇವೆ, ಆ ನಿಟ್ಟಿನಲ್ಲಿ ದೇಶದ ಯುವಕರನ್ನು ಪ್ರೋತ್ಸಾಹಿಸುತ್ತಿದ್ದೇವೆ. ನಾವು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ, ಆರ್ಥಿಕ ನೆರವು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ.

ಗೌರವಾನ್ವಿತ ಸ್ಪೀಕರ್ ಸರ್‌,

ನಾವು ಸದಾ ಇಂಧನ ಕ್ಷೇತ್ರದ ಮೇಲೆ ಅವಲಂಬಿತರಾಗಿದ್ದೇವೆ. ಇಂಧನ ವಲಯದಲ್ಲಿ ಸ್ವಾವಲಂಬನೆಯ ದಿಕ್ಕಿನಲ್ಲಿ ವಿಶೇಷವಾಗಿ ಹಸಿರು ಶಕ್ತಿ ಮತ್ತು ಜಲಜನಕದ ಕಡೆಗೆ ಸಾಕಷ್ಟು ಕೆಲಸ ಮಾಡುವ ಅವಶ್ಯಕತೆಯಿದೆ, ಅಲ್ಲಿ ನಾವು ಅಭೂತಪೂರ್ವ ಹೂಡಿಕೆಯೊಂದಿಗೆ ಗಮನಾರ್ಹ ರೀತಿಯಲ್ಲಿ ಮುನ್ನಡೆಯುತ್ತಿದ್ದೇವೆ. ಭಾರತ ಮುನ್ನಡೆಸಬೇಕಾದ ಇನ್ನೊಂದು ವಲಯವೆಂದರೆ ಅರೆವಾಹಕಗಳು (ಸೆಮಿಕಂಡಕ್ಟರ್). ಹಿಂದಿನ ಸರ್ಕಾರಗಳು ಸಾಕಷ್ಟು ಪ್ರಯತ್ನಗಳನ್ನು ಮಾಡಿದರೂ ಹೆಚ್ಚಿನ ಯಶಸ್ಸನ್ನು ಸಾಧಿಸಲಿಲ್ಲ. ಈಗ, ನಾವು ಇರುವ ಪರಿಸ್ಥಿತಿಯಲ್ಲಿ, ಕಳೆದ ಮೂರು ದಶಕಗಳ ಹಿನ್ನಡೆಯ ನಡುವೆಯೂ, ಭವಿಷ್ಯವು ನಮಗೆ ಸೇರಿದೆ ಎಂದು ನಾನು ಆತ್ಮವಿಶ್ವಾಸದಿಂದ ಹೇಳುತ್ತೇನೆ. ಸೆಮಿಕಂಡಕ್ಟರ್ ವಲಯದಲ್ಲಿ ಅಭೂತಪೂರ್ವ ಹೂಡಿಕೆಯನ್ನು ನಾನು ಎದುರು ನೋಡುತ್ತಿದ್ದೇನೆ ಮತ್ತು ಭಾರತವು ಜಗತ್ತಿಗೆ ಮಹತ್ವದ ಕೊಡುಗೆ ನೀಡಲಿದೆ. ಈ ಎಲ್ಲಾ ಕಾರಣಗಳಿಗಾಗಿ, ಗೌರವಾನ್ವಿತ  ಸ್ಪೀಕರ್ ಸರ್, ಗುಣಮಟ್ಟದ ಉದ್ಯೋಗಗಳ ಸಾಧ್ಯತೆಗಳು ಗಮನಾರ್ಹವಾಗಿ ಹೆಚ್ಚಾಗಲಿವೆ ಮತ್ತು ಅದಕ್ಕಾಗಿಯೇ ನಾವು ಪ್ರತ್ಯೇಕ ಕೌಶಲ್ಯ ಸಚಿವಾಲಯವನ್ನು ಸ್ಥಾಪಿಸಿದ್ದೇವೆ ಇದರಿಂದ ದೇಶದ ಯುವಕರು ಕೌಶಲ್ಯಗಳನ್ನು ಪಡೆದುಕೊಳ್ಳಬಹುದು ಮತ್ತು ಅಂತಹ ಅವಕಾಶಗಳನ್ನು ಪಡೆಯಬಹುದು. ನಾವು ಉದ್ಯಮ 4.0 ರ ನಿಟ್ಟಿನಲ್ಲಿ ಮುನ್ನಡೆಯಲು ಕೆಲಸ ಮಾಡುತ್ತಿದ್ದೇವೆ, ಅದಕ್ಕಾಗಿ ಮಾನವಸಂಪನ್ಮೂಲವನ್ನು ಸಜ್ಜುಗೊಳಿಸುತ್ತಿದ್ದೇವೆ.

ಗೌರವಾನ್ವಿತ ಸ್ಪೀಕರ್ ಸರ್‌,

ಇಲ್ಲಿ ಹಣದುಬ್ಬರದ ಬಗ್ಗೆ ಸಾಕಷ್ಟು ವಿಷಯ ಹೇಳಲಾಗಿದೆ. ದೇಶದ ಮುಂದೆ ಒಂದಿಷ್ಟು ಸತ್ಯ ಹೊರಬರಬೇಕು ಎಂದು ನಾನು ಖಂಡಿತಾ ಬಯಸುತ್ತೇನೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಹಣದುಬ್ಬರ ಹಿಂಬಾಲಿಸುತ್ತದೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ನಾನು ಇಂದು ಸದನದಲ್ಲಿ ಏನನ್ನಾದರೂ ಹೇಳಲು ಬಯಸುತ್ತೇನೆ. ನಾನು ಯಾರನ್ನೂ ಟೀಕಿಸಲು ಬಯಸುವುದಿಲ್ಲ, ಆದರೆ ನಾವು ಹೇಳುವುದನ್ನು ಅರ್ಥಮಾಡಿಕೊಳ್ಳದವರು; ಅವರು ತಮ್ಮ ನಾಯಕರ ಧ್ವನಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಇದನ್ನು ಯಾರೋ ಒಬ್ಬರು ಹೇಳಿದ್ದರು, ನಾನು ಅವರ ಹೆಸರನ್ನು ನಂತರ ಹೇಳುತ್ತೇನೆ. ”ಏಕೆಂದರೆ ಎಲ್ಲದರ ಬೆಲೆ ಹೆಚ್ಚಾಗಿದೆ, ತೊಂದರೆಯಾಗುತ್ತಿದೆ ಮತ್ತು ಸಾಮಾನ್ಯ ಜನರು ಅದರಲ್ಲಿ ಸಿಲುಕಿಕೊಂಡಿದ್ದಾರೆ’’. ಇದು ವಾಸ್ತವದಲ್ಲಿ ಯಾರ ಹೇಳಿಕೆ? ಇದನ್ನು ನಮ್ಮ ಪಂಡಿತ್ ನೆಹರೂ ಜೀ ಅವರು ಅಂದು ಕೆಂಪು ಕೋಟೆಯಿಂದ ಹೇಳಿದ್ದರು. ”ಎಲ್ಲದರ ಬೆಲೆ ಹೆಚ್ಚಿದೆ, ತೊಂದರೆಗಳಾಗುತ್ತಿದೆ ಮತ್ತು ಸಾಮಾನ್ಯ ಜನರು ಅದರಲ್ಲಿ ಸಿಲುಕಿಕೊಂಡಿದ್ದಾರೆ’’ ಎಂದು. ಹೇಳಿಕೆಯು ಕಾಲದ್ದು, ಎಲ್ಲೆಡೆ ಹಣದುಬ್ಬರ ಹೆಚ್ಚಾಗಿದೆ ಎಂದು ಅವರು ಕೆಂಪು ಕೋಟೆಯಿಂದ ಒಪ್ಪಿಕೊಂಡರು. ಈಗ, ಈ ಹೇಳಿಕೆಯ 10 ವರ್ಷಗಳ ನಂತರ, ನೆಹರೂ ಜಿಯವರ ಹೇಳಿಕೆಯ 10 ವರ್ಷಗಳ ನಂತರ, ನಿಮ್ಮ ಮುಂದೆ ಮತ್ತೊಂದು ಉಲ್ಲೇಖವನ್ನು ಪ್ರಸ್ತುತಪಡಿಸುತ್ತೇನೆ. ನಾನು ಉಲ್ಲೇಖವನ್ನು ಪುನರಾವರ್ತಿಸಲು ಬಯಸುತ್ತಿದ್ದೇನೆ.ಹಣದುಬ್ಬರದಿಂದಾಗಿ ನೀವು ಇನ್ನೂ ಕೆಲವು ತೊಂದರೆಗಳನ್ನು, ಸಮಸ್ಯೆಗಳನ್ನು ಎದುರಿಸುತ್ತಿದ್ದೀರಿ. ಸ್ವಲ್ಪ ಅಸಹಾಯಕತೆ ಇದೆ; ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿಲ್ಲ, ಆದರೂ ಶೀಘ್ರದಲ್ಲೇ ನಿಯಂತ್ರಣಕ್ಕೆ ಬರಲಿದೆ”. 10 ವರ್ಷಗಳ ನಂತರವೂ ಅದೇ ಹಣದುಬ್ಬರದ ಹಾಡನ್ನು ಹಾಡಲಾಯಿತು ಮತ್ತು ಇದನ್ನು ಮತ್ತೆ ಯಾರು ಹೇಳಿದರು? ನೆಹರೂ ಜೀ ಅವರು ದೇಶದ ಪ್ರಧಾನಿಯಾಗಿದ್ದ ಅವಧಿಯಲ್ಲಿ ಅದನ್ನು ಹೇಳಿದ್ದರು. ಆಗ ಅವರು 12 ವರ್ಷಗಳ ಕಾಲ ಪ್ರಧಾನಿಯಾಗಿದ್ದರು, ಆದರೆ ಹಣದುಬ್ಬರ ನಿಯಂತ್ರಣಕ್ಕೆ ಬರಲಿಲ್ಲ. "ಹಣದುಬ್ಬರದಿಂದಾಗಿ ನೀವು ಕಷ್ಟಗಳನ್ನು ಎದುರಿಸುತ್ತಿದ್ದೀರಿ", ಇದು ಅವರು ಹಾಡುತ್ತಲೇ ಇದ್ದ ಮತ್ತೊಂದು ಹಾಡಾಗಿತ್ತು.

ಗೌರವಾನ್ವಿತ ಸ್ಪೀಕರ್ ಸರ್‌,

ಇದೀಗ ನಾನು ಅವರ ಭಾಷಣದ ಮತ್ತೊಂದು ಭಾಗವನ್ನು ಓದುತ್ತಿದ್ದೇನೆ. "ದೇಶವು ಪ್ರಗತಿಯಲ್ಲಿರುವಾಗ, ಸ್ವಲ್ಪ ಮಟ್ಟಿಗೆ ಬೆಲೆಗಳು ಏರುತ್ತವೆ, ನಾವು ಅಗತ್ಯ ವಸ್ತುಗಳ ಬೆಲೆಗಳನ್ನು ಹೇಗೆ ನಿಯಂತ್ರಿಸಬೇಕು ಎಂಬುದನ್ನು ಸಹ ನೋಡಬೇಕಾಗಿದೆ." ಇದನ್ನು ಯಾರು ಹೇಳಿದರು? ಇದನ್ನು ಇಂದಿರಾಗಾಂಧಿ ಹೇಳಿದ್ದರು. ಅವರು ದೇಶದ ಎಲ್ಲಾ ದ್ವಾರಗಳನ್ನು ಬಂದ್  ಮಾಡಿದಾಗ, ಜನರನ್ನು 1974 ರಲ್ಲಿ ಜೈಲಿಗೆ ಹಾಕಲಾಯಿತು; ಆಗ ಶೇ.30 ರಷ್ಟು ಹಣದುಬ್ಬರವಿತ್ತು, ಶೇ. 30 ರಷ್ಟು!

ಗೌರವಾನ್ವಿತ ಸ್ಪೀಕರ್ ಸರ್‌,

ಅವರು ತಮ್ಮ ಭಾಷಣದಲ್ಲಿ ಹೇಳಿದ ಮಾತುಗಳು ನಿಮ್ಮನ್ನು ಬೆರಗುಗೊಳಿಸುತ್ತವೆ. ಅವರು ಹೇಳಿದರು “ನಿಮಗೆ ಕೃಷಿಗೆ ಭೂಮಿ ಇಲ್ಲದಿದ್ದರೆ, ನಿಮ್ಮ ಮಡಕೆ ಮತ್ತು ಪಾತ್ರೆಗಳಲ್ಲಿ ತರಕಾರಿಗಳನ್ನು ಬೆಳೆಯಿರಿ.” ಅಂತಹ ಸಲಹೆಯನ್ನು ಉನ್ನತ ಸ್ಥಾನಗಳನ್ನು ಹೊಂದಿರುವ ಜನರು ನೀಡಿದರು. ಹಣದುಬ್ಬರದ ಬಗ್ಗೆ ಎರಡು ಹಾಡುಗಳು ಸೂಪರ್ ಹಿಟ್ ಆಗಿವೆ. ಆ ಸಮಯದಲ್ಲಿ ನಮ್ಮ ದೇಶದಲ್ಲಿ ಅವುಗಳನ್ನು ಎಲ್ಲೆಡೆ ಹಾಡಲಾಗುತ್ತಿತ್ತು,  ಒಂದು 'ಮೆಹಂಗೈ ಮರ್ ಗಯೀ' ಮತ್ತು ಇನ್ನೊಂದು 'ಮೆಹಂಗೈ ದಯಾಯಿಂ ಖಾಯೆ ಜಾತ್ ಹೈ' ಮತ್ತು ಎರಡೂ ಹಾಡುಗಳು ಕಾಂಗ್ರೆಸ್ ಆಡಳಿತದಲ್ಲಿ ಬಂದವು.

ಗೌರವಾನ್ವಿತ ಸ್ಪೀಕರ್ ಸರ್‌,

ಯುಪಿಎ ಅಧಿಕಾರಾವಧಿಯಲ್ಲಿ ಹಣದುಬ್ಬರ ಎರಡಂಕಿಯಲ್ಲಿತ್ತು, ಎರಡಂಕಿಯ ಹಣದುಬ್ಬರ ಇತ್ತು, ಅದನ್ನು ಅಲ್ಲಗಳೆಯುವಂತಿಲ್ಲ. ಮತ್ತು ಯುಪಿಎ ಸರ್ಕಾರದ ವಾದವು ... ಸಂವೇದನಾರಹಿತವಾಗಿತ್ತು! ಬೆಲೆ ಬಾಳುವ ಐಸ್ ಕ್ರೀಂ ತಿನ್ನಲು ಶಕ್ತಿ ಇರುವ ನೀವು ಹಣದುಬ್ಬರದ ಬಗ್ಗೆ ಏಕೆ ಅಳುತ್ತೀರಿ ಎಂದು ಹೇಳಲಾಗಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಹಣದುಬ್ಬರವನ್ನು ಬಲವರ್ಧನೆಗೊಳಿಸಿತು.

ಗೌರವಾನ್ವಿತ ಸ್ಪೀಕರ್ ಸರ್‌,

ನಮ್ಮ ಸರ್ಕಾರ ನಿರಂತರವಾಗಿ ಹಣದುಬ್ಬರವನ್ನು ನಿಯಂತ್ರಣದಲ್ಲಿಟ್ಟಿದೆ. ಎರಡು ಯುದ್ಧಗಳು ಮತ್ತು 100 ವರ್ಷಗಳಲ್ಲಿ ಅತಿದೊಡ್ಡ ಬಿಕ್ಕಟ್ಟು (ಕರೋನಾ ರೂಪದಲ್ಲಿ) ಹೊರತಾಗಿಯೂ, ನಾವು ಹಣದುಬ್ಬರವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿ ನಿರ್ವಹಿಸಿದ್ದೇವೆ ಮತ್ತು ನಾವು ಅದರಲ್ಲಿ  ಯಶಸ್ವಿಯಾಗಿದ್ದೇವೆ.

ಗೌರವಾನ್ವಿತ ಸ್ಪೀಕರ್ ಸರ್‌,

ಇಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಸಾಧ್ಯವಾದಷ್ಟೂ ಜೋರು ಧ್ವನಿಯಲ್ಲಿ ಸಿಟ್ಟನ್ನು ವ್ಯಕ್ತಪಡಿಸುತ್ತಿದ್ದರು. ಅವರ ನೋವು ನನಗೆ ಅರ್ಥವಾಗುತ್ತದೆ. ಬಾಣವು ಗುರಿಯನ್ನು ಹೊಡೆದಿದ್ದರಿಂದ ಅವರ ಹತಾಶೆ ಮತ್ತು ಕೋಪವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಭ್ರಷ್ಟಾಚಾರದ ವಿರುದ್ಧ ಏಜೆನ್ಸಿಗಳು ಕ್ರಮ ಕೈಗೊಳ್ಳುತ್ತಿವೆ. ಅದರ ಬಗ್ಗೆ ತುಂಬಾ ಕೋಪವಿದೆ ಮತ್ತು ಅದಕ್ಕಾಗಿ ಕೆಲವು ಪದಗಳನ್ನು ಬಳಸಲಾಗುತ್ತಿದೆ.

ಗೌರವಾನ್ವಿತ ಸ್ಪೀಕರ್ ಸರ್‌,

10 ವರ್ಷಗಳ ಹಿಂದೆ ನಮ್ಮ ಸಂಸತ್ತಿನಲ್ಲಿ ಏನು ಚರ್ಚೆಯಾಗುತ್ತಿತ್ತು? ಸದನದ ಸಂಪೂರ್ಣ ಸಮಯ ಹಗರಣಗಳ ಚರ್ಚೆಗೆ ಮೀಸಲಾಗಿತ್ತು. ಭ್ರಷ್ಟಾಚಾರದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ನಿರಂತರವಾಗಿ ಕೇಳಿಬರುತ್ತಿತ್ತು. ಸದನದಲ್ಲಿ ಪದೇ ಒದೇ ಕ್ರಮ, ಕ್ರಮ ಮತ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗುತ್ತಿತು. ಆ ಯುಗ ದೇಶಕ್ಕೆ ಕಳಂಕವಾಗಿತ್ತು. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಸುದ್ದಿಗಳು ಎಲ್ಲೆಡೆ ಇದ್ದವು ಮತ್ತು ಅದು ಪ್ರತಿದಿನವೂ ಇತ್ತು. ಮತ್ತು ಇಂದು ಭ್ರಷ್ಟ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿರುವಾಗ ಜನರು ಅವರ ಬೆಂಬಲಕ್ಕಾಗಿ ಗದ್ದಲವನ್ನು ಸೃಷ್ಟಿಸುತ್ತಾರೆ.

ಗೌರವಾನ್ವಿತ ಸ್ಪೀಕರ್ ಸರ್‌,

ಅವರ ಕಾಲದಲ್ಲಿ ಸರ್ಕಾರಿ ಸಂಸ್ಥೆಗಳನ್ನು ರಾಜಕೀಯ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತಿತ್ತು. ಬೇರೆ ಕೆಲಸ ಮಾಡಲು ಬಿಡುತ್ತಿರಲಿಲ್ಲ. ಈಗ ಅವರ ಆಡಳಿತದಲ್ಲಿ ಏನಾಯಿತು ನೋಡಿ. ಪಿಎಂಎಲ್‌ಎ ಕಾಯ್ದೆಯಡಿ, ನಾವು ಮೊದಲಿಗಿಂತ ಎರಡು ಪಟ್ಟು ಅಧಿಕ ಪ್ರಕರಣಗಳನ್ನು ದಾಖಲಿಸಿದ್ದೇವೆ. ಕಾಂಗ್ರೆಸ್ ಅವಧಿಯಲ್ಲಿ ಜಾರಿ ನಿರ್ದೇಶನಾಲಯವು 5,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ನಮ್ಮ ಅಧಿಕಾರಾವಧಿಯಲ್ಲಿ ಇಡಿ 1 ಲಕ್ಷ ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

ದೇಶದ ಸಂಪತ್ತಿನ ಲೂಟಿಯನ್ನು ಹಿಂತಿರುಗಿಸಬೇಕು. ಇಷ್ಟು ಆಸ್ತಿಗಳನ್ನು ವಶಪಡಿಸಿಕೊಂಡಾಗ, ನೋಟುಗಳ ರಾಶಿಯನ್ನು ವಶಪಡಿಸಿಕೊಳ್ಳಲಾಗುತ್ತದೆ...ಅಧೀರ್ ಬಾಬು ಬಂಗಾಳದಿಂದ ಬಂದವರು, ಅವರು ಕರೆನ್ಸಿ ನೋಟುಗಳ ರಾಶಿಯನ್ನು ನೋಡಿದ್ದಾರೆ. ಯಾರ ಮನೆಗಳಿಂದ ವಶಪಡಿಸಿಕೊಳ್ಳಲಾಗಿದೆ, ಯಾವ ರಾಜ್ಯಗಳಿಂದ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ? ಈ ಕರೆನ್ಸಿ ನೋಟುಗಳ ರಾಶಿಯನ್ನು ನೋಡಿ ದೇಶವೇ ಬೆಚ್ಚಿಬಿದ್ದಿದೆ. ಆದರೆ ಈಗ ನೀವು ಜನರನ್ನು ಮರುಳು ಮಾಡಲು ಸಾಧ್ಯವಿಲ್ಲ, ಜನರು ನೋಡುತ್ತಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ 10-15 ಲಕ್ಷ ಕೋಟಿ ರೂಪಾಯಿಗಳ ಭ್ರಷ್ಟಾಚಾರದ ಬಗ್ಗೆ ಚರ್ಚೆಯಾಗಿತ್ತು.

ನಾವು ಲಕ್ಷ ಕೋಟಿ ಹಗರಣಗಳನ್ನು ಬಯಲಿಗೆಳೆದಿದ್ದೇವೆ ಮತ್ತು ಹಣವನ್ನು ಬಡವರಿಗಾಗಿ, ಬಡವರ ಕಲ್ಯಾಣಕ್ಕಾಗಿ ವಿನಿಯೋಗಿಸಲು ಇಟ್ಟಿದ್ದೇವೆ. ಈಗ ಬಡವರನ್ನು ಲೂಟಿ ಮಾಡುವುದು ಮಧ್ಯವರ್ತಿಗಳಿಗೆ ತುಂಬಾ ಕಷ್ಟಕರವಾಗಿದೆ. ನೇರ ಲಾಭ ವರ್ಗಾವಣೆ, ಜನ ಧನ್ ಖಾತೆಗಳು, ಆಧಾರ್ ಮತ್ತು ಮೊಬೈಲ್‌ನ ಶಕ್ತಿಯನ್ನು ನಾವು ಗುರುತಿಸಿದ್ದೇವೆ. ನಾವು ನೇರವಾಗಿ 30 ಲಕ್ಷ ಕೋಟಿ ರೂಪಾಯಿಗಳನ್ನು ಜನರ ಖಾತೆಗೆ ವರ್ಗಾಯಿಸಿದ್ದೇವೆ. ಮತ್ತು ಕಾಂಗ್ರೆಸ್ ಪ್ರಧಾನಿಯೊಬ್ಬರು ಕೇಂದ್ರದಿಂದ ಒಂದು ರೂಪಾಯಿ ಕಳುಹಿಸಿದರೆ ಫಲಾನುಭವಿಗಳಿಗೆ ಕೇವಲ 15 ಪೈಸೆ ತಲುಪುತ್ತದೆ ಎಂದು ಹೇಳಿದ್ದರು. ಆ ಯುಗವು ಚಾಲ್ತಿಯಲ್ಲಿದ್ದರೆ ಹೇಳಿಕೆಯ ಪ್ರಕಾರ ನಾನು ಲೆಕ್ಕ ಹಾಕಿದರೆ, ನಾವು ಕಳುಹಿಸಿದ 30 ಲಕ್ಷ ಕೋಟಿ ರೂಪಾಯಿಗಳು, ಅಂದರೆ ಎಷ್ಟು ಹಣವನ್ನು ದುರುಪಯೋಗಪಡಿಸಿಕೊಳ್ಳಬಹುದೆಂದು ನೀವೇ ಲೆಕ್ಕ ಹಾಕಿ. ಅದರಲ್ಲಿ ಶೇ.15ರಷ್ಟು ಮಾತ್ರ ಜನರಿಗೆ ತಲುಪುತ್ತಿತ್ತು. ಉಳಿದ ಹಣ ಎಲ್ಲಿಗೆ ಹೋಗುತ್ತಿತ್ತು?

ಗೌರವಾನ್ವಿತ ಸ್ಪೀಕರ್ ಸರ್‌,

ನಾವು 10 ಕೋಟಿ ನಕಲಿ ಹೆಸರುಗಳನ್ನು ತೆಗೆದುಹಾಕಿದ್ದೇವೆ. ಈಗ ಸಂಖ್ಯೆ ಏಕೆ ಕಡಿಮೆಯಾಗಿದೆ ಎಂದು ಜನರು ಕೇಳುತ್ತಾರೆ. ಮಗಳು ಹುಟ್ಟದಿದ್ದರೂ ನಿಮ್ಮ ಕಚೇರಿಯಿಂದ ವಿಧವಾ ಪಿಂಚಣಿ ಪಡೆಯುವ ವ್ಯವಸ್ಥೆಯನ್ನು ನಿಮ್ಮ ಆಡಳಿತದಲ್ಲಿ ರೂಪಿಸಿದ್ದಿರಿ. ಮತ್ತು ಈಗ ಇರುವವರಿಗೆ ತೊಂದರೆಯಾಗುಗತ್ತಿದೆ, ಇತಂಹ ವಿಷಯಗಳಿಂದಾಗಿ. ಅವರ ದೈನಂದಿನ ಆದಾಯ ನಿಂತು ಹೋಗಿದೆ.

ಗೌರವಾನ್ವಿತ ಸ್ಪೀಕರ್ ಸರ್‌,

ನಕಲಿ ಹೆಸರುಗಳನ್ನು ತೆಗೆದುಹಾಕುವ ಮೂಲಕ, ನಕಲಿ ಕೈಗೆ ಹೋಗದಂತೆ ತಡೆಯುವ ಮೂಲಕ ನಾವು ಸುಮಾರು 3 ಲಕ್ಷ ಕೋಟಿ ರೂಪಾಯಿಗಳನ್ನು ಉಳಿಸಿದ್ದೇವೆ. ದೇಶದ ತೆರಿಗೆದಾರರ ಪ್ರತಿ ಪೈಸೆಯನ್ನು ಉಳಿಸಲು ಮತ್ತು ಸರಿಯಾದ ಕೆಲಸದಲ್ಲಿ ಹೂಡಿಕೆ ಮಾಡಲು ನಾವು ನಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದೇವೆ.

ಗೌರವಾನ್ವಿತ ಸ್ಪೀಕರ್ ಸರ್‌,

ಎಲ್ಲಾ ರಾಜಕೀಯ ಪಕ್ಷಗಳು ಸಮಾಜದಲ್ಲಿರುವವರ ಬಗ್ಗೆ ಚಿಂತಿಸಬೇಕು ಮತ್ತು ಕಾಳಜಿ ವಹಿಸಬೇಕು. ಈ ಹಿಂದೆ ತರಗತಿಯಲ್ಲಿ ಯಾರಾದರೂ ಕದ್ದರೆ ಅಥವಾ ನಕಲು ಮಾಡಿದರೆ ಕನಿಷ್ಠ 10 ದಿನಗಳ ಕಾಲ ಯಾರಿಗೂ ಮುಖ ತೋರಿಸುತ್ತಿರಲಿಲ್ಲ, ಆದರೆ ಇದು ದೇಶದ ದೌರ್ಭಾಗ್ಯ. ಇಂದು ಭ್ರಷ್ಟಾಚಾರದ ಆರೋಪ ಹೊತ್ತವರು ಜೈಲು ವಾಸ ಅನುಭವಿಸಿ ಪೆರೋಲ್ ಮೇಲೆ ಬಂದವರು ಸಾರ್ವಜನಿಕ ಜೀವನದಲ್ಲಿ ತೇಜೋವಧೆ ಮಾಡುತ್ತಿದ್ದಾರೆ. ನೀವು ದೇಶವನ್ನು ಎಲ್ಲಿಗೆ  ಕೊಂಡೊಯ್ಯಲು ಬಯಸುತ್ತೀರಿ? ಶಿಕ್ಷೆಗೆ ಒಳಗಾದವರು, ಅವರ ವಿರುದ್ಧದ ಆರೋಪಗಳ ಬಗ್ಗೆ ನಿಮಗೆ ಸಂದೇಹವಿರಬಹುದು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ, ಆದರೆ ತಪ್ಪಿತಸ್ಥರೆಂದು ಸಾಬೀತಾದವರಿಗೆ, ಶಿಕ್ಷೆಯನ್ನು ಪೂರೈಸಿದ ಅಥವಾ ಪೂರೈಸುತ್ತಿರುವವರಿಗೆ, ನೀವು ಅವರನ್ನು ವೈಭವೀಕರಿಸುತ್ತೀರಿ. ಇದು ಯಾವ ಸಂಸ್ಕೃತಿ ಮತ್ತು ದೇಶದ ಮುಂದಿನ ಪೀಳಿಗೆಗೆ ನೀವು ಯಾವ ಸ್ಫೂರ್ತಿಯನ್ನು ನೀಡಲು ಬಯಸುತ್ತೀರಿ? ಯಾವ ರೀತಿಯ ಬಲವಂತವು ಇದನ್ನು ಮಾಡಲು ನಿಮ್ಮನ್ನು ಕರೆದೊಯ್ಯುತ್ತಿದೆ? ಆ ಜನರನ್ನು ವೈಭವೀಕರಿಸಲಾಗುತ್ತಿದೆ ಮತ್ತು ಮಹಾನ್  ವ್ಯಕ್ತಿಗಳೆಂದು ಬಿಂಬಿಸಲಾಗುತ್ತಿದೆ. ಎಲ್ಲಿ ಸಂವಿಧಾನದ ನಿಯಮ ಜಾರಿಯಲ್ಲಿದೆಯೋ, ಅಲ್ಲಿ ಪ್ರಜಾಪ್ರಭುತ್ವ ಇರುತ್ತದೋ, ಅಂತಹ ಕೆಲಸಗಳು ಹೆಚ್ಚು ಕಾಲ ನಡೆಯಲು ಸಾಧ್ಯವಿಲ್ಲ. ಗೌರವಾನ್ವಿತ ಸ್ಪೀಕರ್, ಸರ್. ಆ ಜನರು ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅಂತಹವರನ್ನು ವೈಭವೀಕರಿಸುತ್ತಿರುವವರು ತಮ್ಮ ಕೈಯಿಂದಲೇ ತಮ್ಮ ಅಂತ್ಯಕ್ಕೆ ಸಹಿ ಹಾಕುತ್ತಿದ್ದಾರೆ.

ಗೌರವಾನ್ವಿತ ಸ್ಪೀಕರ್ ಸರ್‌,

ತನಿಖೆ ಮಾಡುವುದು ತನಿಖಾ ಸಂಸ್ಥೆಗಳ ಕೆಲಸ.  ಅಂತಹ ಸಂಸ್ಥೆಗಳು ಸ್ವತಂತ್ರವಾಗಿವೆ ಮತ್ತು ಸಂವಿಧಾನವು ಅವುಗಳನ್ನು ಸ್ವತಂತ್ರವಾಗಿ ಇರಿಸಿದೆ. ತೀರ್ಪು ನೀಡುವ ಕೆಲಸ ನ್ಯಾಯಾಧೀಶರದ್ದಾಗಿದೆ ಮತ್ತು ಅವರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಮತ್ತು ಗೌರವಾನ್ವಿತ ಸ್ಪೀಕರ್ ಸರ್, ನಾನು ಮತ್ತೊಮ್ಮೆ ಸದನದಲ್ಲಿ ಪುನರುಚ್ಚರಿಸಲು ಬಯಸುತ್ತೇನೆ, ನನ್ನ ಮೇಲೆ ಎಷ್ಟೇ ದಬ್ಬಾಳಿಕೆಯನ್ನು ಮಾಡಿದರೂ ಭ್ರಷ್ಟಾಚಾರದ ವಿರುದ್ಧದ ಹೋರಾಟ ಮುಂದುವರಿಯುತ್ತದೆ. ದೇಶವನ್ನು ಲೂಟಿ ಮಾಡಿದವರು ಹಣವನ್ನು ಹಿಂತಿರುಗಿಸಬೇಕು. ಈ ಘನ ಸದನದಿಂದ  ರಾಷ್ಟ್ರಕ್ಕೆ ನಾನು ಭರವಸೆ ನೀಡುತ್ತೇನೆ. ಯಾರ ವಿರುದ್ಧ ಬೇಕಾದರೂ ಆರೋಪ ಮಾಡಿ, ಆದರೆ ದೇಶವನ್ನು ಲೂಟಿ ಮಾಡಲು ಬಿಡುವುದಿಲ್ಲ, ಲೂಟಿ ಮಾಡಿದವರು ತೆಗೆದುಕೊಂಡಿದ್ದನ್ನು ಹಿಂತಿರುಗಿಸಲೇಬೇಕು.

ಗೌರವಾನ್ವಿತ ಸ್ಪೀಕರ್ ಸರ್‌,

ದೇಶವು ಭದ್ರತೆ ಮತ್ತು ಶಾಂತಿಯ ಮಹತ್ವವನ್ನು ಅರಿತುಕೊಳ್ಳುತ್ತಿದೆ. ಕಳೆದ ದಶಕಕ್ಕೆ ಹೋಲಿಸಿದರೆ, ಇಂದು ರಾಷ್ಟ್ರವು ಭದ್ರತೆಯ ಕ್ಷೇತ್ರದಲ್ಲಿ ನಿಜವಾಗಿಯೂ ಸುಭದ್ರವಾಗಿದೆ. ಭಯೋತ್ಪಾದನೆ ಮತ್ತು ನಕ್ಸಲಿಸಂ ಅನ್ನು ಬಹುಮಟ್ಟಿಗೆ ನಿಯಂತ್ರಿಸಲಾಗಿದೆ. ವಾಸ್ತವವಾಗಿ, ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆಯ ಭಾರತದ ನೀತಿಯನ್ನು ಇದೀಗ ಇಡೀ ಜಗತ್ತು ಅನುಸರಿಸುವಂತೆ ಒತ್ತಡ ಹೇರಲಾಗುತ್ತಿದೆ. ಗಡಿಯಿಂದ ಸಮುದ್ರದವರೆಗೆ ಭಾರತದ ಸಶಸ್ತ್ರ ಪಡೆಗಳ ಪರಾಕ್ರಮ ಇಂದು ಸ್ಪಷ್ಟವಾಗಿದೆ. ನಮ್ಮ ಸೇನೆಯ ಶೌರ್ಯದ ಬಗ್ಗೆ ನಾವು ಹೆಮ್ಮೆ ಪಡಬೇಕು.

ಕೆಲವು ರಾಜಕಾರಣಿಗಳು ಯೋಧರ ನೈತಿಕತೆಯನ್ನು ಕುಗ್ಗಿಸಲು ಎಷ್ಟೇ ಪ್ರಯತ್ನಿಸಿದರೂ, ನನ್ನ ಸಶಸ್ತ್ರ ಪಡೆಗಳ ಮೇಲೆ ನನಗೆ ನಂಬಿಕೆ ಇದೆ. ಅವರ ಸಾಮರ್ಥ್ಯಗಳನ್ನು ನೋಡಿದ್ದೇನೆ. ಕೆಲವು ರಾಜಕಾರಣಿಗಳು ಸಶಸ್ತ್ರ ಪಡೆಗಳ ಬಗ್ಗೆ ಲಘುವಾಗಿ ಮಾತನಾಡಬಹುದು, ಆದರೆ ನನ್ನ ದೇಶದ ಸಶಸ್ತ್ರ ಪಡೆಗಳು ನಿರುತ್ಸಾಹಗೊಳಿಸುವುದಿಲ್ಲ ಎಂದು ನಾನು ನಂಬುತ್ತೇನೆ. ದೇಶವನ್ನು ವಿಭಜಿಸುವ ಕನಸು ಕಾಣುವವರು, ನಮ್ಮ ಸೈನಿಕರ ನೈತಿಕ ಸ್ಥೈರ್ಯವನ್ನು ಕುಸಿಯುವ ಉದ್ದೇಶದಿಂದ ಭಾಷೆಯನ್ನು ಬಳಸುತ್ತಾರೆ. ದೇಶವು ಅಂತಹ ಪ್ರಯತ್ನಗಳನ್ನು ಎಂದಿಗೂ ಒಪ್ಪುವುದಿಲ್ಲ. ದೇಶವನ್ನು ಹೋಳು ಮಾಡಲು ನೀವು ಯಾವ ತೃಪ್ತಿಯನ್ನು ಕಾಣುತ್ತೀರಿ? ನೀವು ಈಗಾಗಲೇ ರಾಷ್ಟ್ರವನ್ನು ಹಲವಾರು ತುಣುಕುಗಳಾಗಿ ಒಡೆದಿದ್ದೀರಿ, ಮತ್ತು ಇನ್ನೂ ನೀವು ಅದನ್ನು ಮುಂದುವರಿಸಲು ಬಯಸುತ್ತೀರಿ. ನೀವು ಎಷ್ಟು ದಿನ ಅದೇ ರೀತಿ ಮುರಿಯುತ್ತಲೇ ಇರುತ್ತೀರಿ?

ಗೌರವಾನ್ವಿತ ಸ್ಪೀಕರ್ ಸರ್‌,

ಸದನದಲ್ಲಿಯೇ ಕಾಶ್ಮೀರದ ಬಗ್ಗೆ ಚರ್ಚೆ ನಡೆಯುತ್ತಿದ್ದರೆ ಕಳವಳ, ಆರೋಪ-ಪ್ರತ್ಯಾರೋಪಗಳಾಗುತ್ತಿದ್ದವು. ಇಂದು ಜಮ್ಮು-ಕಾಶ್ಮೀರದಲ್ಲಿ ಹಿಂದೆಂದೂ ಕಂಡರಿಯದಂತಹ ಅಭಿವೃದ್ಧಿಯ ಮಾತುಗಳು ಕೇಳಿಬರುತ್ತಿದ್ದು, ಅದನ್ನು ಹೆಮ್ಮೆಯಿಂದ ಸಂಭ್ರಮಿಸಲಾಗುತ್ತಿದೆ. ಪ್ರವಾಸೋದ್ಯಮ ನಿರಂತರವಾಗಿ ಹೆಚ್ಚುತ್ತಿದೆ. ಅಲ್ಲಿ ಜಿ-20 ಶೃಂಗಸಭೆ ನಡೆದಾಗ ಇಡೀ ವಿಶ್ವವೇ ಅದನ್ನು ಹೊಗಳುತ್ತಿದೆ. 370ನೇ ವಿಧಿಯನ್ನು ಜೀವಂತವಾಗಿ ಇರಿಸಲಾಗಿತ್ತು, ಆ ಗೊಂದಲವನ್ನು ಸೃಷ್ಟಿಸಿತು. 370ನೇ ವಿಧಿಯ ರದ್ದತಿಯನ್ನು ಕಾಶ್ಮೀರದ ಜನರು ಸ್ವೀಕರಿಸಿದ ರೀತಿ ಅನನ್ಯ. ಆ ಸಮಸ್ಯೆಯನ್ನು ಸೃಷ್ಟಿಸಿದವರು ಯಾರು? ಆ ಸಮಸ್ಯೆಯನ್ನು ದೇಶಕ್ಕೆ ತಂದವರು ಯಾರು? ಭಾರತದ ಸಂವಿಧಾನದಲ್ಲಿ ಇಂತಹ ಬಿಕ್ಕಟ್ಟು ಸೃಷ್ಟಿಸಿದವರು ಯಾರು?

ಗೌರವಾನ್ವಿತ ಸ್ಪೀಕರ್ ಸರ್‌,

ನೆಹರೂ ಜೀ ಅವರ ಹೆಸರನ್ನು ಹೇಳಿದರೆ, ಅವರು ದುಃಖಿತರಾಗುತ್ತಾರೆ, ಆದರೆ ಕಾಶ್ಮೀರವು ಅನುಭವಿಸಬೇಕಾದ ಸಮಸ್ಯೆಗಳು, ಅದರ ಮೂಲವು ಅವರ ಚಿಂತನೆ ಮತ್ತು ಅದರ ಪರಿಣಾಮವನ್ನು ದೇಶವು ಭರಿಸಬೇಕಾಗಿತ್ತು. ನೆಹರೂ ಅವರ ತಪ್ಪುಗಳಿಗೆ ಜಮ್ಮು ಮತ್ತು ಕಾಶ್ಮೀರದ ಜನರು, ಈ ದೇಶದ ಜನರು ಬಹಳ ದೊಡ್ಡ ಬೆಲೆಯನ್ನು ತೆರಬೇಕಾಯಿತು.

ಗೌರವಾನ್ವಿತ ಸ್ಪೀಕರ್ ಸರ್‌,

ಅವರು ತಪ್ಪುಗಳನ್ನು ಮಾಡಿರಬಹುದು, ಆದರೆ ತಪ್ಪುಗಳನ್ನು ಸರಿಪಡಿಸುವ ನಮ್ಮ ಪ್ರಯತ್ನಗಳು ಕಷ್ಟಗಳನ್ನು ಸಹಿಸಿಕೊಂಡ ನಂತರವೂ ಮುಂದುವರಿಯುತ್ತದೆ. ನಾವು ಯಾವುದನ್ನೂ ನಿಲ್ಲಿಸಲು ಹೋಗುವುದಿಲ್ಲ. ನಾವು ದೇಶಕ್ಕಾಗಿ ದುಡಿಯಲು ಹೊರಟವರು. ನಮಗೆ, ರಾಷ್ಟ್ರವು ಮೊದಲು.

ಗೌರವಾನ್ವಿತ ಸ್ಪೀಕರ್ ಸರ್‌,

ಭಾರತಕ್ಕೆ ಮಹತ್ವದ ಅವಕಾಶ ಬಂದಿದೆ ಎಂದು ಎಲ್ಲಾ ರಾಜಕೀಯ ಪಕ್ಷಗಳ ನಾಯಕರಿಗೆ, ಎಲ್ಲಾ ಗೌರವಾನ್ವಿತ ಸದಸ್ಯರಿಗೆ ನಾನು ಮನವಿ ಮಾಡಲು ಬಯಸುತ್ತೇನೆ. ಜಾಗತಿಕ ಸನ್ನಿವೇಶದಲ್ಲಿ ಭಾರತಕ್ಕೆ ಒಂದು ಉತ್ತಮ ಅವಕಾಶ ಒದಗಿ ಬಂದಿದೆ, ಹೊಸ ಆತ್ಮಸ್ಥೈರ್ಯದೊಂದಿಗೆ ಮುನ್ನಡೆಯುವ ಅವಕಾಶ. ರಾಜಕೀಯಕ್ಕೆ ಅದರದ್ದೇ ಆದ ಸ್ಥಾನವಿದೆ, ಆರೋಪ-ಪ್ರತ್ಯಾರೋಪಗಳಿಗೆ ಸ್ಥಾನವಿದೆ, ಆದರೆ ದೇಶಕ್ಕಿಂತ ದೊಡ್ಡದು ಯಾವುದೂ ಇಲ್ಲ. ಆದ್ದರಿಂದ ನಾವೆಲ್ಲರೂ ಒಂದಾಗಿ, ಹೆಗಲಿಗೆ ಹೆಗಲು ಕೊಟ್ಟು, ರಾಷ್ಟ್ರದ ಅಭಿವೃದ್ಧಿಗೆ ಮುಂದಾಗೋಣ.

ರಾಜಕೀಯವು ತನ್ನದೇ ಆದ ಪಾತ್ರವನ್ನು ಹೊಂದಿದ್ದರೂ, ರಾಜಕೀಯದಲ್ಲಿದ್ದರೂ ರಾಷ್ಟ್ರ ನಿರ್ಮಾಣದಲ್ಲಿ ಪ್ರಗತಿಗೆ ಯಾವುದೇ ಅಡ್ಡಿಯಿಲ್ಲ. ಈ ಮಾರ್ಗವನ್ನು ಬಿಡಬೇಡಿ. ಭಾರತಮಾತೆಯ ಶ್ರೇಯೋಭಿವೃದ್ಧಿಗಾಗಿ ನಿಮ್ಮ ಬೆಂಬಲವನ್ನು ನಾನು ಕೋರುತ್ತಿದ್ದೇನೆ. ವಿಶ್ವದಲ್ಲಿ ಲಭ್ಯವಿರುವ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಲು ನಾನು ನಿಮ್ಮ ಬೆಂಬಲವನ್ನು ಕೋರುತ್ತಿದ್ದೇನೆ. 140 ಕೋಟಿ ಜನರ ಜೀವನವನ್ನು ಸಮೃದ್ಧಗೊಳಿಸಲು ಮತ್ತು ಸಂತೋಷದಿಂದಿರುವಂತೆ ಮಾಡಲು ನಾನು ನಿಮ್ಮ ಸಹಕಾರ ಬಯಸುತ್ತೇನೆ.

ಆದರೆ ನೀವು ನೇರವಾಗಿ ನನ್ನನ್ನು ಬೆಂಬಲಿಸಲು ಸಾಧ್ಯವಾಗದಿದ್ದರೆ ಮತ್ತು ನಿಮ್ಮ ಕೈಗಳನ್ನು ಕಲ್ಲುಗಳನ್ನು ಎಸೆಯಲು ಕಟ್ಟಿದರೆ, ಹಾಗೆಯೇ ಮಾಡಿರಿ. ನಾನು ನಿಮ್ಮ ಪ್ರತಿಯೊಂದು ಕಲ್ಲನ್ನು ‘ವೀಕಸಿತ ಭಾರತ’ಕ್ಕೆ ಭದ್ರ ಬುನಾದಿಗಾಗಿ ಬಳಸುತ್ತೇನೆ. ನಾವು ಮುಂದೆ ಸಾಗಿಸುತ್ತಿರುವ ‘ವಿಕಸಿತ ಭಾರತ’ದ ಕನಸುಗಳ ಅಡಿಪಾಯವನ್ನು ಬಲಪಡಿಸಲು ನಾನು ಎಲ್ಲ ಪ್ರಯತ್ನಗಳನ್ನು ಮಾಡುತ್ತೇನೆ ಮತ್ತು ನಾವು ದೇಶವನ್ನು ಸಮೃದ್ಧಿಯತ್ತ ಕೊಂಡೊಯ್ಯುತ್ತೇವೆ. ನಿಮಗೆ ಬೇಕಾದಷ್ಟು ಕಲ್ಲುಗಳನ್ನು ಎಸೆಯಿರಿ, ಭಾರತ,  ಸಮೃದ್ಧ ಭಾರತ ಮತ್ತು ‘ವಿಕಸಿತ ಭಾರತ’ದ ಕನಸುಗಳನ್ನು ಅಭಿವೃದ್ಧಿಪಡಿಸುವ ಕೆಲಸದಲ್ಲಿ ನಾನು ನಿಮ್ಮ ಪ್ರತಿಯೊಂದು ಕಲ್ಲನ್ನು ಬಳಸುತ್ತೇನೆ. ಅದನ್ನೂ ನಾನು ನಿಮಗೆ ಭರವಸೆ ನೀಡುತ್ತೇನೆ.

ಗೌರವಾನ್ವಿತ ಸ್ಪೀಕರ್ ಸರ್‌,

ನನ್ನ (ವಿರೋಧಿ) ಸ್ನೇಹಿತರ ಕಷ್ಟಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ಅವರು ಏನೇ ಹೇಳಿದರೂ ನಾನೇನೂ ಸಿಟ್ಟಾಗುವುದಿಲ್ಲ, ನಾನೂ ಬೇಸರ ಮಾಡಿಕೊಳ್ಳುವುದಿಲ್ಲ ಕೂಡ. ಏಕೆಂದರೆ ಅವರು ಮಾತನಾಡಲು ಅರ್ಹರು ಎಂದು ನನಗೆ ತಿಳಿದಿದೆ, ಆದರೆ ನಾವು ಕೆಲಸ ಮಾಡುವವರು. ಮತ್ತು ಕೆಲಸಗಾರರು ಮಾತ್ರ, ಮಾತನಾಡುವವರ ಮಾತನ್ನು ಕೇಳುವುದು ಸಹಜ. ಹಾಗಾಗಿ ಅವರು ಏನು ಬೇಕಾದರೂ ಹೇಳಲಿ, ಅವರಿಗೆ ಮಾತನಾಡುವ ಸ್ವಾಭಾವಿಕ ಹಕ್ಕಿದೆ ಮತ್ತು ನಾವು ಕಾರ್ಮಿಕರು ಕೇಳಬೇಕು. ನಾವು ಕೇಳುವುದನ್ನು ಮುಂದುವರಿಸುತ್ತೇವೆ ಮತ್ತು ದೇಶವನ್ನು ಮುನ್ನಡೆಸಲು ಶ್ರಮಿಸುತ್ತೇವೆ.

ಗೌರವಾನ್ವಿತ ಸ್ಪೀಕರ್ ಸರ್‌,

ಘನ ಸದನದಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಲು ನೀವು ನನಗೆ ಅವಕಾಶವನ್ನು ನೀಡಿದ್ದೀರಿ. ಗೌರವಾನ್ವಿತ ರಾಷ್ಟ್ರಪತಿಗಳ ಭಾಷಣವನ್ನು ಬೆಂಬಲಿಸುವ ವಂದನಾ ನಿರ್ಣಯಕ್ಕೆ ಕೃತಜ್ಞತೆ ಸಲ್ಲಿಸುವುದರೊಂದಿಗೆ ನಾನು ಈಗ ನನ್ನ ಭಾಷಣವನ್ನು ಮುಕ್ತಾಯಗೊಳಿಸುತ್ತೇನೆ.

ಘೋಷಣೆ: ಇದು ಪ್ರಧಾನಮಂತ್ರಿ ಅವರ ಭಾಷಣದ ಯಥಾವತ್ ಅನುವಾದವಲ್ಲ, ಅವರು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು.

 

***



(Release ID: 2003985) Visitor Counter : 118