ಗಣಿ ಸಚಿವಾಲಯ
azadi ka amrit mahotsav

ಸೂಕ್ಷ್ಮ ಖನಿಜ ಪರಿಶೋಧನಾ ಯೋಜನೆಗಳನ್ನು ಅಧಿಸೂಚಿತ ಖಾಸಗಿ ಪರಿಶೋಧನಾ ಸಂಸ್ಥೆಗಳಿಗೆ ನೇರವಾಗಿ ಮಂಜೂರು ಮಾಡಲಿರುವ ಗಣಿ ಸಚಿವಾಲಯ


ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಸಹಾಯಹಸ್ತ ನೀಡುವ ನಿರ್ಧಾರ; ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಹೊಸ ತಂತ್ರಜ್ಞಾನಗಳನ್ನು ಆಕರ್ಷಿಸಲು ಯೋಜನೆ

ಇದುವರೆಗೆ ಹದಿನಾರು ಖಾಸಗಿ ಪರಿಶೋಧನಾ ಸಂಸ್ಥೆಗಳಿಗೆ ಅಧಿಸೂಚನೆ ನೀಡಲಾಗಿದೆ

Posted On: 15 DEC 2023 1:11PM by PIB Bengaluru

ಭೂತಳದಲ್ಲಿ ಹುದುಗಿರುವ ಖನಿಜಗಳ ಪರಿಶೋಧನೆಗೆ ಉತ್ತೇಜನ ನೀಡುವ ಸಲುವಾಗಿ, ಗಣಿ ಸಚಿವಾಲಯವು ನಿರ್ಣಾಯಕ ಖನಿಜಗಳಿಗಾಗಿ ಅಧಿಸೂಚಿತ ಖಾಸಗಿ ಪರಿಶೋಧನಾ ಸಂಸ್ಥೆಗಳಿಗೆ ಪರಿಶೋಧನಾ ಯೋಜನೆಗಳನ್ನು ನೇರವಾಗಿ ಮಂಜೂರು ಮಾಡುವ ಹೊಸ ಯೋಜನೆಯನ್ನು ಹಮ್ಮಿಕೊಂಡಿದೆ. ಇದಲ್ಲದೆ, ಗಣಿ ಸಚಿವಾಲಯವು ಈ ಅಧಿಸೂಚಿತ ಖಾಸಗಿ ಪರಿಶೋಧನಾ ಸಂಸ್ಥೆಗಳಿಗೆ, ಅವರು ಅನ್ವೇಷಿಸಿದ ಖನಿಜ ನಿಕ್ಷೇಪಗಳನ್ನು ಹರಾಜಿನಲ್ಲಿ ಬಿಡ್ ಮಾಡಲು ಅನುಮತಿ ನೀಡಿದೆ. ಇದನ್ನು ಈ ಹಿಂದೆ ಅನುಮತಿಸಿರಲಿಲ್ಲ.

ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, 1957ನ್ನು 28/3/2021ರಿಂದ ಜಾರಿಗೆ ಬರುವಂತೆ ಎಂಎಂಡಿಆರ್ ತಿದ್ದುಪಡಿ ಕಾಯ್ದೆ, 2021ರ ಮೂಲಕ ತಿದ್ದುಪಡಿ ಮಾಡಲಾಯಿತು. ಇದು ಖಾಸಗಿ ಘಟಕಗಳು ಸೇರಿದಂತೆ ಸಂಸ್ಥೆಗಳಿಗೆ ನಿರೀಕ್ಷಿತ ಕಾರ್ಯಾಚರಣೆಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.

ಆಸಕ್ತ ಖಾಸಗಿ ಪರಿಶೋಧನಾ ಸಂಸ್ಥೆಗಳು ಗಣಿ ಸಚಿವಾಲಯದ ಯೋಜನೆಗೆ ಅನುಗುಣವಾಗಿ ಮಾನ್ಯತೆಯನ್ನು ಪಡೆದು ನಂತರ ಕಾಯ್ದೆಯ ಸೆಕ್ಷನ್ 4ರ ಉಪ-ವಿಭಾಗ (1) ರ ಎರಡನೇ ನಿಬಂಧನೆಯ ಅಡಿಯಲ್ಲಿ ತಮ್ಮ ಅಧಿಸೂಚನೆಗಾಗಿ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಮಾರ್ಚ್ 2022ರಿಂದ ಗಣಿ ಸಚಿವಾಲಯವು ಹದಿನಾರು ಖಾಸಗಿ ಪರಿಶೋಧನಾ ಸಂಸ್ಥೆಗಳಿಗೆ ರಾಷ್ಟ್ರೀಯ ಖನಿಜ ಪರಿಶೋಧನಾ ಟ್ರಸ್ಟ್ ನಿಂದ ಧನಸಹಾಯ ಪಡೆದ ರಾಜ್ಯ ಸರ್ಕಾರಗಳ ಮೂಲಕ ಪರಿಶೋಧನಾ ಯೋಜನೆಗಳನ್ನು ಕೈಗೊಳ್ಳಲು ಅಧಿಸೂಚನೆಯನ್ನು ಹೊರಡಿಸಿದೆ. ಅಂದಿನಿಂದ, ರಾಷ್ಟ್ರೀಯ ಖನಿಜ ಪರಿಶೋಧನಾ ಟ್ರಸ್ಟ್ ನಿಧಿಯಿಂದ ಐದು ಅಧಿಸೂಚಿತ ಖಾಸಗಿ ಪರಿಶೋಧನಾ ಸಂಸ್ಥೆಗಳಿಗೆ 15.88 ಕೋಟಿ ರೂ.ಗಳ ಕೇವಲ 17 ಯೋಜನೆಗಳನ್ನು ಮಾತ್ರ ಮಂಜೂರು ಮಾಡಲಾಗಿದ್ದು, ಈವರೆಗೆ ಮಂಜೂರಾದ 17 ಯೋಜನೆಗಳಲ್ಲಿ 11 ಯೋಜನೆಗಳು ಮಾತ್ರ ನಿರ್ಣಾಯಕ ಖನಿಜಗಳಾಗಿವೆ.

ಇತ್ತೀಚೆಗೆ, 2023ರ ಆಗಸ್ಟ್ 17ರಂದು ಎಂಎಂಡಿಆರ್ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ, ಗ್ರಾಫೈಟ್, ನಿಕ್ಕಲ್, ಪ್ಲಾಟಿನಂ ಗುಂಪಿನ ಅಂಶಗಳನ್ನೊಳಗೊಂಡ ಖನಿಜಗಳು, ಅಪರೂಪದ ಭೂಮಿಯ ಅಂಶಗಳ ಖನಿಜಗಳು, ಪೊಟ್ಯಾಷ್ ಮುಂತಾದ 24 ಖನಿಜಗಳನ್ನು ಗಣಿ ಸಚಿವಾಲಯವು ನಿರ್ಣಾಯಕ ಮತ್ತು ಕಾರ್ಯತಂತ್ರದ ಖನಿಜಗಳಾಗಿ ಅಧಿಸೂಚಿಸಿದೆ. ಈ ತಿದ್ದುಪಡಿಯು ಈ ಖನಿಜಗಳ ರಿಯಾಯಿತಿಯನ್ನು ಕೇಂದ್ರ ಸರ್ಕಾರಕ್ಕೆ ನೀಡುವ ಅಧಿಕಾರವನ್ನು ನೀಡುತ್ತದೆ, ಇದರಿಂದಾಗಿ ದೇಶದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಈ ಖನಿಜಗಳ ಹರಾಜಿಗೆ ಸರ್ಕಾರ ಆದ್ಯತೆ ನೀಡಲಿದೆ. ಈ ನಿರ್ಣಾಯಕ ಖನಿಜಗಳು ನಮ್ಮ ಆರ್ಥಿಕತೆಯ ಬೆಳವಣಿಗೆಗೆ ಅನಿವಾರ್ಯವಾಗಿರುವುದರಿಂದ, ಈ ಖನಿಜಗಳಿಗೆ ರಿಯಾಯಿತಿಯನ್ನು ನೀಡಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುವುದರಿಂದ ಇದು ಹರಾಜಿನ ವೇಗವನ್ನು ಹೆಚ್ಚಿಸಿ, ಈ ಖನಿಜಗಳ ಆರಂಭಿಕ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

2023ರ ತಿದ್ದುಪಡಿಗಳಿಗೆ ಅನುಗುಣವಾಗಿ, ಈ ಖನಿಜಗಳಿಗೆ ನಮ್ಮ ದೇಶದಲ್ಲಿ ಪರಿಶೋಧನಾ ವೇಗವನ್ನು ಹೆಚ್ಚಿಸಲು, ಗಣಿ ಸಚಿವಾಲಯವು ಪರಿವರ್ತಕ ಯೋಜನೆಯನ್ನು ಸೂಚಿಸಿದೆ. ಇದರಲ್ಲಿ ಅಧಿಸೂಚಿತ ಖಾಸಗಿ ಪರಿಶೋಧನಾ ಸಂಸ್ಥೆಗಳು ಮೊದಲ ಅನುಸೂಚಿಯ ಭಾಗ ಡಿ ಮತ್ತು ಎಂಎಂಡಿಆರ್ ಕಾಯ್ದೆ, 1957ರ ಏಳನೇ ಅನುಸೂಚಿಯಲ್ಲಿ ಉಲ್ಲೇಖಿಸಲಾದ ಖನಿಜಗಳ ಪರಿಶೋಧನಾ ಯೋಜನೆಗಳನ್ನು ಅಧಿಸೂಚಿತ ಖಾಸಗಿ ಪರಿಶೋಧನಾ ಸಂಸ್ಥೆಗಳಿಂದ ನೇರವಾಗಿ ಮಂಜೂರು ಮಾಡಲಾಗುವುದು. ಇದಲ್ಲದೆ, ಈ ಏಜೆನ್ಸಿಗಳಿಗೆ ಅವರು ಅನ್ವೇಷಿಸಿದ ಖನಿಜ ನಿಕ್ಷೇಪಗಳ ಹರಾಜಿನಲ್ಲಿ ಬಿಡ್ ಮಾಡಲು ಅವಕಾಶ ನೀಡಲಾಗುವುದು, ಈ ರೀತಿಯ ಬಿಡ್ಡಿಂಗ್ ಅನ್ನು ಈ ಮೊದಲು ಅನುಮತಿಸಿರಲಿಲ್ಲ.

ಅಧಿಸೂಚಿತ ಖಾಸಗಿ ಪರಿಶೋಧನಾ ಸಂಸ್ಥೆಗಳಿಗೆ ಗಣಿ ಸಚಿವಾಲಯದಲ್ಲಿ ಯೋಜನೆಗಳನ್ನು ನೇರವಾಗಿ ಸಲ್ಲಿಸಲು ಅವಕಾಶ ನೀಡುವ ನಿರ್ಧಾರವು ಯೋಜನೆಗಳ ಮಂಜೂರಾತಿಯಲ್ಲಿನ ವಿಳಂಬವನ್ನು ಕಡಿಮೆ ಮಾಡಲು ಸಹಾಯ ಮಾಡಿ, ಯೋಜನೆಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಈ ಪರಿಶೋಧನಾ ಸಂಸ್ಥೆಗಳಿಗೆ ಅವರು ಅನ್ವೇಷಿಸಿದ ಖನಿಜ ನಿಕ್ಷೇಪಗಳ ಹರಾಜಿನಲ್ಲಿ ಅವಕಾಶ ನೀಡುವ ನಿರ್ಧಾರವು ಪರಿಶೋಧನಾ ಕ್ಷೇತ್ರದಲ್ಲಿ ನಮ್ಮ ದೇಶದ ಗಣಿಗಾರಿಕೆಯಲ್ಲಿ ಭಾಗವಹಿಸಲು ದೊಡ್ಡ ಕಂಪನಿಗಳನ್ನು ಆಕರ್ಷಿಸುತ್ತದೆ. ಈ ನಿಬಂಧನೆಯು ವಿಶ್ವದಾದ್ಯಂತದ ಕಿರಿಯ ಗಣಿಗಾರಿಕಾ ಕಂಪನಿಗಳನ್ನು ಭಾರತಕ್ಕೆ ಆಕರ್ಷಿಸಿ ರಾಷ್ಟ್ರೀಯ ಖನಿಜ ಪರಿಶೋಧನಾ ಟ್ರಸ್ಟ್ ಧನಸಹಾಯದೊಂದಿಗೆ ಪರಿಶೋಧನಾ ಯೋಜನೆಗಳನ್ನು ಕೈಗೊಳ್ಳಲು ಪ್ರೋತ್ಸಾಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಒಟ್ಟಾರೆಯಾಗಿ, ಈ ಹೊಸ ಯೋಜನೆಯು ಅಂತರರಾಷ್ಟ್ರೀಯ ಸ್ಥರದಲ್ಲಿ ಪರಿಶೋಧನಾ ಕ್ಷೇತ್ರದಲ್ಲಿ ಅನೇಕ ಕಂಪನಿಗಳನ್ನು ಭಾರತಕ್ಕೆ ಆಕರ್ಷಿಸುವ ನಿರೀಕ್ಷೆ ಇದ್ದು, ಪರಿಶೋಧನಾ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳ ಅಳವಡಿಕೆಯಲ್ಲಿ ಸಹಾಯ ಮಾಡುತ್ತದೆ.

ಈ ಯೋಜನೆಯು ಭಾರತದ ಪ್ರಧಾನ ಮಂತ್ರಿಯವರ "ಆತ್ಮನಿರ್ಭರ ಭಾರತದ" ದೃಷ್ಟಿಕೋನವನ್ನು ಸಾಕಾರಗೊಳಿಸಲು ಪ್ರಮುಖ ಖನಿಜಗಳ ಪರಿಶೋಧನೆಯನ್ನು ಉತ್ತೇಜಿಸುವಲ್ಲಿ ದೊಡ್ಡ ಮಟ್ಟದ ಮುನ್ನಡೆಯನ್ನು ಸೂಚಿಸುತ್ತದೆ

****


(Release ID: 1986693)