ಉಪರಾಷ್ಟ್ರಪತಿಗಳ ಕಾರ್ಯಾಲಯ

ಉಪ ರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ದಸರಾದ ಮುನ್ನಾದಿನದಂದು ಜನತೆಗೆ ಶುಭಾಶಯ ಕೋರಿದ್ದಾರೆ.

Posted On: 23 OCT 2023 3:27PM by PIB Bengaluru

ಉಪರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನಕರ್ ಅವರು ದಸರಾ ಮುನ್ನಾದಿನದಂದು ಜನತೆಗೆ ಶುಭಾಶಯ ಕೋರಿದ್ದಾರೆ.

ಭಾರತದಾದ್ಯಂತ ಅತ್ಯಂತ ಉತ್ಸಾಹದಿಂದ ಆಚರಿಸಲಾಗುವ ಹಬ್ಬವಾದ ದಸರಾದ ಈ ಶುಭ ಸಂದರ್ಭದಲ್ಲಿ ನನ್ನ ಎಲ್ಲಾ ನಾಗರಿಕರಿಗೆ ನನ್ನ ಪ್ರೀತಿಯ ಶುಭಾಶಯಗಳನ್ನು ತಿಳಿಸುತ್ತೇನೆ.

ದಸರಾ ಹಬ್ಬವು ಕೆಡುಕಿನ ಮೇಲೆ ಒಳಿತಿನ ವಿಜಯವನ್ನು ಸಂಕೇತಿಸುತ್ತದೆ ಮತ್ತು ಕೆಟ್ಟದ್ದರ ಮೇಲೆ ಸದ್ಗುಣದ ವಿಜಯವನ್ನು ಸಂಕೇತಿಸುತ್ತದೆ. ಇದು ಸದಾಚಾರದಲ್ಲಿ ನಮ್ಮ ನಂಬಿಕೆಯನ್ನು ಪುನರುಚ್ಚರಿಸಲು ಮತ್ತು ಸತ್ಯ, ನ್ಯಾಯ, ಸಹಾನುಭೂತಿ ಮತ್ತು ಧೈರ್ಯದ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಮತ್ತು ಪಾಲಿಸಲು ಇದು ಸುಸಂದರ್ಭವಾಗಿದೆ.

ಈ ಹಬ್ಬವು ನಮಗೆಲ್ಲರಿಗೂ ಶಾಂತಿ, ಸಮೃದ್ಧಿ ಮತ್ತು ಸೌಹಾರ್ದತೆಯನ್ನು ತರಲಿ ಎಂದು ಹಾರೈಸುತ್ತೇ‌ನೆ.

****



(Release ID: 1970129) Visitor Counter : 71