ಪ್ರಧಾನ ಮಂತ್ರಿಯವರ ಕಛೇರಿ

ಸರ್ ಎಂ ವಿಶ್ವೇಶ್ವರಯ್ಯ ಅವರಿಗೆ ಪ್ರಧಾನಿ ನಮನ


ಎಂಜಿನಿಯರ್ ಗಳ ದಿನದ ಅಂಗವಾಗಿ ಎಂಜಿನಿಯರ್‌ಗಳಿಗೆ ಶುಭಾಶಯಗಳು

Posted On: 15 SEP 2023 9:56AM by PIB Bengaluru

ಪ್ರಧಾನ ನರೇಂದ್ರ ಮೋದಿ ಅವರು ಎಂಜಿನಿಯರ್ ಗಳ ದಿನಾಚರಣೆಯ ಸಂದರ್ಭದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರಿಗೆ ನಮನ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ದೇಶದ ಎಲ್ಲಾ ಶ್ರಮಶೀಲ ಎಂಜಿನಿಯರ್‌ಗಳಿಗೆ ಸಹ ಶುಭಾಶಯಗಳನ್ನು ತಿಳಿಸಿದ್ದಾರೆ. 

ಸರ್ ಎಂ ವಿಶ್ವೇಶ್ವರಯ್ಯ ಅವರು ಹೊಸದನ್ನು ಸಂಶೋಧನೆ ಮಾಡುವವರಿಗೆ ಮತ್ತು ಸೇವೆ ಸಲ್ಲಿಸಲು ತಲೆತಲಾಂತರದವರೆಗೆ ಜನರಿಗೆ ಸ್ಫೂರ್ತಿ ನೀಡುತ್ತಾರೆ ಎಂದಿರುವ ಪ್ರಧಾನ ಮಂತ್ರಿಗಳು, ಈ ವರ್ಷದ ಆರಂಭದಲ್ಲಿ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸರ್ ಎಂ ವಿಶ್ವೇಶ್ವರಯ್ಯನವರ ಸ್ಮಾರಕಕ್ಕೆ ಭೇಟಿ ನೀಡಿದ್ದನ್ನು ಸ್ಮರಿಸಿಕೊಂಡು ಅದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅವರು, ಎಂಜಿನಿಯರ್ ಗಳ ದಿನದಂದು ನಾವು ದೂರದೃಷ್ಟಿಯ ಎಂಜಿನಿಯರ್ ಮತ್ತು ಆಡಳಿತಗಾರ ಸರ್ ಎಂ ವಿಶ್ವೇಶ್ವರಯ್ಯ ಅವರಿಗೆ ಗೌರವ ಸಲ್ಲಿಸುತ್ತೇವೆ. ಅವರು ಹೊಸತನವನ್ನು ಆವಿಷ್ಕರಿಸಲು ಮತ್ತು ದೇಶ ಸೇವೆ ಮಾಡಲು ಪೀಳಿಗೆಗೆ ಸ್ಫೂರ್ತಿ ನೀಡುತ್ತಾರೆ. ಈ ವರ್ಷದ ಆರಂಭದಲ್ಲಿ ನನ್ನ ಭೇಟಿಯ ಸಂದರ್ಭದಲ್ಲಿ ನಾನು ಅವರಿಗೆ ಗೌರವ ಸಲ್ಲಿಸಿದ ಚಿಕ್ಕಬಳ್ಳಾಪುರದ ಫೋಟೋಗಳು ಇಲ್ಲಿವೆ.

ಎಲ್ಲಾ ಶ್ರಮಶೀಲ ಎಂಜಿನಿಯರ್‌ಗಳಿಗೆ ಎಂಜಿನಿಯರ್ ಗಳ ಶುಭಾಶಯಗಳು! ಅವರ ನವೀನ ಮನಸ್ಸು ಮತ್ತು ದಣಿವರಿಯದ ಸಮರ್ಪಣೆ ನಮ್ಮ ರಾಷ್ಟ್ರದ ಪ್ರಗತಿಯ ಬೆನ್ನೆಲುಬಾಗಿದೆ. ಮೂಲಸೌಕರ್ಯ ಅದ್ಭುತಗಳಿಂದ ಹಿಡಿದು ತಂತ್ರಜ್ಞಾನದ ಪ್ರಗತಿಗಳವರೆಗೆ, ಅವರ ಕೊಡುಗೆಗಳು ನಮ್ಮ ಜೀವನದ ಪ್ರತಿಯೊಂದು ಅಂಶವನ್ನು ಸ್ಪರ್ಶಿಸುತ್ತವೆ ಎಂದು ಬರೆದುಕೊಂಡಿದ್ದಾರೆ.

On #EngineersDay we pay homage to Sir M Visvesvaraya, a visionary engineer and statesman. He continues to inspire generations to innovate and serve the nation. Here are glimpses from Chikkaballapura, where I paid homage to him during my visit earlier this year. pic.twitter.com/LP4Kn51TQo

— Narendra Modi (@narendramodi) September 15, 2023

Greetings to all hardworking engineers on #EngineersDay! Their innovative minds and tireless dedication have been the backbone of our nation's progress. From infrastructural marvels to tech breakthroughs, their contributions touch every aspect of our lives. pic.twitter.com/lcBeL1GmZQ

— Narendra Modi (@narendramodi) September 15, 2023


(Release ID: 1957614) Visitor Counter : 136