ರಾಷ್ಟ್ರಪತಿಗಳ ಕಾರ್ಯಾಲಯ

ರೈತರ ಹಕ್ಕುಗಳ ಕುರಿತ ಮೊದಲ ಜಾಗತಿಕ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ರಾಷ್ಟ್ರಪತಿ


ಕೃಷಿಕರು ಪ್ರಪಂಚದ ಅತಿ ದೊಡ್ಡ ಸಂರಕ್ಷಕರು: ರಾಷ್ಟ್ರಪತಿ ದ್ರೌಪದಿ ಮುರ್ಮು

ರೈತರಿಗೆ ಅಸಾಧಾರಣ ಶಕ್ತಿ ಮತ್ತು ಜವಾಬ್ದಾರಿಯನ್ನು ನೀಡಲಾಗಿದೆ: ದ್ರೌಪದಿ ಮುರ್ಮು

Posted On: 12 SEP 2023 2:44PM by PIB Bengaluru

ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಸೆಪ್ಟೆಂಬರ್ 12, 2023) ನವದೆಹಲಿಯಲ್ಲಿ ರೈತರ ಹಕ್ಕುಗಳ ಕುರಿತಾದ ಮೊದಲ ಜಾಗತಿಕ ವಿಚಾರ ಸಂಕಿರಣವನ್ನು ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ವಿಶ್ವದ ರೈತ ಬಂಧುಗಳು ಅಗ್ರಗಣ್ಯ ಸಂರಕ್ಷಕರು ಮತ್ತು ಳೆ ವೈವಿಧ್ಯತೆಯ ನಿಜವಾದ ಕಾವಲುಗಾರರು, ರೈತರಿಗೆ ಅಸಾಧಾರಣ ಶಕ್ತಿ ಮತ್ತು ಜವಾಬ್ದಾರಿಯನ್ನು ನೀಡಲಾಗಿದೆ. ಅನೇಕ ಪ್ರಭೇದಗಳ ಸಸ್ಯಗಳು ಮತ್ತು ಪ್ರಭೇದಗಳನ್ನು ರಕ್ಷಿಸಲು ಮತ್ತು ಪುನರುಜ್ಜೀವನಗೊಳಿಸುವ ರೈತರ ಪ್ರಯತ್ನವನ್ನು ನಾವೆಲ್ಲರೂ ಶ್ಲಾಘಿಸಬೇಕು ಎಂದು ಹೇಳಿದರು.

ಈ ವಿಚಾರ ಸಂಕಿರಣವನ್ನು ರೋಮ್ನ ಆಹಾರ ಮತ್ತು ಕೃಷಿ ಸಂಸ್ಥೆಯ (ಎಫ್ಎಒ) ಆಹಾರ ಮತ್ತು ಕೃಷಿಗಾಗಿ ಸಸ್ಯ ತಳಿ ಸಂಪನ್ಮೂಲಗಳ (ಅಂತಾರಾಷ್ಟ್ರೀಯ ಒಪ್ಪಂದ) ಕುರಿತಾದ ಅಂತಾರಾಷ್ಟ್ರೀಯ ಒಪ್ಪಂದದ ಸಚಿವಾಲಯ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು, ಸಸ್ಯ ಪ್ರಭೇದಗಳು ಮತ್ತು ರೈತರ ಹಕ್ಕುಗಳ (PPVFR) ಪ್ರಾಧಿಕಾರ, ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR), ICAR-ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (IARI), ಮತ್ತು ICAR-ನ್ಯಾಷನಲ್ ಬ್ಯೂರೋ ಆಫ್ ಪ್ಲಾಂಟ್ ಜೆನೆಟಿಕ್ ರಿಸೋರ್ಸಸ್ (NBPGR) ಸಹಯೋಗದೊಂದಿಗೆ ಆಯೋಜಿಸಲಾಗಿದೆ. 

ಭಾರತವು ವಿಶ್ವದ ಭೂಪ್ರದೇಶದ 2.4 ಪ್ರತಿಶತವನ್ನು ಹೊಂದಿರುವ ಬೃಹತ್ ವೈವಿಧ್ಯಮಯ ದೇಶವಾಗಿದೆ. ದಾಖಲಾದ ಎಲ್ಲಾ ಜಾತಿಯ ಸಸ್ಯಗಳು ಮತ್ತು ಪ್ರಾಣಿಗಳಲ್ಲಿ 7-8 ಪ್ರತಿಶತವನ್ನು ಹೊಂದಿದೆ. ಜೀವವೈವಿಧ್ಯದ ವಿಷಯದಲ್ಲಿ ಭಾರತವು ವ್ಯಾಪಕ ಶ್ರೇಣಿಯ ಸಸ್ಯಗಳು ಮತ್ತು ಜಾತಿಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ಭಾರತದ ಈ ಶ್ರೀಮಂತ ಕೃಷಿ-ಜೀವವೈವಿಧ್ಯವು ಜಾಗತಿಕ ಸಮುದಾಯಕ್ಕೆ ಕೊಡುಗೆಯಾಗಿದೆ ಎಂದು ಅವರು ಹೇಳಿದರು.

ನಮ್ಮ ರೈತರು ಶ್ರಮವಹಿಸಿ ಉದ್ಯಮಶೀಲತೆಯಿಂದ ಸ್ಥಳೀಯ ತಳಿಯ ಸಸ್ಯಗಳನ್ನು ಸಂರಕ್ಷಿಸಿದ್ದಾರೆ, ಸಾಕಣೆ ಮಾಡಿದ ಕಾಡು ಸಸ್ಯಗಳು ಮತ್ತು ಸಾಂಪ್ರದಾಯಿಕ ತಳಿಗಳನ್ನು ಪೋಷಿಸಿದ್ದಾರೆ, ಇದು ಬೆಳೆ ತಳಿ ಕಾರ್ಯಕ್ರಮಗಳಿಗೆ ವಿಶೇಷ ಒತ್ತು ನೀಡಿದೆ ಮತ್ತು ಇದು ಮನುಷ್ಯರಿಗೆ ಮತ್ತು ಪ್ರಾಣಿಗಳಿಗೆ ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ಖಾತ್ರಿಪಡಿಸಿದೆ ಎಂದು ಅವರು ಹೇಳಿದರು.

1950-51 ರಿಂದ ಕೃಷಿ ಸಂಶೋಧನೆ ಮತ್ತು ತಂತ್ರಜ್ಞಾನದ ಅಭಿವೃದ್ಧಿಯು ಅನೇಕ ಬಾರಿ ಆಹಾರ ಧಾನ್ಯಗಳು, ತೋಟಗಾರಿಕೆ, ಮೀನುಗಾರಿಕೆ, ಹಾಲು ಮತ್ತು ಮೊಟ್ಟೆಗಳ ಉತ್ಪಾದನೆಯನ್ನು ಹೆಚ್ಚಿಸಲು ಭಾರತವನ್ನು ಸಕ್ರಿಯಗೊಳಿಸಿದೆ. ಹೀಗಾಗಿ ರಾಷ್ಟ್ರೀಯ ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯ ಮೇಲೆ ಪರಿಣಾಮ ಬೀರಿತು. ಕೃಷಿ-ಜೀವವೈವಿಧ್ಯ ಸಂರಕ್ಷಕರು ಮತ್ತು ಶ್ರಮಶೀಲ ರೈತರು, ವಿಜ್ಞಾನಿಗಳು ಮತ್ತು ನೀತಿ ನಿರೂಪಕರ ಪ್ರಯತ್ನಗಳು ಸರ್ಕಾರದ ಬೆಂಬಲದೊಂದಿಗೆ ದೇಶದ ಬಹು ಕೃಷಿ ಕ್ರಾಂತಿಗಳಿಗೆ ಪೂರಕವಾಗಿ ಪ್ರಮುಖ ಪಾತ್ರ ವಹಿಸಿವೆ. ತಂತ್ರಜ್ಞಾನ ಮತ್ತು ವಿಜ್ಞಾನವು ಪರಂಪರೆಯ ಜ್ಞಾನದ ಪರಿಣಾಮಕಾರಿ ರಕ್ಷಕ ಮತ್ತು ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ವಿಶ್ವಾಸ ವ್ಯಕ್ತಪಡಿಸಿದರು.

ರಾಷ್ಟ್ರಪತಿಗಳ ಪೂರ್ಣ ಭಾಷಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

 

****



(Release ID: 1956621) Visitor Counter : 148