ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಮಿಜೋರಾಂನಲ್ಲಿ ಸೇತುವೆ ಕುಸಿತದಿಂದ ಉಂಟಾದ ಜೀವಹಾನಿಗೆ ಉಪರಾಷ್ಟ್ರಪತಿ ಸಂತಾಪ

Posted On: 23 AUG 2023 3:12PM by PIB Bengaluru

ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನ್ ಕರ್ ಅವರು ಮಿಜೋರಾಂನಲ್ಲಿ ಸೇತುವೆ ಕುಸಿತದಿಂದ ಉಂಟಾದ ಜೀವಹಾನಿಗೆ ದುಃಖ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಎಕ್ಸ್ ನಲ್ಲಿ ಸಂತಾಪ ಹಂಚಿಕೊಂಡಿರುವ, ಉಪರಾಷ್ಟ್ರಪತಿ ಅವರು;

"ಮಿಜೋರಾಂನಲ್ಲಿ ಸೇತುವೆ ಕುಸಿತದಿಂದಾಗಿ ಪ್ರಾಣಹಾನಿ ತೀವ್ರ ದುಃಖ ತಂದಿದೆ. ಸಂತ್ರಸ್ತರು, ಗಾಯಗೊಂಡವರು ಮತ್ತು ಅವರ ಕುಟುಂಬಗಳಿಗೆ ನನ್ನ ಸಂತಾಪಗಳನ್ನು ಸೂಚಿಸುತ್ತೇನೆ. ಹಾಗೆಯೇ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ಜನರ ಸುರಕ್ಷತೆಗಾಗಿ ನಾನು ಪ್ರಾರ್ಥಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.

*****


(Release ID: 1951433)