ಉಪರಾಷ್ಟ್ರಪತಿಗಳ ಕಾರ್ಯಾಲಯ
ಹುತಾತ್ಮರ ದಿನದ ಅಂಗವಾಗಿ ಸರ್ದಾರ್ ಭಗತ್ ಸಿಂಗ್ , ಸುಖ್ ದೇವ್ ಮತ್ತು ರಾಜ್ ಗುರು ಅವರಿಗೆ ನಮನ ಸಲ್ಲಿಸಿದ ಉಪರಾಷ್ಟ್ರಪತಿ
ಅವರ ಪರಂಪರೆಯು ನಮ್ಮೆಲ್ಲರಿಗೂ ಸದಾ ಸ್ಪೂರ್ತಿದಾಯಕ ಮತ್ತು ಉತ್ತೇಜನಕಾರಿಯಾಗಿದೆ’’- ಉಪರಾಷ್ಟ್ರಪತಿ
Posted On:
23 MAR 2023 3:25PM by PIB Bengaluru
ಗೌರವಾನ್ವಿತ ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸಭಾಪತಿ, ಶ್ರೀ ಜಗದೀಪ್ ಧನಕರ್ ಅವರು ಇಂದು ರಾಜ್ಯಸಭೆಯಲ್ಲಿ ತಮ್ಮ ಭಾಷಣದ ವೇಳೆ ಹುತಾತ್ಮರ ದಿನದ ಅಂಗವಾಗಿ ಸರ್ದಾರ್ ಭಗತ್ ಸಿಂಗ್ , ಸುಖ್ ದೇವ್ ಮತ್ತು ರಾಜ್ ಗುರು ಅವರಿಗೆ ನಮನ ಸಲ್ಲಿಸಿದರು.
ಅವರನ್ನು “ನಮ್ಮ ಸ್ವಾತಂತ್ರ್ಯಹೋರಾಟದ ಪೌರಾಣಿಕ ವೀರರು’’ ಎಂದು ಬಣ್ಣಿಸಿದ ಶ್ರೀ ಧನಕರ್ ಅವರು, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಹುತಾತ್ಮರಾಗಿದ್ದು ಒಂದು ಮಹತ್ವದ ಮೈಲಿಗಲ್ಲು ಎಂದರು. ರಾಷ್ಟ್ರಕ್ಕಾಗಿ ಅವರು ಮಾಡಿದ ಪರಮೋಚ್ಛ ತ್ಯಾಗ ಸ್ವತಂತ್ರ ಭಾರತದಲ್ಲಿ ನಾಗರಿಕರು ತಮ್ಮ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪಾಲಿಸಲು ದಾರಿಮಾಡಿಕೊಟ್ಟಿತು ಎಂದು ಅವರು ಹೇಳಿದರು.
ಈ ಹುತಾತ್ಮರು ತಮ್ಮ ಬಲಿದಾನ ನೀಡಿದ ಮೌಲ್ಯಗಳನ್ನು ಎತ್ತಿಹಿಡಿಯುವಂತೆ ಶ್ರೀ ಧನಕರ್ ಅವರು ಎಲ್ಲ ದೇಶವಾಸಿಗಳಿಗೆ ಕರೆ ನೀಡಿದರು. ಹುತಾತ್ಮರ ಗೌರವಾರ್ಥ ರಾಜ್ಯಸಭೆಯ ಎಲ್ಲ ಸದಸ್ಯರು ಎದ್ದು ನಿಲ್ಲಬೇಕು ಮತ್ತು ಒಂದು ಮೌನ ಆಚರಿಸಬೇಕು ಎಂದು ಅವರು ಮನವಿ ಮಾಡಿದರು.
ಉಪರಾಷ್ಟ್ರಪತಿ ಅವರು ನೀಡಿದ ಹೇಳಿಕೆ ಹೀಗಿದೆ:
“ಗೌರವಾನ್ವಿತ ಸದಸ್ಯರೇ, ಇಂದು ಭಾರತದ ಮೂವರು ಶ್ರೇಷ್ಠಪುತ್ರರಾದ ಸರ್ದಾರ್ ಭಗತ್ ಸಿಗ್, ರಾಜ್ ಗುರು ಮತ್ತು ಸುಖದೇವ್ ಅವರು ಹುತಾತ್ಮರಾದ 92ನೇ ವಾರ್ಷಿಕೋತ್ಸವ. 1931ರ ಇದೇ ದಿನ ನಮ್ಮ ಭಾರತದ ಸ್ವಾತಂತ್ರ್ಯಕ್ಕಾಗಿ ಈ ದಿಟ್ಟ ನಾಯಕರು ತಮ್ಮ ಪ್ರಾಣಗಳನ್ನೇ ಅರ್ಪಿಸಿದ್ದಾರೆ.
ಚಿಕ್ಕವಯಸ್ಸಿನಲ್ಲೇ ಅವರ ಅತ್ಯುನ್ನತ ತ್ಯಾಗ ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಭಾಷ್ಪಾಂಜಲಿಯ ಕ್ಷಣವಾಗಿದೆ. ಅವರು ಹುತಾತ್ಮರಾಗುವ ಮಾರ್ಗವನ್ನು ಆಯ್ದುಕೊಂಡರು, ಇದರಿಂದ ಪ್ರತಿಯೊಬ್ಬ ಭಾರತೀಯನು ಸ್ವಾತಂತ್ರ್ಯ ಮತ್ತು ಘನತೆಯ ಜೀವನವನ್ನು ನಡೆಸಬಹುದು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಆನಂದಿಸಬಹುದು. ಅವರ ಪರಂಪರೆ ನಮ್ಮಲ್ಲರಿಗೂ ಸದಾ ಸ್ಪೂರ್ತಿದಾಯಕ ಮತ್ತು ಉತ್ತೇಜನಕಾರಿಯಾಗಿದೆ.
ಅವರು ರಾಷ್ಟ್ರೀಯತೆ ಮತ್ತು ಸ್ವಾತಂತ್ರ್ಯದ ಅತ್ಯುನ್ನತ ಬದ್ಧತೆಗೆ ಉದಾಹರಣೆಯಾಗಿದ್ದಾರೆ. ಈ ದಿನ ಈ ಹುತಾತ್ಮರು ಯಾವುದಕ್ಕಾಗಿ ತಮ್ಮ ಪ್ರಾಣವನ್ನು ಬಲಿಕೊಟ್ಟರೂ ಆ ಮೌಲ್ಯಗಳನ್ನು ಎತ್ತಿಹಿಡಿಯಲು ಹಾಗೂ ಪಾಲಿಸಲು ಸಂಕಲ್ಪ ಮಾಡೋಣ. ಭಾರತವನ್ನು ಸದಾ ಮೊದಲ ಸ್ಥಾನದಲ್ಲಿಡುವ ಪ್ರತಿಜ್ಞೆ ಮಾಡೋಣ’’
ಅವರ ಹೇಳಿಕೆಯ ಹಿಂದಿ ಅನುವಾದ ಈ ಕೆಳಗಿನಂತಿದೆ;
“माननीय सदस्यो, आज भारत के तीन महान सपूतों, सरदार भगत सिंह, राजगुरु और सुखदेव की शहादत की 92वीं वर्षगांठ है। वर्ष 1931 में आज ही के दिन आजादी के इन नायकों ने भारत की आजादी के लिए अपने प्राण न्यौछावर कर दिये थे।
युवावस्था में उनका यह सर्वोच्च बलिदान हमारी आजादी की लड़ाई में एक ऐतिहासिक घटना थी। उन्होंने शहादत का रास्ता इसलिए चुना ताकि प्रत्येक भारतीय स्वतंत्रता, स्वाभिमान और लोकतान्त्रिक मूल्यों का जीवन जी सके। उनकी शहादत सब के लिए हमेशा प्रेरणास्रोत रहेगी।
उन्होंने राष्ट्रवाद और स्वतंत्रता के लिए सर्वोच्च मिसाल प्रस्तुत की। आइए आज हम सब मिलकर उन मूल्यों को संजोने का संकल्प लें जिनके लिए उन्होनें बलिदान दिया। आइए मिलकर राष्ट्र को सर्वप्रथम रखने की प्रतिज्ञा करें।“
******
(Release ID: 1910020)
Visitor Counter : 177