ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ

​​​​​​​“ಸಾಗರ ಪರಿಕ್ರಮ” ಹಂತ III ಜಾರಿ ಕುರಿತು ಯೋಜನೆ ರೂಪಿಸುವ ಬಗ್ಗೆ ಸಭೆ ನಡೆಸಿದ ಮೀನುಗಾರಿಕಾ ಇಲಾಖೆ

Posted On: 17 JAN 2023 2:19PM by PIB Bengaluru

1.   ಕರಾವಳಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೂರ್ವಭಾವಿಯಾಗಿ ನಿರ್ಧರಿಸಿರುವ ಸಮುದ್ರ ಮಾರ್ಗಗಳಲ್ಲಿ ಸಾಗರ ಪರಿಕ್ರಮ ಕಾರ್ಯಕ್ರಮ ಆಯೋಜನೆ

2.   ಶ್ರೀ ಪರಶೋತ್ತಮ್ ರೂಪಾಲ ಅವರಿಂದ “ಸಾಗರ್ ಪರಿಕ್ರಮ ಗೀತೆ”ಯ ಮರಾಠಿ ಆವೃತ್ತಿ ಬಿಡುಗಡೆ  

3.   “ಸಾಗರ ಪರಿಕ್ರಮ”ದ ಮೂರನೇ ಹಂತದ ಕಾರ್ಯಕ್ರಮವನ್ನು ಮಹಾರಾಷ್ಟ್ರ ರಾಜ್ಯದಲ್ಲಿ ಆಯೋಜಿಸಲಾಗುತ್ತಿದ್ದು, ರಾಜ್ಯದ ಅಧಿಕಾರಿಗಳು ತಾತ್ಕಾಲಿಕ ಯೋಜನೆಯನ್ನು ಪ್ರಸ್ತಾಪಿಸಿದ್ದಾರೆ.

4.   ಸಂವಾದಗಳು ಮೀನುಗಾರರು ಮತ್ತು ಇತರೆ ಪಾಲುದಾರರ ಸಮಸ್ಯೆಗಳನ್ನು ಪರಿಹರಿಸುವ ಗುರಿ ಹೊಂದಿವೆ ಮತ್ತು ‘ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ[ಪಿಎಂಎಂಎಸ್ ವೈ] ನಂತಹ ವಿವಿಧ ಮೀನುಗಾರಿಕೆ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಅವರ ಆರ್ಥಿಕ ಉನ್ನತಿಗೆ ಅನುಕೂಲವಾಗಲಿದೆ

‘ಸಾಗರ್ ಪರಿಕ್ರಮ’ ಹಂತ - 3, ರೂಪಿಸುವ ಕುರಿತು ಶ್ರೀ ಪರಶೋತ್ತಮ್ ರೂಪಾಲ ನೇತೃತ್ವದಲ್ಲಿ ನಡೆದ ಮೀನುಗಾರಿಕೆ ಇಲಾಖೆ ಸಭೆ

ಮೀನುಗಾರಿಕೆ ಇಲಾಖೆ [ಡಿಒಎಫ್], ಭಾರತ ಸರ್ಕಾರದ [ಜಿಒಐ] ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ‘ಸಾಗರ್ ಪರಿಕ್ರಮ’ ಯೋಜನೆಯನ್ನು ಜಾರಿಗೊಳಿಸಿದೆ.  ಕರಾವಳಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೂರ್ವಭಾವಿಯಾಗಿ ನಿರ್ಧರಿಸಿರುವ ಸಮುದ್ರ ಮಾರ್ಗಗಳಲ್ಲಿ ಸಾಗರ ಪರಿಕ್ರಮ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ನವದೆಹಲಿಯಲ್ಲಿ ‘ಸಾಗರ ಪರಿಕ್ರಮ’ 3ನೇ ಹಂತ  ಯೋಜನೆಯನ್ನು ಜಾರಿಗೊಳಿಸುವ  ಕುರಿತು ಕೇಂದ್ರ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ [ಎಂಒಎಫ್ಎಎಚ್ ಮತ್ತು ಡಿ] ಸಚಿವ ಶ್ರೀ ಪರಶೋತ್ತಮ್ ರೂಪಾಲ ನೇತೃತ್ವದಲ್ಲಿ ಮೀನುಗಾರಿಕಾ ಇಲಾಖೆಯ ಸಭೆ ನಡೆಯಿತು. ಸಭೆಯಲ್ಲಿ ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆಯ ಜಂಟಿ ಕಾರ್ಯದರ್ಶಿ [ಸಾಗರ ಮೀನುಗಾರಿಕೆ] ಅವರು ಸ್ವಾಗತಿಸಿದರು ಮತ್ತು ಸಭೆಯ ಕಾರ್ಯಸೂಚಿ ಕುರಿತು ಮಾಹಿತಿ ನೀಡಿದರು. ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆಯ ಜಂಟಿ ಕಾರ್ಯದರ್ಶಿಯವರು ಕಳೆದ ಎರಡು ಸಭೆಗಳ ಕುರಿತು ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು. ಬಂದರುಗಳ ಪೂರ್ಣಗೊಳಿಸುವಿಕೆ ಮತ್ತು ಉನ್ನತೀಕರಣ, ಕೃತಕ ಬಂಡೆಗಳ ನಿರ್ಮಾಣಕ್ಕೆ ಉತ್ತೇಜನ ಮುಂತಾದ ಪ್ರಮುಖ ಚಟುವಟಿಕೆಗಳ ಕುರಿತು ಮೀನುಗಾರಿಕೆ ಸಮುದಾಯದಲ್ಲಿ ಉತ್ತೇಜನ ನೀಡಬೇಕು ಎಂದು ಹೇಳಿದರು.

ಕೇಂದ್ರ ಪಿಎಂಎಂಎಸ್ ವೈ ಸಚಿವ ಶ್ರೀ ಪರಶೋತ್ತಮ್ ರೂಪಾಲ ಅವರು “ಸಾಗರ್ ಪರಿಕ್ರಮ ಗೀತೆ”ಯ ಮರಾಠಿ ಆವೃತ್ತಿಯನ್ನು ಬಿಡುಗಡೆ ಮಾಡಿದರು. ಸಭೆಯಲ್ಲಿ ಪಾಲ್ಗೊಂಡವರಿಗೆ ಧನ್ಯವಾದ ತಿಳಿಸಿ, ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ ಮತ್ತು ದೃಢ ನಿಶ್ಚಯದಿಂದ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.  

‘ಸಾಗರ್ ಪರಿಕ್ರಮ’ 3ನೇ ಹಂತದ  ಕಾರ್ಯಕ್ರಮವನ್ನು ಮಹಾರಾಷ್ಟ್ರ ರಾಜ್ಯ ಆಯೋಜಿಸುತ್ತಿದೆ ಮತ್ತು ರಾಜ್ಯದ ಅಧಿಕಾರಿಗಳು ತಾತ್ಕಾಲಿಕ ಯೋಜನೆಯನ್ನು ಪ್ರಸ್ತಾಪಿಸಿದ್ದಾರೆ. ಕಾರ್ಯಕ್ರಮದ ಸ್ಥಳ ಮತ್ತು ದಿನಾಂಕವನ್ನು ಹವಾಮಾನದ ಸೂಕ್ತತೆ ಮತ್ತು ಇತರೆ ಅಂಶಗಳ ಕುರಿತು ಅಧಿಕಾರಿಗಳು ಸಭೆಯಲ್ಲಿ ಚರ್ಚಿಸಿದ್ದಾರೆ. ರ‌್ಯಾಲಿಗಳನ್ನು ನಡೆಸುವ ಸ್ಥಳ, ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ, ಮನೆಗಳಿಗೆ ಭೇಟಿ ಕೊಡುವ ವಿಷಯಗಳ ಕುರಿತು ಸಮಾಲೋಚನೆ ನಡೆಸಿದ್ದಾರೆ.  ಕಾರ್ಯಕ್ರಮವನ್ನು ಯಾರ ನಾಯಕತ್ವದ ಮಾರ್ಗದರ್ಶನದಲ್ಲಿ ನಡೆಸಬೇಕು. ಸಿದ್ಧತೆ ಸಮಯದಲ್ಲಿ ತಳಮಟ್ಟದ ಸವಾಲುಗಳನ್ನು ಎದುರಿಸುವ ಕುರಿತು ರಾಜ್ಯಮಟ್ಟದ ಅಧಿಕಾರಿಗಳು ವಿವರ ಸಂಗ್ರಹಿಸಿದರು.

ಇದಲ್ಲದೇ ಮೀನುಗಾರಿಕೆ ಸಮುದಾಯಗಳು ಮತ್ತು ಬಿಜೆಪಿಯ ಪ್ರತಿನಿಧಿಗಳನ್ನು ಚರ್ಚೆ ಮತ್ತು ಸಮಾಲೋಚನೆಯಲ್ಲಿ ತಮ್ಮ ವಿಚಾರಗಳನ್ನು ಮಂಡಿಸಲು ಆಹ್ವಾನಿಸಲಾಯಿತು.  ಆಳ ಸಮುದ್ರದಲ್ಲಿ ಮೀನುಗಾರಿಕೆಯನ್ನು ಕೈಗೆಟುವಂತೆ ಮಾಡಲು ಆಳ ಸಮುದ್ರ ಮೀನುಗಾರಿಕೆಗೂ ಸಹ ಡೀಸೆಲ್ ಸಬ್ಸಿಡಿ ನೀಡುವಂತೆ ರಾಜ್ಯ ಮನವಿ ಮಾಡಿದೆ. ನೆರೆಯ ದೇಶಗಳು ಆಳ ಸಮುದ್ರ ಮೀನುಗಾರಿಕೆಯನ್ನು ತಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಮೀನುಗಾರಿಕೆ ಇಲ್ಲದ ಅವಧಿಯಲ್ಲಿ ಹೆಚ್ಚಿನ ಫಲಾನುಭವಿಗಳಿಗೆ ಪಡಿತರ ಮತ್ತು ವಿಮಾ ಪ್ರಯೋಜನಗಳನ್ನು ಖಚಿತಪಡಿಸಿಕೊಳ್ಳುವುದು, ಮಿರ್ಕವಾಡ II ಮತ್ತು ಅಂಗನವಾಡಿ ಬಂದರುಗಳನ್ನು ಪೂರ್ಣಗೊಳಿಸುವ ಕುರಿತು ಚರ್ಚಿಸಲಾಯಿತು.  

ಕಾರ್ಯಕ್ರಮವನ್ನು ಆಯೋಜಿಸಲು ತಳಮಟ್ಟದಲ್ಲಿ ಎದುರಾಗುವ ಸವಾಲುಗಳನ್ನು ನಿಭಾಯಿಸುವ, ಪಾಲುದಾರರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ಜೊತೆಗೆ ಕಾರ್ಯಕ್ರಮವನ್ನು ಪ್ರಾರಂಭಿಸುವ ವಿಧಾನದ ಬಗ್ಗೆ ಸಮಾಲೋಚನೆ ಮಾಡಲಾಗಿದೆ. ಕಾರ್ಯಕ್ರಮವನ್ನು ಆಯೋಜಿಸುವಾಗ ಫಲಾನುಭವಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಪರ್ಕಿಸುವ ರೀತಿಯಲ್ಲಿ ಯೋಜನೆ ರೂಪಿಸಬೇಕು. ಇದು ಅತ್ಯಂತ ಪ್ರಮುಖ ವಲಯ ಎಂದು ಸಚಿವರು ಸೂಚಿಸಿದರು.

ಸಂವಾದಗಳು ಮೀನುಗಾರರು ಮತ್ತು ಇತರೆ ಮಧ್ಯಸ್ಥಿಕೆದಾರರ ಸಮಸ್ಯೆಗಳನ್ನು ಪರಿಹರಿಸುವ ಗುರಿ ಹೊಂದಿವೆ ಮತ್ತು ವಿವಿಧ ಮೀನುಗಾರಿಕೆ ಯೋಜನೆಗಳ ಮೂಲಕ ಅವರ ಆರ್ಥಿಕ ಉನ್ನತಿಗೆ ಅನುಕೂಲ ಮಾಡಿಕೊಡುತ್ತವೆ. ಭಾರತ ಸರ್ಕಾರ ‘ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ’ [ಪಿಎಂಎಂಎಸ್ ಐ], ಕೆಸಿಸಿ ಮತ್ತು ಎಫ್ಐಡಿಎಫ್ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ.  

ಕೇಂದ್ರ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವರಾದ ಶ್ರೀ ಪರಶೋತ್ತಮ್ ರೂಪಾಲ ಅವರು, ಎಲ್ಲ ಯೋಜನೆಗಳು ಮುಖ್ಯವಾಗಿದ್ದರೂ ಮೀನುಗಾರರಲ್ಲಿ ಕೆಸಿಸಿ ಬಗ್ಗೆ ಜಾಗೃತಿ ಮೂಡಿಸುವುದು ಸಾಗರ ಪರಿಕ್ರಮ ಭೇಟಿಯ ಸಮಯದಲ್ಲಿ ಪ್ರಮುಖ ಕಾರ್ಯಸೂಚಿಯಾಗಿದೆ ಮತ್ತು ಅದು ಹಾಗೆಯೇ ಮುಂದುವರಿಯಬೇಕು ಎಂದು ಹೇಳಿದರು.

ಹಿನ್ನೆಲೆ

‘ಸಾಗರ್ ಪರಿಕ್ರಮ’ (i) ಮೀನುಗಾರರೊಂದಿಗೆ ಸಂವಾದ ನಡೆಸಲು ಸೂಕ್ತ ವ್ಯವಸ್ಥೆ ಕಲ್ಪಿಸುವುದು, ಕರಾವಳಿ ಸಮುದಾಯ ಮತ್ತು ಇತರೆ ಪಾಲುದಾರರಿಗೆ  ಮೀನುಗಾರಿಕೆಗೆ ಸಂಬಂಧಿಸಿದ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಕುರಿತ ಮಾಹಿತಿಯನ್ನು ಪಸರಿಸುವುದು.  (ii) ಸ್ವಾವಲಂಬಿ ಭಾರತದ ಸ್ಫೂರ್ತಿಯಂತೆ ಎಲ್ಲ ಮೀನುಗಾರಿಕೆ ವಲಯದವರು, ಮೀನು ಕೃಷಿಕರು ಮತ್ತು ಸಂಬಂಧಪಟ್ಟ ಪಾಲುದಾರರೊಂದಿಗೆ ಒಗ್ಗಟ್ಟು ಪ್ರದರ್ಶಿಸುವ, (iii) ದೇಶದ ಆಹಾರ ಭದ್ರತೆ ದೃಷ್ಟಿಯಿಂದ ಸಾಗರ ವಲಯದ ಮೀನು ಸಂಪನ್ಮೂಲಗಳ ಬಳಕೆ ಮತ್ತು ಮೀನುಗಾರಿಕೆ ವಲಯದ ಜೀವನೋಪಾಯದಲ್ಲಿ ಸುಸ್ಥಿರ ಸಮತೋಲನ ಕಾಯ್ದುಕೊಳ್ಳುವ ಬಗ್ಗೆ ಜವಾಬ್ದಾರಿತನ ಮೂಡಿಸುವುದು ಮತ್ತು (iv) ಸಾಗರ ವಲಯದ ಪರಿಸರ ವ್ಯವಸ್ಥೆಯ ರಕ್ಷಣೆ ಮಾಡಬೇಕಾಗುತ್ತದೆ. ‘ಸಾಗರ್ ಪರಿಕ್ರಮ’ ಕಾರ್ಯಕ್ರಮವನ್ನು ಕರಾವಳಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ.

*****



(Release ID: 1891881) Visitor Counter : 182