ವಾರ್ತಾ ಮತ್ತು ಪ್ರಸಾರ ಸಚಿವಾಲಯ
ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಚಂಡೀಗಢದ ಸಿಐಎಚ್ಎಂನಲ್ಲಿ ಮಾಧ್ಯಮ ಸಂವಾದ ಮತ್ತು ಸಿರಿಧಾನ್ಯ ಭೋಜನವನ್ನು ಆಯೋಜಿಸಿತ್ತು
ಸಿರಿಧಾನ್ಯಗಳು ತೂಕ ಇಳಿಸಲು ಸಹಾಯ ಮಾಡುತ್ತವೆ : ಶ್ರೀ ರಾಜಿಂದರ್ ಚೌಧರಿ, ಎಡಿಜಿ
Posted On:
06 JAN 2023 4:49PM by PIB Bengaluru
ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಎರಡು ಅಂಗಗಳಾದ ಚಂಡೀಗಢದ ಸೆಂಟ್ರಲ್ ಬ್ಯೂರೋ ಆಫ್ ಕಮ್ಯೂನಿಕೇಷನ್ ಮತ್ತು ಚಂಡೀಗಢದ ಪ್ರೆಸ್ ಇನ್ಫರ್ಮೇಶನ್ ಬ್ಯೂರೋ ಇಂದು ಚಂಡೀಗಢದಲ್ಲಿ ಸಿರಿಧಾನ್ಯ ಭೋಜನದೊಂದಿಗೆ ಮಾಧ್ಯಮ ಸಂವಾದವನ್ನು ಆಯೋಜಿಸಿದ್ದವು.
ಪ್ರಧಾನಮಂತ್ರಿಯವರ ನೇತೃತ್ವದಲ್ಲಿ, ಭಾರತ ಸರ್ಕಾರವು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ- 2023ರ (ಐ.ವೈ.ಎಂ.) ಪ್ರಸ್ತಾಪವನ್ನು ಪ್ರಾಯೋಜಿಸಿತ್ತು. ಇದನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ (ಯು.ಎನ್.ಜಿ.ಎ) ಅಂಗೀಕರಿಸಿತು. ಈ ಘೋಷಣೆಯು ಭಾರತ ಸರ್ಕಾರವು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನು ಆಚರಿಸಲು ಪ್ರಮುಖ ಪಾತ್ರ ವಹಿಸಿದೆ. ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಭಾರತವನ್ನು 'ಸಿರಿಧಾನ್ಯಗಳ ಜಾಗತಿಕ ಕೇಂದ್ರ'ವಾಗಿ ಬಿಂಬಿಸುವುದರ ಜೊತೆಗೆ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ- 2023ನ್ನು 'ಜನಾಂದೋಲನ'ವನ್ನಾಗಿ ಮಾಡುವ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ. ಸಿರಿಧಾನ್ಯ ಭೊಜನವು ಆ ದಿಕ್ಕಿನಲ್ಲಿ ಸ್ವಾಗತಾರ್ಹ ಹೆಜ್ಜೆಯಾಗಿದೆ.
ಈ ಸಂವಾದದ ಸಂದರ್ಭದಲ್ಲಿ, ಚಂಡೀಗಢದ ಪಿಐಬಿ ಎಡಿಜಿ ಶ್ರೀ ರಾಜೇಂದರ್ ಚೌಧರಿ, "ನಮ್ಮ ಪ್ರಧಾನಮಂತ್ರಿಯವರು 2023ರ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಿರುವುದು ಮುಂದಿನ ದಿನಗಳಲ್ಲಿ ಒಂದು ಗೇಮ್ ಚೇಂಜರ್ ಆಗಲಿದೆ. ಇಂದಿನ ಯುವ ಪೀಳಿಗೆಯು ಚಿಕ್ಕ ವಯಸ್ಸಿನಿಂದಲೇ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಅನುಭವಿಸುತ್ತಿದೆ. ಸಿರಿಧಾನ್ಯಗಳ ಸೇವನೆಯು ಈ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಸಿರಿಧಾನ್ಯಗಳು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ, ಹೆಚ್ಚಿನ ಪ್ರೋಟೀನ್ ಮೌಲ್ಯವನ್ನು ಹೊಂದಿವೆ ಮತ್ತು ಗ್ಲುಟೆನ್ ಮುಕ್ತವಾಗಿರುತ್ತವೆ. ಅವು ತೂಕ ಇಳಿಸಿಕೊಳ್ಳಲು ಸಹ ಸಹಾಯ ಮಾಡಬಲ್ಲವು" ಎಂದು ತಿಳಿಸಿದರು.

ಚಿತ್ರ: ಶ್ರೀ ವಿವೇಕ್ ವೈಭವ್, ನಿರ್ದೇಶಕರು, ಸಿಬಿಸಿ ಚಂಡೀಗಢ ಸಿರಿಧಾನ್ಯಗಳ ಪ್ರಾಮುಖ್ಯದ ಬಗ್ಗೆ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ ಚಿತ್ರ.
"ಸಿರಿಧಾನ್ಯಗಳು ಬಹು ಆಯಾಮದ ಪ್ರಯೋಜನಗಳನ್ನು ಹೊಂದಿವೆ. ಇದು ಗ್ರಾಹಕರಿಗೆ ಮಾತ್ರವಲ್ಲದೆ ಉತ್ಪಾದಕರು ಮತ್ತು ಪರಿಸರಕ್ಕೂ ಒಳ್ಳೆಯದು. ಸಿರಿಧಾನ್ಯಗಳ ಉತ್ಪಾದನೆಯು ಕಡಿಮೆ ನೀರು ಮತ್ತು ಕಡಿಮೆ ವಿದ್ಯುಚ್ಛಕ್ತಿಯ ಅವಶ್ಯಕತೆಯನ್ನು ಹೊಂದಿರುತ್ತದೆ. ಸ್ಥೂಲಕಾಯ, ಮಧುಮೇಹ, ರಕ್ತಹೀನತೆ, ಹಾರ್ಮೋನುಗಳ ಅಸಮತೋಲನ, ಅಧಿಕ ಕೊಲೆಸ್ಟ್ರಾಲ್ ಮುಂತಾದ ಹಲವಾರು ರೋಗಗಳ ವಿರುದ್ಧ ಹೋರಾಡಲು ಸಿರಿಧಾನ್ಯಗಳು ಸಹಾಯ ಮಾಡುವುದರಿಂದ ಗ್ರಾಹಕರು ಆರೋಗ್ಯಕರ ಜೀವನವನ್ನು ಹೊಂದುತ್ತಾರೆ. ಆದ್ದರಿಂದ, ಇದು ಆರೋಗ್ಯಕರ ಪೋಷಣೆಯ ಅತ್ಯುತ್ತಮ ಮೂಲವಾಗಿದೆ. ಇಂದಿನ ಈ ಕಾರ್ಯಕ್ರಮವು ಮಾಧ್ಯಮಗಳ ಸಹಾಯದಿಂದ ಸಿರಿಧಾನ್ಯಗಳ ಬಗ್ಗೆ ಜಾಗೃತಿಯನ್ನು ಮೂಡಿಸುವ ಗುರಿಯನ್ನು ಹೊಂದಿದೆ. ಇದರೊಂದಿಗೆ, ಬಳಕೆಯು ಹೆಚ್ಚಾಗುತ್ತದೆ, ಪ್ರತಿಯಾಗಿ ನಂತರದ ಬೇಡಿಕೆಯೂ ಹೆಚ್ಚಾಗುತ್ತದೆ" ಎಂದು ಪುನರುಚ್ಚರಿಸಿದರು.
ಈ ಸಂದರ್ಭದಲ್ಲಿ ವಿಶೇಷ ಭಾಷಣಕಾರರಾಗಿದ್ದ ಖೇತಿ ವಿರಾಸತ್ ಮಿಷನ್ ನ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಉಮೇಂದ್ರ ದತ್ ಅವರು, "ಸಿರಿಧಾನ್ಯಗಳನ್ನು ಈಗ ಅಪ್ರಧಾನ ಬೆಳೆಗಳಾಗಿ ನೋಡಲಾಗುವುದಿಲ್ಲ. ಅವರು ಗೋಧಿ ಮತ್ತು ಅಕ್ಕಿಯ ಆವರ್ತಕ ಕೃಷಿಯೊಂದಿಗೆ ಸ್ಪರ್ಧಿಸುತ್ತಿವೆ. ಅವು ನಮ್ಮ ಇಂಗಾಲದ ಉಳಿಕೆಯನ್ನು ಸಹ ಕಡಿಮೆ ಮಾಡಬಲ್ಲವು" ಎಂದು ತಿಳಿಸಿದ್ದಾರೆ. ಹುಲ್ಲನ್ನು ಸುಡುವ ವಿಷಯದ ಬಗ್ಗೆ ಮಾತನಾಡಿದ ಅವರು, "ಸಿರಿಧಾನ್ಯಗಳ ಕಾಂಡದ ಉಳಿಕೆ ಜಾನುವಾರುಗಳಿಗೆ ಉತ್ತಮ ಮೇವಾಗಿದೆ. ಹೀಗಾಗಿ, ರೈತರು ಇವುಗಳನ್ನು ಸುಡುವುದಿಲ್ಲ. ಪಂಜಾಬ್ ನಲ್ಲಿ ಹುಲ್ಲು ಸುಡುವ ಸಮಸ್ಯೆಗೆ ಇದು ಸಂಭಾವ್ಯ ಪರಿಹಾರವಾಗಿದೆ" ಎಂದು ಅವರು ಹೇಳಿದರು.

ಚಿತ್ರ: ಈ ಸಂದರ್ಭದಲ್ಲಿ ಸಿರಿಧಾನ್ಯಗಳ ಪ್ರದರ್ಶನ
ಪಂಜಾಬ್ ಮತ್ತು ಹರಿಯಾಣದ ಮೂವರು ಸಿರಿಧಾನ್ಯ ಬೆಳೆಗಾರರಾದ ರಾಸ್ಪಿಂದರ್ ಸಿಂಗ್, ಗುರುಮುಖ್ ಸಿಂಗ್ ಮತ್ತು ವಿಪುಲ್ ಕಾಂಬೋಜ್ ಸಹ ಈ ಕಾರ್ಯಕ್ರಮದಲ್ಲಿ ಹಾಜರಿದ್ದು, ಸಿರಿಧಾನ್ಯಗಳನ್ನು ಬೆಳೆಯುವಲ್ಲಿ ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡರು.
ಸಿಬಿಸಿ ಚಂಡೀಗಢದ ನಿರ್ದೇಶಕ ಶ್ರೀ ವಿವೇಕ್ ವೈಭವ್ ಅವರು ಈ ಸಂದರ್ಭದಲ್ಲಿ ಮಾತನಾಡಿ, "ಸಿರಿಧಾನ್ಯಗಳು ಜಿ-20 ಸಭೆಗಳ ಅವಿಭಾಜ್ಯ ಅಂಗವಾಗಿದ್ದು, ಪ್ರತಿನಿಧಿಗಳಿಗೆ ಅವುಗಳ ರುಚಿ ತೋರಿಸಿ, ರೈತರನ್ನು ಭೇಟಿಮಾಡಿಸಿ, ನವೋದ್ಯಮಗಳು ಮತ್ತು ಎಫ್.ಪಿ.ಓ.ಗಳೊಂದಿಗೆ ಸಂವಾದಾತ್ಮಕ ಅಧಿವೇಶನಗಳ ಮೂಲಕ ನಿಜವಾದ ಸಿರಿಧಾನ್ಯದ ಅನುಭವವನ್ನು ನೀಡಲಾಗುವುದು" ಎಂದು ಗಮನಸೆಳೆದರು. ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ-2023ರ ಆಚರಣೆಯಲ್ಲಿ ಇಡೀ ಸರ್ಕಾರದ ಸ್ಫೂರ್ತಿಯನ್ನು ಇಲ್ಲಿ ನಿಜವಾಗಿಯೂ ನೋಡಲಾಗುತ್ತಿದೆ. ಪ್ರಸ್ತುತ ಈ ಸಭೆಯ ಉದ್ದೇಶವೂ ಇದೇ ಆಗಿದೆ ಎಂದು ಹೇಳಿದ್ದಾರೆ.

ಚಿತ್ರ: ಮಾಧ್ಯಮ ಕಾರ್ಯಕ್ರಮದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿರುವ ರೈತರು
ಈ ಕಾರ್ಯಕ್ರಮದಲ್ಲಿ ಪಂಜಾಬ್, ಹರಿಯಾಣ ಮತ್ತು ಚಂಡೀಗಢದ ಪತ್ರಕರ್ತರು ಭಾಗವಹಿಸಿದ್ದರು.
ಸಾಮಾಜಿಕ ಮಾಧ್ಯಮದ ಲಿಂಕ್ ಗಳು:
*****
(Release ID: 1889300)